< ಲೂಕನು 5 >

1 ಒಂದು ದಿನ ಯೇಸು ಗೆನೆಜರೇತ್ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ, ಜನರು ದೇವರ ವಾಕ್ಯವನ್ನು ಕೇಳುವುದಕ್ಕಾಗಿ ಅವರ ಸುತ್ತಲೂ ಗುಂಪಾಗಿ ಕೂಡಿದ್ದರು.
অনন্তৰং যীশুৰেকদা গিনেষৰথ্দস্য তীৰ উত্তিষ্ঠতি, তদা লোকা ঈশ্ৱৰীযকথাং শ্ৰোতুং তদুপৰি প্ৰপতিতাঃ|
2 ಯೇಸು ಕೆರೆಯ ಬಳಿಯಲ್ಲಿ ಎರಡು ದೋಣಿಗಳನ್ನು ಕಂಡರು. ಅಲ್ಲಿ ಬೆಸ್ತರು ಅವುಗಳಿಂದ ಹೊರಗೆ ಹೋಗಿ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.
তদানীং স হ্দস্য তীৰসমীপে নৌদ্ৱযং দদৰ্শ কিঞ্চ মৎস্যোপজীৱিনো নাৱং ৱিহায জালং প্ৰক্ষালযন্তি|
3 ಅವುಗಳಲ್ಲಿ ಸೀಮೋನನ ದೋಣಿಯನ್ನು, ಯೇಸು ಹತ್ತಿ ಅದನ್ನು ದಡದಿಂದ ಸ್ವಲ್ಪ ದೂರ ನೂಕಬೇಕೆಂದು ಅವನನ್ನು ಕೇಳಿಕೊಂಡರು. ಆಮೇಲೆ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಜನರಿಗೆ ಬೋಧಿಸಿದರು.
ততস্তযোৰ্দ্ৱযো ৰ্মধ্যে শিমোনো নাৱমাৰুহ্য তীৰাৎ কিঞ্চিদ্দূৰং যাতুং তস্মিন্ ৱিনযং কৃৎৱা নৌকাযামুপৱিশ্য লোকান্ প্ৰোপদিষ্টৱান্|
4 ಅವರು ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ, ಮೀನು ಹಿಡಿಯುವುದಕ್ಕೆ ನಿಮ್ಮ ಬಲೆಗಳನ್ನು ಬೀಸಿರಿ,” ಎಂದರು.
পশ্চাৎ তং প্ৰস্তাৱং সমাপ্য স শিমোনং ৱ্যাজহাৰ, গভীৰং জলং গৎৱা মৎস্যান্ ধৰ্ত্তুং জালং নিক্ষিপ|
5 ಅದಕ್ಕೆ ಉತ್ತರವಾಗಿ ಸೀಮೋನನು ಯೇಸುವಿಗೆ, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ. ಆದರೂ ನಿಮ್ಮ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ,” ಎಂದು ಹೇಳಿದನು.
ততঃ শিমোন বভাষে, হে গুৰো যদ্যপি ৱযং কৃৎস্নাং যামিনীং পৰিশ্ৰম্য মৎস্যৈকমপি ন প্ৰাপ্তাস্তথাপি ভৱতো নিদেশতো জালং ক্ষিপামঃ|
6 ಅವರು ಅದರಂತೆ ಬಲೆ ಹಾಕಿದಾಗ, ಮೀನಿನ ದೊಡ್ಡ ರಾಶಿಯನ್ನು ಹಿಡಿದರು ಅವರ ಬಲೆಯು ಹರಿಯುವಂತಾಯಿತು.
অথ জালে ক্ষিপ্তে বহুমৎস্যপতনাদ্ আনাযঃ প্ৰচ্ছিন্নঃ|
7 ಆಗ ಬೇರೆ ದೋಣಿಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆಮಾಡಿದರು. ಪಾಲುಗಾರರು ಬಂದು ಎರಡು ದೋಣಿಗಳನ್ನು ತುಂಬಿಸಲಾಗಿ ಅವು ಮುಳುಗಲಾರಂಭಿಸಿದವು.
তস্মাদ্ উপকৰ্ত্তুম্ অন্যনৌস্থান্ সঙ্গিন আযাতুম্ ইঙ্গিতেন সমাহ্ৱযন্ ততস্ত আগত্য মৎস্যৈ ৰ্নৌদ্ৱযং প্ৰপূৰযামাসু ৰ্যৈ ৰ্নৌদ্ৱযং প্ৰমগ্নম্|
8 ಸೀಮೋನ್ ಪೇತ್ರನು ಇದನ್ನು ಕಂಡಾಗ, ಯೇಸುವಿನ ಮುಂದೆ ಮೊಣಕಾಲೂರಿ, “ಸ್ವಾಮಿ, ನನ್ನನ್ನು ಬಿಟ್ಟು ಹೋಗಿರಿ, ನಾನು ಪಾಪಿ,” ಎಂದನು.
তদা শিমোন্পিতৰস্তদ্ ৱিলোক্য যীশোশ্চৰণযোঃ পতিৎৱা, হে প্ৰভোহং পাপী নৰো মম নিকটাদ্ ভৱান্ যাতু, ইতি কথিতৱান্|
9 ಯಾಕಂದರೆ, ಅವರು ಹಿಡಿದ ಮೀನುಗಳ ರಾಶಿಯನ್ನು ಕಂಡು ಅವನೂ ಅವನ ಸಂಗಡ ಇದ್ದವರೂ ವಿಸ್ಮಯಗೊಂಡಿದ್ದರು.
যতো জালে পতিতানাং মৎস্যানাং যূথাৎ শিমোন্ তৎসঙ্গিনশ্চ চমৎকৃতৱন্তঃ; শিমোনঃ সহকাৰিণৌ সিৱদেঃ পুত্ৰৌ যাকূব্ যোহন্ চেমৌ তাদৃশৌ বভূৱতুঃ|
10 ಸೀಮೋನನ ಕೂಡ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ, ಯೋಹಾನರೂ ಹಾಗೆಯೇ ವಿಸ್ಮಯಗೊಂಡಿದ್ದರು. ಆಗ ಯೇಸು ಸೀಮೋನನಿಗೆ, “ಹೆದರಬೇಡ; ಇಂದಿನಿಂದ ನೀನು ದೇವರಿಗಾಗಿ ಮನುಷ್ಯರನ್ನೇ ಹಿಡಿಯುವವನಾಗಿರುವೆ,” ಎಂದರು.
১০তদা যীশুঃ শিমোনং জগাদ মা ভৈষীৰদ্যাৰভ্য ৎৱং মনুষ্যধৰো ভৱিষ্যসি|
11 ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನು ಬಿಟ್ಟು, ಯೇಸುವನ್ನೇ ಹಿಂಬಾಲಿಸಿದರು.
১১অনন্তৰং সৰ্ৱ্ৱাসু নৌসু তীৰম্ আনীতাসু তে সৰ্ৱ্ৱান্ পৰিত্যজ্য তস্য পশ্চাদ্গামিনো বভূৱুঃ|
12 ಯೇಸು ಒಂದು ಪಟ್ಟಣದಲ್ಲಿದ್ದಾಗ, ಮೈಯೆಲ್ಲಾ ಕುಷ್ಠರೋಗವಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಅಡ್ಡಬಿದ್ದು ಅವರಿಗೆ, “ಸ್ವಾಮಿ, ನಿಮಗೆ ಮನಸ್ಸಿದ್ದರೆ, ನೀವು ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದು ಅವರನ್ನು ಬೇಡಿಕೊಂಡನು.
১২ততঃ পৰং যীশৌ কস্মিংশ্চিৎ পুৰে তিষ্ঠতি জন একঃ সৰ্ৱ্ৱাঙ্গকুষ্ঠস্তং ৱিলোক্য তস্য সমীপে ন্যুব্জঃ পতিৎৱা সৱিনযং ৱক্তুমাৰেভে, হে প্ৰভো যদি ভৱানিচ্ছতি তৰ্হি মাং পৰিষ্কৰ্ত্তুং শক্নোতি|
13 ಯೇಸು ತಮ್ಮ ಕೈಚಾಚಿ ಅವನನ್ನು ಮುಟ್ಟಿ ಅವನಿಗೆ, “ನನಗೆ ಮನಸ್ಸಿದೆ, ನೀನು ಶುದ್ಧನಾಗು!” ಎಂದು ಹೇಳಿದರು. ಕೂಡಲೇ ಆ ಕುಷ್ಠವು ಅವನನ್ನು ಬಿಟ್ಟುಹೋಯಿತು.
১৩তদানীং স পাণিং প্ৰসাৰ্য্য তদঙ্গং স্পৃশন্ বভাষে ৎৱং পৰিষ্ক্ৰিযস্ৱেতি মমেচ্ছাস্তি ততস্তৎক্ষণং স কুষ্ঠাৎ মুক্তঃ|
14 ಆಗ ಯೇಸು ಅವನಿಗೆ, “ಇದನ್ನು ನೀನು ಯಾರಿಗೂ ಹೇಳಬೇಡ, ಆದರೆ ನೀನು ಗುಣಹೊಂದಿದ್ದಕ್ಕೆ ಜನರಿಗೆ ಸಾಕ್ಷಿಯಾಗಿರುವಂತೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆ ಅಪ್ಪಣೆ ಕೊಟ್ಟಂತೆ ಅರ್ಪಿಸು,” ಎಂದು ಆಜ್ಞಾಪಿಸಿದರು.
১৪পশ্চাৎ স তমাজ্ঞাপযামাস কথামিমাং কস্মৈচিদ্ অকথযিৎৱা যাজকস্য সমীপঞ্চ গৎৱা স্ৱং দৰ্শয, লোকেভ্যো নিজপৰিষ্কৃতৎৱস্য প্ৰমাণদানায মূসাজ্ঞানুসাৰেণ দ্ৰৱ্যমুত্মৃজস্ৱ চ|
15 ಆದರೂ ಯೇಸುವಿನ ವಿಷಯವು, ಇನ್ನೂ ಹೆಚ್ಚಾಗಿ ದೂರದವರೆಗೂ ಹರಡಿತು. ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ಅವರಿಂದ ವಾಸಿಮಾಡಿಸಿಕೊಳ್ಳುವುದಕ್ಕೂ ದೊಡ್ಡ ಸಮೂಹಗಳು ಕೂಡಿ ಬಂದವು.
১৫তথাপি যীশোঃ সুখ্যাতি ৰ্বহু ৱ্যাপ্তুমাৰেভে কিঞ্চ তস্য কথাং শ্ৰোতুং স্ৱীযৰোগেভ্যো মোক্তুঞ্চ লোকা আজগ্মুঃ|
16 ಆದರೆ ಯೇಸು ತಮ್ಮನ್ನು ಪ್ರತ್ಯೇಕಿಸಿಕೊಂಡು ಎಂದಿನಂತೆ ಏಕಾಂತ ಸ್ಥಳಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದರು.
১৬অথ স প্ৰান্তৰং গৎৱা প্ৰাৰ্থযাঞ্চক্ৰে|
17 ಒಂದು ದಿನ ಯೇಸು ಬೋಧಿಸುತ್ತಿದ್ದಾಗ, ಗಲಿಲಾಯ ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಊರಿನಿಂದ ಬಂದಿದ್ದ ಫರಿಸಾಯರೂ ನಿಯಮ ಬೋಧಕರೂ ಅಲ್ಲಿ ಕುಳಿತುಕೊಂಡಿದ್ದರು. ಯೇಸುವಿನಲ್ಲಿ ಸ್ವಸ್ಥಮಾಡುವುದಕ್ಕಾಗಿ ದೇವರ ಶಕ್ತಿಯು ಇತ್ತು.
১৭অপৰঞ্চ একদা যীশুৰুপদিশতি, এতৰ্হি গালীল্যিহূদাপ্ৰদেশযোঃ সৰ্ৱ্ৱনগৰেভ্যো যিৰূশালমশ্চ কিযন্তঃ ফিৰূশিলোকা ৱ্যৱস্থাপকাশ্চ সমাগত্য তদন্তিকে সমুপৱিৱিশুঃ, তস্মিন্ কালে লোকানামাৰোগ্যকাৰণাৎ প্ৰভোঃ প্ৰভাৱঃ প্ৰচকাশে|
18 ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯಲ್ಲಿ ಹೊತ್ತುಕೊಂಡು ಬಂದು, ಒಳಗೆ ಯೇಸುವಿನ ಎದುರಿಗೆ ತರುವುದಕ್ಕೆ ಪ್ರಯತ್ನಿಸುತ್ತಿದ್ದರು.
১৮পশ্চাৎ কিযন্তো লোকা একং পক্ষাঘাতিনং খট্ৱাযাং নিধায যীশোঃ সমীপমানেতুং সম্মুখে স্থাপযিতুঞ্চ ৱ্যাপ্ৰিযন্ত|
19 ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ, ಮನೆಯ ಮೇಲೆ ಹೋಗಿ ಹೆಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ಯೇಸುವಿನ ಮುಂದೆ ಇಳಿಸಿದರು.
১৯কিন্তু বহুজননিৱহসম্ৱাধাৎ ন শক্নুৱন্তো গৃহোপৰি গৎৱা গৃহপৃষ্ঠং খনিৎৱা তং পক্ষাঘাতিনং সখট্ৱং গৃহমধ্যে যীশোঃ সম্মুখে ঽৱৰোহযামাসুঃ|
20 ಯೇಸು ಅವರ ವಿಶ್ವಾಸವನ್ನು ಕಂಡು ಅವನಿಗೆ, “ಮಗನೇ, ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದು ಹೇಳಿದರು.
২০তদা যীশুস্তেষাম্ ঈদৃশং ৱিশ্ৱাসং ৱিলোক্য তং পক্ষাঘাতিনং ৱ্যাজহাৰ, হে মানৱ তৱ পাপমক্ষম্যত|
21 ಆಗ ಫರಿಸಾಯರೂ ನಿಯಮ ಬೋಧಕರೂ, “ದೇವದೂಷಣೆಯನ್ನು ಮಾಡುವುದಕ್ಕೆ ಈತನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು?” ಎಂದು ತಮ್ಮಲ್ಲಿ ಮಾತನಾಡಲಾರಂಭಿಸಿದರು.
২১তস্মাদ্ অধ্যাপকাঃ ফিৰূশিনশ্চ চিত্তৈৰিত্থং প্ৰচিন্তিতৱন্তঃ, এষ জন ঈশ্ৱৰং নিন্দতি কোযং? কেৱলমীশ্ৱৰং ৱিনা পাপং ক্ষন্তুং কঃ শক্নোতি?
22 ಯೇಸು ಅವರ ಆಲೋಚನೆಗಳನ್ನು ತಿಳಿದು, “ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವುದೇನು?
২২তদা যীশুস্তেষাম্ ইত্থং চিন্তনং ৱিদিৎৱা তেভ্যোকথযদ্ যূযং মনোভিঃ কুতো ৱিতৰ্কযথ?
23 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ ‘ಎದ್ದು ನಡೆ,’ ಎನ್ನುವುದೋ?
২৩তৱ পাপক্ষমা জাতা যদ্ৱা ৎৱমুত্থায ৱ্ৰজ এতযো ৰ্মধ্যে কা কথা সুকথ্যা?
24 ಆದರೆ ಮನುಷ್ಯಪುತ್ರನಾದ ನನಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
২৪কিন্তু পৃথিৱ্যাং পাপং ক্ষন্তুং মানৱসুতস্য সামৰ্থ্যমস্তীতি যথা যূযং জ্ঞাতুং শক্নুথ তদৰ্থং (স তং পক্ষাঘাতিনং জগাদ) উত্তিষ্ঠ স্ৱশয্যাং গৃহীৎৱা গৃহং যাহীতি ৎৱামাদিশামি|
25 ಕೂಡಲೇ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು, ದೇವರನ್ನು ಸ್ತುತಿಸುತ್ತಾ ತನ್ನ ಮನೆಗೆ ಹೊರಟುಹೋದನು.
২৫তস্মাৎ স তৎক্ষণম্ উত্থায সৰ্ৱ্ৱেষাং সাক্ষাৎ নিজশযনীযং গৃহীৎৱা ঈশ্ৱৰং ধন্যং ৱদন্ নিজনিৱেশনং যযৌ|
26 ಅಲ್ಲಿದ್ದವರೆಲ್ಲರೂ ವಿಸ್ಮಯಗೊಂಡು ದೇವರನ್ನು ಸ್ತುತಿಸಿದರು. ಅವರು ಭಯಭಕ್ತಿಯಿಂದ ಕೂಡಿದವರಾಗಿ, “ನಾವು ಈ ದಿನ ಅಪೂರ್ವವಾದ ಕಾರ್ಯಗಳನ್ನು ಕಂಡೆವು,” ಎಂದರು.
২৬তস্মাৎ সৰ্ৱ্ৱে ৱিস্ময প্ৰাপ্তা মনঃসু ভীতাশ্চ ৱযমদ্যাসম্ভৱকাৰ্য্যাণ্যদৰ্শাম ইত্যুক্ত্ৱা পৰমেশ্ৱৰং ধন্যং প্ৰোদিতাঃ|
27 ಇವುಗಳಾದ ಮೇಲೆ, ಯೇಸು ಹೊರಟುಹೋಗಿ ತೆರಿಗೆಯ ಕಛೇರಿಯಲ್ಲಿ ಕುಳಿತುಕೊಂಡಿದ್ದ ಲೇವಿ ಎಂಬ ಹೆಸರುಳ್ಳ ಒಬ್ಬ ಸುಂಕದವನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು,” ಎಂದರು.
২৭ততঃ পৰং বহিৰ্গচ্ছন্ কৰসঞ্চযস্থানে লেৱিনামানং কৰসঞ্চাযকং দৃষ্ট্ৱা যীশুস্তমভিদধে মম পশ্চাদেহি|
28 ಲೇವಿ ಎಲ್ಲವನ್ನು ಬಿಟ್ಟು ಎದ್ದು ಯೇಸುವನ್ನು ಹಿಂಬಾಲಿಸಿದನು.
২৮তস্মাৎ স তৎক্ষণাৎ সৰ্ৱ্ৱং পৰিত্যজ্য তস্য পশ্চাদিযায|
29 ತರುವಾಯ ಲೇವಿಯು ತನ್ನ ಸ್ವಂತ ಮನೆಯಲ್ಲಿ ಯೇಸುವಿಗೆ ದೊಡ್ಡ ಔತಣವನ್ನು ಮಾಡಿಸಲು, ಬಹಳ ಜನ ಸುಂಕದವರು ಮತ್ತು ಇತರರು ಯೇಸುವಿನೊಂದಿಗೆ ಊಟಮಾಡುತ್ತಿದ್ದರು.
২৯অনন্তৰং লেৱি ৰ্নিজগৃহে তদৰ্থং মহাভোজ্যং চকাৰ, তদা তৈঃ সহানেকে কৰসঞ্চাযিনস্তদন্যলোকাশ্চ ভোক্তুমুপৱিৱিশুঃ|
30 ಆದರೆ ಫರಿಸಾಯರೂ ಅವರ ಗುಂಪಿಗೆ ಸೇರಿದ ನಿಯಮ ಬೋಧಕರೂ ಯೇಸುವಿನ ವಿರೋಧವಾಗಿ ಗೊಣಗಾಡುತ್ತಾ ಶಿಷ್ಯರಿಗೆ, “ನೀವು ಏಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ?” ಎಂದು ಕೇಳಿದರು.
৩০তস্মাৎ কাৰণাৎ চণ্ডালানাং পাপিলোকানাঞ্চ সঙ্গে যূযং কুতো ভংগ্ধ্ৱে পিৱথ চেতি কথাং কথযিৎৱা ফিৰূশিনোঽধ্যাপকাশ্চ তস্য শিষ্যৈঃ সহ ৱাগ্যুদ্ধং কৰ্ত্তুমাৰেভিৰে|
31 ಅದಕ್ಕೆ ಯೇಸು, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ.
৩১তস্মাদ্ যীশুস্তান্ প্ৰত্যৱোচদ্ অৰোগলোকানাং চিকিৎসকেন প্ৰযোজনং নাস্তি কিন্তু সৰোগাণামেৱ|
32 ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನೇ ದೇವರ ಕಡೆಗೆ ತಿರುಗಿಕೊಳ್ಳುವಂತೆ ಕರೆಯಲು ಬಂದೆನು,” ಎಂದರು.
৩২অহং ধাৰ্ম্মিকান্ আহ্ৱাতুং নাগতোস্মি কিন্তু মনঃ পৰাৱৰ্ত্তযিতুং পাপিন এৱ|
33 ಕೆಲವರು ಯೇಸುವಿಗೆ, “ಯೋಹಾನನ ಶಿಷ್ಯರು ಪದೇಪದೇ ಉಪವಾಸವಿದ್ದು ಪ್ರಾರ್ಥನೆಗಳನ್ನು ಮಾಡುತ್ತಾರೆ, ಅದರಂತೆಯೇ ಫರಿಸಾಯರ ಶಿಷ್ಯರೂ ಮಾಡುತ್ತಾರೆ, ಆದರೆ ನಿಮ್ಮ ಶಿಷ್ಯರು ಏಕೆ ತಿಂದು ಕುಡಿಯುತ್ತಾರೆ?” ಎಂದು ಕೇಳಿದರು.
৩৩ততস্তে প্ৰোচুঃ, যোহনঃ ফিৰূশিনাঞ্চ শিষ্যা ৱাৰংৱাৰম্ উপৱসন্তি প্ৰাৰ্থযন্তে চ কিন্তু তৱ শিষ্যাঃ কুতো ভুঞ্জতে পিৱন্তি চ?
34 ಅದಕ್ಕೆ ಯೇಸು, “ಮದುಮಗನು ಮದುವೆ ಅತಿಥಿಗಳ ಸಂಗಡವಿರುವಾಗ ಅವರನ್ನು ಉಪವಾಸವಿರಿಸಲಾದೀತೆ?
৩৪তদা স তানাচখ্যৌ ৱৰে সঙ্গে তিষ্ঠতি ৱৰস্য সখিগণং কিমুপৱাসযিতুং শক্নুথ?
35 ಆದರೆ ಮದುಮಗನನ್ನು ಅವರಿಂದ ತೆಗೆದುಕೊಂಡು ಹೋಗುವ ದಿವಸಗಳು ಬರುವುವು; ಆಗ ಆ ದಿವಸಗಳಲ್ಲಿ ಅವರು ಉಪವಾಸ ಮಾಡುವರು,” ಎಂದು ಹೇಳಿದರು.
৩৫কিন্তু যদা তেষাং নিকটাদ্ ৱৰো নেষ্যতে তদা তে সমুপৱৎস্যন্তি|
36 ಯೇಸು ಅವರಿಗೆ ಒಂದು ಸಾಮ್ಯವನ್ನು ಹೇಳಿದರು: “ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತುಂಡನ್ನು ಹರಿದು ತೇಪೆ ಹಚ್ಚುವುದಿಲ್ಲ. ಹಚ್ಚಿದರೆ ಆ ಹೊಸದು ಹರಿದು ಹೋಗುವುದು. ಹೊಸದರಿಂದ ಕತ್ತರಿಸಿದ ತುಂಡು ಹಳೆಯದರೊಂದಿಗೆ ಹೊಂದಿಕೆಯಾಗುವುದಿಲ್ಲ.
৩৬সোপৰমপি দৃষ্টান্তং কথযাম্বভূৱ পুৰাতনৱস্ত্ৰে কোপি নুতনৱস্ত্ৰং ন সীৱ্যতি যতস্তেন সেৱনেন জীৰ্ণৱস্ত্ৰং ছিদ্যতে, নূতনপুৰাতনৱস্ত্ৰযো ৰ্মেলঞ্চ ন ভৱতি|
37 ಯಾರೂ ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಚರ್ಮದ ಚೀಲಗಳು ಒಡೆದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ.
৩৭পুৰাতন্যাং কুৎৱাং কোপি নুতনং দ্ৰাক্ষাৰসং ন নিদধাতি, যতো নৱীনদ্ৰাক্ষাৰসস্য তেজসা পুৰাতনী কুতূ ৰ্ৱিদীৰ্য্যতে ততো দ্ৰাক্ষাৰসঃ পততি কুতূশ্চ নশ্যতি|
38 ಆದರೆ, ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ಹಾಕಿಡಬೇಕು.
৩৮ততো হেতো ৰ্নূতন্যাং কুৎৱাং নৱীনদ্ৰাক্ষাৰসঃ নিধাতৱ্যস্তেনোভযস্য ৰক্ষা ভৱতি|
39 ಯಾರೂ ಹಳೆಯ ದ್ರಾಕ್ಷಾರಸವನ್ನು ಕುಡಿದ ಮೇಲೆ ಹೊಸದನ್ನು ಅಪೇಕ್ಷಿಸುವುದಿಲ್ಲ, ಏಕೆಂದರೆ ಅವರು, ‘ಹಳೆಯದೇ ಉತ್ತಮವಾದದ್ದು,’ ಎನ್ನುವರು,” ಎಂದರು.
৩৯অপৰঞ্চ পুৰাতনং দ্ৰাক্ষাৰসং পীৎৱা কোপি নূতনং ন ৱাঞ্ছতি, যতঃ স ৱক্তি নূতনাৎ পুৰাতনম্ প্ৰশস্তম্|

< ಲೂಕನು 5 >