< ಅಪೊಸ್ತಲರ ಕೃತ್ಯಗಳ 28 >

1 ನಾವು ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ, ಅದು ಮೆಲೀತೆ ದ್ವೀಪವೆಂದು ತಿಳಿದುಬಂತು.
ઇત્થં સર્વ્વેષુ રક્ષાં પ્રાપ્તેષુ તત્રત્યોપદ્વીપસ્ય નામ મિલીતેતિ તે જ્ઞાતવન્તઃ|
2 ಅನ್ಯಭಾಷೆಯವರಾದ ಆ ದ್ವೀಪದವರು ನಮಗೆ ವಿಶೇಷ ಸಹಾನುಭೂತಿಯನ್ನು ತೋರಿದರು. ಮಳೆಯು ಆಗಲೇ ಹೊಯ್ದು ಚಳಿಯಾಗುತ್ತಿದ್ದುದರಿಂದ, ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು.
અસભ્યલોકા યથેષ્ટમ્ અનુકમ્પાં કૃત્વા વર્ત્તમાનવૃષ્ટેઃ શીતાચ્ચ વહ્નિં પ્રજ્જ્વાલ્યાસ્માકમ્ આતિથ્યમ્ અકુર્વ્વન્|
3 ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ, ತಂದು ಬೆಂಕಿಯ ಮೇಲೆ ಹಾಕಲು, ಆ ಶಾಖಕ್ಕೆ ಒಂದು ಸರ್ಪವು ಹೊರಗೆ ಬಂದು, ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು.
કિન્તુ પૌલ ઇન્ધનાનિ સંગૃહ્ય યદા તસ્મિન્ અગ્રૌ નિરક્ષિપત્, તદા વહ્નેઃ પ્રતાપાત્ એકઃ કૃષ્ણસર્પો નિર્ગત્ય તસ્ય હસ્તે દ્રષ્ટવાન્|
4 ಆ ಸರ್ಪವು ಅವನ ಕೈಯಿಂದ ಜೋತಾಡುವುದನ್ನು ದ್ವೀಪದವರು ನೋಡಿ; “ಈ ಮನುಷ್ಯನು ಕೊಲೆಪಾತಕನೇ ಸರಿ; ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯದೇವತೆಯು ಇವನನ್ನು ಬದುಕಗೊಡಿಸುವುದಿಲ್ಲವೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು.
તેઽસભ્યલોકાસ્તસ્ય હસ્તે સર્પમ્ અવલમ્બમાનં દૃષ્ટ્વા પરસ્પરમ્ ઉક્તવન્ત એષ જનોઽવશ્યં નરહા ભવિષ્યતિ, યતો યદ્યપિ જલધે રક્ષાં પ્રાપ્તવાન્ તથાપિ પ્રતિફલદાયક એનં જીવિતું ન દદાતિ|
5 ಆದರೆ ಪೌಲನು ಆ ಸರ್ಪವನ್ನು ಬೆಂಕಿಯೊಳಕ್ಕೆ ಝಾಡಿಸಿಬಿಟ್ಟನು; ಅವನಿಗೆ ಏನೂ ಅಪಾಯ ಉಂಟಾಗಲಿಲ್ಲ.
કિન્તુ સ હસ્તં વિધુન્વન્ તં સર્પમ્ અગ્નિમધ્યે નિક્ષિપ્ય કામપિ પીડાં નાપ્તવાન્|
6 ಅವರು; “ಇವನ ಮೈ ಈಗ ಊದಿಕೊಳ್ಳುತ್ತದೆ, ಇಲ್ಲವೆ ಇವನು ಫಕ್ಕನೆ ಸತ್ತುಬೀಳುತ್ತಾನೆ” ಎಂದು ಕಾದಿದ್ದರು. ಎಷ್ಟು ಹೊತ್ತು ಕಾದರು ಅವನಿಗೆ ಯಾವ ಹಾನಿಯೂ ಆಗಲಿಲ್ಲ. ಇದನ್ನು ಕಂಡ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡು “ಇವನೊಬ್ಬ ದೇವನೇ” ಇರಬೇಕು ಎಂದುಕೊಂಡರು.
તતો વિષજ્વાલયા એતસ્ય શરીરં સ્ફીતં ભવિષ્યતિ યદ્વા હઠાદયં પ્રાણાન્ ત્યક્ષ્યતીતિ નિશ્ચિત્ય લોકા બહુક્ષણાનિ યાવત્ તદ્ દ્રષ્ટું સ્થિતવન્તઃ કિન્તુ તસ્ય કસ્યાશ્ચિદ્ વિપદોઽઘટનાત્ તે તદ્વિપરીતં વિજ્ઞાય ભાષિતવન્ત એષ કશ્ચિદ્ દેવો ભવેત્|
7 ಆ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನ ಹೊಲಗದ್ದೆಗಳು ನಾವಿದ್ದ ಸ್ಥಳದ ಸಮೀಪದಲ್ಲಿ ಇದ್ದವು. ಅವನು ನಮ್ಮನ್ನು ಸ್ವಾಗತಿಸಿ ಮೂರು ದಿನಗಳವರೆಗೆ ಆದರದಿಂದ ಸತ್ಕರಿಸಿದನು.
પુબ્લિયનામા જન એકસ્તસ્યોપદ્વીપસ્યાધિપતિરાસીત્ તત્ર તસ્ય ભૂમ્યાદિ ચ સ્થિતં| સ જનોઽસ્માન્ નિજગૃહં નીત્વા સૌજન્યં પ્રકાશ્ય દિનત્રયં યાવદ્ અસ્માકં આતિથ્યમ્ અકરોત્|
8 ಅವನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಹಾಸಿಗೆ ಹಿಡಿದಿದ್ದನು. ಪೌಲನು ಅವನ ಬಳಿಗೆ ಹೋಗಿ ಪ್ರಾರ್ಥನೆ ಮಾಡಿ ಅವನ ಮೇಲೆ ಕೈಗಳನ್ನಿಟ್ಟು ಅವನನ್ನು ಗುಣಪಡಿಸಿದನು.
તદા તસ્ય પુબ્લિયસ્ય પિતા જ્વરાતિસારેણ પીડ્યમાનઃ સન્ શય્યાયામ્ આસીત્; તતઃ પૌલસ્તસ્ય સમીપં ગત્વા પ્રાર્થનાં કૃત્વા તસ્ય ગાત્રે હસ્તં સમર્પ્ય તં સ્વસ્થં કૃતવાન્|
9 ಇದಾದ, ನಂತರ ಆ ದ್ವೀಪದಲ್ಲಿದ್ದ ಉಳಿದ ರೋಗಿಗಳು, ಪೌಲನ ಬಳಿಗೆ ಬಂದು ಸ್ವಸ್ಥರಾದರು.
ઇત્થં ભૂતે તદ્વીપનિવાસિન ઇતરેપિ રોગિલોકા આગત્ય નિરામયા અભવન્|
10 ೧೦ ಅವರು ನಮ್ಮನ್ನು ಬಹಳವಾಗಿ ಸನ್ಮಾನಿಸಿದ್ದಲ್ಲದೆ, ನಾವು ಅಲ್ಲಿಂದ ನಮ್ಮ ಪಯಣ ಮುಂದುವರಿಸಿದಾಗ, ನಮಗೆ ಅವಶ್ಯವಾದ ಪದಾರ್ಥಗಳನ್ನು ತಂದು ಹಡಗಿನಲ್ಲಿಟ್ಟರು.
તસ્માત્તેઽસ્માકમ્ અતીવ સત્કારં કૃતવન્તઃ, વિશેષતઃ પ્રસ્થાનસમયે પ્રયોજનીયાનિ નાનદ્રવ્યાણિ દત્તવન્તઃ|
11 ೧೧ ಮೂರು ತಿಂಗಳಾದ ಮೇಲೆ ಅಲೆಕ್ಸಾಂದ್ರಿಯದಿಂದ ಬಂದು, ಆ ದ್ವೀಪದಲ್ಲಿ ಹಿಮಕಾಲವನ್ನು ಕಳೆಯಲು ತಂಗಿದ್ದ ಒಂದು ಹಡಗನ್ನು ಹತ್ತಿ ಹೊರಟೆವು. ಆ ಹಡಗಿಗೆ ಅಶ್ವಿನೀದೇವತೆಗಳೆಂಬ ಚಿಹ್ನೆ ಇತ್ತು.
ઇત્થં તત્ર ત્રિષુ માસેષુ ગતેષુ યસ્ય ચિહ્નં દિયસ્કૂરી તાદૃશ એકઃ સિકન્દરીયનગરસ્ય પોતઃ શીતકાલં યાપયન્ તસ્મિન્ ઉપદ્વીપે ઽતિષ્ઠત્ તમેવ પોતં વયમ્ આરુહ્ય યાત્રામ્ અકુર્મ્મ|
12 ೧೨ ನಾವು ಸುರಕೂಸಿಗೆ ತಲುಪಿ ಅಲ್ಲಿ ಮೂರು ದಿನ ತಂಗಿದೆವು.
તતઃ પ્રથમતઃ સુરાકૂસનગરમ્ ઉપસ્થાય તત્ર ત્રીણિ દિનાનિ સ્થિતવન્તઃ|
13 ೧೩ ಅಲ್ಲಿಂದ ಮುಂದುವರೆದು ರೇಗಿಯ ಪಟ್ಟಣಕ್ಕೆ ಸೇರಿದೆವು. ಒಂದು ದಿನವಾದ ಮೇಲೆ ತೆಂಕಣ ಗಾಳಿ ಬೀಸಿದ್ದರಿಂದ, ಎರಡನೆಯ ದಿನದಲ್ಲಿ ಪೊತಿಯೋಲಕ್ಕೆ ಬಂದೆವು.
તસ્માદ્ આવૃત્ય રીગિયનગરમ્ ઉપસ્થિતાઃ દિનૈકસ્માત્ પરં દક્ષિણવયૌ સાનુકૂલ્યે સતિ પરસ્મિન્ દિવસે પતિયલીનગરમ્ ઉપાતિષ્ઠામ|
14 ೧೪ ಅಲ್ಲಿ ಕ್ರೈಸ್ತ ಸಹೋದರರನ್ನು ಕಂಡೆವು. ಅವರು ನಮ್ಮನ್ನು ತಮ್ಮ ಬಳಿಯಲ್ಲಿ ಏಳು ದಿನ ಇರಬೇಕೆಂದು ಬೇಡಿಕೊಂಡರು. ತರುವಾಯ ರೋಮಾಪುರಕ್ಕೆ ಬಂದೆವು.
તતોઽસ્માસુ તત્રત્યં ભ્રાતૃગણં પ્રાપ્તેષુ તે સ્વૈઃ સાર્દ્ધમ્ અસ્માન્ સપ્ત દિનાનિ સ્થાપયિતુમ્ અયતન્ત, ઇત્થં વયં રોમાનગરમ્ પ્રત્યગચ્છામ|
15 ೧೫ ಅಲ್ಲಿದ್ದ ಸಹೋದರರು ನಮ್ಮ ಸಮಾಚಾರವನ್ನು ಕೇಳಿದಾಗ, ನಮ್ಮನ್ನು ಭೇಟಿಮಾಡುವುದಕ್ಕಾಗಿ ಕೆಲವರು ಅಪ್ಪಿಯಪೇಟೆಯ ವರೆಗೂ, ಕೆಲವರು ತ್ರಿಛತ್ರವೆಂಬ ಸ್ಥಳದ ವರೆಗೂ ಬಂದರು. ಪೌಲನು ಅವರನ್ನು ನೋಡಿ ದೇವರಿಗೆ ಸ್ತೋತ್ರವನ್ನು ಸಲ್ಲಿಸಿ ಧೈರ್ಯಗೊಂಡನು.
તસ્માત્ તત્રત્યાઃ ભ્રાતરોઽસ્માકમ્ આગમનવાર્ત્તાં શ્રુત્વા આપ્પિયફરં ત્રિષ્ટાવર્ણીઞ્ચ યાવદ્ અગ્રેસરાઃ સન્તોસ્માન્ સાક્ષાત્ કર્ત્તુમ્ આગમન્; તેષાં દર્શનાત્ પૌલ ઈશ્વરં ધન્યં વદન્ આશ્વાસમ્ આપ્તવાન્|
16 ೧೬ ನಾವು ರೋಮಾಪುರಕ್ಕೆ ಬಂದ ಮೇಲೆ, ಪೌಲನು ತನ್ನನ್ನು ಕಾಯುತ್ತಿದ್ದ ಸಿಪಾಯಿಯೊಂದಿಗೆ ಪ್ರತ್ಯೇಕವಾಗಿರಬಹುದೆಂಬ ಅಪ್ಪಣೆಯನ್ನು ಹೊಂದಿದನು.
અસ્માસુ રોમાનગરં ગતેષુ શતસેનાપતિઃ સર્વ્વાન્ બન્દીન્ પ્રધાનસેનાપતેઃ સમીપે સમાર્પયત્ કિન્તુ પૌલાય સ્વરક્ષકપદાતિના સહ પૃથગ્ વસ્તુમ્ અનુમતિં દત્તવાન્|
17 ೧೭ ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ಪ್ರಮುಖರನ್ನು ತನ್ನ ಬಳಿಗೆ ಕರೆಯಿಸಿಕೊಂಡನು. ಅವರು ಬಂದಾಗ ಅವನು ಅವರಿಗೆ; “ಸಹೋದರರೇ, ನಾನು ನಮ್ಮ ಜನರಿಗೂ, ನಮ್ಮ ಪೂರ್ವಿಕರ ಆಚಾರಗಳಿಗೂ ವಿರುದ್ಧವಾಗಿ ಏನೂ ಮಾಡದವನಾದರೂ ಯೆರೂಸಲೇಮಿನಿಂದ ರೋಮಾಯರ ಕೈಗೆ ಸೆರೆಯವನಾಗಿ ಒಪ್ಪಿಸಲ್ಪಟ್ಟೆನು.
દિનત્રયાત્ પરં પૌલસ્તદ્દેશસ્થાન્ પ્રધાનયિહૂદિન આહૂતવાન્ તતસ્તેષુ સમુપસ્થિતેષુ સ કથિતવાન્, હે ભ્રાતૃગણ નિજલોકાનાં પૂર્વ્વપુરુષાણાં વા રીતે ર્વિપરીતં કિઞ્ચન કર્મ્માહં નાકરવં તથાપિ યિરૂશાલમનિવાસિનો લોકા માં બન્દિં કૃત્વા રોમિલોકાનાં હસ્તેષુ સમર્પિતવન્તઃ|
18 ೧೮ ಅವರು ನನ್ನನ್ನು ವಿಚಾರಣೆಮಾಡಿ, ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿದ್ದರು.
રોમિલોકા વિચાર્ય્ય મમ પ્રાણહનનાર્હં કિમપિ કારણં ન પ્રાપ્ય માં મોચયિતુમ્ ઐચ્છન્;
19 ೧೯ ಅದಕ್ಕೆ ಯೆಹೂದ್ಯರು ವಿರೋಧಿಸಿದ್ದರಿಂದ, ನಾನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳಬೇಕಾಗಿ ಬಂದಿತು. ನನ್ನ ಸ್ವಂತ ದೇಶದವರ ಮೇಲೆ ದೋಷಾರೋಪಣೆ ಮಾಡಬೇಕೆಂಬ ಅಭಿಪ್ರಾಯದಿಂದ ಅದನ್ನು ಹೇಳಲಿಲ್ಲ.
કિન્તુ યિહૂદિલોકાનામ્ આપત્ત્યા મયા કૈસરરાજસ્ય સમીપે વિચારસ્ય પ્રાર્થના કર્ત્તવ્યા જાતા નોચેત્ નિજદેશીયલોકાન્ પ્રતિ મમ કોપ્યભિયોગો નાસ્તિ|
20 ೨೦ ಈ ಕಾರಣದಿಂದ ನಾನು ನಿಮ್ಮನ್ನು ಕಂಡು ಮಾತನಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲ್ ಜನರ ನಿರೀಕ್ಷೆಯ ನಿಮಿತ್ತವಾಗಿ ಈ ಬೇಡಿಯಿಂದ ಬಂಧಿತನಾಗಿದ್ದೇನೆ” ಎಂದು ಹೇಳಿದನು.
એતત્કારણાદ્ અહં યુષ્માન્ દ્રષ્ટું સંલપિતુઞ્ચાહૂયમ્ ઇસ્રાયેલ્વશીયાનાં પ્રત્યાશાહેતોહમ્ એતેન શુઙ્ખલેન બદ્ધોઽભવમ્|
21 ೨೧ ಅದಕ್ಕೆ ಅವರು ಅವನಿಗೆ; “ನಿನ್ನ ವಿಷಯವಾಗಿ ನಮಗೆ ಯೂದಾಯದಿಂದ ವರದಿ ಬರಲಿಲ್ಲ, ಸಹೋದರರಲ್ಲಿ ಒಬ್ಬರೂ ಬಂದು ನಿನ್ನ ವಿಷಯವಾಗಿ ಕೆಟ್ಟದ್ದನ್ನು ತಿಳಿಸಲೂ ಇಲ್ಲ, ಮಾತನಾಡಲೂ ಇಲ್ಲ.
તદા તે તમ્ અવાદિષુઃ, યિહૂદીયદેશાદ્ વયં ત્વામધિ કિમપિ પત્રં ન પ્રાપ્તા યે ભ્રાતરઃ સમાયાતાસ્તેષાં કોપિ તવ કામપિ વાર્ત્તાં નાવદત્ અભદ્રમપિ નાકથયચ્ચ|
22 ೨೨ ಆದರೆ, ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವುದು ನಮಗೆ ಯುಕ್ತವೆಂದು ತೋರುತ್ತದೆ. ಆ ಪಂಥದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತನಾಡುತ್ತಾರೆಂಬದೊಂದೇ ನಮಗೆ ಗೊತ್ತದೆ” ಅಂದರು.
તવ મતં કિમિતિ વયં ત્વત્તઃ શ્રોતુમિચ્છામઃ| યદ્ ઇદં નવીનં મતમુત્થિતં તત્ સર્વ્વત્ર સર્વ્વેષાં નિકટે નિન્દિતં જાતમ ઇતિ વયં જાનીમઃ|
23 ೨೩ ಅವರು ಅವನಿಗೆ ಒಂದು ದಿನವನ್ನು ಗೊತ್ತುಮಾಡಲು, ಬಹುಮಂದಿ ಅವನ ಬಿಡಾರದಲ್ಲಿ ಅವನ ಬಳಿಗೆ ಬಂದರು. ಅವನು ಬೆಳಗ್ಗಿನಿಂದ ಸಾಯಂಕಾಲದ ವರೆಗೂ ದೇವರ ರಾಜ್ಯವನ್ನು ಕುರಿತು ಪ್ರಾಮಾಣಿಕವಾಗಿ ಸಾಕ್ಷಿಹೇಳುತ್ತಾ, ಮೋಶೆಯ ಧರ್ಮಶಾಸ್ತ್ರವನ್ನೂ, ಪ್ರವಾದಿಗಳ ಗ್ರಂಥಗಳನ್ನೂ, ಆಧಾರಮಾಡಿಕೊಂಡು ಯೇಸುವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಇದ್ದನು.
તૈસ્તદર્થમ્ એકસ્મિન્ દિને નિરૂપિતે તસ્મિન્ દિને બહવ એકત્ર મિલિત્વા પૌલસ્ય વાસગૃહમ્ આગચ્છન્ તસ્માત્ પૌલ આ પ્રાતઃકાલાત્ સન્ધ્યાકાલં યાવન્ મૂસાવ્યવસ્થાગ્રન્થાદ્ ભવિષ્યદ્વાદિનાં ગ્રન્થેભ્યશ્ચ યીશોઃ કથામ્ ઉત્થાપ્ય ઈશ્વરસ્ય રાજ્યે પ્રમાણં દત્વા તેષાં પ્રવૃત્તિં જનયિતું ચેષ્ટિતવાન્|
24 ೨೪ ಅವನು ಹೇಳಿದ ಮಾತುಗಳಿಗೆ ಕೆಲವರು ಒಪ್ಪಿಕೊಂಡರು; ಕೆಲವರು ನಂಬದೆ ಹೋದರು.
કેચિત્તુ તસ્ય કથાં પ્રત્યાયન્ કેચિત્તુ ન પ્રત્યાયન્;
25 ೨೫ ಅವರು ಒಮ್ಮತವಿಲ್ಲದೆ ಇರುವಾಗ ಪೌಲನು ಅವರಿಗೆ; “ಪವಿತ್ರಾತ್ಮನು ಪ್ರವಾದಿಯಾದ ಯೆಶಾಯನ ಬಾಯಿಂದ
એતત્કારણાત્ તેષાં પરસ્પરમ્ અનૈક્યાત્ સર્વ્વે ચલિતવન્તઃ; તથાપિ પૌલ એતાં કથામેકાં કથિતવાન્ પવિત્ર આત્મા યિશયિયસ્ય ભવિષ્યદ્વક્તુ ર્વદનાદ્ અસ્માકં પિતૃપુરુષેભ્ય એતાં કથાં ભદ્રં કથયામાસ, યથા,
26 ೨೬ ನಿಮ್ಮ ಪೂರ್ವಿಕರಿಗೆ ವಿವರವಾಗಿ ಹೇಳಿದ್ದೇನೆಂದರೆ; “‘ನೀನು ಈ ಜನರ ಬಳಿಗೆ ಹೋಗಿ ಅವರಿಗೆ; ನೀವು ಕಿವಿಯಿದ್ದು ಕೇಳಿಕೊಂಡರೂ ತಿಳಿದುಕೊಳ್ಳುವುದೇ ಇಲ್ಲ; ಕಣ್ಣಿದ್ದು ನೋಡಿದರೂ ಕಾಣುವುದೇ ಇಲ್ಲ, ಎಂಬುದಾಗಿ ಹೇಳು.
"ઉપગત્ય જનાનેતાન્ ત્વં ભાષસ્વ વચસ્ત્વિદં| કર્ણૈઃ શ્રોષ્યથ યૂયં હિ કિન્તુ યૂયં ન ભોત્સ્યથ| નેત્રૈ ર્દ્રક્ષ્યથ યૂયઞ્ચ જ્ઞાતું યૂયં ન શક્ષ્યથ|
27 ೨೭ ಏಕೆಂದರೆ, ಈ ಜನರ ಹೃದಯವು ಕಲ್ಲಾಗಿದೆ; ಇವರ ಕಿವಿ ಕಿವುಡಾಗಿದೆ; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ; ತಾವು ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ, ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಹೀಗೆ ಮಾಡಿಕೊಂಡಿದ್ದಾರೆ’ ಎಂಬುದೇ.
તે માનુષા યથા નેત્રૈઃ પરિપશ્યન્તિ નૈવ હિ| કર્ણૈઃ ર્યથા ન શૃણ્વન્તિ બુધ્યન્તે ન ચ માનસૈઃ| વ્યાવર્ત્તયત્સુ ચિત્તાનિ કાલે કુત્રાપિ તેષુ વૈ| મત્તસ્તે મનુજાઃ સ્વસ્થા યથા નૈવ ભવન્તિ ચ| તથા તેષાં મનુષ્યાણાં સન્તિ સ્થૂલા હિ બુદ્ધયઃ| બધિરીભૂતકર્ણાશ્ચ જાતાશ્ચ મુદ્રિતા દૃશઃ||
28 ೨೮ “ಆದಕಾರಣ ದೇವರಿಂದಾದ ಈ ರಕ್ಷಣೆಯು ಅನ್ಯಜನರಿಗೆ ಹೇಳಿಕಳುಹಿಸಲ್ಪಟ್ಟಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರಲಿ; ಅವರಾದರೂ ಕೇಳುವರು” ಎಂದು ಹೇಳಿದನು.
અત ઈશ્વરાદ્ યત્ પરિત્રાણં તસ્ય વાર્ત્તા ભિન્નદેશીયાનાં સમીપં પ્રેષિતા તએવ તાં ગ્રહીષ્યન્તીતિ યૂયં જાનીત|
29 ೨೯ ಅವನು ಈ ಮಾತನ್ನು ಹೇಳಿದ ಮೇಲೆ ಅವರು ಹೊರಟುಹೋದರು.
એતાદૃશ્યાં કથાયાં કથિતાયાં સત્યાં યિહૂદિનઃ પરસ્પરં બહુવિચારં કુર્વ્વન્તો ગતવન્તઃ|
30 ೩೦ ತರುವಾಯ ಅವನು ತಾನೇ ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳ ಕಾಲ ಇದ್ದು, ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದನು.
ઇત્થં પૌલઃ સમ્પૂર્ણં વત્સરદ્વયં યાવદ્ ભાટકીયે વાસગૃહે વસન્ યે લોકાસ્તસ્ય સન્નિધિમ્ આગચ્છન્તિ તાન્ સર્વ્વાનેવ પરિગૃહ્લન્,
31 ೩೧ ಯಾವ ಅಡ್ಡಿಯೂ ಇಲ್ಲದೆ, ತುಂಬಾ ಧೈರ್ಯದಿಂದ ದೇವರ ರಾಜ್ಯದ ಕುರಿತು ಬೋಧಿಸುತ್ತಾ, ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು.
નિર્વિઘ્નમ્ અતિશયનિઃક્ષોભમ્ ઈશ્વરીયરાજત્વસ્ય કથાં પ્રચારયન્ પ્રભૌ યીશૌ ખ્રીષ્ટે કથાઃ સમુપાદિશત્| ઇતિ||

< ಅಪೊಸ್ತಲರ ಕೃತ್ಯಗಳ 28 >