< લૂકઃ 18 >

1 અપરઞ્ચ લોકૈરક્લાન્તૈ ર્નિરન્તરં પ્રાર્થયિતવ્યમ્ ઇત્યાશયેન યીશુના દૃષ્ટાન્ત એકઃ કથિતઃ|
ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತಮ್ಮ ಶಿಷ್ಯರಿಗೆ ಒಂದು ಸಾಮ್ಯವನ್ನು ಹೇಳಿದರು.
2 કુત્રચિન્નગરે કશ્ચિત્ પ્રાડ્વિવાક આસીત્ સ ઈશ્વરાન્નાબિભેત્ માનુષાંશ્ચ નામન્યત|
“ಒಂದು ಪಟ್ಟಣದಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೂ ಭಯಪಡುತ್ತಿರಲಿಲ್ಲ ಮನುಷ್ಯರಿಗೂ ಲಕ್ಷ್ಯಕೊಡುತ್ತಿರಲಿಲ್ಲ.
3 અથ તત્પુરવાસિની કાચિદ્વિધવા તત્સમીપમેત્ય વિવાદિના સહ મમ વિવાદં પરિષ્કુર્વ્વિતિ નિવેદયામાસ|
ಅದೇ ಪಟ್ಟಣದಲ್ಲಿ ಒಬ್ಬ ವಿಧವೆಯಿದ್ದಳು. ಆಕೆ ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿಯ ಎದುರಾಗಿ ನನಗೆ ನ್ಯಾಯ ದೊರಕಿಸಿಕೊಡು,’ ಎಂದು ಕೇಳಿಕೊಳ್ಳುತ್ತಿದ್ದಳು.
4 તતઃ સ પ્રાડ્વિવાકઃ કિયદ્દિનાનિ ન તદઙ્ગીકૃતવાન્ પશ્ચાચ્ચિત્તે ચિન્તયામાસ, યદ્યપીશ્વરાન્ન બિભેમિ મનુષ્યાનપિ ન મન્યે
“ಅವನು ಸ್ವಲ್ಪಕಾಲ ಆಕೆಗೆ ಗಮನಕೊಡಲಿಲ್ಲ. ತರುವಾಯ ಅವನು ತನ್ನೊಳಗೆ, ‘ನಾನು ದೇವರಿಗೆ ಭಯಪಡುವುದಿಲ್ಲ ಹಾಗೂ ಮನುಷ್ಯರಿಗೂ ಲಕ್ಷ್ಯಕೊಡುವುದಿಲ್ಲ,
5 તથાપ્યેષા વિધવા માં ક્લિશ્નાતિ તસ્માદસ્યા વિવાદં પરિષ્કરિષ્યામિ નોચેત્ સા સદાગત્ય માં વ્યગ્રં કરિષ્યતિ|
ಆದರೂ ಈ ವಿಧವೆಯು ನನಗೆ ತೊಂದರೆಕೊಟ್ಟು ಪದೇಪದೇ ನನ್ನ ಬಳಿಗೆ ಬಂದು, ನನ್ನನ್ನು ಕಾಡಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು,’” ಎಂದುಕೊಂಡನು.
6 પશ્ચાત્ પ્રભુરવદદ્ અસાવન્યાયપ્રાડ્વિવાકો યદાહ તત્ર મનો નિધધ્વં|
ಅನಂತರ ಕರ್ತದೇವರು, “ಈ ಅನ್ಯಾಯಗಾರನಾದ ನ್ಯಾಯಾಧಿಪತಿಯು ಹೇಳಿಕೊಂಡಿದ್ದನ್ನು ಕೇಳಿರಿ.
7 ઈશ્વરસ્ય યે ઽભિરુચિતલોકા દિવાનિશં પ્રાર્થયન્તે સ બહુદિનાનિ વિલમ્બ્યાપિ તેષાં વિવાદાન્ કિં ન પરિષ્કરિષ્યતિ?
ದೇವರಾದುಕೊಂಡವರು ದೇವರಿಗೆ ಹಗಲುರಾತ್ರಿ ಮೊರೆಯಿಡುವಾಗ, ದೇವರು ಅವರ ವಿಷಯದಲ್ಲಿ ಅವರಿಗೆ ನ್ಯಾಯವನ್ನು ಕೊಡದೆ ಇರುವರೋ? ದೇವರು ನ್ಯಾಯ ಕೊಡಲು ತಡಮಾಡುವರೋ?
8 યુષ્માનહં વદામિ ત્વરયા પરિષ્કરિષ્યતિ, કિન્તુ યદા મનુષ્યપુત્ર આગમિષ્યતિ તદા પૃથિવ્યાં કિમીદૃશં વિશ્વાસં પ્રાપ્સ્યતિ?
ದೇವರು ಬೇಗನೇ ಅವರಿಗೆ ನ್ಯಾಯತೀರಿಸುವರೆಂದು, ನಾನು ನಿಮಗೆ ಹೇಳುತ್ತೇನೆ. ಆದರೂ, ಮನುಷ್ಯಪುತ್ರನಾದ ನಾನು ಬಂದಾಗ ಭೂಮಿಯ ಮೇಲೆ ವಿಶ್ವಾಸವನ್ನು ಕಾಣುವೆನೋ?” ಎಂದರು.
9 યે સ્વાન્ ધાર્મ્મિકાન્ જ્ઞાત્વા પરાન્ તુચ્છીકુર્વ્વન્તિ એતાદૃગ્ભ્યઃ, કિયદ્ભ્ય ઇમં દૃષ્ટાન્તં કથયામાસ|
ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸೆಯನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ, ಯೇಸು ಈ ಸಾಮ್ಯವನ್ನು ಹೇಳಿದರು:
10 એકઃ ફિરૂશ્યપરઃ કરસઞ્ચાયી દ્વાવિમૌ પ્રાર્થયિતું મન્દિરં ગતૌ|
“ಇಬ್ಬರು ಪ್ರಾರ್ಥನೆಮಾಡುವುದಕ್ಕೆ ದೇವಾಲಯಕ್ಕೆ ಹೋದರು. ಅವರಲ್ಲಿ ಒಬ್ಬನು ಫರಿಸಾಯನು ಮತ್ತೊಬ್ಬನು ಸುಂಕದವನು.
11 તતોઽસૌ ફિરૂશ્યેકપાર્શ્વે તિષ્ઠન્ હે ઈશ્વર અહમન્યલોકવત્ લોઠયિતાન્યાયી પારદારિકશ્ચ ન ભવામિ અસ્ય કરસઞ્ચાયિનસ્તુલ્યશ્ચ ન, તસ્માત્ત્વાં ધન્યં વદામિ|
ಫರಿಸಾಯನು ನಿಂತುಕೊಂಡು: ‘ದೇವರೇ, ಸುಲಿಗೆ ಮಾಡುವವರು, ಅನೀತಿವಂತರು, ವ್ಯಭಿಚಾರಿಗಳು ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ನಾನಲ್ಲ. ಆದ್ದರಿಂದ ನಾನು ನಿನಗೆ ಸ್ತೋತ್ರ ಮಾಡುತ್ತೇನೆ.
12 સપ્તસુ દિનેષુ દિનદ્વયમુપવસામિ સર્વ્વસમ્પત્તે ર્દશમાંશં દદામિ ચ, એતત્કથાં કથયન્ પ્રાર્થયામાસ|
ನಾನು ವಾರಕ್ಕೆ ಎರಡು ಸಾರಿ ಉಪವಾಸ ಮಾಡುತ್ತೇನೆ. ನನಗಿರುವ ಎಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ,’ ಎಂದು ಹೇಳಿ ತನಗೆ ತಾನೇ ಪ್ರಾರ್ಥಿಸಿದನು.
13 કિન્તુ સ કરસઞ્ચાયિ દૂરે તિષ્ઠન્ સ્વર્ગં દ્રષ્ટું નેચ્છન્ વક્ષસિ કરાઘાતં કુર્વ્વન્ હે ઈશ્વર પાપિષ્ઠં માં દયસ્વ, ઇત્થં પ્રાર્થયામાસ|
“ಆದರೆ ಸುಂಕದವನು ದೂರದಲ್ಲಿ ನಿಂತು, ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಧೈರ್ಯಗೊಳ್ಳದೇ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ, ‘ದೇವರೇ ಪಾಪಿಯಾದವನು ನಾನೇ ನನ್ನನ್ನು ಕರುಣಿಸು,’ ಎಂದು ಪ್ರಾರ್ಥಿಸಿದನು.
14 યુષ્માનહં વદામિ, તયોર્દ્વયો ર્મધ્યે કેવલઃ કરસઞ્ચાયી પુણ્યવત્ત્વેન ગણિતો નિજગૃહં જગામ, યતો યઃ કશ્ચિત્ સ્વમુન્નમયતિ સ નામયિષ્યતે કિન્તુ યઃ કશ્ચિત્ સ્વં નમયતિ સ ઉન્નમયિષ્યતે|
“ನಾನು ನಿಮಗೆ ಹೇಳುತ್ತೇನೆ, ಅವನಲ್ಲ, ಇವನೇ ನೀತಿವಂತನೆಂಬ ನಿರ್ಣಯ ಪಡೆದವನಾಗಿ ತನ್ನ ಮನೆಗೆ ಹೋದನು. ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು,” ಎಂದರು.
15 અથ શિશૂનાં ગાત્રસ્પર્શાર્થં લોકાસ્તાન્ તસ્ય સમીપમાનિન્યુઃ શિષ્યાસ્તદ્ દૃષ્ટ્વાનેતૃન્ તર્જયામાસુઃ,
ಚಿಕ್ಕಮಕ್ಕಳನ್ನು ಯೇಸು ಮುಟ್ಟುವಂತೆ ಕೆಲವರು ಚಿಕ್ಕಮಕ್ಕಳನ್ನು ಅವರ ಬಳಿಗೆ ತಂದರು ಆಗ ಅವರ ಶಿಷ್ಯರು ಇದನ್ನು ಕಂಡು, ಜನರನ್ನು ಗದರಿಸಿದರು.
16 કિન્તુ યીશુસ્તાનાહૂય જગાદ, મન્નિકટમ્ આગન્તું શિશૂન્ અનુજાનીધ્વં તાંશ્ચ મા વારયત; યત ઈશ્વરરાજ્યાધિકારિણ એષાં સદૃશાઃ|
ಆದರೆ ಯೇಸುವೋ ಚಿಕ್ಕಮಕ್ಕಳನ್ನು ತಮ್ಮ ಹತ್ತಿರಕ್ಕೆ ಆಹ್ವಾನಿಸಿ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ. ಅವುಗಳಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಇಂಥವರದೇ.
17 અહં યુષ્માન્ યથાર્થં વદામિ, યો જનઃ શિશોઃ સદૃશો ભૂત્વા ઈશ્વરરાજ્યં ન ગૃહ્લાતિ સ કેનાપિ પ્રકારેણ તત્ પ્રવેષ્ટું ન શક્નોતિ|
ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾರಾದರೂ ಚಿಕ್ಕಮಗುವಿನಂತೆ ದೇವರ ರಾಜ್ಯವನ್ನು ಸ್ವೀಕರಿಸದಿದ್ದರೆ, ಅವರು ಅದರೊಳಗೆ ಸೇರುವುದೇ ಇಲ್ಲ,” ಎಂದರು.
18 અપરમ્ એકોધિપતિસ્તં પપ્રચ્છ, હે પરમગુરો, અનન્તાયુષઃ પ્રાપ્તયે મયા કિં કર્ત્તવ્યં? (aiōnios g166)
ಒಬ್ಬ ಅಧಿಕಾರಿಯು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು. (aiōnios g166)
19 યીશુરુવાચ, માં કુતઃ પરમં વદસિ? ઈશ્વરં વિના કોપિ પરમો ન ભવતિ|
ಅದಕ್ಕೆ ಯೇಸು ಅವನಿಗೆ, “ನೀನು ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತಿ? ದೇವರೊಬ್ಬರೇ ಹೊರತು ಬೇರೆ ಯಾರೂ ಒಳ್ಳೆಯವರಲ್ಲ.
20 પરદારાન્ મા ગચ્છ, નરં મા જહિ, મા ચોરય, મિથ્યાસાક્ષ્યં મા દેહિ, માતરં પિતરઞ્ચ સંમન્યસ્વ, એતા યા આજ્ઞાઃ સન્તિ તાસ્ત્વં જાનાસિ|
‘ವ್ಯಭಿಚಾರ ಮಾಡಬಾರದು, ನರಹತ್ಯೆ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,’ ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆಯಲ್ಲಾ,” ಎಂದರು.
21 તદા સ ઉવાચ, બાલ્યકાલાત્ સર્વ્વા એતા આચરામિ|
ಅದಕ್ಕವನು, “ನನ್ನ ಬಾಲ್ಯದಿಂದಲೇ ನಾನು ಇವೆಲ್ಲವನ್ನೂ ಕೈಕೊಂಡಿದ್ದೇನೆ,” ಎಂದು ಹೇಳಿದನು.
22 ઇતિ કથાં શ્રુત્વા યીશુસ્તમવદત્, તથાપિ તવૈકં કર્મ્મ ન્યૂનમાસ્તે, નિજં સર્વ્વસ્વં વિક્રીય દરિદ્રેભ્યો વિતર, તસ્માત્ સ્વર્ગે ધનં પ્રાપ્સ્યસિ; તત આગત્ય મમાનુગામી ભવ|
ಯೇಸು ಇವುಗಳನ್ನು ಕೇಳಿ ಅವನಿಗೆ, “ಆದರೂ ನಿನಗೆ ಒಂದು ಕೊರತೆ ಇದೆ. ನೀನು ಹೋಗಿ ನಿನಗೆ ಇರುವುದೆಲ್ಲವನ್ನು ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.
23 કિન્ત્વેતાં કથાં શ્રુત્વા સોધિપતિઃ શુશોચ, યતસ્તસ્ય બહુધનમાસીત્|
ಅವನು ಇದನ್ನು ಕೇಳಿ, ಬಹಳ ದುಃಖವುಳ್ಳವನಾದನು. ಏಕೆಂದರೆ ಅವನು ಬಹಳ ಸಿರಿವಂತನಾಗಿದ್ದನು.
24 તદા યીશુસ્તમતિશોકાન્વિતં દૃષ્ટ્વા જગાદ, ધનવતામ્ ઈશ્વરરાજ્યપ્રવેશઃ કીદૃગ્ દુષ્કરઃ|
ಅವನು ಬಹಳ ವ್ಯಥೆಗೊಂಡದ್ದನ್ನು ಯೇಸು ಕಂಡು, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ!
25 ઈશ્વરરાજ્યે ધનિનઃ પ્રવેશાત્ સૂચેશ્છિદ્રેણ મહાઙ્ગસ્ય ગમનાગમને સુકરે|
ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ,” ಎಂದು ಹೇಳಿದರು.
26 શ્રોતારઃ પપ્રચ્છુસ્તર્હિ કેન પરિત્રાણં પ્રાપ્સ્યતે?
ಇದನ್ನು ಕೇಳಿದವರು, “ಹಾಗಾದರೆ ಯಾರು ರಕ್ಷಣೆ ಹೊಂದುವವರು?” ಎಂದರು.
27 સ ઉક્તવાન્, યન્ માનુષેણાશક્યં તદ્ ઈશ્વરેણ શક્યં|
ಅದಕ್ಕೆ ಯೇಸು, “ಮನುಷ್ಯರಿಗೆ ಅಸಾಧ್ಯವಾದವುಗಳು ದೇವರಿಗೆ ಸಾಧ್ಯವಾಗಿವೆ,” ಎಂದು ಹೇಳಿದರು.
28 તદા પિતર ઉવાચ, પશ્ય વયં સર્વ્વસ્વં પરિત્યજ્ય તવ પશ્ચાદ્ગામિનોઽભવામ|
ಆಗ ಪೇತ್ರನು, “ಇಗೋ, ನಾವು ಎಲ್ಲವನ್ನೂ ಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು.
29 તતઃ સ ઉવાચ, યુષ્માનહં યથાર્થં વદામિ, ઈશ્વરરાજ્યાર્થં ગૃહં પિતરૌ ભ્રાતૃગણં જાયાં સન્તાનાંશ્ચ ત્યક્તવા
ಯೇಸು ಅವರಿಗೆ, “ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಮನೆಯನ್ನಾದರೂ ಹೆಂಡತಿಯನ್ನಾದರೂ ಸಹೋದರರನ್ನಾದರೂ ತಂದೆತಾಯಿಗಳನ್ನಾದರೂ ಮಕ್ಕಳನ್ನಾದರೂ ದೇವರ ರಾಜ್ಯಕ್ಕೋಸ್ಕರ ಬಿಟ್ಟುಬಿಡುವವನು,
30 ઇહ કાલે તતોઽધિકં પરકાલે ઽનન્તાયુશ્ચ ન પ્રાપ્સ્યતિ લોક ઈદૃશઃ કોપિ નાસ્તિ| (aiōn g165, aiōnios g166)
ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಕಾಲದಲ್ಲಿ ನಿತ್ಯಜೀವವನ್ನೂ ಹೊಂದುವನು,” ಎಂದರು. (aiōn g165, aiōnios g166)
31 અનન્તરં સ દ્વાદશશિષ્યાનાહૂય બભાષે, પશ્યત વયં યિરૂશાલમ્નગરં યામઃ, તસ્માત્ મનુષ્યપુત્રે ભવિષ્યદ્વાદિભિરુક્તં યદસ્તિ તદનુરૂપં તં પ્રતિ ઘટિષ્યતે;
ಯೇಸು ಹನ್ನೆರಡು ಮಂದಿಯನ್ನು ಹತ್ತಿರಕ್ಕೆ ಕರೆದು ಅವರಿಗೆ, “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ, ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಪ್ರವಾದಿಗಳಿಂದ ಬರೆದಿರುವುದೆಲ್ಲವೂ ನೆರವೇರಬೇಕು.
32 વસ્તુતસ્તુ સોઽન્યદેશીયાનાં હસ્તેષુ સમર્પયિષ્યતે, તે તમુપહસિષ્યન્તિ, અન્યાયમાચરિષ્યન્તિ તદ્વપુષિ નિષ્ઠીવં નિક્ષેપ્સ્યન્તિ, કશાભિઃ પ્રહૃત્ય તં હનિષ્યન્તિ ચ,
ನಾನು ಯೆಹೂದ್ಯರಲ್ಲದವರ ಕೈಗೆ ಸೆರೆಯಾಗುವೆನು. ಅವರು ನನ್ನನ್ನು ಹಾಸ್ಯಮಾಡಿ, ನನಗೆ ಅವಮಾನ ಮಾಡಿ, ನನ್ನ ಮೇಲೆ ಉಗುಳುವರು.
33 કિન્તુ તૃતીયદિને સ શ્મશાનાદ્ ઉત્થાસ્યતિ|
ಇದಲ್ಲದೆ ಅವರು ನನ್ನನ್ನು ಕೊರಡೆಗಳಿಂದ ಹೊಡೆದು, ಕೊಂದುಹಾಕುವರು. ಆದರೆ ನಾನು ಮೂರನೆಯ ದಿನ ಜೀವಿತನಾಗಿ ಎದ್ದು ಬರುವೆನು,” ಎಂದರು.
34 એતસ્યાઃ કથાયા અભિપ્રાયં કિઞ્ચિદપિ તે બોદ્ધું ન શેકુઃ તેષાં નિકટેઽસ્પષ્ટતવાત્ તસ્યૈતાસાં કથાનામ્ આશયં તે જ્ઞાતું ન શેકુશ્ચ|
ಆದರೆ ಶಿಷ್ಯರಿಗೆ ಇವುಗಳಲ್ಲಿ ಒಂದೂ ಅರ್ಥವಾಗಲಿಲ್ಲ. ಈ ಮಾತುಗಳು ಅವರಿಗೆ ಮರೆಯಾಗಿದ್ದುದರಿಂದ, ಯೇಸು ಹೇಳಿದವುಗಳನ್ನು ಅವರು ತಿಳಿದುಕೊಳ್ಳಲಿಲ್ಲ.
35 અથ તસ્મિન્ યિરીહોઃ પુરસ્યાન્તિકં પ્રાપ્તે કશ્ચિદન્ધઃ પથઃ પાર્શ્વ ઉપવિશ્ય ભિક્ષામ્ અકરોત્
ಯೇಸು ಯೆರಿಕೋವಿನ ಸಮೀಪಕ್ಕೆ ಬಂದಾಗ, ಒಬ್ಬ ಕುರುಡನು ದಾರಿಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು.
36 સ લોકસમૂહસ્ય ગમનશબ્દં શ્રુત્વા તત્કારણં પૃષ્ટવાન્|
ಜನಸಮೂಹವು ಹಾದು ಹೋಗುವುದನ್ನು ಇವನು ಕೇಳಿಸಿಕೊಂಡು, ಅದೇನೆಂದು ವಿಚಾರಿಸಿದನು.
37 નાસરતીયયીશુર્યાતીતિ લોકૈરુક્તે સ ઉચ્ચૈર્વક્તુમારેભે,
“ನಜರೇತಿನ ಯೇಸು ಹಾದು ಹೋಗುತ್ತಿದ್ದಾರೆ,” ಎಂದು ಜನರು ಅವನಿಗೆ ಹೇಳಿದರು.
38 હે દાયૂદઃ સન્તાન યીશો માં દયસ્વ|
ಆಗ ಅವನು, “ಯೇಸುವೇ, ದಾವೀದನ ಪುತ್ರನೇ, ನನ್ನನ್ನು ಕರುಣಿಸಿ!” ಎಂದು ಗಟ್ಟಿಯಾಗಿ ಕೂಗಿಕೊಂಡನು.
39 તતોગ્રગામિનસ્તં મૌની તિષ્ઠેતિ તર્જયામાસુઃ કિન્તુ સ પુનારુવન્ ઉવાચ, હે દાયૂદઃ સન્તાન માં દયસ્વ|
ಮುಂದೆ ಹೋಗುತ್ತಿದ್ದವರು ಸುಮ್ಮನಿರುವಂತೆ ಅವನನ್ನು ಗದರಿಸಿದರು, ಆದರೂ ಅವನು, “ದಾವೀದನ ಪುತ್ರರೇ, ನನ್ನನ್ನು ಕರುಣಿಸಿ,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡನು.
40 તદા યીશુઃ સ્થગિતો ભૂત્વા સ્વાન્તિકે તમાનેતુમ્ આદિદેશ|
ಆಗ ಯೇಸು ನಿಂತು ಅವನನ್ನು ತಮ್ಮ ಬಳಿಗೆ ಕರೆತರುವಂತೆ ಅಪ್ಪಣೆಕೊಟ್ಟರು. ಅವನು ಯೇಸುವಿನ ಬಳಿಗೆ ಬಂದಾಗ, ಅವರು ಅವನಿಗೆ,
41 તતઃ સ તસ્યાન્તિકમ્ આગમત્, તદા સ તં પપ્રચ્છ, ત્વં કિમિચ્છસિ? ત્વદર્થમહં કિં કરિષ્યામિ? સ ઉક્તવાન્, હે પ્રભોઽહં દ્રષ્ટું લભૈ|
“ನನ್ನಿಂದ ನಿನಗೇನಾಗಬೇಕು?” ಎಂದು ಕೇಳಿದರು. ಅದಕ್ಕವನು, “ಕರ್ತದೇವರೇ, ನನಗೆ ದೃಷ್ಟಿ ಕೊಡಿ,” ಎಂದನು.
42 તદા યીશુરુવાચ, દૃષ્ટિશક્તિં ગૃહાણ તવ પ્રત્યયસ્ત્વાં સ્વસ્થં કૃતવાન્|
ಆಗ ಯೇಸು ಅವನಿಗೆ, “ನೀನು ದೃಷ್ಟಿ ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು.
43 તતસ્તત્ક્ષણાત્ તસ્ય ચક્ષુષી પ્રસન્ને; તસ્માત્ સ ઈશ્વરં ધન્યં વદન્ તત્પશ્ચાદ્ યયૌ, તદાલોક્ય સર્વ્વે લોકા ઈશ્વરં પ્રશંસિતુમ્ આરેભિરે|
ಕೂಡಲೇ ಅವನು ದೃಷ್ಟಿಯನ್ನು ಪಡೆದನು. ಆಗ ಅವನು ದೇವರನ್ನು ಸ್ತುತಿಸುತ್ತಾ, ಯೇಸುವನ್ನು ಹಿಂಬಾಲಿಸಿದನು. ಎಲ್ಲಾ ಜನರು ಅದನ್ನು ಕಂಡು, ದೇವರಿಗೆ ಸ್ತೋತ್ರ ಸಲ್ಲಿಸಿದರು.

< લૂકઃ 18 >