< లూకః 22 >

1 అపరఞ్చ కిణ్వశూన్యపూపోత్సవస్య కాల ఉపస్థితే
ಪಸ್ಕವೆಂದು ಕರೆಯಲ್ಪಡುವ ಹುಳಿಯಿಲ್ಲದ ರೊಟ್ಟಿಯ ಹಬ್ಬವು ಹತ್ತಿರವಾದಾಗ,
2 ప్రధానయాజకా అధ్యాయకాశ్చ యథా తం హన్తుం శక్నువన్తి తథోపాయామ్ అచేష్టన్త కిన్తు లోకేభ్యో బిభ్యుః|
ಮುಖ್ಯಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಕೊಲ್ಲಬೇಕೆಂದಿದ್ದರು. ಆದರೆ ಜನರಿಗೆ ಹೆದರಿ ತಕ್ಕ ಮಾರ್ಗವನ್ನು ಹುಡುಕುತ್ತಿದ್ದರು.
3 ఏతస్తిన్ సమయే ద్వాదశశిష్యేషు గణిత ఈష్కరియోతీయరూఢిమాన్ యో యిహూదాస్తస్యాన్తఃకరణం శైతానాశ్రితత్వాత్
ಆಗ ಸೈತಾನನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತನೆಂಬ ಯೂದನಲ್ಲಿ ಪ್ರವೇಶಿಸಲು,
4 స గత్వా యథా యీశుం తేషాం కరేషు సమర్పయితుం శక్నోతి తథా మన్త్రణాం ప్రధానయాజకైః సేనాపతిభిశ్చ సహ చకార|
ಅವನು ಮುಖ್ಯಯಾಜಕರ ಬಳಿಗೂ ಕಾವಲಿನ ದಳವಾಯಿಗಳ ಬಳಿಗೂ ಹೋಗಿ ತಾನು ಯೇಸುವನ್ನು ಹಿಡಿದುಕೊಡುವ ಉಪಾಯವನ್ನು ಕುರಿತು ಅವರ ಸಂಗಡ ಮಾತನಾಡಿದನು.
5 తేన తే తుష్టాస్తస్మై ముద్రాం దాతుం పణం చక్రుః|
ಅವರು ಸಂತೋಷಪಟ್ಟು ನಿನಗೆ ಹಣ ಕೊಡುತ್ತೇವೆಂದು ಒಪ್ಪಂದ ಮಾಡಲು,
6 తతః సోఙ్గీకృత్య యథా లోకానామగోచరే తం పరకరేషు సమర్పయితుం శక్నోతి తథావకాశం చేష్టితుమారేభే|
ಅವನು ಒಪ್ಪಿಕೊಂಡು, ಜನಸಮೂಹವಿಲ್ಲದಿರುವಾಗ ಆತನನ್ನು ಅವರಿಗೆ ಹಿಡಿದುಕೊಡುವುದಕ್ಕೆ ಅನುಕೂಲವಾದ ಸಂದರ್ಭವನ್ನು ನೋಡುತ್ತಿದ್ದನು.
7 అథ కిణ్వశూన్యపూపోత్మవదినే, అర్థాత్ యస్మిన్ దినే నిస్తారోత్సవస్య మేషో హన్తవ్యస్తస్మిన్ దినే
ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯತಕ್ಕ ದಿನ ಬಂದಾಗ,
8 యీశుః పితరం యోహనఞ్చాహూయ జగాద, యువాం గత్వాస్మాకం భోజనార్థం నిస్తారోత్సవస్య ద్రవ్యాణ్యాసాదయతం|
ಯೇಸು ಪೇತ್ರನಿಗೂ ಯೋಹಾನನಿಗೂ, “ನೀವು ಹೋಗಿ ನಾವು ಪಸ್ಕದ ಊಟಮಾಡುವಂತೆ ಸಿದ್ಧಮಾಡಿರಿ” ಎಂದು ಹೇಳಿ ಅವರನ್ನು ಕಳುಹಿಸಿದನು.
9 తదా తౌ పప్రచ్ఛతుః కుచాసాదయావో భవతః కేచ్ఛా?
ಅವರು, “ನಾವು ಎಲ್ಲಿ ಸಿದ್ಧಮಾಡಬೇಕನ್ನುತ್ತೀ?” ಎಂದು ಆತನನ್ನು ಕೇಳಲು,
10 తదా సోవాదీత్, నగరే ప్రవిష్టే కశ్చిజ్జలకుమ్భమాదాయ యువాం సాక్షాత్ కరిష్యతి స యన్నివేశనం ప్రవిశతి యువామపి తన్నివేశనం తత్పశ్చాదిత్వా నివేశనపతిమ్ ఇతి వాక్యం వదతం,
೧೦ಆತನು ಅವರಿಗೆ, “ನೋಡಿರಿ, ನೀವು ಪಟ್ಟಣದೊಳಕ್ಕೆ ಹೋದ ಮೇಲೆ ಒಬ್ಬ ಮನುಷ್ಯನು ತುಂಬಿದ ಕೊಡವನ್ನು ಹೊತ್ತುಕೊಂಡು ನಿಮ್ಮೆದುರಿಗೆ ಬರುವನು. ಅವನು ಹೋಗುವ ಮನೆಗೆ ನೀವು ಅವನ ಹಿಂದೆ ಹೋಗಿ,
11 యత్రాహం నిస్తారోత్సవస్య భోజ్యం శిష్యైః సార్ద్ధం భోక్తుం శక్నోమి సాతిథిశాలా కుత్ర? కథామిమాం ప్రభుస్త్వాం పృచ్ఛతి|
೧೧ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರ ಸಂಗಡ ಪಸ್ಕದ ಊಟವನ್ನು ಮಾಡುವುದಕ್ಕಾಗಿ ವಿಶೇಷವಾದ ಕೊಠಡಿ ಎಲ್ಲಿ?’ ಎಂದು ನಿನ್ನನ್ನು ವಿಚಾರಿಸಲು ನಮ್ಮ ಗುರು ಹೇಳಿದ್ದಾನೆ, ಎಂದು ಹೇಳಿರಿ.
12 తతః స జనో ద్వితీయప్రకోష్ఠీయమ్ ఏకం శస్తం కోష్ఠం దర్శయిష్యతి తత్ర భోజ్యమాసాదయతం|
೧೨ಅವನು ತಕ್ಕ ಪೀಠೋಪಕರಣಗಳಿಂದ ಅಲಂಕೃತವಾದ ಮೇಲ್ಮಾಳಿಗೆಯಲ್ಲಿ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ನೀವು ಭೋಜನಕ್ಕೆ ಸಿದ್ಧ ಮಾಡಿರಿ” ಎಂದು ಹೇಳಿ ಕಳುಹಿಸಿದನು.
13 తతస్తౌ గత్వా తద్వాక్యానుసారేణ సర్వ్వం దృష్ద్వా తత్ర నిస్తారోత్సవీయం భోజ్యమాసాదయామాసతుః|
೧೩ಅವರು ಹೊರಟು ಆತನು ತಮಗೆ ಹೇಳಿದಂತೆ ಕಂಡು ಪಸ್ಕ ಹಬ್ಬಕ್ಕೆ ಸಿದ್ಧಮಾಡಿದರು.
14 అథ కాల ఉపస్థితే యీశు ర్ద్వాదశభిః ప్రేరితైః సహ భోక్తుముపవిశ్య కథితవాన్
೧೪ಆ ಸಮಯ ಬಂದಾಗ ಆತನು ತನ್ನ ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಊಟಕ್ಕೆ ಕುಳಿತುಕೊಂಡನು.
15 మమ దుఃఖభోగాత్ పూర్వ్వం యుభాభిః సహ నిస్తారోత్సవస్యైతస్య భోజ్యం భోక్తుం మయాతివాఞ్ఛా కృతా|
೧೫ಆಗ ಆತನು ಅವರಿಗೆ, “ನಾನು ಯಾತನೆಯನ್ನು ಅನುಭವಿಸುವುದಕ್ಕಿಂತ ಮೊದಲೇ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವುದಕ್ಕೆ ಮನಃಪೂರ್ವಕವಾಗಿ ಬಯಸಿದ್ದೇನೆ.
16 యుష్మాన్ వదామి, యావత్కాలమ్ ఈశ్వరరాజ్యే భోజనం న కరిష్యే తావత్కాలమ్ ఇదం న భోక్ష్యే|
೧೬ಇನ್ನು ದೇವರ ರಾಜ್ಯದಲ್ಲಿಇದು ನೆರವೇರುವ ತನಕ ನಾನು ಇನ್ನು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಎಂದು ಹೇಳಿದನು.
17 తదా స పానపాత్రమాదాయ ఈశ్వరస్య గుణాన్ కీర్త్తయిత్వా తేభ్యో దత్వావదత్, ఇదం గృహ్లీత యూయం విభజ్య పివత|
೧೭ಆ ಮೇಲೆ ಆತನು (ದ್ರಾಕ್ಷಾರಸದ) ಪಾತ್ರೆಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ, “ಇದನ್ನು ತೆಗೆದುಕೊಂಡು ಹಂಚಿಕೊಂಡು ಕುಡಿಯಿರಿ.
18 యుష్మాన్ వదామి యావత్కాలమ్ ఈశ్వరరాజత్వస్య సంస్థాపనం న భవతి తావద్ ద్రాక్షాఫలరసం న పాస్యామి|
೧೮ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ” ಅಂದನು.
19 తతః పూపం గృహీత్వా ఈశ్వరగుణాన్ కీర్త్తయిత్వా భఙ్క్తా తేభ్యో దత్వావదత్, యుష్మదర్థం సమర్పితం యన్మమ వపుస్తదిదం, ఏతత్ కర్మ్మ మమ స్మరణార్థం కురుధ్వం|
೧೯ಬಳಿಕ ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ” ಅಂದನು.
20 అథ భోజనాన్తే తాదృశం పాత్రం గృహీత్వావదత్, యుష్మత్కృతే పాతితం యన్మమ రక్తం తేన నిర్ణీతనవనియమరూపం పానపాత్రమిదం|
೨೦ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ, ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.
21 పశ్యత యో మాం పరకరేషు సమర్పయిష్యతి స మయా సహ భోజనాసన ఉపవిశతి|
೨೧“ಆದರೂ ನೋಡಿರಿ, ನನ್ನನ್ನು ಹಿಡಿದುಕೊಡುವವನು ನನ್ನೊಡನೆ ಮೇಜಿನ ಮೇಲೆ ಕೈಯಿಟ್ಟು ಊಟಮಾಡುತ್ತಿದ್ದಾನೆ.
22 యథా నిరూపితమాస్తే తదనుసారేణా మనుష్యపుత్రస్య గతి ర్భవిష్యతి కిన్తు యస్తం పరకరేషు సమర్పయిష్యతి తస్య సన్తాపో భవిష్యతి|
೨೨ನಿರ್ಣಯವಾಗಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ, ಆದರೆ ಆತನನ್ನು ಹಿಡಿದುಕೊಡುವ ಮನುಷ್ಯನ ಗತಿಯನ್ನು ಏನು ಹೇಳಲಿ” ಅಂದನು.
23 తదా తేషాం కో జన ఏతత్ కర్మ్మ కరిష్యతి తత్ తే పరస్పరం ప్రష్టుమారేభిరే|
೨೩ಇದನ್ನು ಕೇಳಿ ಅವರು, ಇಂಥ ಕೆಲಸವನ್ನು ಮಾಡಬೇಕೆಂದಿರುವವನು ನಮ್ಮಲ್ಲಿ ಯಾವನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.
24 అపరం తేషాం కో జనః శ్రేష్ఠత్వేన గణయిష్యతే, అత్రార్థే తేషాం వివాదోభవత్|
೨೪ಇದಲ್ಲದೆ ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು.
25 అస్మాత్ కారణాత్ సోవదత్, అన్యదేశీయానాం రాజానః ప్రజానాముపరి ప్రభుత్వం కుర్వ్వన్తి దారుణశాసనం కృత్వాపి తే భూపతిత్వేన విఖ్యాతా భవన్తి చ|
೨೫ಆಗ ಆತನು ಅವರಿಗೆ, “ಅನ್ಯಜನಾಂಗದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮೇಲೆ ಅಧಿಕಾರದಿಂದ ಆಡಳಿತ ನಡಿಸುವವರು ಉಪಕಾರಿಗಳೆಂದು ಕರೆಸಿಕೊಳ್ಳುತ್ತಾರೆ.
26 కిన్తు యుష్మాకం తథా న భవిష్యతి, యో యుష్మాకం శ్రేష్ఠో భవిష్యతి స కనిష్ఠవద్ భవతు, యశ్చ ముఖ్యో భవిష్యతి స సేవకవద్భవతు|
೨೬ನೀವು ಹಾಗಿರಬಾರದು, ನಿಮ್ಮಲ್ಲಿ ದೊಡ್ಡವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು.
27 భోజనోపవిష్టపరిచారకయోః కః శ్రేష్ఠః? యో భోజనాయోపవిశతి స కిం శ్రేష్ఠో న భవతి? కిన్తు యుష్మాకం మధ్యేఽహం పరిచారకఇవాస్మి|
೨೭ಯಾರು ದೊಡ್ಡವನು? ಊಟಕ್ಕೆ ಕುಳಿತವನೋ ಸೇವೆಮಾಡುವವನೋ? ಊಟಕ್ಕೆ ಕುಳಿತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.
28 అపరఞ్చ యుయం మమ పరీక్షాకాలే ప్రథమమారభ్య మయా సహ స్థితా
೨೮ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು.
29 ఏతత్కారణాత్ పిత్రా యథా మదర్థం రాజ్యమేకం నిరూపితం తథాహమపి యుష్మదర్థం రాజ్యం నిరూపయామి|
೨೯ಆದುದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿರುವ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ;
30 తస్మాన్ మమ రాజ్యే భోజనాసనే చ భోజనపానే కరిష్యధ్వే సింహాసనేషూపవిశ్య చేస్రాయేలీయానాం ద్వాదశవంశానాం విచారం కరిష్యధ్వే|
೩೦ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರ್ಪುಮಾಡುವಿರಿ.
31 అపరం ప్రభురువాచ, హే శిమోన్ పశ్య తితఉనా ధాన్యానీవ యుష్మాన్ శైతాన్ చాలయితుమ్ ఐచ్ఛత్,
೩೧“ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿನ್ನನ್ನು ಗೋದಿಯಂತೆ ಕೇರಬೇಕೆಂದು ಅಪ್ಪಣೆ ಕೇಳಿಕೊಂಡನು.
32 కిన్తు తవ విశ్వాసస్య లోపో యథా న భవతి ఏతత్ త్వదర్థం ప్రార్థితం మయా, త్వన్మనసి పరివర్త్తితే చ భ్రాతృణాం మనాంసి స్థిరీకురు|
೩೨ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು” ಎಂದು ಹೇಳಿದನು.
33 తదా సోవదత్, హే ప్రభోహం త్వయా సార్ద్ధం కారాం మృతిఞ్చ యాతుం మజ్జితోస్మి|
೩೩ಆದರೆ ಅವನು, “ಕರ್ತನೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಅನ್ನಲು,
34 తతః స ఉవాచ, హే పితర త్వాం వదామి, అద్య కుక్కుటరవాత్ పూర్వ్వం త్వం మత్పరిచయం వారత్రయమ్ అపహ్వోష్యసే|
೩೪ಆತನು, “ಪೇತ್ರನೇ, ನನ್ನ ವಿಷಯದಲ್ಲಿ ಇವನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವ ತನಕ ಈಹೊತ್ತು ಕೋಳಿ ಕೂಗುವುದಿಲ್ಲವೆಂದು ನಿನಗೆ ಹೇಳುತ್ತೇನೆ” ಅಂದನು.
35 అపరం స పప్రచ్ఛ, యదా ముద్రాసమ్పుటం ఖాద్యపాత్రం పాదుకాఞ్చ వినా యుష్మాన్ ప్రాహిణవం తదా యుష్మాకం కస్యాపి న్యూనతాసీత్? తే ప్రోచుః కస్యాపి న|
೩೫ಮತ್ತು ಆತನು, “ನಿಮ್ಮನ್ನು ನಾನು ಹಣ, ಕೈಚೀಲಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ?” ಎಂದು ಕೇಳಲು ಅವರು ಏನೂ ಇಲ್ಲವೆಂದು ಉತ್ತರಕೊಟ್ಟರು.
36 తదా సోవదత్ కిన్త్విదానీం ముద్రాసమ్పుటం ఖాద్యపాత్రం వా యస్యాస్తి తేన తద్గ్రహీతవ్యం, యస్య చ కృపాణో నాస్తి తేన స్వవస్త్రం విక్రీయ స క్రేతవ్యః|
೩೬ಅದಕ್ಕೆ ಆತನು, “ಈಗಲಾದರೋ ಹಣವಿದ್ದವನು ಅದನ್ನು ತೆಗೆದುಕೊಳ್ಳಲಿ, ಕೈಚೀಲವಿರುವವನು ಅದನ್ನು ತೆಗೆದುಕೊಳ್ಳಲಿ, ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ.
37 యతో యుష్మానహం వదామి, అపరాధిజనైః సార్ద్ధం గణితః స భవిష్యతి| ఇదం యచ్ఛాస్త్రీయం వచనం లిఖితమస్తి తన్మయి ఫలిష్యతి యతో మమ సమ్బన్ధీయం సర్వ్వం సేత్స్యతి|
೩೭ಏಕೆಂದರೆ, ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ. ನನ್ನ ವಿಷಯದಲ್ಲಿ ಬರೆಯಲ್ಪಟ್ಟಿರುವ ಎಲ್ಲವು ನೆರವೇರಬೇಕು” ಎಂದು ಹೇಳಿದನು.
38 తదా తే ప్రోచుః ప్రభో పశ్య ఇమౌ కృపాణౌ| తతః సోవదద్ ఏతౌ యథేష్టౌ|
೩೮ಅವರು, “ಕರ್ತನೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ” ಅನ್ನಲು, ಆತನು ಅವರಿಗೆ, “ಅಷ್ಟು ಸಾಕು” ಅಂದನು.
39 అథ స తస్మాద్వహి ర్గత్వా స్వాచారానుసారేణ జైతుననామాద్రిం జగామ శిష్యాశ్చ తత్పశ్చాద్ యయుః|
೩೯ತರುವಾಯ ಆತನು ಪ್ರತಿದಿನದಂತೆ ಹೊರಟು ಎಣ್ಣೆಮರಗಳ ಗುಡ್ಡಕ್ಕೆ ಹೋದನು. ಶಿಷ್ಯರೂ ಆತನ ಹಿಂದೆ ಹೋದರು.
40 తత్రోపస్థాయ స తానువాచ, యథా పరీక్షాయాం న పతథ తదర్థం ప్రార్థయధ్వం|
೪೦ಆತನು ಆ ಕ್ಲುಪ್ತ ಸ್ಥಳಕ್ಕೆ ಬಂದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
41 పశ్చాత్ స తస్మాద్ ఏకశరక్షేపాద్ బహి ర్గత్వా జానునీ పాతయిత్వా ఏతత్ ప్రార్థయాఞ్చక్రే,
೪೧ಆ ಮೇಲೆ ಆತನು ಅವರನ್ನು ಬಿಟ್ಟು ಕಲ್ಲೆಸೆತದಷ್ಟು ದೂರ ಹೋಗಿ, ಮೊಣಕಾಲೂರಿ,
42 హే పిత ర్యది భవాన్ సమ్మన్యతే తర్హి కంసమేనం మమాన్తికాద్ దూరయ కిన్తు మదిచ్ఛానురూపం న త్వదిచ్ఛానురూపం భవతు|
೪೨“ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತದಂತೆಯೇ ಆಗಲಿ” ಪ್ರಾರ್ಥಿಸಿದನು.
43 తదా తస్మై శక్తిం దాతుం స్వర్గీయదూతో దర్శనం దదౌ|
೪೩ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು, ಆತನನ್ನು ಬಲಪಡಿಸಿದನು.
44 పశ్చాత్ సోత్యన్తం యాతనయా వ్యాకులో భూత్వా పునర్దృఢం ప్రార్థయాఞ్చక్రే, తస్మాద్ బృహచ్ఛోణితబిన్దవ ఇవ తస్య స్వేదబిన్దవః పృథివ్యాం పతితుమారేభిరే|
೪೪ಯೇಸು ತೀವ್ರವಾದ ಮನೋವ್ಯಥೆಯುಳ್ಳವನಾಗಿ, ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ, ಆತನ ಬೆವರು ರಕ್ತದ ಹನಿಗಳೋಪಾದಿಯಲ್ಲಿ ನೆಲಕ್ಕೆ ಬೀಳುತ್ತಿತ್ತು.
45 అథ ప్రార్థనాత ఉత్థాయ శిష్యాణాం సమీపమేత్య తాన్ మనోదుఃఖినో నిద్రితాన్ దృష్ట్వావదత్
೪೫ಆತನು ಪ್ರಾರ್ಥನೆ ಮುಗಿಸಿ ಎದ್ದು ಶಿಷ್ಯರ ಬಳಿಗೆ ಬಂದು, ಅವರು ದುಃಖದಿಂದ ಬಳಲಿಹೋದವರಾಗಿ ನಿದ್ರೆಹತ್ತಿರುವುದನ್ನು ಕಂಡು,
46 కుతో నిద్రాథ? పరీక్షాయామ్ అపతనార్థం ప్రర్థయధ్వం|
೪೬ಅವರಿಗೆ, “ನೀವು ನಿದ್ರೆಮಾಡುವುದೇನು? ಏಳಿರಿ, ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
47 ఏతత్కథాయాః కథనకాలే ద్వాదశశిష్యాణాం మధ్యే గణితో యిహూదానామా జనతాసహితస్తేషామ్ అగ్రే చలిత్వా యీశోశ్చుమ్బనార్థం తదన్తికమ్ ఆయయౌ|
೪೭ಆತನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ, ಜನರ ಗುಂಪು ಕಾಣಿಸಿತು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನೆಂಬುವನು ಆ ಜನರ ಗುಂಪಿನ ಮುಂದೆ ನಡೆಯುತ್ತಾ, ಯೇಸುವಿಗೆ ಮುದ್ದಿಡುವುದಕ್ಕಾಗಿ ಆತನ ಬಳಿಗೆ ಬರಲು,
48 తదా యీశురువాచ, హే యిహూదా కిం చుమ్బనేన మనుష్యపుత్రం పరకరేషు సమర్పయసి?
೪೮ಯೇಸು ಅವನಿಗೆ, “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡಿದುಕೊಡುತ್ತೀಯಾ?” ಎಂದು ಕೇಳಿದನು.
49 తదా యద్యద్ ఘటిష్యతే తదనుమాయ సఙ్గిభిరుక్తం, హే ప్రభో వయం కి ఖఙ్గేన ఘాతయిష్యామః?
೪೯ಆತನ ಸುತ್ತಲಿದ್ದವರು ಘಟನೆಯ ಸೂಕ್ಷ್ಮತೆಯನ್ನು ತಿಳಿದು ತಕ್ಷಣ, “ಕರ್ತನೇ, ನಾವು ಕತ್ತಿಯಿಂದ ಹೊಡೆಯೋಣವೋ?” ಎಂದು ಕೇಳಿದರು.
50 తత ఏకః కరవాలేనాహత్య ప్రధానయాజకస్య దాసస్య దక్షిణం కర్ణం చిచ్ఛేద|
೫೦ಅಷ್ಟರಲ್ಲಿ ಅವರಲ್ಲಿ ಒಬ್ಬನು ಮಹಾಯಾಜಕನ ಆಳನ್ನು ಕತ್ತಿಯಿಂದ ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿ ಹಾಕಿದನು.
51 అధూనా నివర్త్తస్వ ఇత్యుక్త్వా యీశుస్తస్య శ్రుతిం స్పృష్ట్వా స్వస్యం చకార|
೫೧ಆದರೆ ಯೇಸು, “ಇಷ್ಟಕ್ಕೇ ಬಿಡಿರಿ” ಎಂದು ಹೇಳಿ ಆ ಆಳಿನ ಕಿವಿಯನ್ನು ಮುಟ್ಟಿ ವಾಸಿಮಾಡಿದನು.
52 పశ్చాద్ యీశుః సమీపస్థాన్ ప్రధానయాజకాన్ మన్దిరస్య సేనాపతీన్ ప్రాచీనాంశ్చ జగాద, యూయం కృపాణాన్ యష్టీంశ్చ గృహీత్వా మాం కిం చోరం ధర్త్తుమాయాతాః?
೫೨ಬಳಿಕ ಯೇಸು ತನ್ನನ್ನು ಹಿಡಿಯುವುದಕ್ಕೆ ಬಂದ ಮುಖ್ಯಯಾಜಕರಿಗೂ, ದೇವಾಲಯದ ಕಾವಲಿನ ದಳವಾಯಿಗಳಿಗೂ, ಸಭೆಯ ಹಿರಿಯರಿಗೂ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ಬಂದಿರುವಿರಾ?
53 యదాహం యుష్మాభిః సహ ప్రతిదినం మన్దిరేఽతిష్ఠం తదా మాం ధర్త్తం న ప్రవృత్తాః, కిన్త్విదానీం యుష్మాకం సమయోన్ధకారస్య చాధిపత్యమస్తి|
೫೩ನಾನು ಪ್ರತಿದಿನ ದೇವಾಲಯದಲ್ಲಿ ನಿಮ್ಮ ಸಂಗಡ ಇದ್ದಾಗ ನೀವು ನನ್ನ ಮೇಲೆ ಕೈಹಾಕಲಿಲ್ಲ. ಆದರೆ ಇದು ನಿಮ್ಮ ಕಾಲ, ಇದು ಅಂಧಕಾರದ ದೊರೆತನದ ಕಾಲ” ಎಂದು ಹೇಳಿದನು.
54 అథ తే తం ధృత్వా మహాయాజకస్య నివేశనం నిన్యుః| తతః పితరో దూరే దూరే పశ్చాదిత్వా
೫೪ಅವರು ಆತನನ್ನು ಹಿಡಿದು ಮಹಾಯಾಜಕನ ಮನೆಯೊಳಕ್ಕೆ ಕರೆದುಕೊಂಡು ಹೋದರು. ಪೇತ್ರನು ದೂರದಿಂದ ಅವರನ್ನು ಹಿಂಬಾಲಿಸುತ್ತಿದ್ದನು.
55 బృహత్కోష్ఠస్య మధ్యే యత్రాగ్నిం జ్వాలయిత్వా లోకాః సమేత్యోపవిష్టాస్తత్ర తైః సార్ద్ధమ్ ఉపవివేశ|
೫೫ಅಂಗಳದ ನಡುವೆ ಅವರು ಬೆಂಕಿ ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡಿರಲು ಅವರ ನಡುವೆ ಪೇತ್ರನೂ ಕುಳಿತುಕೊಂಡನು.
56 అథ వహ్నిసన్నిధౌ సముపవేశకాలే కాచిద్దాసీ మనో నివిశ్య తం నిరీక్ష్యావదత్ పుమానయం తస్య సఙ్గేఽస్థాత్|
೫೬ಅವನು ಬೆಳಕಿಗೆ ಮುಖವಾಗಿ ಕುಳಿತಿರುವಾಗ ಒಬ್ಬ ದಾಸಿಯು ಅವನನ್ನು ಕಂಡು, ಅವನನ್ನು ದೃಷ್ಟಿಸಿ ನೋಡಿ, “ಇವನು ಸಹ ಅವನ ಸಂಗಡ ಇದ್ದವನು” ಅಂದಳು.
57 కిన్తు స తద్ అపహ్నుత్యావాదీత్ హే నారి తమహం న పరిచినోమి|
೫೭ಆದರೆ ಅವನು, “ನಾನು ಅವನನ್ನು ಅರಿಯೆನಮ್ಮಾ” ಎಂದು ಹೇಳಿದನು.
58 క్షణాన్తరేఽన్యజనస్తం దృష్ట్వాబ్రవీత్ త్వమపి తేషాం నికరస్యైకజనోసి| పితరః ప్రత్యువాచ హే నర నాహమస్మి|
೫೮ಸ್ವಲ್ಪಹೊತ್ತಿನ ಮೇಲೆ ಮತ್ತೊಬ್ಬನು ಬಂದು ಅವನನ್ನು ಕಂಡು, “ನೀನೂ ಸಹ ಅವರಲ್ಲಿ ಒಬ್ಬನು” ಅನ್ನಲು ಪೇತ್ರನು, “ನಾನಲ್ಲಪ್ಪಾ” ಅಂದನು.
59 తతః సార్ద్ధదణ్డద్వయాత్ పరం పునరన్యో జనో నిశ్చిత్య బభాషే, ఏష తస్య సఙ్గీతి సత్యం యతోయం గాలీలీయో లోకః|
೫೯ಹೆಚ್ಚು ಕಡಿಮೆ ಒಂದು ಘಂಟೆ ಹೊತ್ತಿನ ಮೇಲೆ ಇನ್ನೊಬ್ಬನು, “ನಿಶ್ಚಯವಾಗಿ ಇವನು ಸಹ ಅವನ ಸಂಗಡ ಇದ್ದವನು, ಇವನು ಗಲಿಲಾಯದವನಷ್ಟೆ” ಎಂದು ದೃಢವಾಗಿ ಹೇಳಿದನು.
60 తదా పితర ఉవాచ హే నర త్వం యద్ వదమి తదహం బోద్ధుం న శక్నోమి, ఇతి వాక్యే కథితమాత్రే కుక్కుటో రురావ|
೬೦ಆದರೆ ಪೇತ್ರನು, “ನೀನು ಹೇಳುವುದೇನೋ ನಾನರಿಯೆನಪ್ಪಾ” ಅಂದನು. ಅವನು ಈ ಮಾತನ್ನು ಆಡುತ್ತಿರುವಾಗಲೇ ಕೋಳಿ ಕೂಗಿತು.
61 తదా ప్రభుణా వ్యాధుట్య పితరే నిరీక్షితే కృకవాకురవాత్ పూర్వ్వం మాం త్రిరపహ్నోష్యసే ఇతి పూర్వ్వోక్తం తస్య వాక్యం పితరః స్మృత్వా
೬೧ಕರ್ತನು ಹಿಂತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು. ಆಗ ಪೇತ್ರನು, “ಈಹೊತ್ತು ಕೋಳಿ ಕೂಗುವುದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅವನನ್ನು ಅರಿಯೆನೆಂಬದಾಗಿ ಹೇಳುವಿ” ಎಂದು ಕರ್ತನು ನುಡಿದ ಮಾತನ್ನು ನೆನಪಿಸಿಕೊಂಡು,
62 బహిర్గత్వా మహాఖేదేన చక్రన్ద|
೬೨ಹೊರಗೆ ಹೋಗಿ ತುಂಬಾ ವ್ಯಥೆಪಟ್ಟು ಅತ್ತನು.
63 తదా యై ర్యీశుర్ధృతస్తే తముపహస్య ప్రహర్త్తుమారేభిరే|
೬೩ಆ ಮೇಲೆ ಯೇಸುವನ್ನು ಹಿಡಿದವರು ಆತನನ್ನು ಪರಿಹಾಸ್ಯಮಾಡುತ್ತಾ, ಆತನಿಗೆ ಮುಸುಕುಹಾಕಿ ಹೊಡೆದು, “ನಿನ್ನನ್ನು ಹೊಡೆದವನಾರು? ಪ್ರವಾದನೆ ಹೇಳು” ಎಂದು ಆತನನ್ನು ಕೇಳಿದರು.
64 వస్త్రేణ తస్య దృశౌ బద్ధ్వా కపోలే చపేటాఘాతం కృత్వా పప్రచ్ఛుః, కస్తే కపోలే చపేటాఘాతం కృతవాన? గణయిత్వా తద్ వద|
೬೪
65 తదన్యత్ తద్విరుద్ధం బహునిన్దావాక్యం వక్తుమారేభిరే|
೬೫ಆತನ ಕುರಿತು ಇನ್ನೂ ಅನೇಕ ದೂಷಣೆಯ ಮಾತುಗಳನ್ನಾಡಿದರು.
66 అథ ప్రభాతే సతి లోకప్రాఞ్చః ప్రధానయాజకా అధ్యాపకాశ్చ సభాం కృత్వా మధ్యేసభం యీశుమానీయ పప్రచ్ఛుః, త్వమ్ అభిషికతోసి న వాస్మాన్ వద|
೬೬ಬೆಳಗಾಗುವಾಗ ಯೆಹೂದ್ಯರ ಹಿರೀಸಭೆಯವರು, ಮುಖ್ಯಯಾಜಕರು ಮತ್ತು ಶಾಸ್ತ್ರಿಗಳು ಕೂಡಿ ಆತನನ್ನು ತಮ್ಮ ನ್ಯಾಯವಿಚಾರಣಾಸಭೆಗೆ ತೆಗೆದುಕೊಂಡು ಬಂದು,
67 స ప్రత్యువాచ, మయా తస్మిన్నుక్తేఽపి యూయం న విశ్వసిష్యథ|
೬೭“ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು” ಅಂದರು. ಆತನು ಅವರಿಗೆ, “ನಾನು ನಿಮಗೆ ಹೇಳಿದರೆ ನೀವು ನಂಬುವುದಿಲ್ಲ.
68 కస్మింశ్చిద్వాక్యే యుష్మాన్ పృష్టేఽపి మాం న తదుత్తరం వక్ష్యథ న మాం త్యక్ష్యథ చ|
೬೮ನಾನು ನಿಮ್ಮನ್ನು ಏನಾದರೂ ಕೇಳಿದರೆ ನೀವು ಉತ್ತರಕೊಡುವುದಿಲ್ಲ.
69 కిన్త్వితః పరం మనుజసుతః సర్వ్వశక్తిమత ఈశ్వరస్య దక్షిణే పార్శ్వే సముపవేక్ష్యతి|
೬೯ಆದರೆ ಇಂದಿನಿಂದ ಮನುಷ್ಯಕುಮಾರನು ಸರ್ವಶಕ್ತನಾದ ದೇವರ ಬಲಗಡೆಯಲ್ಲಿ ಆಸೀನನಾಗಿರುವನು” ಎಂದು ಹೇಳಿದನು.
70 తతస్తే పప్రచ్ఛుః, ర్తిహ త్వమీశ్వరస్య పుత్రః? స కథయామాస, యూయం యథార్థం వదథ స ఏవాహం|
೭೦ಆಗ ಎಲ್ಲರು, “ಹಾಗಾದರೆ ನೀನು ದೇವರ ಕುಮಾರನೋ?” ಎಂದು ಕೇಳಲು ಆತನು ಅವರಿಗೆ, “ನನ್ನನ್ನು ಕುರಿತು ದೇವಕುಮಾರನೆಂದು ನೀವೇ ಹೇಳಿದ್ದೀರಿ” ಎಂದು ಹೇಳಿದನು.
71 తదా తే సర్వ్వే కథయామాసుః, ర్తిహ సాక్ష్యేఽన్సస్మిన్ అస్మాకం కిం ప్రయోజనం? అస్య స్వముఖాదేవ సాక్ష్యం ప్రాప్తమ్|
೭೧ಅದಕ್ಕೆ ಅವರು, “ನಮಗೆ ಸಾಕ್ಷಿ ಇನ್ನು ಯಾತಕ್ಕೆ ಬೇಕು? ನಾವೇ ಇವನ ಬಾಯಿಂದ ಕೇಳಿದೆವಲ್ಲಾ” ಅಂದರು.

< లూకః 22 >