< ಲೂಕಃ 19 >

1 ಯದಾ ಯೀಶು ರ್ಯಿರೀಹೋಪುರಂ ಪ್ರವಿಶ್ಯ ತನ್ಮಧ್ಯೇನ ಗಚ್ಛಂಸ್ತದಾ
ಯೇಸು ಯೆರಿಕೋ ಪಟ್ಟಣವನ್ನು ಪ್ರವೇಶಿಸಿ ಅಲ್ಲಿಂದ ಪ್ರಯಾಣ ಮಾಡುತ್ತಿದ್ದರು.
2 ಸಕ್ಕೇಯನಾಮಾ ಕರಸಞ್ಚಾಯಿನಾಂ ಪ್ರಧಾನೋ ಧನವಾನೇಕೋ
ಅಲ್ಲಿ ಜಕ್ಕಾಯ ಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು; ಅವನು ಸುಂಕದವರಲ್ಲಿ ಮುಖಂಡನೂ ಐಶ್ವರ್ಯವಂತನೂ ಆಗಿದ್ದನು.
3 ಯೀಶುಃ ಕೀದೃಗಿತಿ ದ್ರಷ್ಟುಂ ಚೇಷ್ಟಿತವಾನ್ ಕಿನ್ತು ಖರ್ವ್ವತ್ವಾಲ್ಲೋಕಸಂಘಮಧ್ಯೇ ತದ್ದರ್ಶನಮಪ್ರಾಪ್ಯ
ಅವನು ಯೇಸು ಯಾರೆಂದು ಕಾಣಬೇಕೆಂದು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದದರಿಂದ ಜನರ ಗುಂಪಿನ ನಿಮಿತ್ತವಾಗಿ ಅವರನ್ನು ಕಾಣಲಾರದೆ ಇದ್ದನು.
4 ಯೇನ ಪಥಾ ಸ ಯಾಸ್ಯತಿ ತತ್ಪಥೇಽಗ್ರೇ ಧಾವಿತ್ವಾ ತಂ ದ್ರಷ್ಟುಮ್ ಉಡುಮ್ಬರತರುಮಾರುರೋಹ|
ಆಗ ಯೇಸುವನ್ನು ಕಾಣುವಂತೆ ಅವನು ಮುಂದಾಗಿ ಓಡಿಹೋಗಿ, ಒಂದು ಅತ್ತಿಮರವನ್ನು ಹತ್ತಿದನು. ಏಕೆಂದರೆ ಯೇಸು ಆ ಮಾರ್ಗವಾಗಿಯೇ ಬರುತ್ತಿದ್ದರು.
5 ಪಶ್ಚಾದ್ ಯೀಶುಸ್ತತ್ಸ್ಥಾನಮ್ ಇತ್ವಾ ಊರ್ದ್ಧ್ವಂ ವಿಲೋಕ್ಯ ತಂ ದೃಷ್ಟ್ವಾವಾದೀತ್, ಹೇ ಸಕ್ಕೇಯ ತ್ವಂ ಶೀಘ್ರಮವರೋಹ ಮಯಾದ್ಯ ತ್ವದ್ಗೇಹೇ ವಸ್ತವ್ಯಂ|
ಯೇಸು ಆ ಸ್ಥಳಕ್ಕೆ ಬಂದು, ಮೇಲಕ್ಕೆ ನೋಡಿ ಅವನಿಗೆ, “ಜಕ್ಕಾಯನೇ, ತಕ್ಷಣವೇ ಇಳಿದು ಬಾ. ನಾನು ಇಂದು ನಿನ್ನ ಮನೆಯಲ್ಲಿ ತಂಗಬೇಕು,” ಎಂದರು.
6 ತತಃ ಸ ಶೀಘ್ರಮವರುಹ್ಯ ಸಾಹ್ಲಾದಂ ತಂ ಜಗ್ರಾಹ|
ಜಕ್ಕಾಯನು ತಕ್ಷಣವೇ ಇಳಿದುಬಂದು ಅವರನ್ನು ಸಂತೋಷದಿಂದ ಬರಮಾಡಿಕೊಂಡನು.
7 ತದ್ ದೃಷ್ಟ್ವಾ ಸರ್ವ್ವೇ ವಿವದಮಾನಾ ವಕ್ತುಮಾರೇಭಿರೇ, ಸೋತಿಥಿತ್ವೇನ ದುಷ್ಟಲೋಕಗೃಹಂ ಗಚ್ಛತಿ|
ಇದನ್ನು ಕಂಡವರೆಲ್ಲರೂ, “ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ,” ಎಂದು ಗೊಣಗುಟ್ಟಿದರು.
8 ಕಿನ್ತು ಸಕ್ಕೇಯೋ ದಣ್ಡಾಯಮಾನೋ ವಕ್ತುಮಾರೇಭೇ, ಹೇ ಪ್ರಭೋ ಪಶ್ಯ ಮಮ ಯಾ ಸಮ್ಪತ್ತಿರಸ್ತಿ ತದರ್ದ್ಧಂ ದರಿದ್ರೇಭ್ಯೋ ದದೇ, ಅಪರಮ್ ಅನ್ಯಾಯಂ ಕೃತ್ವಾ ಕಸ್ಮಾದಪಿ ಯದಿ ಕದಾಪಿ ಕಿಞ್ಚಿತ್ ಮಯಾ ಗೃಹೀತಂ ತರ್ಹಿ ತಚ್ಚತುರ್ಗುಣಂ ದದಾಮಿ|
ಆದರೆ ಜಕ್ಕಾಯನು ನಿಂತುಕೊಂಡು ಕರ್ತದೇವರಿಗೆ, “ಸ್ವಾಮೀ, ಇಗೋ, ನನ್ನ ಸ್ವತ್ತಿನಲ್ಲಿ ಅರ್ಧವನ್ನು ಬಡವರಿಗೆ ಕೊಟ್ಟುಬಿಡುತ್ತೇನೆ. ನಾನು ಯಾರಿಗಾದರೂ ಏನಾದರೂ ಮೋಸಮಾಡಿ ಅವರಿಂದ ತೆಗೆದುಕೊಂಡಿದ್ದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ,” ಎಂದನು.
9 ತದಾ ಯೀಶುಸ್ತಮುಕ್ತವಾನ್ ಅಯಮಪಿ ಇಬ್ರಾಹೀಮಃ ಸನ್ತಾನೋಽತಃ ಕಾರಣಾದ್ ಅದ್ಯಾಸ್ಯ ಗೃಹೇ ತ್ರಾಣಮುಪಸ್ಥಿತಂ|
ಯೇಸು ಅವನಿಗೆ, “ಈ ದಿನವೇ ಈ ಮನೆಗೆ ರಕ್ಷಣೆ ಬಂದಿದೆ. ಏಕೆಂದರೆ ಇವನು ಸಹ ಅಬ್ರಹಾಮನ ಪುತ್ರನಲ್ಲವೇ?
10 ಯದ್ ಹಾರಿತಂ ತತ್ ಮೃಗಯಿತುಂ ರಕ್ಷಿತುಞ್ಚ ಮನುಷ್ಯಪುತ್ರ ಆಗತವಾನ್|
ತಪ್ಪಿಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕಲ್ಲವೇ ಮನುಷ್ಯಪುತ್ರನಾದ ನಾನು ಬಂದೆನು,” ಎಂದು ಹೇಳಿದರು.
11 ಅಥ ಸ ಯಿರೂಶಾಲಮಃ ಸಮೀಪ ಉಪಾತಿಷ್ಠದ್ ಈಶ್ವರರಾಜತ್ವಸ್ಯಾನುಷ್ಠಾನಂ ತದೈವ ಭವಿಷ್ಯತೀತಿ ಲೋಕೈರನ್ವಭೂಯತ, ತಸ್ಮಾತ್ ಸ ಶ್ರೋತೃಭ್ಯಃ ಪುನರ್ದೃಷ್ಟಾನ್ತಕಥಾಮ್ ಉತ್ಥಾಪ್ಯ ಕಥಯಾಮಾಸ|
ಜನರು ಈ ಮಾತುಗಳನ್ನು ಕೇಳುತ್ತಿರಲಾಗಿ, ಯೇಸು ತಾನು ಯೆರೂಸಲೇಮಿಗೆ ಸಮೀಪವಾಗಿದ್ದುದರಿಂದಲೂ ದೇವರ ರಾಜ್ಯವು ಕೂಡಲೇ ಪ್ರತ್ಯಕ್ಷವಾಗುವುದೆಂದು ಅವರು ಭಾವಿಸಿದ್ದರಿಂದ
12 ಕೋಪಿ ಮಹಾಲ್ಲೋಕೋ ನಿಜಾರ್ಥಂ ರಾಜತ್ವಪದಂ ಗೃಹೀತ್ವಾ ಪುನರಾಗನ್ತುಂ ದೂರದೇಶಂ ಜಗಾಮ|
ಯೇಸು ಇನ್ನೊಂದು ಸಾಮ್ಯವನ್ನು ಹೇಳಿದರು: “ಘನವಂತನಾಗಿದ್ದ ಒಬ್ಬನು ತನಗೋಸ್ಕರ ರಾಜ್ಯವನ್ನು ಪಡೆದುಕೊಂಡು ತಿರುಗಿ ಬರುವುದಕ್ಕಾಗಿ ದೂರದೇಶಕ್ಕೆ ಹೊರಟುಹೋದನು.
13 ಯಾತ್ರಾಕಾಲೇ ನಿಜಾನ್ ದಶದಾಸಾನ್ ಆಹೂಯ ದಶಸ್ವರ್ಣಮುದ್ರಾ ದತ್ತ್ವಾ ಮಮಾಗಮನಪರ್ಯ್ಯನ್ತಂ ವಾಣಿಜ್ಯಂ ಕುರುತೇತ್ಯಾದಿದೇಶ|
ಆ ವ್ಯಕ್ತಿ ತನ್ನ ಹತ್ತು ಕೆಲಸಗಾರರನ್ನು ಕರೆದು, ಅವರಿಗೆ ಹತ್ತು ನಾಣ್ಯಗಳನ್ನು ಒಪ್ಪಿಸಿ, ‘ನಾನು ಬರುವವರೆಗೆ ವ್ಯಾಪಾರ ಮಾಡಿಕೊಂಡಿರಿ,’ ಎಂದು ಹೇಳಿದನು.
14 ಕಿನ್ತು ತಸ್ಯ ಪ್ರಜಾಸ್ತಮವಜ್ಞಾಯ ಮನುಷ್ಯಮೇನಮ್ ಅಸ್ಮಾಕಮುಪರಿ ರಾಜತ್ವಂ ನ ಕಾರಯಿವ್ಯಾಮ ಇಮಾಂ ವಾರ್ತ್ತಾಂ ತನ್ನಿಕಟೇ ಪ್ರೇರಯಾಮಾಸುಃ|
“ಆದರೆ ಅವನ ನಾಡಿನವರೋ ಅವನನ್ನು ದ್ವೇಷಿಸುತ್ತಿದ್ದರು. ‘ಇವನು ನಮ್ಮ ಅರಸನಾಗುವುದು ಬೇಡ,’ ಎಂದು ತಿಳಿಸಲು ಅವನ ಹಿಂದೆಯೇ ಪ್ರತಿನಿಧಿಗಳನ್ನು ಕಳುಹಿಸಿದರು.
15 ಅಥ ಸ ರಾಜತ್ವಪದಂ ಪ್ರಾಪ್ಯಾಗತವಾನ್ ಏಕೈಕೋ ಜನೋ ಬಾಣಿಜ್ಯೇನ ಕಿಂ ಲಬ್ಧವಾನ್ ಇತಿ ಜ್ಞಾತುಂ ಯೇಷು ದಾಸೇಷು ಮುದ್ರಾ ಅರ್ಪಯತ್ ತಾನ್ ಆಹೂಯಾನೇತುಮ್ ಆದಿದೇಶ|
“ಆದರೂ ಅವನು ತನ್ನ ರಾಜ್ಯವನ್ನು ಪಡೆದು ಹಿಂದಿರುಗಿದಾಗ, ವ್ಯಾಪಾರದಿಂದ ಇನ್ನೂ ಎಷ್ಟು ಲಾಭಗಳಿಸಿದರೆಂದು ತಿಳಿದುಕೊಳ್ಳುವಂತೆ, ತಾನು ಹಣ ಕೊಟ್ಟ ಆ ಕೆಲಸಗಾರರನ್ನು ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದನು.
16 ತದಾ ಪ್ರಥಮ ಆಗತ್ಯ ಕಥಿತವಾನ್, ಹೇ ಪ್ರಭೋ ತವ ತಯೈಕಯಾ ಮುದ್ರಯಾ ದಶಮುದ್ರಾ ಲಬ್ಧಾಃ|
“ಆಗ ಮೊದಲನೆಯವನು ಬಂದು, ‘ಸ್ವಾಮಿ, ನಿಮ್ಮ ಒಂದು ನಾಣ್ಯದಿಂದ ಇನ್ನೂ ಹತ್ತು ನಾಣ್ಯಗಳನ್ನು ಸಂಪಾದಿಸಿದೆ,’ ಎಂದನು.
17 ತತಃ ಸ ಉವಾಚ ತ್ವಮುತ್ತಮೋ ದಾಸಃ ಸ್ವಲ್ಪೇನ ವಿಶ್ವಾಸ್ಯೋ ಜಾತ ಇತಃ ಕಾರಣಾತ್ ತ್ವಂ ದಶನಗರಾಣಾಮ್ ಅಧಿಪೋ ಭವ|
“ಅದಕ್ಕೆ ಅವನು, ‘ಚೆನ್ನಾಗಿ ಮಾಡಿದಿ, ಒಳ್ಳೆಯ ಸೇವಕನೇ. ನೀನು ಅತ್ಯಂತ ಸ್ವಲ್ಪದರಲ್ಲಿ ನಂಬಿಗಸ್ತನಾಗಿದ್ದೀ, ಹತ್ತು ಪಟ್ಟಣಗಳ ಮೇಲೆ ನೀನು ಅಧಿಕಾರಿಯಾಗಿರು,’ ಎಂದನು.
18 ದ್ವಿತೀಯ ಆಗತ್ಯ ಕಥಿತವಾನ್, ಹೇ ಪ್ರಭೋ ತವೈಕಯಾ ಮುದ್ರಯಾ ಪಞ್ಚಮುದ್ರಾ ಲಬ್ಧಾಃ|
“ಎರಡನೆಯವನು ಬಂದು, ‘ಸ್ವಾಮಿ, ನಿನ್ನ ಒಂದು ನಾಣ್ಯದಿಂದ ಇನ್ನೂ ಐದು ನಾಣ್ಯಗಳನ್ನು ಸಂಪಾದಿಸಿದೆ,’ ಎಂದನು.
19 ತತಃ ಸ ಉವಾಚ, ತ್ವಂ ಪಞ್ಚಾನಾಂ ನಗರಾಣಾಮಧಿಪತಿ ರ್ಭವ|
“ಅದಕ್ಕೆ ಅವನು, ‘ನೀನು ಐದು ಪಟ್ಟಣಗಳ ಮೇಲೆ ಅಧಿಕಾರಿಯಾಗಿರು,’ ಎಂದು ಅವನಿಗೆ ಹೇಳಿದನು.
20 ತತೋನ್ಯ ಆಗತ್ಯ ಕಥಯಾಮಾಸ, ಹೇ ಪ್ರಭೋ ಪಶ್ಯ ತವ ಯಾ ಮುದ್ರಾ ಅಹಂ ವಸ್ತ್ರೇ ಬದ್ಧ್ವಾಸ್ಥಾಪಯಂ ಸೇಯಂ|
“ಆಗ ಮತ್ತೊಬ್ಬನು ಬಂದು, ‘ಸ್ವಾಮಿ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿಟ್ಟಿದ್ದ ನಿಮ್ಮ ನಾಣ್ಯ ಇದೇ.
21 ತ್ವಂ ಕೃಪಣೋ ಯನ್ನಾಸ್ಥಾಪಯಸ್ತದಪಿ ಗೃಹ್ಲಾಸಿ, ಯನ್ನಾವಪಸ್ತದೇವ ಚ ಛಿನತ್ಸಿ ತತೋಹಂ ತ್ವತ್ತೋ ಭೀತಃ|
ನೀವು ಕಠಿಣ ಮನುಷ್ಯರೆಂದು ನಾನು ನಿಮಗೆ ಭಯಪಟ್ಟೆನು. ನೀನು ಕೂಡಿಡದಿರುವುದನ್ನು ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ,’ ಎಂದನು.
22 ತದಾ ಸ ಜಗಾದ, ರೇ ದುಷ್ಟದಾಸ ತವ ವಾಕ್ಯೇನ ತ್ವಾಂ ದೋಷಿಣಂ ಕರಿಷ್ಯಾಮಿ, ಯದಹಂ ನಾಸ್ಥಾಪಯಂ ತದೇವ ಗೃಹ್ಲಾಮಿ, ಯದಹಂ ನಾವಪಞ್ಚ ತದೇವ ಛಿನದ್ಮಿ, ಏತಾದೃಶಃ ಕೃಪಣೋಹಮಿತಿ ಯದಿ ತ್ವಂ ಜಾನಾಸಿ,
“ಆಗ ಆ ಯಜಮಾನನು, ‘ಕೆಟ್ಟ ಸೇವಕನೇ! ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿಸುವೆನು. ನಾನು ಕೂಡಿಡದೆ ಇರುವಲ್ಲಿ ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ.
23 ತರ್ಹಿ ಮಮ ಮುದ್ರಾ ಬಣಿಜಾಂ ನಿಕಟೇ ಕುತೋ ನಾಸ್ಥಾಪಯಃ? ತಯಾ ಕೃತೇಽಹಮ್ ಆಗತ್ಯ ಕುಸೀದೇನ ಸಾರ್ದ್ಧಂ ನಿಜಮುದ್ರಾ ಅಪ್ರಾಪ್ಸ್ಯಮ್|
ಹಾಗಿದ್ದರೆ ನನ್ನ ಹಣವನ್ನು ಬಡ್ಡಿ ಅಂಗಡಿಯಲ್ಲಿ ಏಕೆ ಹಾಕಲಿಲ್ಲ, ನಾನು ಹಿಂದಿರುಗಿದಾಗ ಹಣವನ್ನು ಬಡ್ಡಿ ಸಮೇತವಾಗಿ ತೆಗೆದುಕೊಳ್ಳುತ್ತಿದ್ದೆನು,’ ಎಂದು ಹೇಳಿದನು.
24 ಪಶ್ಚಾತ್ ಸ ಸಮೀಪಸ್ಥಾನ್ ಜನಾನ್ ಆಜ್ಞಾಪಯತ್ ಅಸ್ಮಾತ್ ಮುದ್ರಾ ಆನೀಯ ಯಸ್ಯ ದಶಮುದ್ರಾಃ ಸನ್ತಿ ತಸ್ಮೈ ದತ್ತ|
“ಯಜಮಾನನು ಹತ್ತಿರ ನಿಂತಿದ್ದವರಿಗೆ, ‘ಇವನಿಂದ ಆ ನಾಣ್ಯವನ್ನು ತೆಗೆದುಕೊಂಡು ಹತ್ತು ನಾಣ್ಯಗಳಿದ್ದವನಿಗೆ ಕೊಡಿರಿ,’ ಎಂದನು.
25 ತೇ ಪ್ರೋಚುಃ ಪ್ರಭೋಽಸ್ಯ ದಶಮುದ್ರಾಃ ಸನ್ತಿ|
“ಆಗ ಅವರು, ‘ಸ್ವಾಮಿ, ಅವನಿಗೆ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ!’ ಎಂದರು.
26 ಯುಷ್ಮಾನಹಂ ವದಾಮಿ ಯಸ್ಯಾಶ್ರಯೇ ವದ್ಧತೇ ಽಧಿಕಂ ತಸ್ಮೈ ದಾಯಿಷ್ಯತೇ, ಕಿನ್ತು ಯಸ್ಯಾಶ್ರಯೇ ನ ವರ್ದ್ಧತೇ ತಸ್ಯ ಯದ್ಯದಸ್ತಿ ತದಪಿ ತಸ್ಮಾನ್ ನಾಯಿಷ್ಯತೇ|
“ಆಗ ಯಜಮಾನನು, ‘ಇದ್ದ ಪ್ರತಿಯೊಬ್ಬರಿಗೆ ಕೊಡಲಾಗುವುದು ಮತ್ತು ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ಕಸಿದುಕೊಳ್ಳಲಾಗುವುದು.
27 ಕಿನ್ತು ಮಮಾಧಿಪತಿತ್ವಸ್ಯ ವಶತ್ವೇ ಸ್ಥಾತುಮ್ ಅಸಮ್ಮನ್ಯಮಾನಾ ಯೇ ಮಮ ರಿಪವಸ್ತಾನಾನೀಯ ಮಮ ಸಮಕ್ಷಂ ಸಂಹರತ|
ಆದರೆ ತಮ್ಮ ಮೇಲೆ ನಾನು ಆಳಿಕೆ ಮಾಡುವುದನ್ನು ಇಷ್ಟಪಡದ ಆ ನನ್ನ ವಿರೋಧಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ,’ ಎಂದನು.”
28 ಇತ್ಯುಪದೇಶಕಥಾಂ ಕಥಯಿತ್ವಾ ಸೋಗ್ರಗಃ ಸನ್ ಯಿರೂಶಾಲಮಪುರಂ ಯಯೌ|
ಯೇಸು ಹೀಗೆ ಹೇಳಿದ ತರುವಾಯ, ಶಿಷ್ಯರಿಗೆ ಮುಂದಾಗಿ, ಯೆರೂಸಲೇಮಿಗೆ ಹೊರಟರು.
29 ತತೋ ಬೈತ್ಫಗೀಬೈಥನೀಯಾಗ್ರಾಮಯೋಃ ಸಮೀಪೇ ಜೈತುನಾದ್ರೇರನ್ತಿಕಮ್ ಇತ್ವಾ ಶಿಷ್ಯದ್ವಯಮ್ ಇತ್ಯುಕ್ತ್ವಾ ಪ್ರೇಷಯಾಮಾಸ,
ಇದಾದ ಮೇಲೆ ಅವರು ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ, ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು,
30 ಯುವಾಮಮುಂ ಸಮ್ಮುಖಸ್ಥಗ್ರಾಮಂ ಪ್ರವಿಶ್ಯೈವ ಯಂ ಕೋಪಿ ಮಾನುಷಃ ಕದಾಪಿ ನಾರೋಹತ್ ತಂ ಗರ್ದ್ದಭಶಾವಕಂ ಬದ್ಧಂ ದ್ರಕ್ಷ್ಯಥಸ್ತಂ ಮೋಚಯಿತ್ವಾನಯತಂ|
“ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ, ನೀವು ಅದರೊಳಗೆ ಪ್ರವೇಶಿಸುತ್ತಿರುವಾಗ, ಅಲ್ಲಿ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ.
31 ತತ್ರ ಕುತೋ ಮೋಚಯಥಃ? ಇತಿ ಚೇತ್ ಕೋಪಿ ವಕ್ಷ್ಯತಿ ತರ್ಹಿ ವಕ್ಷ್ಯಥಃ ಪ್ರಭೇರತ್ರ ಪ್ರಯೋಜನಮ್ ಆಸ್ತೇ|
ಯಾರಾದರೂ ನಿಮಗೆ, ‘ಏಕೆ ಅದನ್ನು ಬಿಚ್ಚುತ್ತೀರಿ?’ ಎಂದು ಕೇಳಿದರೆ, ನೀವು ಅವರಿಗೆ, ‘ಇದು ಕರ್ತದೇವರಿಗೆ ಬೇಕಾಗಿದೆ,’ ಎಂದು ಹೇಳಿರಿ,” ಎಂದರು.
32 ತದಾ ತೌ ಪ್ರರಿತೌ ಗತ್ವಾ ತತ್ಕಥಾನುಸಾರೇಣ ಸರ್ವ್ವಂ ಪ್ರಾಪ್ತೌ|
ಆ ಶಿಷ್ಯರಿಬ್ಬರೂ ತಮ್ಮ ಮಾರ್ಗವಾಗಿ ಹೊರಟುಹೋಗಿ ಯೇಸು ತಮಗೆ ಹೇಳಿದಂತೆಯೇ ಕಂಡರು.
33 ಗರ್ದಭಶಾವಕಮೋಚನಕಾಲೇ ತತ್ವಾಮಿನ ಊಚುಃ, ಗರ್ದಭಶಾವಕಂ ಕುತೋ ಮೋಚಯಥಃ?
ಅವರು ಆ ಕತ್ತೆಮರಿಯನ್ನು ಬಿಚ್ಚುತ್ತಿರುವಾಗ, ಅದರ ಯಜಮಾನರು ಅವರಿಗೆ, “ನೀವು ಕತ್ತೆಮರಿಯನ್ನು ಯಾಕೆ ಬಿಚ್ಚುತ್ತೀರಿ?” ಎಂದು ಕೇಳಿದ್ದಕ್ಕೆ,
34 ತಾವೂಚತುಃ ಪ್ರಭೋರತ್ರ ಪ್ರಯೋಜನಮ್ ಆಸ್ತೇ|
ಅವರು, “ಇದು ಕರ್ತದೇವರಿಗೆ ಬೇಕಾಗಿದೆ,” ಎಂದರು.
35 ಪಶ್ಚಾತ್ ತೌ ತಂ ಗರ್ದಭಶಾವಕಂ ಯೀಶೋರನ್ತಿಕಮಾನೀಯ ತತ್ಪೃಷ್ಠೇ ನಿಜವಸನಾನಿ ಪಾತಯಿತ್ವಾ ತದುಪರಿ ಯೀಶುಮಾರೋಹಯಾಮಾಸತುಃ|
ಶಿಷ್ಯರು ಅದನ್ನು ಯೇಸುವಿನ ಬಳಿಗೆ ತಂದು, ತಮ್ಮ ಬಟ್ಟೆಗಳನ್ನು ಕತ್ತೆಮರಿಯ ಮೇಲೆ ಹಾಕಿ, ಅದರ ಮೇಲೆ ಯೇಸುವನ್ನು ಕೂರಿಸಿದರು.
36 ಅಥ ಯಾತ್ರಾಕಾಲೇ ಲೋಕಾಃ ಪಥಿ ಸ್ವವಸ್ತ್ರಾಣಿ ಪಾತಯಿತುಮ್ ಆರೇಭಿರೇ|
ಯೇಸು ಹೋಗುತ್ತಿರುವಾಗ, ಜನರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.
37 ಅಪರಂ ಜೈತುನಾದ್ರೇರುಪತ್ಯಕಾಮ್ ಇತ್ವಾ ಶಿಷ್ಯಸಂಘಃ ಪೂರ್ವ್ವದೃಷ್ಟಾನಿ ಮಹಾಕರ್ಮ್ಮಾಣಿ ಸ್ಮೃತ್ವಾ,
ಇದಲ್ಲದೆ ಯೇಸು ಓಲಿವ್ ಗುಡ್ಡದಿಂದ ಇಳಿಜಾರನ್ನು ಸಮೀಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ಕಂಡ ಎಲ್ಲ ಮಹತ್ಕಾರ್ಯಗಳಿಗಾಗಿ ಸಂತೋಷಪಡುತ್ತಾ, ಮಹಾ ಸ್ವರದಿಂದ ದೇವರನ್ನು ಹೀಗೆ ಕೊಂಡಾಡಲಾರಂಭಿಸಿದರು:
38 ಯೋ ರಾಜಾ ಪ್ರಭೋ ರ್ನಾಮ್ನಾಯಾತಿ ಸ ಧನ್ಯಃ ಸ್ವರ್ಗೇ ಕುಶಲಂ ಸರ್ವ್ವೋಚ್ಚೇ ಜಯಧ್ವನಿ ರ್ಭವತು, ಕಥಾಮೇತಾಂ ಕಥಯಿತ್ವಾ ಸಾನನ್ದಮ್ ಉಚೈರೀಶ್ವರಂ ಧನ್ಯಂ ವಕ್ತುಮಾರೇಭೇ|
“ಕರ್ತದೇವರ ಹೆಸರಿನಲ್ಲಿ ಬರುವ ಅರಸನು ಆಶೀರ್ವಾದ ಹೊಂದಲಿ!” “ಪರಲೋಕದಲ್ಲಿ ಸಮಾಧಾನ, ಅತ್ಯುನ್ನತದಲ್ಲಿ ಮಹಿಮೆ!”
39 ತದಾ ಲೋಕಾರಣ್ಯಮಧ್ಯಸ್ಥಾಃ ಕಿಯನ್ತಃ ಫಿರೂಶಿನಸ್ತತ್ ಶ್ರುತ್ವಾ ಯೀಶುಂ ಪ್ರೋಚುಃ, ಹೇ ಉಪದೇಶಕ ಸ್ವಶಿಷ್ಯಾನ್ ತರ್ಜಯ|
ಜನಸಮೂಹದಲ್ಲಿದ್ದ ಕೆಲವು ಫರಿಸಾಯರು ಯೇಸುವಿಗೆ, “ಬೋಧಕರೇ, ನಿಮ್ಮ ಶಿಷ್ಯರನ್ನು ಗದರಿಸಿ!” ಎಂದರು.
40 ಸ ಉವಾಚ, ಯುಷ್ಮಾನಹಂ ವದಾಮಿ ಯದ್ಯಮೀ ನೀರವಾಸ್ತಿಷ್ಠನ್ತಿ ತರ್ಹಿ ಪಾಷಾಣಾ ಉಚೈಃ ಕಥಾಃ ಕಥಯಿಷ್ಯನ್ತಿ|
ಆಗ ಯೇಸು ಅವರಿಗೆ, “ಇವರು ಸುಮ್ಮನಾದರೆ, ಈ ಕಲ್ಲುಗಳು ಕೂಗುವವು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
41 ಪಶ್ಚಾತ್ ತತ್ಪುರಾನ್ತಿಕಮೇತ್ಯ ತದವಲೋಕ್ಯ ಸಾಶ್ರುಪಾತಂ ಜಗಾದ,
ತರುವಾಯ ಯೇಸು ಯೆರೂಸಲೇಮ ಪಟ್ಟಣವನ್ನೂ ಅದರ ಸ್ಥಿತಿಯನ್ನೂ ಕಂಡು, ಅದರ ಸಲುವಾಗಿ ಅತ್ತು,
42 ಹಾ ಹಾ ಚೇತ್ ತ್ವಮಗ್ರೇಽಜ್ಞಾಸ್ಯಥಾಃ, ತವಾಸ್ಮಿನ್ನೇವ ದಿನೇ ವಾ ಯದಿ ಸ್ವಮಙ್ಗಲಮ್ ಉಪಾಲಪ್ಸ್ಯಥಾಃ, ತರ್ಹ್ಯುತ್ತಮಮ್ ಅಭವಿಷ್ಯತ್, ಕಿನ್ತು ಕ್ಷಣೇಸ್ಮಿನ್ ತತ್ತವ ದೃಷ್ಟೇರಗೋಚರಮ್ ಭವತಿ|
“ನೀನು ಇಂದಾದರೂ ನಿನ್ನ ಸಮಾಧಾನದ ವಿಷಯಗಳನ್ನು ಅರಿತುಕೊಂಡಿದ್ದರೆ, ಚೆನ್ನಾಗಿತ್ತು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ.
43 ತ್ವಂ ಸ್ವತ್ರಾಣಕಾಲೇ ನ ಮನೋ ನ್ಯಧತ್ಥಾ ಇತಿ ಹೇತೋ ರ್ಯತ್ಕಾಲೇ ತವ ರಿಪವಸ್ತ್ವಾಂ ಚತುರ್ದಿಕ್ಷು ಪ್ರಾಚೀರೇಣ ವೇಷ್ಟಯಿತ್ವಾ ರೋತ್ಸ್ಯನ್ತಿ
ನಿನ್ನ ಶತ್ರುಗಳು ನಿನ್ನ ಸುತ್ತಲೂ ಅಡ್ಡಗೋಡೆಯನ್ನು ಕಟ್ಟಿ, ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಬಂಧಿಸುವ ದಿನಗಳು ಬರುವವು.
44 ಬಾಲಕೈಃ ಸಾರ್ದ್ಧಂ ಭೂಮಿಸಾತ್ ಕರಿಷ್ಯನ್ತಿ ಚ ತ್ವನ್ಮಧ್ಯೇ ಪಾಷಾಣೈಕೋಪಿ ಪಾಷಾಣೋಪರಿ ನ ಸ್ಥಾಸ್ಯತಿ ಚ, ಕಾಲ ಈದೃಶ ಉಪಸ್ಥಾಸ್ಯತಿ|
ಇದಲ್ಲದೆ ಅವರು ಗೋಡೆಯೊಳಗಿನ ನಿನ್ನನ್ನೂ ನಿನ್ನ ಮಕ್ಕಳನ್ನೂ ನೆಲಕ್ಕೆ ಬಡಿಯುವರು. ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ ದೇವರು ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲ,” ಎಂದರು.
45 ಅಥ ಮಧ್ಯೇಮನ್ದಿರಂ ಪ್ರವಿಶ್ಯ ತತ್ರತ್ಯಾನ್ ಕ್ರಯಿವಿಕ್ರಯಿಣೋ ಬಹಿಷ್ಕುರ್ವ್ವನ್
ಅನಂತರ ಯೇಸು ದೇವಾಲಯದ ಅಂಗಳದೊಳಗೆ ಹೋಗಿ, ಅದರಲ್ಲಿ ವ್ಯಾಪಾರಮಾಡುವವರನ್ನು ಹೊರಗೆ ಹಾಕುವುದಕ್ಕೆ ಪ್ರಾರಂಭಿಸಿ,
46 ಅವದತ್ ಮದ್ಗೃಹಂ ಪ್ರಾರ್ಥನಾಗೃಹಮಿತಿ ಲಿಪಿರಾಸ್ತೇ ಕಿನ್ತು ಯೂಯಂ ತದೇವ ಚೈರಾಣಾಂ ಗಹ್ವರಂ ಕುರುಥ|
ಅವರಿಗೆ, “‘ನನ್ನ ಮನೆಯು ಪ್ರಾರ್ಥನೆಯ ಮನೆಯಾಗಿದೆ,’ ಎಂದು ಬರೆದದೆ. ನೀವೋ ಅದನ್ನು, ‘ಕಳ್ಳರ ಗವಿಯನ್ನಾಗಿ’ ಮಾಡಿದ್ದೀರಿ,” ಎಂದರು.
47 ಪಶ್ಚಾತ್ ಸ ಪ್ರತ್ಯಹಂ ಮಧ್ಯೇಮನ್ದಿರಮ್ ಉಪದಿದೇಶ; ತತಃ ಪ್ರಧಾನಯಾಜಕಾ ಅಧ್ಯಾಪಕಾಃ ಪ್ರಾಚೀನಾಶ್ಚ ತಂ ನಾಶಯಿತುಂ ಚಿಚೇಷ್ಟಿರೇ;
ಯೇಸು ಪ್ರತಿದಿನವೂ ದೇವಾಲಯದಲ್ಲಿ ಬೋಧಿಸುತ್ತಿದ್ದರು. ಆದರೆ ಮುಖ್ಯಯಾಜಕರೂ ನಿಯಮ ಬೋಧಕರೂ ಜನರ ಪ್ರಮುಖರೂ ಯೇಸುವನ್ನು ಕೊಲ್ಲುವುದಕ್ಕೆ ಹವಣಿಸುತ್ತಿದ್ದರು.
48 ಕಿನ್ತು ತದುಪದೇಶೇ ಸರ್ವ್ವೇ ಲೋಕಾ ನಿವಿಷ್ಟಚಿತ್ತಾಃ ಸ್ಥಿತಾಸ್ತಸ್ಮಾತ್ ತೇ ತತ್ಕರ್ತ್ತುಂ ನಾವಕಾಶಂ ಪ್ರಾಪುಃ|
ಜನರೆಲ್ಲರೂ ಯೇಸು ಹೇಳುವ ಒಂದೊಂದು ಮಾತಿಗೂ ಬಹಳ ಲಕ್ಷ್ಯಕೊಟ್ಟು ಯೇಸುವಿನ ಉಪದೇಶವನ್ನು ಕೇಳುತ್ತಿದ್ದುದರಿಂದ, ಅವರಿಗೆ ಏನು ಮಾಡಬೇಕೋ ತೋಚಲಿಲ್ಲ.

< ಲೂಕಃ 19 >