< ಅಪೊಸ್ತಲರ ಕೃತ್ಯಗಳ 18 >

1 ಇದಾದ ಮೇಲೆ ಪೌಲನು ಅಥೇನೆಯನ್ನು ಬಿಟ್ಟು ಕೊರಿಂಥಕ್ಕೆ ಹೋದನು.
તદ્ઘટનાતઃ પરં પૌલ આથીનીનગરાદ્ યાત્રાં કૃત્વા કરિન્થનગરમ્ આગચ્છત્|
2 ಪೊಂತದಲ್ಲಿ ಹುಟ್ಟಿದ ಅಕ್ವಿಲನೆಂಬ ಒಬ್ಬ ಯೆಹೂದ್ಯನನ್ನು ಅಲ್ಲಿ ಕಂಡನು. ಯೆಹೂದ್ಯರೆಲ್ಲರೂ ರೋಮಾಪುರವನ್ನು ಬಿಟ್ಟುಹೋಗಬೇಕೆಂದು ಕ್ಲೌದಿಯ ಚಕ್ರವರ್ತಿಯು ಆಜ್ಞೆ ವಿಧಿಸಿದ ಕಾರಣ ಅಕ್ವಿಲನೂ ಅವನ ಹೆಂಡತಿಯಾದ ಪ್ರಿಸ್ಕಿಲ್ಲಳೂ ಕೆಲವು ದಿನಗಳ ಮೊದಲೇ ಇತಾಲ್ಯ ದೇಶದಿಂದ ಅಲ್ಲಿಗೆ ಬಂದಿದ್ದರು.
તસ્મિન્ સમયે ક્લૌદિયઃ સર્વ્વાન્ યિહૂદીયાન્ રોમાનગરં વિહાય ગન્તુમ્ આજ્ઞાપયત્, તસ્માત્ પ્રિસ્કિલ્લાનામ્ના જાયયા સાર્દ્ધમ્ ઇતાલિયાદેશાત્ કિઞ્ચિત્પૂર્વ્વમ્ આગમત્ યઃ પન્તદેશે જાત આક્કિલનામા યિહૂદીયલોકઃ પૌલસ્તં સાક્ષાત્ પ્રાપ્ય તયોઃ સમીપમિતવાન્|
3 ಪೌಲನು ಅವರ ಮನೆಗೆ ಹೋಗಿ ತಾನೂ, ಅವರೂ ಒಂದೇ ಕಸುಬಿನವರಾಗಿದ್ದುದರಿಂದ ಅವರ ಸಂಗಡವಿದ್ದು ಅವರೊಂದಿಗೆ ಕೆಲಸಮಾಡುತ್ತಿದ್ದನು; ಗುಡಾರಮಾಡುವುದು ಅವರ ಕಸುಬಾಗಿತ್ತು.
તૌ દૂષ્યનિર્મ્માણજીવિનૌ, તસ્માત્ પરસ્પરમ્ એકવૃત્તિકત્વાત્ સ તાભ્યાં સહ ઉષિત્વા તત્ કર્મ્માકરોત્|
4 ಅವನು ಪ್ರತಿ ಸಬ್ಬತ್ ದಿನವೂ ಸಭಾಮಂದಿರದಲ್ಲಿ ಚರ್ಚಿಸಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು.
પૌલઃ પ્રતિવિશ્રામવારં ભજનભવનં ગત્વા વિચારં કૃત્વા યિહૂદીયાન્ અન્યદેશીયાંશ્ચ પ્રવૃત્તિં ગ્રાહિતવાન્|
5 ಸೀಲನೂ ಮತ್ತು ತಿಮೊಥೆಯನೂ ಮಕೆದೋನ್ಯದಿಂದ ಬಂದಾಗ ಪೌಲನು ದೇವರ ವಾಕ್ಯವನ್ನು ಬೋಧಿಸುವುದರಲ್ಲಿ ಅತ್ಯಾಸಕ್ತಿಯುಳ್ಳವನಾಗಿ ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಖಚಿತವಾಗಿ ಸಾಕ್ಷಿಹೇಳಿದನು.
સીલતીમથિયયો ર્માકિદનિયાદેશાત્ સમેતયોઃ સતોઃ પૌલ ઉત્તપ્તમના ભૂત્વા યીશુરીશ્વરેણાભિષિક્તો ભવતીતિ પ્રમાણં યિહૂદીયાનાં સમીપે પ્રાદાત્|
6 ಅವರು ಎದುರಿಸಿ, ದೂಷಿಸಲಾಗಿ ಅವನು ತನ್ನ ವಸ್ತ್ರಗಳನ್ನು ಝಾಡಿಸಿ ಅವರಿಗೆ; “ನಿಮ್ಮ ನಾಶನಕ್ಕೆ ನೀವೇ ಹೊಣೆ. ನಾನು ಶುದ್ಧನು. ನಾನು ಇಂದಿನಿಂದ ಅನ್ಯಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿ,
કિન્તુ તે ઽતીવ વિરોધં વિધાય પાષણ્ડીયકથાં કથિતવન્તસ્તતઃ પૌલો વસ્ત્રં ધુન્વન્ એતાં કથાં કથિતવાન્, યુષ્માકં શોણિતપાતાપરાધો યુષ્માન્ પ્રત્યેવ ભવતુ, તેનાહં નિરપરાધો ઽદ્યારભ્ય ભિન્નદેશીયાનાં સમીપં યામિ|
7 ಆ ಸ್ಥಳವನ್ನು ಬಿಟ್ಟು ದೇವರಿಗೆ ಭಯಪಡುವವನಾಗಿದ್ದ ತೀತ ಯುಸ್ತನೆಂಬುವನ ಮನೆಗೆ ಹೋದನು. ಅವನ ಮನೆಯು ಸಭಾಮಂದಿರದ ಬದಿಯಲ್ಲಿ ಇತ್ತು.
સ તસ્માત્ પ્રસ્થાય ભજનભવનસમીપસ્થસ્ય યુસ્તનામ્ન ઈશ્વરભક્તસ્ય ભિન્નદેશીયસ્ય નિવેશનં પ્રાવિશત્|
8 ಸಭಾಮಂದಿರದ ಅಧ್ಯಕ್ಷನಾದ ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಮತ್ತು ಕೊರಿಂಥದವರಲ್ಲಿ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡರು.
તતઃ ક્રીષ્પનામા ભજનભવનાધિપતિઃ સપરિવારઃ પ્રભૌ વ્યશ્વસીત્, કરિન્થનગરીયા બહવો લોકાશ્ચ સમાકર્ણ્ય વિશ્વસ્ય મજ્જિતા અભવન્|
9 ಇದಲ್ಲದೆ ಕರ್ತನು ರಾತ್ರಿ ಪೌಲನಿಗೆ ದರ್ಶನ ಕೊಟ್ಟು; “ನೀನು ಹೆದರಬೇಡ; ಆದರೆ ಸುಮ್ಮನಿರದೆ ಸುವಾರ್ತೆಯನ್ನು ಸಾರುತ್ತಲೇ ಇರು,
ક્ષણદાયાં પ્રભુઃ પૌલં દર્શનં દત્વા ભાષિતવાન્, મા ભૈષીઃ, મા નિરસીઃ કથાં પ્રચારય|
10 ೧೦ ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನಗೆ ಕೇಡು ಮಾಡುವುದಿಲ್ಲ; ಈ ಪಟ್ಟಣದಲ್ಲಿ ನನಗೆ ಬಹಳ ಮಂದಿ ಇದ್ದಾರೆ” ಎಂದು ಹೇಳಿದನು.
અહં ત્વયા સાર્દ્ધમ્ આસ હિંસાર્થં કોપિ ત્વાં સ્પ્રષ્ટું ન શક્ષ્યતિ નગરેઽસ્મિન્ મદીયા લોકા બહવ આસતે|
11 ೧೧ ಅವನು ಒಂದು ವರ್ಷ ಆರು ತಿಂಗಳು ಅಲ್ಲೇ ಇದ್ದುಕೊಂಡು ಆ ಜನರಿಗೆ ದೇವರ ವಾಕ್ಯವನ್ನು ಉಪದೇಶಮಾಡುತ್ತಿದ್ದನು.
તસ્માત્ પૌલસ્તન્નગરે પ્રાયેણ સાર્દ્ધવત્સરપર્ય્યન્તં સંસ્થાયેશ્વરસ્ય કથામ્ ઉપાદિશત્|
12 ೧೨ ಗಲ್ಲಿಯೋನನು ಅಖಾಯ ಪ್ರಾಂತ್ಯಕ್ಕೆ ಅಧಿಪತಿಯಾಗಿರಲು ಯೆಹೂದ್ಯರು ಒಗ್ಗಟ್ಟಾಗಿ ಪೌಲನ ಮೇಲೆ ಬಿದ್ದು ಅವನನ್ನು ನ್ಯಾಯಾಸ್ಥಾನದ ಮುಂದೆ ಹಿಡಿದು ತಂದು;
ગાલ્લિયનામા કશ્ચિદ્ આખાયાદેશસ્ય પ્રાડ્વિવાકઃ સમભવત્, તતો યિહૂદીયા એકવાક્યાઃ સન્તઃ પૌલમ્ આક્રમ્ય વિચારસ્થાનં નીત્વા
13 ೧೩ “ಇವನು ದೇವರನ್ನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಆರಾಧಿಸುವುದಕ್ಕೆ ಜನರನ್ನು ಒಡಂಬಡಿಸುತ್ತಾನೆಂದು” ದೂರುಹೇಳಿದರು.
માનુષ એષ વ્યવસ્થાય વિરુદ્ધમ્ ઈશ્વરભજનં કર્ત્તું લોકાન્ કુપ્રવૃત્તિં ગ્રાહયતીતિ નિવેદિતવન્તઃ|
14 ೧೪ ಪೌಲನು ಪ್ರತಿವಾದ ಮಾಡಬೇಕೆಂದಿದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ; “ಎಲೈ ಯೆಹೂದ್ಯರೇ, ಅನ್ಯಾಯವು, ದುಷ್ಕರ್ಮವು ಇಂಥದೇನಾದರೂ ಇದ್ದಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನೆಯಿಂದ ಕೇಳುವುದು ನ್ಯಾಯವೇ.
તતઃ પૌલે પ્રત્યુત્તરં દાતુમ્ ઉદ્યતે સતિ ગાલ્લિયા યિહૂદીયાન્ વ્યાહરત્, યદિ કસ્યચિદ્ અન્યાયસ્ય વાતિશયદુષ્ટતાચરણસ્ય વિચારોઽભવિષ્યત્ તર્હિ યુષ્માકં કથા મયા સહનીયાભવિષ્યત્|
15 ೧೫ ಆದರೆ ನೀವು ಮಾಡುವ ವಿವಾದವು ಬೋಧನೆಯನ್ನೂ, ಹೆಸರುಗಳನ್ನೂ, ನಿಮ್ಮ ಧರ್ಮಶಾಸ್ತ್ರವನ್ನೂ ಕುರಿತದ್ದಾಗಿರುವುದರಿಂದ ಅವುಗಳನ್ನು ನೀವೇ ನೋಡಿಕೊಳ್ಳಿರಿ. ಇಂಥ ವಿಷಯಗಳನ್ನು ವಿಚಾರಣೆಮಾಡುವುದಕ್ಕೆ ನನಗಂತೂ ಮನಸ್ಸಿಲ್ಲ” ಎಂದು ಹೇಳಿ,
કિન્તુ યદિ કેવલં કથાયા વા નામ્નો વા યુષ્માકં વ્યવસ્થાયા વિવાદો ભવતિ તર્હિ તસ્ય વિચારમહં ન કરિષ્યામિ, યૂયં તસ્ય મીમાંસાં કુરુત|
16 ೧೬ ಅವರನ್ನು ನ್ಯಾಯಾಸ್ಥಾನದ ಸ್ಥಳದಿಂದ ಹೊರಡಿಸಿಬಿಟ್ಟನು.
તતઃ સ તાન્ વિચારસ્થાનાદ્ દૂરીકૃતવાન્|
17 ೧೭ ಆಗ ಜನರೆಲ್ಲರು ಸಭಾಮಂದಿರದ ಅಧ್ಯಕ್ಷನಾದ ಸೋಸ್ಥೆನನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ.
તદા ભિન્નદેશીયાઃ સોસ્થિનિનામાનં ભજનભવનસ્ય પ્રધાનાધિપતિં ધૃત્વા વિચારસ્થાનસ્ય સમ્મુખે પ્રાહરન્ તથાપિ ગાલ્લિયા તેષુ સર્વ્વકર્મ્મસુ ન મનો ન્યદધાત્|
18 ೧೮ ಪೌಲನು ಇನ್ನು ಅನೇಕ ದಿನಗಳ ಕಾಲ ಅಲ್ಲಿದ್ದ ಅನಂತರ ಸಹೋದರರಿಂದ ಅಪ್ಪಣೆತೆಗೆದುಕೊಂಡು ತನಗೆ ದೀಕ್ಷೆ ಇದ್ದುದರಿಂದ ಕೆಂಖ್ರೆಯ ಪಟ್ಟಣದಲ್ಲಿ ಕ್ಷೌರಮಾಡಿಸಿಕೊಂಡು ಹಡಗನ್ನು ಹತ್ತಿ ಸಿರಿಯಕ್ಕೆ ಹೊರಟನು. ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಅವನ ಸಂಗಡ ಹೊರಟರು.
પૌલસ્તત્ર પુનર્બહુદિનાનિ ન્યવસત્, તતો ભ્રાતૃગણાદ્ વિસર્જનં પ્રાપ્ય કિઞ્ચનવ્રતનિમિત્તં કિંક્રિયાનગરે શિરો મુણ્ડયિત્વા પ્રિસ્કિલ્લાક્કિલાભ્યાં સહિતો જલપથેન સુરિયાદેશં ગતવાન્|
19 ೧೯ ಎಫೆಸಕ್ಕೆ ಬಂದಾಗ ಅವರನ್ನು ಅಲ್ಲೇ ಬಿಟ್ಟು, ತಾನು ಸಭಾಮಂದಿರದೊಳಕ್ಕೆ ಹೋಗಿ ಯೆಹೂದ್ಯರ ಸಂಗಡ ವಾದಿಸಿದನು.
તત ઇફિષનગર ઉપસ્થાય તત્ર તૌ વિસૃજ્ય સ્વયં ભજનભ્વનં પ્રવિશ્ય યિહૂદીયૈઃ સહ વિચારિતવાન્|
20 ೨೦ ಅವರು ಅವನನ್ನು ಇನ್ನು ಕೆಲವು ಕಾಲ ಇರಬೇಕೆಂದು ಕೇಳಿಕೊಂಡಾಗ ಅವನು ಒಪ್ಪದೆ,
તે સ્વૈઃ સાર્દ્ધં પુનઃ કતિપયદિનાનિ સ્થાતું તં વ્યનયન્, સ તદનુરરીકૃત્ય કથામેતાં કથિતવાન્,
21 ೨೧ “ದೇವರ ಚಿತ್ತವಾದರೆ ಪುನಃ ನಿಮ್ಮ ಬಳಿಗೆ ಬರುತ್ತೇನೆಂದು” ಹೇಳಿ ಅವರ ಅಪ್ಪಣೆ ತೆಗೆದುಕೊಂಡು ಹೊರಟುಹೋದನು. ಅನಂತರ ಎಫೆಸದಿಂದ ಸಮುದ್ರಪ್ರಯಾಣ ಮಾಡಿ ಕೈಸರೈಯದಲ್ಲಿ ಇಳಿದು,
યિરૂશાલમિ આગામ્યુત્સવપાલનાર્થં મયા ગમનીયં; પશ્ચાદ્ ઈશ્વરેચ્છાયાં જાતાયાં યુષ્માકં સમીપં પ્રત્યાગમિષ્યામિ| તતઃ પરં સ તૈ ર્વિસૃષ્ટઃ સન્ જલપથેન ઇફિષનગરાત્ પ્રસ્થિતવાન્|
22 ೨೨ ಯೆರೂಸಲೇಮಿಗೆ ಹೋಗಿ ಸಭೆಯನ್ನು ವಂದಿಸಿ ಅಂತಿಯೋಕ್ಯಕ್ಕೆ ಬಂದನು.
તતઃ કૈસરિયામ્ ઉપસ્થિતઃ સન્ નગરં ગત્વા સમાજં નમસ્કૃત્ય તસ્માદ્ આન્તિયખિયાનગરં પ્રસ્થિતવાન્|
23 ೨೩ ಪೌಲನು ಅಂತಿಯೋಕ್ಯದಲ್ಲಿ ಕೆಲವು ಕಾಲ ಇದ್ದು ಪುನಃ ಅಲ್ಲಿಂದ ಹೊರಟು ಕ್ರಮವಾಗಿ ಗಲಾತ್ಯ ಸೀಮೆಯಲ್ಲಿಯೂ, ಫ್ರುಗ್ಯದಲ್ಲಿಯೂ ಸಂಚಾರಮಾಡುತ್ತಾ ಶಿಷ್ಯರೆಲ್ಲರನ್ನು ದೃಢಪಡಿಸಿದನು.
તત્ર કિયત્કાલં યાપયિત્વા તસ્માત્ પ્રસ્થાય સર્વ્વેષાં શિષ્યાણાં મનાંસિ સુસ્થિરાણિ કૃત્વા ક્રમશો ગલાતિયાફ્રુગિયાદેશયો ર્ભ્રમિત્વા ગતવાન્|
24 ೨೪ ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನೂ ಧರ್ಮಶಾಸ್ತ್ರಗಳಲ್ಲಿ ಪ್ರವೀಣನೂ ಆಗಿದ್ದನು.
તસ્મિન્નેવ સમયે સિકન્દરિયાનગરે જાત આપલ્લોનામા શાસ્ત્રવિત્ સુવક્તા યિહૂદીય એકો જન ઇફિષનગરમ્ આગતવાન્|
25 ೨೫ ಅವನು ಕರ್ತನ ಮಾರ್ಗದ ವಿಷಯದಲ್ಲಿ ಉಪದೇಶ ಹೊಂದಿದವನಾಗಿದ್ದನು ಮತ್ತು ಆಸಕ್ತ ಮನಸ್ಸುಳ್ಳವನಾಗಿದ್ದು ಯೋಹಾನನು ಮಾಡಿಸಿದ ದೀಕ್ಷಾಸ್ನಾನವನ್ನು ಮಾತ್ರ ಬಲ್ಲವನಾದರೂ ಯೇಸುವಿನ ಸಂಗತಿಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿಸಿದನು.
સ શિક્ષિતપ્રભુમાર્ગો મનસોદ્યોગી ચ સન્ યોહનો મજ્જનમાત્રં જ્ઞાત્વા યથાર્થતયા પ્રભોઃ કથાં કથયન્ સમુપાદિશત્|
26 ೨೬ ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಕೇಳಿ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.
એષ જનો નિર્ભયત્વેન ભજનભવને કથયિતુમ્ આરબ્ધવાન્, તતઃ પ્રિસ્કિલ્લાક્કિલૌ તસ્યોપદેશકથાં નિશમ્ય તં સ્વયોઃ સમીપમ્ આનીય શુદ્ધરૂપેણેશ્વરસ્ય કથામ્ અબોધયતામ્|
27 ೨೭ ಆ ಮೇಲೆ ಅಖಾಯಕ್ಕೆ ಹೋಗಬೇಕೆಂದು ಅವನಿಗೆ ಮನಸ್ಸಾದಾಗ ಸಹೋದರರು ಅವನನ್ನು ಪ್ರೋತ್ಸಾಹಗೊಳಿಸಿ ಅಲ್ಲಿದ್ದ ಶಿಷ್ಯರಿಗೆ ಇವನನ್ನು ಸೇರಿಸಿಕೊಳ್ಳಬೇಕೆಂದು ಪತ್ರಿಕೆಯನ್ನು ಬರೆದುಕೊಟ್ಟರು.
પશ્ચાત્ સ આખાયાદેશં ગન્તું મતિં કૃતવાન્, તદા તત્રત્યઃ શિષ્યગણો યથા તં ગૃહ્લાતિ તદર્થં ભ્રાતૃગણેન સમાશ્વસ્ય પત્રે લિખિતે સતિ, આપલ્લાસ્તત્રોપસ્થિતઃ સન્ અનુગ્રહેણ પ્રત્યયિનાં બહૂપકારાન્ અકરોત્,
28 ೨೮ ಅವನು ಹೋಗಿ ಯೇಸುವೇ ಕ್ರಿಸ್ತನೆಂದು ದೇವರ ವಾಕ್ಯದಿಂದ ಯೆಹೂದ್ಯರಿಗೆ ತೋರಿಸಿಕೊಟ್ಟು ಎಲ್ಲರ ಮುಂದೆ ಬಲವಾಗಿ ಈ ವಿಷಯವನ್ನು ರುಜುವಾತುಪಡಿಸುತ್ತಾ ಯೆಹೂದ್ಯರನ್ನು ಖಂಡಿಸಿ ದೇವರ ಕೃಪೆಯಿಂದ ನಂಬಿದವರಿಗೆ ಬಹಳ ಸಹಾಯಮಾಡಿದನು.
ફલતો યીશુરભિષિક્તસ્ત્રાતેતિ શાસ્ત્રપ્રમાણં દત્વા પ્રકાશરૂપેણ પ્રતિપન્નં કૃત્વા યિહૂદીયાન્ નિરુત્તરાન્ કૃતવાન્|

< ಅಪೊಸ್ತಲರ ಕೃತ್ಯಗಳ 18 >