< ਲੂਕਃ 13 >

1 ਅਪਰਞ੍ਚ ਪੀਲਾਤੋ ਯੇਸ਼਼ਾਂ ਗਾਲੀਲੀਯਾਨਾਂ ਰਕ੍ਤਾਨਿ ਬਲੀਨਾਂ ਰਕ੍ਤੈਃ ਸਹਾਮਿਸ਼੍ਰਯਤ੍ ਤੇਸ਼਼ਾਂ ਗਾਲੀਲੀਯਾਨਾਂ ਵ੍ਰੁʼੱਤਾਨ੍ਤੰ ਕਤਿਪਯਜਨਾ ਉਪਸ੍ਥਾਪ੍ਯ ਯੀਸ਼ਵੇ ਕਥਯਾਮਾਸੁਃ|
ಅದೇ ಸಮಯದಲ್ಲಿ ಕೆಲವರು ಯೇಸುವಿನ ಹತ್ತಿರದಲ್ಲಿದ್ದು, ಪಿಲಾತನು ಗಲಿಲಾಯದವರ ರಕ್ತವನ್ನು ಅವರು ಕೊಟ್ಟ ಬಲಿಗಳ ಸಂಗಡ ಬೆರಸಿದನೆಂದು ಆತನಿಗೆ ತಿಳಿಸಿದರು.
2 ਤਤਃ ਸ ਪ੍ਰਤ੍ਯੁਵਾਚ ਤੇਸ਼਼ਾਂ ਲੋਕਾਨਾਮ੍ ਏਤਾਦ੍ਰੁʼਸ਼ੀ ਦੁਰ੍ਗਤਿ ਰ੍ਘਟਿਤਾ ਤਤ੍ਕਾਰਣਾਦ੍ ਯੂਯੰ ਕਿਮਨ੍ਯੇਭ੍ਯੋ ਗਾਲੀਲੀਯੇਭ੍ਯੋਪ੍ਯਧਿਕਪਾਪਿਨਸ੍ਤਾਨ੍ ਬੋਧਧ੍ਵੇ?
ಅದಕ್ಕೆ ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಯನ್ನು ಅನುಭವಿಸಿದ್ದರಿಂದ ಅವರನ್ನು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ಭಾವಿಸುತ್ತೀರೋ?
3 ਯੁਸ਼਼੍ਮਾਨਹੰ ਵਦਾਮਿ ਤਥਾ ਨ ਕਿਨ੍ਤੁ ਮਨਃਸੁ ਨ ਪਰਾਵਰ੍ੱਤਿਤੇਸ਼਼ੁ ਯੂਯਮਪਿ ਤਥਾ ਨੰਕ੍ਸ਼਼੍ਯਥ|
ಹಾಗೆ ಭಾವಿಸಕೂಡದೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ.
4 ਅਪਰਞ੍ਚ ਸ਼ੀਲੋਹਨਾਮ੍ਨ ਉੱਚਗ੍ਰੁʼਹਸ੍ਯ ਪਤਨਾਦ੍ ਯੇ(ਅ)ਸ਼਼੍ਟਾਦਸ਼ਜਨਾ ਮ੍ਰੁʼਤਾਸ੍ਤੇ ਯਿਰੂਸ਼ਾਲਮਿ ਨਿਵਾਸਿਸਰ੍ੱਵਲੋਕੇਭ੍ਯੋ(ਅ)ਧਿਕਾਪਰਾਧਿਨਃ ਕਿੰ ਯੂਯਮਿਤ੍ਯੰ ਬੋਧਧ੍ਵੇ?
ಇಲ್ಲವೆ ಸಿಲೊವಾಮಿನಲ್ಲಿ ಗೋಪುರ ಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಕೆಟ್ಟವರೆಂದು ನೀವು ಭಾವಿಸುತ್ತೀರೋ?
5 ਯੁਸ਼਼੍ਮਾਨਹੰ ਵਦਾਮਿ ਤਥਾ ਨ ਕਿਨ੍ਤੁ ਮਨਃਸੁ ਨ ਪਰਿਵਰ੍ੱਤਿਤੇਸ਼਼ੁ ਯੂਯਮਪਿ ਤਥਾ ਨੰਕ੍ਸ਼਼੍ਯਥ|
ಹಾಗಲ್ಲವೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ” ಎಂದು ಹೇಳಿದನು.
6 ਅਨਨ੍ਤਰੰ ਸ ਇਮਾਂ ਦ੍ਰੁʼਸ਼਼੍ਟਾਨ੍ਤਕਥਾਮਕਥਯਦ੍ ਏਕੋ ਜਨੋ ਦ੍ਰਾਕ੍ਸ਼਼ਾਕ੍ਸ਼਼ੇਤ੍ਰਮਧ੍ਯ ਏਕਮੁਡੁਮ੍ਬਰਵ੍ਰੁʼਕ੍ਸ਼਼ੰ ਰੋਪਿਤਵਾਨ੍| ਪਸ਼੍ਚਾਤ੍ ਸ ਆਗਤ੍ਯ ਤਸ੍ਮਿਨ੍ ਫਲਾਨਿ ਗਵੇਸ਼਼ਯਾਮਾਸ,
ಆ ಮೇಲೆ ಯೇಸು ಒಂದು ಸಾಮ್ಯವನ್ನು ಹೇಳಿದನು. ಅದೇನೆಂದರೆ, “ಒಬ್ಬನು ತನ್ನ ದ್ರಾಕ್ಷಿಯ ತೋಟದಲ್ಲಿ ಒಂದು ಅಂಜೂರದ ಗಿಡವನ್ನು ನೆಡಿಸಿದನು. ಸ್ವಲ್ಪಕಾಲದ ನಂತರ ಅವನು ಆ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದನು. ಸಿಕ್ಕಲಿಲ್ಲ.
7 ਕਿਨ੍ਤੁ ਫਲਾਪ੍ਰਾਪ੍ਤੇਃ ਕਾਰਣਾਦ੍ ਉਦ੍ਯਾਨਕਾਰੰ ਭ੍ਰੁʼਤ੍ਯੰ ਜਗਾਦ, ਪਸ਼੍ਯ ਵਤ੍ਸਰਤ੍ਰਯੰ ਯਾਵਦਾਗਤ੍ਯ ਏਤਸ੍ਮਿੰਨੁਡੁਮ੍ਬਰਤਰੌ ਕ੍ਸ਼਼ਲਾਨ੍ਯਨ੍ਵਿੱਛਾਮਿ, ਕਿਨ੍ਤੁ ਨੈਕਮਪਿ ਪ੍ਰਪ੍ਨੋਮਿ ਤਰੁਰਯੰ ਕੁਤੋ ਵ੍ਰੁʼਥਾ ਸ੍ਥਾਨੰ ਵ੍ਯਾਪ੍ਯ ਤਿਸ਼਼੍ਠਤਿ? ਏਨੰ ਛਿਨ੍ਧਿ|
ಬಳಿಕ ಅವನು ತೋಟಗಾರನಿಗೆ, ‘ನೋಡು, ನಾನು ಮೂರು ವರ್ಷದಿಂದಲೂ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ; ಆದರೂ ನನಗೆ ಸಿಕ್ಕಲಿಲ್ಲ. ಇದನ್ನು ಕಡಿದು ಹಾಕು. ಇದರಿಂದ ಭೂಮಿಯು ಯಾಕೆ ವ್ಯರ್ಥವಾಗಬೇಕು’ ಎಂದು ಹೇಳಿದನು.
8 ਤਤੋ ਭ੍ਰੁʼਤ੍ਯਃ ਪ੍ਰਤ੍ਯੁਵਾਚ, ਹੇ ਪ੍ਰਭੋ ਪੁਨਰ੍ਵਰ੍ਸ਼਼ਮੇਕੰ ਸ੍ਥਾਤੁਮ੍ ਆਦਿਸ਼; ਏਤਸ੍ਯ ਮੂਲਸ੍ਯ ਚਤੁਰ੍ਦਿਕ੍ਸ਼਼ੁ ਖਨਿਤ੍ਵਾਹਮ੍ ਆਲਵਾਲੰ ਸ੍ਥਾਪਯਾਮਿ|
ಅದಕ್ಕೆ ಆ ತೋಟಗಾರನು, ‘ಯಜಮಾನನೇ ಈ ವರ್ಷವೂ ಇದನ್ನು ಬಿಡು, ಅಷ್ಟರಲ್ಲಿ ನಾನು ಇದರ ಸುತ್ತಲು ಅಗೆದು ಗೊಬ್ಬರ ಹಾಕುತ್ತೇನೆ.
9 ਤਤਃ ਫਲਿਤੁੰ ਸ਼ਕ੍ਨੋਤਿ ਯਦਿ ਨ ਫਲਤਿ ਤਰ੍ਹਿ ਪਸ਼੍ਚਾਤ੍ ਛੇਤ੍ਸ੍ਯਸਿ|
ಮುಂದೆ ಅದರಲ್ಲಿ ಹಣ್ಣು ಬಿಟ್ಟರೆ ಸರಿ, ಇಲ್ಲದಿದ್ದರೆ ಇದನ್ನು ಕಡಿದುಹಾಕಬಹುದು’” ಎಂದು ಉತ್ತರ ಕೊಟ್ಟನು.
10 ਅਥ ਵਿਸ਼੍ਰਾਮਵਾਰੇ ਭਜਨਗੇਹੇ ਯੀਸ਼ੁਰੁਪਦਿਸ਼ਤਿ
೧೦ಒಂದು ಸಬ್ಬತ್ ದಿನದಲ್ಲಿ ಯೇಸು ಒಂದು ಸಭಾಮಂದಿರದೊಳಗೆ ಉಪದೇಶಮಾಡುತ್ತಾ ಇದ್ದನು.
11 ਤਸ੍ਮਿਤ੍ ਸਮਯੇ ਭੂਤਗ੍ਰਸ੍ਤਤ੍ਵਾਤ੍ ਕੁਬ੍ਜੀਭੂਯਾਸ਼਼੍ਟਾਦਸ਼ਵਰ੍ਸ਼਼ਾਣਿ ਯਾਵਤ੍ ਕੇਨਾਪ੍ਯੁਪਾਯੇਨ ਰੁʼਜੁ ਰ੍ਭਵਿਤੁੰ ਨ ਸ਼ਕ੍ਨੋਤਿ ਯਾ ਦੁਰ੍ੱਬਲਾ ਸ੍ਤ੍ਰੀ,
೧೧ಅಲ್ಲಿ ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ಬಾಧಿತಳಾಗಿ ಬೆನ್ನು ಬಗ್ಗಿ ಹೋಗಿ ಗೂನಿಯಾಗಿದ್ದು ಸ್ವಲ್ಪವಾದರೂ ಮೈಯನ್ನು ಮೇಲಕ್ಕೆ ಎತ್ತಲಾರದೆ ಇದ್ದ ಒಬ್ಬ ಹೆಂಗಸು ಇದ್ದಳು.
12 ਤਾਂ ਤਤ੍ਰੋਪਸ੍ਥਿਤਾਂ ਵਿਲੋਕ੍ਯ ਯੀਸ਼ੁਸ੍ਤਾਮਾਹੂਯ ਕਥਿਤਵਾਨ੍ ਹੇ ਨਾਰਿ ਤਵ ਦੌਰ੍ੱਬਲ੍ਯਾਤ੍ ਤ੍ਵੰ ਮੁਕ੍ਤਾ ਭਵ|
೧೨ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು ಆಕೆಗೆ, “ನಿನ್ನ ರೋಗವು ಬಿಡುಗಡೆಯಾಯಿತು” ಎಂದು ಹೇಳಿ
13 ਤਤਃ ਪਰੰ ਤਸ੍ਯਾ ਗਾਤ੍ਰੇ ਹਸ੍ਤਾਰ੍ਪਣਮਾਤ੍ਰਾਤ੍ ਸਾ ਰੁʼਜੁਰ੍ਭੂਤ੍ਵੇਸ਼੍ਵਰਸ੍ਯ ਧਨ੍ਯਵਾਦੰ ਕਰ੍ੱਤੁਮਾਰੇਭੇ|
೧೩ಆಕೆಯ ಮೇಲೆ ತನ್ನ ಕೈಗಳನ್ನಿಟ್ಟನು. ಇಟ್ಟಕೂಡಲೆ ಆಕೆ ನೆಟ್ಟಗಾದಳು, ದೇವರನ್ನು ಕೊಂಡಾಡಿದಳು.
14 ਕਿਨ੍ਤੁ ਵਿਸ਼੍ਰਾਮਵਾਰੇ ਯੀਸ਼ੁਨਾ ਤਸ੍ਯਾਃ ਸ੍ਵਾਸ੍ਥ੍ਯਕਰਣਾਦ੍ ਭਜਨਗੇਹਸ੍ਯਾਧਿਪਤਿਃ ਪ੍ਰਕੁਪ੍ਯ ਲੋਕਾਨ੍ ਉਵਾਚ, ਸ਼਼ਟ੍ਸੁ ਦਿਨੇਸ਼਼ੁ ਲੋਕੈਃ ਕਰ੍ੰਮ ਕਰ੍ੱਤਵ੍ਯੰ ਤਸ੍ਮਾੱਧੇਤੋਃ ਸ੍ਵਾਸ੍ਥ੍ਯਾਰ੍ਥੰ ਤੇਸ਼਼ੁ ਦਿਨੇਸ਼਼ੁ ਆਗੱਛਤ, ਵਿਸ਼੍ਰਾਮਵਾਰੇ ਮਾਗੱਛਤ|
೧೪ಆದರೆ ಆ ಸಭಾಮಂದಿರದ ಅಧಿಕಾರಿಯು ನಡೆದ ಸಂಗತಿಯನ್ನು ನೋಡಿ, ಸಬ್ಬತ್ ದಿನದಲ್ಲಿ ಯೇಸು ಸ್ವಸ್ಥ ಮಾಡಿದನಲ್ಲಾ ಎಂದು ಸಿಟ್ಟುಗೊಂಡು ಜನರಿಗೆ, “ಕೆಲಸ ಮಾಡುವುದಕ್ಕೆ ಆರು ದಿನಗಳು ಅವೆಯಷ್ಟೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ, ಸಬ್ಬತ್ ದಿನದಲ್ಲಿ ಮಾತ್ರ ಬೇಡ” ಎಂದು ಹೇಳಿದನು.
15 ਤਦਾ ਪਭੁਃ ਪ੍ਰਤ੍ਯੁਵਾਚ ਰੇ ਕਪਟਿਨੋ ਯੁਸ਼਼੍ਮਾਕਮ੍ ਏਕੈਕੋ ਜਨੋ ਵਿਸ਼੍ਰਾਮਵਾਰੇ ਸ੍ਵੀਯੰ ਸ੍ਵੀਯੰ ਵ੍ਰੁʼਸ਼਼ਭੰ ਗਰ੍ਦਭੰ ਵਾ ਬਨ੍ਧਨਾਨ੍ਮੋਚਯਿਤ੍ਵਾ ਜਲੰ ਪਾਯਯਿਤੁੰ ਕਿੰ ਨ ਨਯਤਿ?
೧೫ಆ ಮಾತನ್ನು ಕೇಳಿ ಕರ್ತನು ಅವನಿಗೆ, “ಕಪಟಿಗಳೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ ಕತ್ತೆಯನ್ನಾಗಲಿ ಗೋದಲಿಯಿಂದ ಬಿಚ್ಚಿ ನೀರು ಕುಡಿಸುವುದಕ್ಕಾಗಿ ಹಿಡಿದುಕೊಂಡು ಹೋಗುತ್ತಾನಲ್ಲವೇ.
16 ਤਰ੍ਹ੍ਯਾਸ਼਼੍ਟਾਦਸ਼ਵਤ੍ਸਰਾਨ੍ ਯਾਵਤ੍ ਸ਼ੈਤਾਨਾ ਬੱਧਾ ਇਬ੍ਰਾਹੀਮਃ ਸਨ੍ਤਤਿਰਿਯੰ ਨਾਰੀ ਕਿੰ ਵਿਸ਼੍ਰਾਮਵਾਰੇ ਨ ਮੋਚਯਿਤਵ੍ਯਾ?
೧೬ಹಾಗಾದರೆ ಹದಿನೆಂಟು ವರ್ಷಗಳ ತನಕ ಸೈತಾನನು ಕಟ್ಟಿ ಹಾಕಿದ್ದವಳೂ ಅಬ್ರಹಾಮನ ವಂಶದವಳೂ ಆಗಿರುವ ಈಕೆಯನ್ನು ಸಬ್ಬತ್ ದಿನದಲ್ಲಿ ಈ ಬಂಧನದಿಂದ ಬಿಡಿಸಬಾರದೋ?” ಎಂದು ಕೇಳಿದನು.
17 ਏਸ਼਼ੁ ਵਾਕ੍ਯੇਸ਼਼ੁ ਕਥਿਤੇਸ਼਼ੁ ਤਸ੍ਯ ਵਿਪਕ੍ਸ਼਼ਾਃ ਸਲੱਜਾ ਜਾਤਾਃ ਕਿਨ੍ਤੁ ਤੇਨ ਕ੍ਰੁʼਤਸਰ੍ੱਵਮਹਾਕਰ੍ੰਮਕਾਰਣਾਤ੍ ਲੋਕਨਿਵਹਃ ਸਾਨਨ੍ਦੋ(ਅ)ਭਵਤ੍|
೧೭ಈ ಮಾತುಗಳನ್ನು ಆತನು ಹೇಳುತ್ತಿರಲಾಗಿ ಆತನ ವಿರೋಧಿಗಳೆಲ್ಲರೂ ಅವಮಾನಿತರಾದರು. ಗುಂಪು ಕೂಡಿದ್ದ ಜನರೆಲ್ಲರೂ ಆತನಿಂದಾಗುತ್ತಿದ್ದ ಎಲ್ಲಾ ಮಹತ್ತಾದ ಕಾರ್ಯಗಳಿಗೆ ಸಂತೋಷಪಟ್ಟರು.
18 ਅਨਨ੍ਤਰੰ ਸੋਵਦਦ੍ ਈਸ਼੍ਵਰਸ੍ਯ ਰਾਜ੍ਯੰ ਕਸ੍ਯ ਸਦ੍ਰੁʼਸ਼ੰ? ਕੇਨ ਤਦੁਪਮਾਸ੍ਯਾਮਿ?
೧೮ತರುವಾಯ ಯೇಸು ಕೇಳಿದ್ದೇನಂದರೆ, “ದೇವರ ರಾಜ್ಯವು ಏನನ್ನು ಹೋಲುತ್ತದೆ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ?
19 ਯਤ੍ ਸਰ੍ਸ਼਼ਪਬੀਜੰ ਗ੍ਰੁʼਹੀਤ੍ਵਾ ਕਸ਼੍ਚਿੱਜਨ ਉਦ੍ਯਾਨ ਉਪ੍ਤਵਾਨ੍ ਤਦ੍ ਬੀਜਮਙ੍ਕੁਰਿਤੰ ਸਤ੍ ਮਹਾਵ੍ਰੁʼਕ੍ਸ਼਼ੋ(ਅ)ਜਾਯਤ, ਤਤਸ੍ਤਸ੍ਯ ਸ਼ਾਖਾਸੁ ਵਿਹਾਯਸੀਯਵਿਹਗਾ ਆਗਤ੍ਯ ਨ੍ਯੂਸ਼਼ੁਃ, ਤਦ੍ਰਾਜ੍ਯੰ ਤਾਦ੍ਰੁʼਸ਼ੇਨ ਸਰ੍ਸ਼਼ਪਬੀਜੇਨ ਤੁਲ੍ਯੰ|
೧೯ಅದು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಹಾಕಿದನು. ಅದು ಬೆಳೆದು ಮರವಾಯಿತು. ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿದವು” ಅಂದನು.
20 ਪੁਨਃ ਕਥਯਾਮਾਸ, ਈਸ਼੍ਵਰਸ੍ਯ ਰਾਜ੍ਯੰ ਕਸ੍ਯ ਸਦ੍ਰੁʼਸ਼ੰ ਵਦਿਸ਼਼੍ਯਾਮਿ? ਯਤ੍ ਕਿਣ੍ਵੰ ਕਾਚਿਤ੍ ਸ੍ਤ੍ਰੀ ਗ੍ਰੁʼਹੀਤ੍ਵਾ ਦ੍ਰੋਣਤ੍ਰਯਪਰਿਮਿਤਗੋਧੂਮਚੂਰ੍ਣੇਸ਼਼ੁ ਸ੍ਥਾਪਯਾਮਾਸ,
೨೦ಆತನು ಇನ್ನೂ ಹೇಳಿದ್ದೇನಂದರೆ, “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ?
21 ਤਤਃ ਕ੍ਰਮੇਣ ਤਤ੍ ਸਰ੍ੱਵਗੋਧੂਮਚੂਰ੍ਣੰ ਵ੍ਯਾਪ੍ਨੋਤਿ, ਤਸ੍ਯ ਕਿਣ੍ਵਸ੍ਯ ਤੁਲ੍ਯਮ੍ ਈਸ਼੍ਵਰਸ੍ਯ ਰਾਜ੍ਯੰ|
೨೧ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಹೆಂಗಸು ತೆಗೆದು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು” ಅಂದನು.
22 ਤਤਃ ਸ ਯਿਰੂਸ਼ਾਲਮ੍ਨਗਰੰ ਪ੍ਰਤਿ ਯਾਤ੍ਰਾਂ ਕ੍ਰੁʼਤ੍ਵਾ ਨਗਰੇ ਨਗਰੇ ਗ੍ਰਾਮੇ ਗ੍ਰਾਮੇ ਸਮੁਪਦਿਸ਼ਨ੍ ਜਗਾਮ|
೨೨ಯೇಸು ಊರೂರಿಗೂ ಗ್ರಾಮ ಗ್ರಾಮಕ್ಕೂ ಹೋಗಿ ಉಪದೇಶ ಮಾಡುತ್ತಾ ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿದ್ದನು.
23 ਤਦਾ ਕਸ਼੍ਚਿੱਜਨਸ੍ਤੰ ਪਪ੍ਰੱਛ, ਹੇ ਪ੍ਰਭੋ ਕਿੰ ਕੇਵਲਮ੍ ਅਲ੍ਪੇ ਲੋਕਾਃ ਪਰਿਤ੍ਰਾਸ੍ਯਨ੍ਤੇ?
೨೩ಆಗ ಒಬ್ಬನು, “ಕರ್ತನೇ, ರಕ್ಷಣೆ ಹೊಂದುವವರು ಸ್ವಲ್ಪ ಜನರೋ?” ಎಂದು ಕೇಳಲು,
24 ਤਤਃ ਸ ਲੋਕਾਨ੍ ਉਵਾਚ, ਸੰਕੀਰ੍ਣਦ੍ਵਾਰੇਣ ਪ੍ਰਵੇਸ਼਼੍ਟੁੰ ਯਤਘ੍ਵੰ, ਯਤੋਹੰ ਯੁਸ਼਼੍ਮਾਨ੍ ਵਦਾਮਿ, ਬਹਵਃ ਪ੍ਰਵੇਸ਼਼੍ਟੁੰ ਚੇਸ਼਼੍ਟਿਸ਼਼੍ਯਨ੍ਤੇ ਕਿਨ੍ਤੁ ਨ ਸ਼ਕ੍ਸ਼਼੍ਯਨ੍ਤਿ|
೨೪ಆತನು ಅವರಿಗೆ, “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಹೋಗುವುದಕ್ಕೆ ಪ್ರಯಾಸಪಡಿರಿ. ಏಕೆಂದರೆ ಬಹು ಜನರು ಒಳಗೆ ಹೋಗುವುದಕ್ಕೆ ನೋಡುವರು. ಆದರೆ ಅವರಿಂದಾಗುವುದಿಲ್ಲ ಎಂದು ನಿಮಗೆ ಹೇಳುತ್ತೇನೆ.
25 ਗ੍ਰੁʼਹਪਤਿਨੋੱਥਾਯ ਦ੍ਵਾਰੇ ਰੁੱਧੇ ਸਤਿ ਯਦਿ ਯੂਯੰ ਬਹਿਃ ਸ੍ਥਿਤ੍ਵਾ ਦ੍ਵਾਰਮਾਹਤ੍ਯ ਵਦਥ, ਹੇ ਪ੍ਰਭੋ ਹੇ ਪ੍ਰਭੋ ਅਸ੍ਮਤ੍ਕਾਰਣਾਦ੍ ਦ੍ਵਾਰੰ ਮੋਚਯਤੁ, ਤਤਃ ਸ ਇਤਿ ਪ੍ਰਤਿਵਕ੍ਸ਼਼੍ਯਤਿ, ਯੂਯੰ ਕੁਤ੍ਰਤ੍ਯਾ ਲੋਕਾ ਇਤ੍ਯਹੰ ਨ ਜਾਨਾਮਿ|
೨೫ಮನೆ ಯಜಮಾನನು ಎದ್ದು ಬಾಗಿಲು ಮುಚ್ಚಿದ ಮೇಲೆ ನೀವು ಹೊರಗೆ ನಿಂತುಕೊಂಡು ಬಾಗಿಲು ತಟ್ಟಿ, ‘ಕರ್ತನೇ ನಮಗೆ ಬಾಗಿಲು ತೆರೆಯಿರಿ’ ಎಂದು ಬಾಗಿಲು ಬಡಿಯುವುದಕ್ಕೆ ತೊಡಗುವಾಗ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ’ ಅಂದಾನು
26 ਤਦਾ ਯੂਯੰ ਵਦਿਸ਼਼੍ਯਥ, ਤਵ ਸਾਕ੍ਸ਼਼ਾਦ੍ ਵਯੰ ਭੇਜਨੰ ਪਾਨਞ੍ਚ ਕ੍ਰੁʼਤਵਨ੍ਤਃ, ਤ੍ਵਞ੍ਚਾਸ੍ਮਾਕੰ ਨਗਰਸ੍ਯ ਪਥਿ ਸਮੁਪਦਿਸ਼਼੍ਟਵਾਨ੍|
೨೬ಅದಕ್ಕೆ ನೀವು, ‘ನಿನ್ನ ಸಂಗಡ ನಾವು ಊಟ ಮಾಡಿದೆವು, ಕುಡಿದೆವು, ನಮ್ಮ ಬೀದಿಗಳಲ್ಲಿ ನೀನು ಉಪದೇಶ ಮಾಡಿದ್ದಿ’ ಎಂದು ಹೇಳುವುದಕ್ಕೆ ತೊಡಗುವಿರಿ.
27 ਕਿਨ੍ਤੁ ਸ ਵਕ੍ਸ਼਼੍ਯਤਿ, ਯੁਸ਼਼੍ਮਾਨਹੰ ਵਦਾਮਿ, ਯੂਯੰ ਕੁਤ੍ਰਤ੍ਯਾ ਲੋਕਾ ਇਤ੍ਯਹੰ ਨ ਜਾਨਾਮਿ; ਹੇ ਦੁਰਾਚਾਰਿਣੋ ਯੂਯੰ ਮੱਤੋ ਦੂਰੀਭਵਤ|
೨೭ಆದರೆ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ. ಅಧರ್ಮಮಾಡುವ ನೀವೆಲ್ಲರೂ ನನ್ನ ಕಡೆಯಿಂದ ಹೊರಟು ಹೋಗಿರಿ’ ಎಂದು ನಿಮಗೆ ಹೇಳುತ್ತೇನೆ ಅನ್ನುವನು.
28 ਤਦਾ ਇਬ੍ਰਾਹੀਮੰ ਇਸ੍ਹਾਕੰ ਯਾਕੂਬਞ੍ਚ ਸਰ੍ੱਵਭਵਿਸ਼਼੍ਯਦ੍ਵਾਦਿਨਸ਼੍ਚ ਈਸ਼੍ਵਰਸ੍ਯ ਰਾਜ੍ਯੰ ਪ੍ਰਾਪ੍ਤਾਨ੍ ਸ੍ਵਾਂਸ਼੍ਚ ਬਹਿਸ਼਼੍ਕ੍ਰੁʼਤਾਨ੍ ਦ੍ਰੁʼਸ਼਼੍ਟ੍ਵਾ ਯੂਯੰ ਰੋਦਨੰ ਦਨ੍ਤੈਰ੍ਦਨ੍ਤਘਰ੍ਸ਼਼ਣਞ੍ਚ ਕਰਿਸ਼਼੍ਯਥ|
೨೮ಅಬ್ರಹಾಮ, ಇಸಾಕ, ಯಾಕೋಬರು ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವುದನ್ನೂ ನೀವು ನೋಡುವಿರಿ. ಆದರೆ ನಿಮ್ಮನ್ನು ಮಾತ್ರ ಹೊರಗೆ ಹಾಕಲಾಗುವುದು ಅಲ್ಲಿ ನಿಮಗೆ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಉಂಟಾಗುವವು.
29 ਅਪਰਞ੍ਚ ਪੂਰ੍ੱਵਪਸ਼੍ਚਿਮਦਕ੍ਸ਼਼ਿਣੋੱਤਰਦਿਗ੍ਭ੍ਯੋ ਲੋਕਾ ਆਗਤ੍ਯ ਈਸ਼੍ਵਰਸ੍ਯ ਰਾਜ੍ਯੇ ਨਿਵਤ੍ਸ੍ਯਨ੍ਤਿ|
೨೯ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದಲೂ ಜನರು ಬಂದು ದೇವರ ರಾಜ್ಯದಲ್ಲಿ ಔತಣಕ್ಕೆ ಕುಳಿತುಕೊಳ್ಳುವರು.
30 ਪਸ਼੍ਯਤੇੱਥੰ ਸ਼ੇਸ਼਼ੀਯਾ ਲੋਕਾ ਅਗ੍ਰਾ ਭਵਿਸ਼਼੍ਯਨ੍ਤਿ, ਅਗ੍ਰੀਯਾ ਲੋਕਾਸ਼੍ਚ ਸ਼ੇਸ਼਼ਾ ਭਵਿਸ਼਼੍ਯਨ੍ਤਿ|
೩೦ಇಗೋ ಕಡೆಯವರಾಗಿರುವ ಕೆಲವರು ಮೊದಲಿನವರಾಗುವರು. ಮೊದಲಿನವರಾಗಿರುವ ಕೆಲವರು ಕಡೆಯವರಾಗುವರು” ಅಂದನು.
31 ਅਪਰਞ੍ਚ ਤਸ੍ਮਿਨ੍ ਦਿਨੇ ਕਿਯਨ੍ਤਃ ਫਿਰੂਸ਼ਿਨ ਆਗਤ੍ਯ ਯੀਸ਼ੁੰ ਪ੍ਰੋਚੁਃ, ਬਹਿਰ੍ਗੱਛ, ਸ੍ਥਾਨਾਦਸ੍ਮਾਤ੍ ਪ੍ਰਸ੍ਥਾਨੰ ਕੁਰੁ, ਹੇਰੋਦ੍ ਤ੍ਵਾਂ ਜਿਘਾਂਸਤਿ|
೩೧ಅದೇ ಗಳಿಗೆಯಲ್ಲಿ ಕೆಲವು ಮಂದಿ ಫರಿಸಾಯರು ಹತ್ತಿರ ಬಂದು ಯೇಸುವಿಗೆ, “ನೀನು ಇಲ್ಲಿಂದ ಹೊರಟು ಹೋಗು, ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ” ಎಂದು ಹೇಳಲು,
32 ਤਤਃ ਸ ਪ੍ਰਤ੍ਯਵੋਚਤ੍ ਪਸ਼੍ਯਤਾਦ੍ਯ ਸ਼੍ਵਸ਼੍ਚ ਭੂਤਾਨ੍ ਵਿਹਾਪ੍ਯ ਰੋਗਿਣੋ(ਅ)ਰੋਗਿਣਃ ਕ੍ਰੁʼਤ੍ਵਾ ਤ੍ਰੁʼਤੀਯੇਹ੍ਨਿ ਸੇਤ੍ਸ੍ਯਾਮਿ, ਕਥਾਮੇਤਾਂ ਯੂਯਮਿਤ੍ਵਾ ਤੰ ਭੂਰਿਮਾਯੰ ਵਦਤ|
೩೨ಆತನು ಅವರಿಗೆ, “ನೀವು ಹೋಗಿ ‘ಇಗೋ, ನಾನು ಈಹೊತ್ತು ನಾಳೆ ದೆವ್ವಗಳನ್ನು ಬಿಡಿಸುತ್ತಾ ರೋಗಿಗಳನ್ನು ವಾಸಿಮಾಡುತ್ತಾ ಇದ್ದು, ಮೂರನೆಯ ದಿನದಲ್ಲಿ ಸಿದ್ಧಿಗೆ ಬರುತ್ತೇನೆ’ ಎಂದು ಆ ನರಿಗೆ ಹೇಳಿರಿ.
33 ਤਤ੍ਰਾਪ੍ਯਦ੍ਯ ਸ਼੍ਵਃ ਪਰਸ਼੍ਵਸ਼੍ਚ ਮਯਾ ਗਮਨਾਗਮਨੇ ਕਰ੍ੱਤਵ੍ਯੇ, ਯਤੋ ਹੇਤੋ ਰ੍ਯਿਰੂਸ਼ਾਲਮੋ ਬਹਿਃ ਕੁਤ੍ਰਾਪਿ ਕੋਪਿ ਭਵਿਸ਼਼੍ਯਦ੍ਵਾਦੀ ਨ ਘਾਨਿਸ਼਼੍ਯਤੇ|
೩೩ಹೇಗೂ ನಾನು ಈ ಹೊತ್ತು ನಾಳೆ ನಾಡಿದ್ದು ಸಂಚಾರ ಮಾಡಬೇಕು. ಪ್ರವಾದಿಯಾದವನು ಯೆರೂಸಲೇಮಿನಲ್ಲಿಯೇ ಹೊರತು ಬೇರೆ ಪಟ್ಟಣದಲ್ಲಿ ಕೊಲ್ಲಲ್ಪಡಕೂಡದಷ್ಟೆ.
34 ਹੇ ਯਿਰੂਸ਼ਾਲਮ੍ ਹੇ ਯਿਰੂਸ਼ਾਲਮ੍ ਤ੍ਵੰ ਭਵਿਸ਼਼੍ਯਦ੍ਵਾਦਿਨੋ ਹੰਸਿ ਤਵਾਨ੍ਤਿਕੇ ਪ੍ਰੇਰਿਤਾਨ੍ ਪ੍ਰਸ੍ਤਰੈਰ੍ਮਾਰਯਸਿ ਚ, ਯਥਾ ਕੁੱਕੁਟੀ ਨਿਜਪਕ੍ਸ਼਼ਾਧਃ ਸ੍ਵਸ਼ਾਵਕਾਨ੍ ਸੰਗ੍ਰੁʼਹ੍ਲਾਤਿ, ਤਥਾਹਮਪਿ ਤਵ ਸ਼ਿਸ਼ੂਨ੍ ਸੰਗ੍ਰਹੀਤੁੰ ਕਤਿਵਾਰਾਨ੍ ਐੱਛੰ ਕਿਨ੍ਤੁ ਤ੍ਵੰ ਨੈੱਛਃ|
೩೪ಯೆರೂಸಲೇಮೇ, ಯೆರೂಸಲೇಮೇ ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿ ಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಸೇರಿಸಿಕೊಳ್ಳುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು!
35 ਪਸ਼੍ਯਤ ਯੁਸ਼਼੍ਮਾਕੰ ਵਾਸਸ੍ਥਾਨਾਨਿ ਪ੍ਰੋੱਛਿਦ੍ਯਮਾਨਾਨਿ ਪਰਿਤ੍ਯਕ੍ਤਾਨਿ ਚ ਭਵਿਸ਼਼੍ਯਨ੍ਤਿ; ਯੁਸ਼਼੍ਮਾਨਹੰ ਯਥਾਰ੍ਥੰ ਵਦਾਮਿ, ਯਃ ਪ੍ਰਭੋ ਰ੍ਨਾਮ੍ਨਾਗੱਛਤਿ ਸ ਧਨ੍ਯ ਇਤਿ ਵਾਚੰ ਯਾਵਤ੍ਕਾਲੰ ਨ ਵਦਿਸ਼਼੍ਯਥ, ਤਾਵਤ੍ਕਾਲੰ ਯੂਯੰ ਮਾਂ ਨ ਦ੍ਰਕ੍ਸ਼਼੍ਯਥ|
೩೫ನೋಡಿರಿ, ನಿಮ್ಮ ಮನೆಯು ಪಾಳುಬೀಳುವುದು. ‘ಕರ್ತನ ಹೆಸರಿನಲ್ಲಿ ಬರುವವನು ಧನ್ಯನು’ ಎಂದು ನೀವು ಹೇಳುವ ವರೆಗೂ ನೀವು ನನ್ನನ್ನು ನೋಡುವುದೇ ಇಲ್ಲ” ಎಂದು ನಿಮಗೆ ಹೇಳುತ್ತೇನೆ.

< ਲੂਕਃ 13 >