< ലൂകഃ 17 >

1 ഇതഃ പരം യീശുഃ ശിഷ്യാൻ ഉവാച, വിഘ്നൈരവശ്യമ് ആഗന്തവ്യം കിന്തു വിഘ്നാ യേന ഘടിഷ്യന്തേ തസ്യ ദുർഗതി ർഭവിഷ്യതി|
ಯೇಸು ತನ್ನ ಶಿಷ್ಯರಿಗೆ, “ಶೋಧನೆಗಳು ಬರುವುದು ಸಹಜ, ಆದರೂ ಅವು ಯಾವನಿಂದ ಬರುತ್ತವೆಯೋ ಅವನ ಗತಿಯನ್ನು ಏನು ಹೇಳಲಿ?
2 ഏതേഷാം ക്ഷുദ്രപ്രാണിനാമ് ഏകസ്യാപി വിഘ്നജനനാത് കണ്ഠബദ്ധപേഷണീകസ്യ തസ്യ സാഗരാഗാധജലേ മജ്ജനം ഭദ്രം|
ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಮಾಡುವುದಕ್ಕೆ ಕಾರಣನಾಗುವುದಕ್ಕಿಂತ ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಸಿಕೊಂಡು ಸಮುದ್ರದಲ್ಲಿ ಹಾಕಿಸಿಕೊಳ್ಳುವುದೇ ಲೇಸು.
3 യൂയം സ്വേഷു സാവധാനാസ്തിഷ്ഠത; തവ ഭ്രാതാ യദി തവ കിഞ്ചിദ് അപരാധ്യതി തർഹി തം തർജയ, തേന യദി മനഃ പരിവർത്തയതി തർഹി തം ക്ഷമസ്വ|
ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಗದರಿಸು. ಅವನು ಪಶ್ಚಾತ್ತಾಪಪಟ್ಟರೆ ಅವನ ತಪ್ಪನ್ನು ಕ್ಷಮಿಸಿಬಿಡು.
4 പുനരേകദിനമധ്യേ യദി സ തവ സപ്തകൃത്വോഽപരാധ്യതി കിന്തു സപ്തകൃത്വ ആഗത്യ മനഃ പരിവർത്യ മയാപരാദ്ധമ് ഇതി വദതി തർഹി തം ക്ഷമസ്വ|
ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು, ‘ನಾನು ಪಶ್ಚಾತ್ತಾಪಪಡುತ್ತೇನೆ ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ ಅವನನ್ನು ಕ್ಷಮಿಸು” ಎಂದು ಹೇಳಿದನು.
5 തദാ പ്രേരിതാഃ പ്രഭുമ് അവദൻ അസ്മാകം വിശ്വാസം വർദ്ധയ|
ಅಪೊಸ್ತಲರು ಕರ್ತನಿಗೆ, “ನಮ್ಮ ನಂಬಿಕೆಯನ್ನು ಹೆಚ್ಚಿಸು” ಎಂದು ಹೇಳಲು,
6 പ്രഭുരുവാച, യദി യുഷ്മാകം സർഷപൈകപ്രമാണോ വിശ്വാസോസ്തി തർഹി ത്വം സമൂലമുത്പാടിതോ ഭൂത്വാ സമുദ്രേ രോപിതോ ഭവ കഥായാമ് ഏതസ്യാമ് ഏതദുഡുമ്ബരായ കഥിതായാം സ യുഷ്മാകമാജ്ഞാവഹോ ഭവിഷ്യതി|
ಕರ್ತನು, “ಸಾಸಿವೇ ಕಾಳಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡುಹೋಗಿ ಸಮುದ್ರದಲ್ಲಿ ನಾಟಿಕೊ’ ಎಂದು ಹೇಳಿದರೂ ಅದು ನಿಮ್ಮ ಮಾತನ್ನು ಕೇಳುವುದು” ಅಂದನು.
7 അപരം സ്വദാസേ ഹലം വാഹയിത്വാ വാ പശൂൻ ചാരയിത്വാ ക്ഷേത്രാദ് ആഗതേ സതി തം വദതി, ഏഹി ഭോക്തുമുപവിശ, യുഷ്മാകമ് ഏതാദൃശഃ കോസ്തി?
“ನಿಮ್ಮಲ್ಲಿ ಯಾವನಿಗಾದರೂ ವ್ಯವಸಾಯ ಮಾಡುವ ಅಥವಾ ಕುರಿಮೇಯಿಸುವ ಆಳಿರಲಾಗಿ, ಅವನು ಹೊಲದಿಂದ ಮನೆಗೆ ಬಂದ ಆ ಆಳಿಗೆ, ‘ನೀನು ತಟ್ಟನೆ ಬಂದು ಊಟಕ್ಕೆ ಕುಳಿತುಕೋ’ ಎಂದು ಹೇಳುವನೇ?
8 വരഞ്ച പൂർവ്വം മമ ഖാദ്യമാസാദ്യ യാവദ് ഭുഞ്ജേ പിവാമി ച താവദ് ബദ്ധകടിഃ പരിചര പശ്ചാത് ത്വമപി ഭോക്ഷ്യസേ പാസ്യസി ച കഥാമീദൃശീം കിം ന വക്ഷ്യതി?
ಹಾಗೆ ಹೇಳದೆ, ‘ನೀನು ನನ್ನ ಊಟಕ್ಕೇನಾದರೂ ಸಿದ್ಧಮಾಡು, ನಾನು ಊಟಮಾಡುವ ತನಕ ನಡುಕಟ್ಟಿಕೊಂಡು ನನಗೆ ಸೇವೆಮಾಡು. ಆ ಮೇಲೆ ನೀನು ಊಟಮಾಡು, ಕುಡಿ’ ಎಂದು ಹೇಳುವನಲ್ಲವೇ.
9 തേന ദാസേന പ്രഭോരാജ്ഞാനുരൂപേ കർമ്മണി കൃതേ പ്രഭുഃ കിം തസ്മിൻ ബാധിതോ ജാതഃ? നേത്ഥം ബുധ്യതേ മയാ|
ತನ್ನ ಅಪ್ಪಣೆಯಂತೆ ನಡೆದ ಆ ಆಳಿಗೆ, ನಿನ್ನಿಂದ ಉಪಕಾರವಾಯಿತೆಂದು ಅವನಿಗೆ ಹೇಳುವನೇ? ಇದರಂತೆಯೇ ನಿಮ್ಮ ಸಂಗತಿ.
10 ഇത്ഥം നിരൂപിതേഷു സർവ്വകർമ്മസു കൃതേഷു സത്മു യൂയമപീദം വാക്യം വദഥ, വയമ് അനുപകാരിണോ ദാസാ അസ്മാഭിര്യദ്യത്കർത്തവ്യം തന്മാത്രമേവ കൃതം|
೧೦ನೀವು ನಿಮಗೆ ಅಪ್ಪಣೆಯಾಗಿರುವುದನ್ನೆಲ್ಲಾ ಮಾಡಿದ ಮೇಲೆ ‘ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ’ ಅನ್ನಿರಿ” ಎಂದು ಹೇಳಿದನು.
11 സ യിരൂശാലമി യാത്രാം കുർവ്വൻ ശോമിരോൺഗാലീൽപ്രദേശമധ്യേന ഗച്ഛതി,
೧೧ಯೇಸು ಯೆರೂಸಲೇಮಿಗೆ ಪ್ರಯಾಣಮಾಡುವಾಗ ಸಮಾರ್ಯ, ಗಲಿಲಾಯ ಸೀಮೆಗಳ ನಡುವೆ ಹಾದುಹೋದನು.
12 ഏതർഹി കുത്രചിദ് ഗ്രാമേ പ്രവേശമാത്രേ ദശകുഷ്ഠിനസ്തം സാക്ഷാത് കൃത്വാ
೧೨ಒಂದು ಹಳ್ಳಿಗೆ ಬಂದಾಗ ಹತ್ತುಮಂದಿ ಕುಷ್ಠರೋಗಿಗಳು ಆತನ ಎದುರಿಗೆ ಬಂದು ದೂರದಲ್ಲಿ ನಿಂತು,
13 ദൂരേ തിഷ്ഠനത ഉച്ചൈ ർവക്തുമാരേഭിരേ, ഹേ പ്രഭോ യീശോ ദയസ്വാസ്മാൻ|
೧೩“ಯೇಸುವೇ, ಗುರುವೇ, ನಮ್ಮ ಮೇಲೆ ದಯವಿಡು” ಎಂದು ಕೂಗಿ ಹೇಳಿದರು.
14 തതഃ സ താൻ ദൃഷ്ട്വാ ജഗാദ, യൂയം യാജകാനാം സമീപേ സ്വാൻ ദർശയത, തതസ്തേ ഗച്ഛന്തോ രോഗാത് പരിഷ്കൃതാഃ|
೧೪ಆತನು ಅವರನ್ನು ನೋಡಿ, “ನೀವು ಹೋಗಿ ಯಾಜಕರಿಗೆ ನಿಮ್ಮ ಮೈ ತೋರಿಸಿಕೊಳ್ಳಿರಿ” ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು.
15 തദാ തേഷാമേകഃ സ്വം സ്വസ്ഥം ദൃഷ്ട്വാ പ്രോച്ചൈരീശ്വരം ധന്യം വദൻ വ്യാഘുട്യായാതോ യീശോ ർഗുണാനനുവദൻ തച്ചരണാധോഭൂമൗ പപാത;
೧೫ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ, ಮಹಾಶಬ್ದದಿಂದ ದೇವರನ್ನು ಕೊಂಡಾಡುತ್ತಾ ಹಿಂತಿರುಗಿ ಬಂದು,
16 സ ചാസീത് ശോമിരോണീ|
೧೬ಯೇಸುವಿನ ಪಾದಗಳಿಗೆ ಅಡ್ಡಬಿದ್ದು, ಆತನಿಗೆ ಕೃತಜ್ಞತಾಸುತ್ತಿಯನ್ನು ಸಲ್ಲಿಸಿದನು. ಅವನು ಸಮಾರ್ಯದವನು.
17 തദാ യീശുരവദത്, ദശജനാഃ കിം ന പരിഷ്കൃതാഃ? തഹ്യന്യേ നവജനാഃ കുത്ര?
೧೭ಯೇಸು ಇದನ್ನು ನೋಡಿ, “ಹತ್ತು ಮಂದಿ ಶುದ್ಧರಾದರಲ್ಲವೇ. ಮಿಕ್ಕ ಒಂಭತ್ತು ಮಂದಿ ಎಲ್ಲಿ?
18 ഈശ്വരം ധന്യം വദന്തമ് ഏനം വിദേശിനം വിനാ കോപ്യന്യോ ന പ്രാപ്യത|
೧೮ದೇವರನ್ನು ಸ್ತುತಿಸುವುದಕ್ಕೆ ಈ ಅನ್ಯದೇಶದವನೇ ಹೊರತು ಇನ್ನಾರೂ ಹಿಂತಿರುಗಿ ಬರಲಿಲ್ಲವೇ?” ಎಂದು ಹೇಳಿ,
19 തദാ സ തമുവാച, ത്വമുത്ഥായ യാഹി വിശ്വാസസ്തേ ത്വാം സ്വസ്ഥം കൃതവാൻ|
೧೯ಅವನಿಗೆ, “ಎದ್ದು ಹೋಗು, ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥಮಾಡಿಯದೆ” ಎಂದು ಹೇಳಿದನು.
20 അഥ കദേശ്വരസ്യ രാജത്വം ഭവിഷ്യതീതി ഫിരൂശിഭിഃ പൃഷ്ടേ സ പ്രത്യുവാച, ഈശ്വരസ്യ രാജത്വമ് ഐശ്വര്യ്യദർശനേന ന ഭവിഷ്യതി|
೨೦ದೇವರ ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಆತನನ್ನು ಕೇಳಿದಾಗ ಆತನು ಅವರಿಗೆ, “ದೇವರ ರಾಜ್ಯವು ನೀವು ಗಮನಿಸುತ್ತಾ ಕಾಯುತ್ತಿರುವಾಗ ಪ್ರತ್ಯಕ್ಷವಾಗಿ ಬರುವಂಥದಲ್ಲ.
21 അത ഏതസ്മിൻ പശ്യ തസ്മിൻ വാ പശ്യ, ഇതി വാക്യം ലോകാ വക്തും ന ശക്ഷ്യന്തി, ഈശ്വരസ്യ രാജത്വം യുഷ്മാകമ് അന്തരേവാസ്തേ|
೨೧‘ಇಗೋ ಇಲ್ಲಿ ಇದೆ, ಅಗೋ ಅಲ್ಲಿ ಅದೆ’ ಎಂದು ಹೇಳುವುದಕ್ಕಾಗದು. ದೇವರ ರಾಜ್ಯವು ನಿಮ್ಮಲ್ಲಿಯೇ ಅದೆ ಎಂದು ತಿಳಿದುಕೊಳ್ಳಿರಿ” ಎಂದು ಹೇಳಿದನು.
22 തതഃ സ ശിഷ്യാൻ ജഗാദ, യദാ യുഷ്മാഭി ർമനുജസുതസ്യ ദിനമേകം ദ്രഷ്ടുമ് വാഞ്ഛിഷ്യതേ കിന്തു ന ദർശിഷ്യതേ, ഈദൃക്കാല ആയാതി|
೨೨ಮತ್ತು ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ, “ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ಮನುಷ್ಯಕುಮಾರನ ದಿನಗಳೊಳಗೆ ಒಂದು ದಿನವನ್ನು ನೋಡಬೇಕೆಂದು ಅಪೇಕ್ಷಿಸಿದರೂ ಅದನ್ನು ನೋಡದೆ ಇರುವಿರಿ.
23 തദാത്ര പശ്യ വാ തത്ര പശ്യേതി വാക്യം ലോകാ വക്ഷ്യന്തി, കിന്തു തേഷാം പശ്ചാത് മാ യാത, മാനുഗച്ഛത ച|
೨೩ಜನರು ನಿಮಗೆ, ‘ಅಗೋ ಅಲ್ಲಿದ್ದಾನೆ, ಇಗೋ ಇಲ್ಲಿದ್ದಾನೆ’ ಎಂದು ಹೇಳಿದರೆ ನೀವು ಅವರು ಹೇಳುವಲ್ಲಿಗೆ ಹೊರಟುಹೋಗಬೇಡಿರಿ, ಅವರನ್ನು ಹಿಂಬಾಲಿಸಲೂ ಬೇಡಿರಿ.
24 യതസ്തഡിദ് യഥാകാശൈകദിശ്യുദിയ തദന്യാമപി ദിശം വ്യാപ്യ പ്രകാശതേ തദ്വത് നിജദിനേ മനുജസൂനുഃ പ്രകാശിഷ്യതേ|
೨೪ಏಕೆಂದರೆ ಮಿಂಚು ಮಿಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಹೇಗೆ ಹೊಳೆಯುವುದೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿರುವನು.
25 കിന്തു തത്പൂർവ്വം തേനാനേകാനി ദുഃഖാനി ഭോക്തവ്യാന്യേതദ്വർത്തമാനലോകൈശ്ച സോഽവജ്ഞാതവ്യഃ|
೨೫ಆದರೆ ಮೊದಲು ಆತನು ಬಹು ಕಷ್ಟಗಳನ್ನನುಭವಿಸಿ ಈಗಿನ ಕಾಲದ ಸಂತತಿಯಿಂದ ತಿರಸ್ಕರಿಸಲ್ಪಡಬೇಕು.
26 നോഹസ്യ വിദ്യമാനകാലേ യഥാഭവത് മനുഷ്യസൂനോഃ കാലേപി തഥാ ഭവിഷ്യതി|
೨೬ನೋಹನ ದಿನಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿನಗಳಲ್ಲಿಯೂ ನಡೆಯುವುದು.
27 യാവത്കാലം നോഹോ മഹാപോതം നാരോഹദ് ആപ്ലാവിവാര്യ്യേത്യ സർവ്വം നാനാശയച്ച താവത്കാലം യഥാ ലോകാ അഭുഞ്ജതാപിവൻ വ്യവഹൻ വ്യവാഹയംശ്ച;
೨೭ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಮದುವೆಮಾಡಿಕೊಳ್ಳುತ್ತಿದ್ದರು, ಮದುವೆಮಾಡಿಕೊಡುತ್ತಿದ್ದರು. ಆಗ ಜಲಪ್ರಳಯವು ಬಂದು ಎಲ್ಲರನ್ನು ನಾಶಮಾಡಿತು.
28 ഇത്ഥം ലോടോ വർത്തമാനകാലേപി യഥാ ലോകാ ഭോജനപാനക്രയവിക്രയരോപണഗൃഹനിർമ്മാണകർമ്മസു പ്രാവർത്തന്ത,
೨೮ಮತ್ತು ಲೋಟನ ದಿನಗಳಲ್ಲಿ ನಡೆದ ಪ್ರಕಾರ ನಡೆಯುವುದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರಾಟಮಾಡುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.
29 കിന്തു യദാ ലോട് സിദോമോ നിർജഗാമ തദാ നഭസഃ സഗന്ധകാഗ്നിവൃഷ്ടി ർഭൂത്വാ സർവ്വം വ്യനാശയത്
೨೯ಆದರೆ ಲೋಟನು ಸೊದೋಮ್ ಊರನ್ನು ಬಿಟ್ಟುಹೋದ ದಿನದಲ್ಲಿ, ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು.
30 തദ്വൻ മാനവപുത്രപ്രകാശദിനേപി ഭവിഷ്യതി|
೩೦ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿನದಲ್ಲಿ ಅದೇ ರೀತಿಯಾಗಿ ಇರುವುದು.
31 തദാ യദി കശ്ചിദ് ഗൃഹോപരി തിഷ്ഠതി തർഹി സ ഗൃഹമധ്യാത് കിമപി ദ്രവ്യമാനേതുമ് അവരുഹ്യ നൈതു; യശ്ച ക്ഷേത്രേ തിഷ്ഠതി സോപി വ്യാഘുട്യ നായാതു|
೩೧ಆ ದಿನದಲ್ಲಿ ಮಾಳಿಗೆಯ ಮೇಲೆ ಇರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಇಳಿದು ಬರಬಾರದು. ಅದೇ ಪ್ರಕಾರ ಹೊಲದಲ್ಲಿರುವವನು ಸಹ ತಿರುಗಿ ಹಿಂದಕ್ಕೆ ಹೋಗಬಾರದು.
32 ലോടഃ പത്നീം സ്മരത|
೩೨ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ.
33 യഃ പ്രാണാൻ രക്ഷിതും ചേഷ്ടിഷ്യതേ സ പ്രാണാൻ ഹാരയിഷ്യതി യസ്തു പ്രാണാൻ ഹാരയിഷ്യതി സഏവ പ്രാണാൻ രക്ഷിഷ്യതി|
೩೩ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಪ್ರಾಣವನ್ನು ಕಳೆದುಕೊಂಡವನು ಅದನ್ನು ರಕ್ಷಿಸಿಕೊಳ್ಳುವನು.
34 യുഷ്മാനഹം വച്മി തസ്യാം രാത്രൗ ശയ്യൈകഗതയോ ർലോകയോരേകോ ധാരിഷ്യതേ പരസ്ത്യക്ഷ്യതേ|
೩೪ಆ ರಾತ್ರಿಯಲ್ಲಿ ಇಬ್ಬರು ಒಂದೇ ಹಾಸಿಗೆಯಲ್ಲಿ ಇರುವರು. ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಕೈ ಬಿಡಲ್ಪಡುವನು.
35 സ്ത്രിയൗ യുഗപത് പേഷണീം വ്യാവർത്തയിഷ്യതസ്തയോരേകാ ധാരിഷ്യതേ പരാത്യക്ഷ്യതേ|
೩೫ಇಬ್ಬರು ಹೆಂಗಸರು ಒಂದೇ ಕಲ್ಲಲ್ಲಿ ಬೀಸುತ್ತಿರುವರು. ಒಬ್ಬಳು ತೆಗೆದುಕೊಳ್ಳಲ್ಪಡುವಳು, ಮತ್ತೊಬ್ಬಳು ಬಿಡಲ್ಪಡುವಳು.”
36 പുരുഷൗ ക്ഷേത്രേ സ്ഥാസ്യതസ്തയോരേകോ ധാരിഷ്യതേ പരസ്ത്യക്ഷ്യതേ|
೩೬“ಹೊಲದಲ್ಲಿ ಇಬ್ಬರಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಬಿಡಲ್ಪಡುವನು” ಅಂದನು.
37 തദാ തേ പപ്രച്ഛുഃ, ഹേ പ്രഭോ കുത്രേത്ഥം ഭവിഷ്യതി? തതഃ സ ഉവാച, യത്ര ശവസ്തിഷ്ഠതി തത്ര ഗൃധ്രാ മിലന്തി|
೩೭ಈ ಮಾತಿಗೆ ಶಿಷ್ಯರು, “ಕರ್ತನೇ, ಅದು ಎಲ್ಲಿ ಆಗುವುದು?” ಎಂದು ಕೇಳಲು ಆತನು ಅವರಿಗೆ, “ಹೆಣ ಎಲ್ಲಿಯೋ ಅಲ್ಲಿಯೇ ರಣಹದ್ದುಗಳು ಬಂದು ಸೇರುವವು” ಎಂದು ಉತ್ತರಕೊಟ್ಟನು.

< ലൂകഃ 17 >