< ലൂകഃ 22 >

1 അപരഞ്ച കിണ്വശൂന്യപൂപോത്സവസ്യ കാല ഉപസ്ഥിതേ
ಪಸ್ಕವೆಂದು ಕರೆಯಲ್ಪಡುವ ಹುಳಿಯಿಲ್ಲದ ರೊಟ್ಟಿಯ ಹಬ್ಬವು ಹತ್ತಿರವಾದಾಗ,
2 പ്രധാനയാജകാ അധ്യായകാശ്ച യഥാ തം ഹന്തും ശക്നുവന്തി തഥോപായാമ് അചേഷ്ടന്ത കിന്തു ലോകേഭ്യോ ബിഭ്യുഃ|
ಮುಖ್ಯಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಕೊಲ್ಲಬೇಕೆಂದಿದ್ದರು. ಆದರೆ ಜನರಿಗೆ ಹೆದರಿ ತಕ್ಕ ಮಾರ್ಗವನ್ನು ಹುಡುಕುತ್ತಿದ್ದರು.
3 ഏതസ്തിൻ സമയേ ദ്വാദശശിഷ്യേഷു ഗണിത ഈഷ്കരിയോതീയരൂഢിമാൻ യോ യിഹൂദാസ്തസ്യാന്തഃകരണം ശൈതാനാശ്രിതത്വാത്
ಆಗ ಸೈತಾನನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತನೆಂಬ ಯೂದನಲ್ಲಿ ಪ್ರವೇಶಿಸಲು,
4 സ ഗത്വാ യഥാ യീശും തേഷാം കരേഷു സമർപയിതും ശക്നോതി തഥാ മന്ത്രണാം പ്രധാനയാജകൈഃ സേനാപതിഭിശ്ച സഹ ചകാര|
ಅವನು ಮುಖ್ಯಯಾಜಕರ ಬಳಿಗೂ ಕಾವಲಿನ ದಳವಾಯಿಗಳ ಬಳಿಗೂ ಹೋಗಿ ತಾನು ಯೇಸುವನ್ನು ಹಿಡಿದುಕೊಡುವ ಉಪಾಯವನ್ನು ಕುರಿತು ಅವರ ಸಂಗಡ ಮಾತನಾಡಿದನು.
5 തേന തേ തുഷ്ടാസ്തസ്മൈ മുദ്രാം ദാതും പണം ചക്രുഃ|
ಅವರು ಸಂತೋಷಪಟ್ಟು ನಿನಗೆ ಹಣ ಕೊಡುತ್ತೇವೆಂದು ಒಪ್ಪಂದ ಮಾಡಲು,
6 തതഃ സോങ്ഗീകൃത്യ യഥാ ലോകാനാമഗോചരേ തം പരകരേഷു സമർപയിതും ശക്നോതി തഥാവകാശം ചേഷ്ടിതുമാരേഭേ|
ಅವನು ಒಪ್ಪಿಕೊಂಡು, ಜನಸಮೂಹವಿಲ್ಲದಿರುವಾಗ ಆತನನ್ನು ಅವರಿಗೆ ಹಿಡಿದುಕೊಡುವುದಕ್ಕೆ ಅನುಕೂಲವಾದ ಸಂದರ್ಭವನ್ನು ನೋಡುತ್ತಿದ್ದನು.
7 അഥ കിണ്വശൂന്യപൂപോത്മവദിനേ, അർഥാത് യസ്മിൻ ദിനേ നിസ്താരോത്സവസ്യ മേഷോ ഹന്തവ്യസ്തസ്മിൻ ദിനേ
ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯತಕ್ಕ ದಿನ ಬಂದಾಗ,
8 യീശുഃ പിതരം യോഹനഞ്ചാഹൂയ ജഗാദ, യുവാം ഗത്വാസ്മാകം ഭോജനാർഥം നിസ്താരോത്സവസ്യ ദ്രവ്യാണ്യാസാദയതം|
ಯೇಸು ಪೇತ್ರನಿಗೂ ಯೋಹಾನನಿಗೂ, “ನೀವು ಹೋಗಿ ನಾವು ಪಸ್ಕದ ಊಟಮಾಡುವಂತೆ ಸಿದ್ಧಮಾಡಿರಿ” ಎಂದು ಹೇಳಿ ಅವರನ್ನು ಕಳುಹಿಸಿದನು.
9 തദാ തൗ പപ്രച്ഛതുഃ കുചാസാദയാവോ ഭവതഃ കേച്ഛാ?
ಅವರು, “ನಾವು ಎಲ್ಲಿ ಸಿದ್ಧಮಾಡಬೇಕನ್ನುತ್ತೀ?” ಎಂದು ಆತನನ್ನು ಕೇಳಲು,
10 തദാ സോവാദീത്, നഗരേ പ്രവിഷ്ടേ കശ്ചിജ്ജലകുമ്ഭമാദായ യുവാം സാക്ഷാത് കരിഷ്യതി സ യന്നിവേശനം പ്രവിശതി യുവാമപി തന്നിവേശനം തത്പശ്ചാദിത്വാ നിവേശനപതിമ് ഇതി വാക്യം വദതം,
೧೦ಆತನು ಅವರಿಗೆ, “ನೋಡಿರಿ, ನೀವು ಪಟ್ಟಣದೊಳಕ್ಕೆ ಹೋದ ಮೇಲೆ ಒಬ್ಬ ಮನುಷ್ಯನು ತುಂಬಿದ ಕೊಡವನ್ನು ಹೊತ್ತುಕೊಂಡು ನಿಮ್ಮೆದುರಿಗೆ ಬರುವನು. ಅವನು ಹೋಗುವ ಮನೆಗೆ ನೀವು ಅವನ ಹಿಂದೆ ಹೋಗಿ,
11 യത്രാഹം നിസ്താരോത്സവസ്യ ഭോജ്യം ശിഷ്യൈഃ സാർദ്ധം ഭോക്തും ശക്നോമി സാതിഥിശാലാ കുത്ര? കഥാമിമാം പ്രഭുസ്ത്വാം പൃച്ഛതി|
೧೧ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರ ಸಂಗಡ ಪಸ್ಕದ ಊಟವನ್ನು ಮಾಡುವುದಕ್ಕಾಗಿ ವಿಶೇಷವಾದ ಕೊಠಡಿ ಎಲ್ಲಿ?’ ಎಂದು ನಿನ್ನನ್ನು ವಿಚಾರಿಸಲು ನಮ್ಮ ಗುರು ಹೇಳಿದ್ದಾನೆ, ಎಂದು ಹೇಳಿರಿ.
12 തതഃ സ ജനോ ദ്വിതീയപ്രകോഷ്ഠീയമ് ഏകം ശസ്തം കോഷ്ഠം ദർശയിഷ്യതി തത്ര ഭോജ്യമാസാദയതം|
೧೨ಅವನು ತಕ್ಕ ಪೀಠೋಪಕರಣಗಳಿಂದ ಅಲಂಕೃತವಾದ ಮೇಲ್ಮಾಳಿಗೆಯಲ್ಲಿ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ನೀವು ಭೋಜನಕ್ಕೆ ಸಿದ್ಧ ಮಾಡಿರಿ” ಎಂದು ಹೇಳಿ ಕಳುಹಿಸಿದನು.
13 തതസ്തൗ ഗത്വാ തദ്വാക്യാനുസാരേണ സർവ്വം ദൃഷ്ദ്വാ തത്ര നിസ്താരോത്സവീയം ഭോജ്യമാസാദയാമാസതുഃ|
೧೩ಅವರು ಹೊರಟು ಆತನು ತಮಗೆ ಹೇಳಿದಂತೆ ಕಂಡು ಪಸ್ಕ ಹಬ್ಬಕ್ಕೆ ಸಿದ್ಧಮಾಡಿದರು.
14 അഥ കാല ഉപസ്ഥിതേ യീശു ർദ്വാദശഭിഃ പ്രേരിതൈഃ സഹ ഭോക്തുമുപവിശ്യ കഥിതവാൻ
೧೪ಆ ಸಮಯ ಬಂದಾಗ ಆತನು ತನ್ನ ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಊಟಕ್ಕೆ ಕುಳಿತುಕೊಂಡನು.
15 മമ ദുഃഖഭോഗാത് പൂർവ്വം യുഭാഭിഃ സഹ നിസ്താരോത്സവസ്യൈതസ്യ ഭോജ്യം ഭോക്തും മയാതിവാഞ്ഛാ കൃതാ|
೧೫ಆಗ ಆತನು ಅವರಿಗೆ, “ನಾನು ಯಾತನೆಯನ್ನು ಅನುಭವಿಸುವುದಕ್ಕಿಂತ ಮೊದಲೇ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವುದಕ್ಕೆ ಮನಃಪೂರ್ವಕವಾಗಿ ಬಯಸಿದ್ದೇನೆ.
16 യുഷ്മാൻ വദാമി, യാവത്കാലമ് ഈശ്വരരാജ്യേ ഭോജനം ന കരിഷ്യേ താവത്കാലമ് ഇദം ന ഭോക്ഷ്യേ|
೧೬ಇನ್ನು ದೇವರ ರಾಜ್ಯದಲ್ಲಿಇದು ನೆರವೇರುವ ತನಕ ನಾನು ಇನ್ನು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಎಂದು ಹೇಳಿದನು.
17 തദാ സ പാനപാത്രമാദായ ഈശ്വരസ്യ ഗുണാൻ കീർത്തയിത്വാ തേഭ്യോ ദത്വാവദത്, ഇദം ഗൃഹ്ലീത യൂയം വിഭജ്യ പിവത|
೧೭ಆ ಮೇಲೆ ಆತನು (ದ್ರಾಕ್ಷಾರಸದ) ಪಾತ್ರೆಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ, “ಇದನ್ನು ತೆಗೆದುಕೊಂಡು ಹಂಚಿಕೊಂಡು ಕುಡಿಯಿರಿ.
18 യുഷ്മാൻ വദാമി യാവത്കാലമ് ഈശ്വരരാജത്വസ്യ സംസ്ഥാപനം ന ഭവതി താവദ് ദ്രാക്ഷാഫലരസം ന പാസ്യാമി|
೧೮ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ” ಅಂದನು.
19 തതഃ പൂപം ഗൃഹീത്വാ ഈശ്വരഗുണാൻ കീർത്തയിത്വാ ഭങ്ക്താ തേഭ്യോ ദത്വാവദത്, യുഷ്മദർഥം സമർപിതം യന്മമ വപുസ്തദിദം, ഏതത് കർമ്മ മമ സ്മരണാർഥം കുരുധ്വം|
೧೯ಬಳಿಕ ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ” ಅಂದನು.
20 അഥ ഭോജനാന്തേ താദൃശം പാത്രം ഗൃഹീത്വാവദത്, യുഷ്മത്കൃതേ പാതിതം യന്മമ രക്തം തേന നിർണീതനവനിയമരൂപം പാനപാത്രമിദം|
೨೦ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ, ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.
21 പശ്യത യോ മാം പരകരേഷു സമർപയിഷ്യതി സ മയാ സഹ ഭോജനാസന ഉപവിശതി|
೨೧“ಆದರೂ ನೋಡಿರಿ, ನನ್ನನ್ನು ಹಿಡಿದುಕೊಡುವವನು ನನ್ನೊಡನೆ ಮೇಜಿನ ಮೇಲೆ ಕೈಯಿಟ್ಟು ಊಟಮಾಡುತ್ತಿದ್ದಾನೆ.
22 യഥാ നിരൂപിതമാസ്തേ തദനുസാരേണാ മനുഷ്യപുത്രസ്യ ഗതി ർഭവിഷ്യതി കിന്തു യസ്തം പരകരേഷു സമർപയിഷ്യതി തസ്യ സന്താപോ ഭവിഷ്യതി|
೨೨ನಿರ್ಣಯವಾಗಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ, ಆದರೆ ಆತನನ್ನು ಹಿಡಿದುಕೊಡುವ ಮನುಷ್ಯನ ಗತಿಯನ್ನು ಏನು ಹೇಳಲಿ” ಅಂದನು.
23 തദാ തേഷാം കോ ജന ഏതത് കർമ്മ കരിഷ്യതി തത് തേ പരസ്പരം പ്രഷ്ടുമാരേഭിരേ|
೨೩ಇದನ್ನು ಕೇಳಿ ಅವರು, ಇಂಥ ಕೆಲಸವನ್ನು ಮಾಡಬೇಕೆಂದಿರುವವನು ನಮ್ಮಲ್ಲಿ ಯಾವನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.
24 അപരം തേഷാം കോ ജനഃ ശ്രേഷ്ഠത്വേന ഗണയിഷ്യതേ, അത്രാർഥേ തേഷാം വിവാദോഭവത്|
೨೪ಇದಲ್ಲದೆ ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು.
25 അസ്മാത് കാരണാത് സോവദത്, അന്യദേശീയാനാം രാജാനഃ പ്രജാനാമുപരി പ്രഭുത്വം കുർവ്വന്തി ദാരുണശാസനം കൃത്വാപി തേ ഭൂപതിത്വേന വിഖ്യാതാ ഭവന്തി ച|
೨೫ಆಗ ಆತನು ಅವರಿಗೆ, “ಅನ್ಯಜನಾಂಗದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮೇಲೆ ಅಧಿಕಾರದಿಂದ ಆಡಳಿತ ನಡಿಸುವವರು ಉಪಕಾರಿಗಳೆಂದು ಕರೆಸಿಕೊಳ್ಳುತ್ತಾರೆ.
26 കിന്തു യുഷ്മാകം തഥാ ന ഭവിഷ്യതി, യോ യുഷ്മാകം ശ്രേഷ്ഠോ ഭവിഷ്യതി സ കനിഷ്ഠവദ് ഭവതു, യശ്ച മുഖ്യോ ഭവിഷ്യതി സ സേവകവദ്ഭവതു|
೨೬ನೀವು ಹಾಗಿರಬಾರದು, ನಿಮ್ಮಲ್ಲಿ ದೊಡ್ಡವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು.
27 ഭോജനോപവിഷ്ടപരിചാരകയോഃ കഃ ശ്രേഷ്ഠഃ? യോ ഭോജനായോപവിശതി സ കിം ശ്രേഷ്ഠോ ന ഭവതി? കിന്തു യുഷ്മാകം മധ്യേഽഹം പരിചാരകഇവാസ്മി|
೨೭ಯಾರು ದೊಡ್ಡವನು? ಊಟಕ್ಕೆ ಕುಳಿತವನೋ ಸೇವೆಮಾಡುವವನೋ? ಊಟಕ್ಕೆ ಕುಳಿತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.
28 അപരഞ്ച യുയം മമ പരീക്ഷാകാലേ പ്രഥമമാരഭ്യ മയാ സഹ സ്ഥിതാ
೨೮ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು.
29 ഏതത്കാരണാത് പിത്രാ യഥാ മദർഥം രാജ്യമേകം നിരൂപിതം തഥാഹമപി യുഷ്മദർഥം രാജ്യം നിരൂപയാമി|
೨೯ಆದುದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿರುವ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ;
30 തസ്മാൻ മമ രാജ്യേ ഭോജനാസനേ ച ഭോജനപാനേ കരിഷ്യധ്വേ സിംഹാസനേഷൂപവിശ്യ ചേസ്രായേലീയാനാം ദ്വാദശവംശാനാം വിചാരം കരിഷ്യധ്വേ|
೩೦ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರ್ಪುಮಾಡುವಿರಿ.
31 അപരം പ്രഭുരുവാച, ഹേ ശിമോൻ പശ്യ തിതഉനാ ധാന്യാനീവ യുഷ്മാൻ ശൈതാൻ ചാലയിതുമ് ഐച്ഛത്,
೩೧“ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿನ್ನನ್ನು ಗೋದಿಯಂತೆ ಕೇರಬೇಕೆಂದು ಅಪ್ಪಣೆ ಕೇಳಿಕೊಂಡನು.
32 കിന്തു തവ വിശ്വാസസ്യ ലോപോ യഥാ ന ഭവതി ഏതത് ത്വദർഥം പ്രാർഥിതം മയാ, ത്വന്മനസി പരിവർത്തിതേ ച ഭ്രാതൃണാം മനാംസി സ്ഥിരീകുരു|
೩೨ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು” ಎಂದು ಹೇಳಿದನು.
33 തദാ സോവദത്, ഹേ പ്രഭോഹം ത്വയാ സാർദ്ധം കാരാം മൃതിഞ്ച യാതും മജ്ജിതോസ്മി|
೩೩ಆದರೆ ಅವನು, “ಕರ್ತನೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಅನ್ನಲು,
34 തതഃ സ ഉവാച, ഹേ പിതര ത്വാം വദാമി, അദ്യ കുക്കുടരവാത് പൂർവ്വം ത്വം മത്പരിചയം വാരത്രയമ് അപഹ്വോഷ്യസേ|
೩೪ಆತನು, “ಪೇತ್ರನೇ, ನನ್ನ ವಿಷಯದಲ್ಲಿ ಇವನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವ ತನಕ ಈಹೊತ್ತು ಕೋಳಿ ಕೂಗುವುದಿಲ್ಲವೆಂದು ನಿನಗೆ ಹೇಳುತ್ತೇನೆ” ಅಂದನು.
35 അപരം സ പപ്രച്ഛ, യദാ മുദ്രാസമ്പുടം ഖാദ്യപാത്രം പാദുകാഞ്ച വിനാ യുഷ്മാൻ പ്രാഹിണവം തദാ യുഷ്മാകം കസ്യാപി ന്യൂനതാസീത്? തേ പ്രോചുഃ കസ്യാപി ന|
೩೫ಮತ್ತು ಆತನು, “ನಿಮ್ಮನ್ನು ನಾನು ಹಣ, ಕೈಚೀಲಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ?” ಎಂದು ಕೇಳಲು ಅವರು ಏನೂ ಇಲ್ಲವೆಂದು ಉತ್ತರಕೊಟ್ಟರು.
36 തദാ സോവദത് കിന്ത്വിദാനീം മുദ്രാസമ്പുടം ഖാദ്യപാത്രം വാ യസ്യാസ്തി തേന തദ്ഗ്രഹീതവ്യം, യസ്യ ച കൃപാണോ നാസ്തി തേന സ്വവസ്ത്രം വിക്രീയ സ ക്രേതവ്യഃ|
೩೬ಅದಕ್ಕೆ ಆತನು, “ಈಗಲಾದರೋ ಹಣವಿದ್ದವನು ಅದನ್ನು ತೆಗೆದುಕೊಳ್ಳಲಿ, ಕೈಚೀಲವಿರುವವನು ಅದನ್ನು ತೆಗೆದುಕೊಳ್ಳಲಿ, ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ.
37 യതോ യുഷ്മാനഹം വദാമി, അപരാധിജനൈഃ സാർദ്ധം ഗണിതഃ സ ഭവിഷ്യതി| ഇദം യച്ഛാസ്ത്രീയം വചനം ലിഖിതമസ്തി തന്മയി ഫലിഷ്യതി യതോ മമ സമ്ബന്ധീയം സർവ്വം സേത്സ്യതി|
೩೭ಏಕೆಂದರೆ, ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ. ನನ್ನ ವಿಷಯದಲ್ಲಿ ಬರೆಯಲ್ಪಟ್ಟಿರುವ ಎಲ್ಲವು ನೆರವೇರಬೇಕು” ಎಂದು ಹೇಳಿದನು.
38 തദാ തേ പ്രോചുഃ പ്രഭോ പശ്യ ഇമൗ കൃപാണൗ| തതഃ സോവദദ് ഏതൗ യഥേഷ്ടൗ|
೩೮ಅವರು, “ಕರ್ತನೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ” ಅನ್ನಲು, ಆತನು ಅವರಿಗೆ, “ಅಷ್ಟು ಸಾಕು” ಅಂದನು.
39 അഥ സ തസ്മാദ്വഹി ർഗത്വാ സ്വാചാരാനുസാരേണ ജൈതുനനാമാദ്രിം ജഗാമ ശിഷ്യാശ്ച തത്പശ്ചാദ് യയുഃ|
೩೯ತರುವಾಯ ಆತನು ಪ್ರತಿದಿನದಂತೆ ಹೊರಟು ಎಣ್ಣೆಮರಗಳ ಗುಡ್ಡಕ್ಕೆ ಹೋದನು. ಶಿಷ್ಯರೂ ಆತನ ಹಿಂದೆ ಹೋದರು.
40 തത്രോപസ്ഥായ സ താനുവാച, യഥാ പരീക്ഷായാം ന പതഥ തദർഥം പ്രാർഥയധ്വം|
೪೦ಆತನು ಆ ಕ್ಲುಪ್ತ ಸ್ಥಳಕ್ಕೆ ಬಂದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
41 പശ്ചാത് സ തസ്മാദ് ഏകശരക്ഷേപാദ് ബഹി ർഗത്വാ ജാനുനീ പാതയിത്വാ ഏതത് പ്രാർഥയാഞ്ചക്രേ,
೪೧ಆ ಮೇಲೆ ಆತನು ಅವರನ್ನು ಬಿಟ್ಟು ಕಲ್ಲೆಸೆತದಷ್ಟು ದೂರ ಹೋಗಿ, ಮೊಣಕಾಲೂರಿ,
42 ഹേ പിത ര്യദി ഭവാൻ സമ്മന്യതേ തർഹി കംസമേനം മമാന്തികാദ് ദൂരയ കിന്തു മദിച്ഛാനുരൂപം ന ത്വദിച്ഛാനുരൂപം ഭവതു|
೪೨“ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತದಂತೆಯೇ ಆಗಲಿ” ಪ್ರಾರ್ಥಿಸಿದನು.
43 തദാ തസ്മൈ ശക്തിം ദാതും സ്വർഗീയദൂതോ ദർശനം ദദൗ|
೪೩ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು, ಆತನನ್ನು ಬಲಪಡಿಸಿದನು.
44 പശ്ചാത് സോത്യന്തം യാതനയാ വ്യാകുലോ ഭൂത്വാ പുനർദൃഢം പ്രാർഥയാഞ്ചക്രേ, തസ്മാദ് ബൃഹച്ഛോണിതബിന്ദവ ഇവ തസ്യ സ്വേദബിന്ദവഃ പൃഥിവ്യാം പതിതുമാരേഭിരേ|
೪೪ಯೇಸು ತೀವ್ರವಾದ ಮನೋವ್ಯಥೆಯುಳ್ಳವನಾಗಿ, ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ, ಆತನ ಬೆವರು ರಕ್ತದ ಹನಿಗಳೋಪಾದಿಯಲ್ಲಿ ನೆಲಕ್ಕೆ ಬೀಳುತ್ತಿತ್ತು.
45 അഥ പ്രാർഥനാത ഉത്ഥായ ശിഷ്യാണാം സമീപമേത്യ താൻ മനോദുഃഖിനോ നിദ്രിതാൻ ദൃഷ്ട്വാവദത്
೪೫ಆತನು ಪ್ರಾರ್ಥನೆ ಮುಗಿಸಿ ಎದ್ದು ಶಿಷ್ಯರ ಬಳಿಗೆ ಬಂದು, ಅವರು ದುಃಖದಿಂದ ಬಳಲಿಹೋದವರಾಗಿ ನಿದ್ರೆಹತ್ತಿರುವುದನ್ನು ಕಂಡು,
46 കുതോ നിദ്രാഥ? പരീക്ഷായാമ് അപതനാർഥം പ്രർഥയധ്വം|
೪೬ಅವರಿಗೆ, “ನೀವು ನಿದ್ರೆಮಾಡುವುದೇನು? ಏಳಿರಿ, ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
47 ഏതത്കഥായാഃ കഥനകാലേ ദ്വാദശശിഷ്യാണാം മധ്യേ ഗണിതോ യിഹൂദാനാമാ ജനതാസഹിതസ്തേഷാമ് അഗ്രേ ചലിത്വാ യീശോശ്ചുമ്ബനാർഥം തദന്തികമ് ആയയൗ|
೪೭ಆತನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ, ಜನರ ಗುಂಪು ಕಾಣಿಸಿತು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನೆಂಬುವನು ಆ ಜನರ ಗುಂಪಿನ ಮುಂದೆ ನಡೆಯುತ್ತಾ, ಯೇಸುವಿಗೆ ಮುದ್ದಿಡುವುದಕ್ಕಾಗಿ ಆತನ ಬಳಿಗೆ ಬರಲು,
48 തദാ യീശുരുവാച, ഹേ യിഹൂദാ കിം ചുമ്ബനേന മനുഷ്യപുത്രം പരകരേഷു സമർപയസി?
೪೮ಯೇಸು ಅವನಿಗೆ, “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡಿದುಕೊಡುತ್ತೀಯಾ?” ಎಂದು ಕೇಳಿದನು.
49 തദാ യദ്യദ് ഘടിഷ്യതേ തദനുമായ സങ്ഗിഭിരുക്തം, ഹേ പ്രഭോ വയം കി ഖങ്ഗേന ഘാതയിഷ്യാമഃ?
೪೯ಆತನ ಸುತ್ತಲಿದ್ದವರು ಘಟನೆಯ ಸೂಕ್ಷ್ಮತೆಯನ್ನು ತಿಳಿದು ತಕ್ಷಣ, “ಕರ್ತನೇ, ನಾವು ಕತ್ತಿಯಿಂದ ಹೊಡೆಯೋಣವೋ?” ಎಂದು ಕೇಳಿದರು.
50 തത ഏകഃ കരവാലേനാഹത്യ പ്രധാനയാജകസ്യ ദാസസ്യ ദക്ഷിണം കർണം ചിച്ഛേദ|
೫೦ಅಷ್ಟರಲ್ಲಿ ಅವರಲ್ಲಿ ಒಬ್ಬನು ಮಹಾಯಾಜಕನ ಆಳನ್ನು ಕತ್ತಿಯಿಂದ ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿ ಹಾಕಿದನು.
51 അധൂനാ നിവർത്തസ്വ ഇത്യുക്ത്വാ യീശുസ്തസ്യ ശ്രുതിം സ്പൃഷ്ട്വാ സ്വസ്യം ചകാര|
೫೧ಆದರೆ ಯೇಸು, “ಇಷ್ಟಕ್ಕೇ ಬಿಡಿರಿ” ಎಂದು ಹೇಳಿ ಆ ಆಳಿನ ಕಿವಿಯನ್ನು ಮುಟ್ಟಿ ವಾಸಿಮಾಡಿದನು.
52 പശ്ചാദ് യീശുഃ സമീപസ്ഥാൻ പ്രധാനയാജകാൻ മന്ദിരസ്യ സേനാപതീൻ പ്രാചീനാംശ്ച ജഗാദ, യൂയം കൃപാണാൻ യഷ്ടീംശ്ച ഗൃഹീത്വാ മാം കിം ചോരം ധർത്തുമായാതാഃ?
೫೨ಬಳಿಕ ಯೇಸು ತನ್ನನ್ನು ಹಿಡಿಯುವುದಕ್ಕೆ ಬಂದ ಮುಖ್ಯಯಾಜಕರಿಗೂ, ದೇವಾಲಯದ ಕಾವಲಿನ ದಳವಾಯಿಗಳಿಗೂ, ಸಭೆಯ ಹಿರಿಯರಿಗೂ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ಬಂದಿರುವಿರಾ?
53 യദാഹം യുഷ്മാഭിഃ സഹ പ്രതിദിനം മന്ദിരേഽതിഷ്ഠം തദാ മാം ധർത്തം ന പ്രവൃത്താഃ, കിന്ത്വിദാനീം യുഷ്മാകം സമയോന്ധകാരസ്യ ചാധിപത്യമസ്തി|
೫೩ನಾನು ಪ್ರತಿದಿನ ದೇವಾಲಯದಲ್ಲಿ ನಿಮ್ಮ ಸಂಗಡ ಇದ್ದಾಗ ನೀವು ನನ್ನ ಮೇಲೆ ಕೈಹಾಕಲಿಲ್ಲ. ಆದರೆ ಇದು ನಿಮ್ಮ ಕಾಲ, ಇದು ಅಂಧಕಾರದ ದೊರೆತನದ ಕಾಲ” ಎಂದು ಹೇಳಿದನು.
54 അഥ തേ തം ധൃത്വാ മഹായാജകസ്യ നിവേശനം നിന്യുഃ| തതഃ പിതരോ ദൂരേ ദൂരേ പശ്ചാദിത്വാ
೫೪ಅವರು ಆತನನ್ನು ಹಿಡಿದು ಮಹಾಯಾಜಕನ ಮನೆಯೊಳಕ್ಕೆ ಕರೆದುಕೊಂಡು ಹೋದರು. ಪೇತ್ರನು ದೂರದಿಂದ ಅವರನ್ನು ಹಿಂಬಾಲಿಸುತ್ತಿದ್ದನು.
55 ബൃഹത്കോഷ്ഠസ്യ മധ്യേ യത്രാഗ്നിം ജ്വാലയിത്വാ ലോകാഃ സമേത്യോപവിഷ്ടാസ്തത്ര തൈഃ സാർദ്ധമ് ഉപവിവേശ|
೫೫ಅಂಗಳದ ನಡುವೆ ಅವರು ಬೆಂಕಿ ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡಿರಲು ಅವರ ನಡುವೆ ಪೇತ್ರನೂ ಕುಳಿತುಕೊಂಡನು.
56 അഥ വഹ്നിസന്നിധൗ സമുപവേശകാലേ കാചിദ്ദാസീ മനോ നിവിശ്യ തം നിരീക്ഷ്യാവദത് പുമാനയം തസ്യ സങ്ഗേഽസ്ഥാത്|
೫೬ಅವನು ಬೆಳಕಿಗೆ ಮುಖವಾಗಿ ಕುಳಿತಿರುವಾಗ ಒಬ್ಬ ದಾಸಿಯು ಅವನನ್ನು ಕಂಡು, ಅವನನ್ನು ದೃಷ್ಟಿಸಿ ನೋಡಿ, “ಇವನು ಸಹ ಅವನ ಸಂಗಡ ಇದ್ದವನು” ಅಂದಳು.
57 കിന്തു സ തദ് അപഹ്നുത്യാവാദീത് ഹേ നാരി തമഹം ന പരിചിനോമി|
೫೭ಆದರೆ ಅವನು, “ನಾನು ಅವನನ್ನು ಅರಿಯೆನಮ್ಮಾ” ಎಂದು ಹೇಳಿದನು.
58 ക്ഷണാന്തരേഽന്യജനസ്തം ദൃഷ്ട്വാബ്രവീത് ത്വമപി തേഷാം നികരസ്യൈകജനോസി| പിതരഃ പ്രത്യുവാച ഹേ നര നാഹമസ്മി|
೫೮ಸ್ವಲ್ಪಹೊತ್ತಿನ ಮೇಲೆ ಮತ್ತೊಬ್ಬನು ಬಂದು ಅವನನ್ನು ಕಂಡು, “ನೀನೂ ಸಹ ಅವರಲ್ಲಿ ಒಬ್ಬನು” ಅನ್ನಲು ಪೇತ್ರನು, “ನಾನಲ್ಲಪ್ಪಾ” ಅಂದನು.
59 തതഃ സാർദ്ധദണ്ഡദ്വയാത് പരം പുനരന്യോ ജനോ നിശ്ചിത്യ ബഭാഷേ, ഏഷ തസ്യ സങ്ഗീതി സത്യം യതോയം ഗാലീലീയോ ലോകഃ|
೫೯ಹೆಚ್ಚು ಕಡಿಮೆ ಒಂದು ಘಂಟೆ ಹೊತ್ತಿನ ಮೇಲೆ ಇನ್ನೊಬ್ಬನು, “ನಿಶ್ಚಯವಾಗಿ ಇವನು ಸಹ ಅವನ ಸಂಗಡ ಇದ್ದವನು, ಇವನು ಗಲಿಲಾಯದವನಷ್ಟೆ” ಎಂದು ದೃಢವಾಗಿ ಹೇಳಿದನು.
60 തദാ പിതര ഉവാച ഹേ നര ത്വം യദ് വദമി തദഹം ബോദ്ധും ന ശക്നോമി, ഇതി വാക്യേ കഥിതമാത്രേ കുക്കുടോ രുരാവ|
೬೦ಆದರೆ ಪೇತ್ರನು, “ನೀನು ಹೇಳುವುದೇನೋ ನಾನರಿಯೆನಪ್ಪಾ” ಅಂದನು. ಅವನು ಈ ಮಾತನ್ನು ಆಡುತ್ತಿರುವಾಗಲೇ ಕೋಳಿ ಕೂಗಿತು.
61 തദാ പ്രഭുണാ വ്യാധുട്യ പിതരേ നിരീക്ഷിതേ കൃകവാകുരവാത് പൂർവ്വം മാം ത്രിരപഹ്നോഷ്യസേ ഇതി പൂർവ്വോക്തം തസ്യ വാക്യം പിതരഃ സ്മൃത്വാ
೬೧ಕರ್ತನು ಹಿಂತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು. ಆಗ ಪೇತ್ರನು, “ಈಹೊತ್ತು ಕೋಳಿ ಕೂಗುವುದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅವನನ್ನು ಅರಿಯೆನೆಂಬದಾಗಿ ಹೇಳುವಿ” ಎಂದು ಕರ್ತನು ನುಡಿದ ಮಾತನ್ನು ನೆನಪಿಸಿಕೊಂಡು,
62 ബഹിർഗത്വാ മഹാഖേദേന ചക്രന്ദ|
೬೨ಹೊರಗೆ ಹೋಗಿ ತುಂಬಾ ವ್ಯಥೆಪಟ್ಟು ಅತ್ತನು.
63 തദാ യൈ ര്യീശുർധൃതസ്തേ തമുപഹസ്യ പ്രഹർത്തുമാരേഭിരേ|
೬೩ಆ ಮೇಲೆ ಯೇಸುವನ್ನು ಹಿಡಿದವರು ಆತನನ್ನು ಪರಿಹಾಸ್ಯಮಾಡುತ್ತಾ, ಆತನಿಗೆ ಮುಸುಕುಹಾಕಿ ಹೊಡೆದು, “ನಿನ್ನನ್ನು ಹೊಡೆದವನಾರು? ಪ್ರವಾದನೆ ಹೇಳು” ಎಂದು ಆತನನ್ನು ಕೇಳಿದರು.
64 വസ്ത്രേണ തസ്യ ദൃശൗ ബദ്ധ്വാ കപോലേ ചപേടാഘാതം കൃത്വാ പപ്രച്ഛുഃ, കസ്തേ കപോലേ ചപേടാഘാതം കൃതവാന? ഗണയിത്വാ തദ് വദ|
೬೪
65 തദന്യത് തദ്വിരുദ്ധം ബഹുനിന്ദാവാക്യം വക്തുമാരേഭിരേ|
೬೫ಆತನ ಕುರಿತು ಇನ್ನೂ ಅನೇಕ ದೂಷಣೆಯ ಮಾತುಗಳನ್ನಾಡಿದರು.
66 അഥ പ്രഭാതേ സതി ലോകപ്രാഞ്ചഃ പ്രധാനയാജകാ അധ്യാപകാശ്ച സഭാം കൃത്വാ മധ്യേസഭം യീശുമാനീയ പപ്രച്ഛുഃ, ത്വമ് അഭിഷികതോസി ന വാസ്മാൻ വദ|
೬೬ಬೆಳಗಾಗುವಾಗ ಯೆಹೂದ್ಯರ ಹಿರೀಸಭೆಯವರು, ಮುಖ್ಯಯಾಜಕರು ಮತ್ತು ಶಾಸ್ತ್ರಿಗಳು ಕೂಡಿ ಆತನನ್ನು ತಮ್ಮ ನ್ಯಾಯವಿಚಾರಣಾಸಭೆಗೆ ತೆಗೆದುಕೊಂಡು ಬಂದು,
67 സ പ്രത്യുവാച, മയാ തസ്മിന്നുക്തേഽപി യൂയം ന വിശ്വസിഷ്യഥ|
೬೭“ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು” ಅಂದರು. ಆತನು ಅವರಿಗೆ, “ನಾನು ನಿಮಗೆ ಹೇಳಿದರೆ ನೀವು ನಂಬುವುದಿಲ್ಲ.
68 കസ്മിംശ്ചിദ്വാക്യേ യുഷ്മാൻ പൃഷ്ടേഽപി മാം ന തദുത്തരം വക്ഷ്യഥ ന മാം ത്യക്ഷ്യഥ ച|
೬೮ನಾನು ನಿಮ್ಮನ್ನು ಏನಾದರೂ ಕೇಳಿದರೆ ನೀವು ಉತ್ತರಕೊಡುವುದಿಲ್ಲ.
69 കിന്ത്വിതഃ പരം മനുജസുതഃ സർവ്വശക്തിമത ഈശ്വരസ്യ ദക്ഷിണേ പാർശ്വേ സമുപവേക്ഷ്യതി|
೬೯ಆದರೆ ಇಂದಿನಿಂದ ಮನುಷ್ಯಕುಮಾರನು ಸರ್ವಶಕ್ತನಾದ ದೇವರ ಬಲಗಡೆಯಲ್ಲಿ ಆಸೀನನಾಗಿರುವನು” ಎಂದು ಹೇಳಿದನು.
70 തതസ്തേ പപ്രച്ഛുഃ, ർതിഹ ത്വമീശ്വരസ്യ പുത്രഃ? സ കഥയാമാസ, യൂയം യഥാർഥം വദഥ സ ഏവാഹം|
೭೦ಆಗ ಎಲ್ಲರು, “ಹಾಗಾದರೆ ನೀನು ದೇವರ ಕುಮಾರನೋ?” ಎಂದು ಕೇಳಲು ಆತನು ಅವರಿಗೆ, “ನನ್ನನ್ನು ಕುರಿತು ದೇವಕುಮಾರನೆಂದು ನೀವೇ ಹೇಳಿದ್ದೀರಿ” ಎಂದು ಹೇಳಿದನು.
71 തദാ തേ സർവ്വേ കഥയാമാസുഃ, ർതിഹ സാക്ഷ്യേഽൻസസ്മിൻ അസ്മാകം കിം പ്രയോജനം? അസ്യ സ്വമുഖാദേവ സാക്ഷ്യം പ്രാപ്തമ്|
೭೧ಅದಕ್ಕೆ ಅವರು, “ನಮಗೆ ಸಾಕ್ಷಿ ಇನ್ನು ಯಾತಕ್ಕೆ ಬೇಕು? ನಾವೇ ಇವನ ಬಾಯಿಂದ ಕೇಳಿದೆವಲ್ಲಾ” ಅಂದರು.

< ലൂകഃ 22 >