< ರೋಮಾಪುರದವರಿಗೆ 3 >

1 ಹಾಗಾದರೆ ಯೆಹೂದ್ಯರ ವೈಶಿಷ್ಟ್ಯವೇನು? ಸುನ್ನತಿ ಮಾಡಿಸಿಕೊಂಡದರಿಂದ ಲಾಭವೇನು?
អបរញ្ច យិហូទិនះ កិំ ឝ្រេឞ្ឋត្វំ? តថា ត្វក្ឆេទស្យ វា កិំ ផលំ?
2 ಎಲ್ಲಾ ವಿಷಯಗಳನ್ನು ಕುರಿತು ಹೇಳಲು ಬಹಳ ಉಂಟು. ಮೊದಲನೇಯದಾಗಿ ದೈವೋಕ್ತಿಗಳು ಅವರ ವಶಕ್ಕೆ ಸಮರ್ಪಿಸಿ ಒಪ್ಪಿಸಲ್ಪಟ್ಟಿವೆ.
សវ៌្វថា ពហូនិ ផលានិ សន្តិ, វិឝេឞត ឦឝ្វរស្យ ឝាស្ត្រំ តេភ្យោៜទីយត។
3 ಅವರಲ್ಲಿ ಕೆಲವರಿಗೆ ನಂಬಿಕೆ ಇರಲಿಲ್ಲವಾದರೂ? ಅವರ ಅಪನಂಬಿಕೆಯಿಂದ ದೇವರು ನಂಬಿಕೆಗೆ ತಪ್ಪುವವನಾದಾನೋ? ಎಂದಿಗೂ ಇಲ್ಲ.
កៃឝ្ចិទ៑ អវិឝ្វសនេ ក្ឫតេ តេឞាម៑ អវិឝ្វសនាត៑ កិម៑ ឦឝ្វរស្យ វិឝ្វាស្យតាយា ហានិរុត្បត្ស្យតេ?
4 ಬದಲಾಗಿ, “ನಿನ್ನ ಮಾತಿನಲ್ಲೇ ನೀನು ನೀತಿವಂತನೆಂದು ವ್ಯಕ್ತವಾಗಬೇಕು, ವ್ಯಾಜ್ಯವೆದ್ದಾಗ ನೀನು ವಿಜಯಶಾಲಿ ಆಗಬೇಕು.” ಎಂದು ಗ್ರಂಥಗಳಲ್ಲಿ ಬರೆದಿರುವ ಹಾಗೆಯೇ, ಎಲ್ಲಾ ಮಾನವರು ಸುಳ್ಳುಗಾರರಾದರೂ, ದೇವರು ಮಾತ್ರ ಸತ್ಯವಂತನೇ.
កេនាបិ ប្រការេណ នហិ។ យទ្យបិ សវ៌្វេ មនុឞ្យា មិថ្យាវាទិនស្តថាបីឝ្វរះ សត្យវាទី។ ឝាស្ត្រេ យថា លិខិតមាស្តេ, អតស្ត្វន្តុ ស្វវាក្យេន និទ៌្ទោឞោ ហិ ភវិឞ្យសិ។ វិចារេ ចៃវ និឞ្បាបោ ភវិឞ្យសិ ន សំឝយះ។
5 ಆದರೆ ನಮ್ಮ ಅನ್ಯಾಯದ ನಡವಳಿಕೆಯಿಂದ ದೇವರು ನೀತಿವಂತನೆಂದು ಪ್ರಸಿದ್ಧಿಗೆ ಬರುವುದಾದರೆ ನಾವು ಏನು ಹೇಳೋಣ? ಉಗ್ರದಂಡನೆಯನ್ನು ಮಾಡುವ ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ. ಈ ಮಾತನ್ನು ಮನುಷ್ಯನ ರೀತಿಯಲ್ಲಿ ಆಡುತ್ತಿದ್ದೇನೆ.
អស្មាកម៑ អន្យាយេន យទីឝ្វរស្យ ន្យាយះ ប្រកាឝតេ តហ៌ិ កិំ វទិឞ្យាមះ? អហំ មានុឞាណាំ កថាមិវ កថាំ កថយាមិ, ឦឝ្វរះ សមុចិតំ ទណ្ឌំ ទត្ត្វា កិម៑ អន្យាយី ភវិឞ្យតិ?
6 ದೇವರು ಅನ್ಯಾಯಗಾರನಾಗಿದ್ದರೆ ಲೋಕಕ್ಕೆ ನ್ಯಾಯ ತೀರ್ಪಾಗುವುದಾದರೂ ಹೇಗೆ?
ឥត្ថំ ន ភវតុ, តថា សតីឝ្វរះ កថំ ជគតោ វិចារយិតា ភវិឞ្យតិ?
7 ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೆ ಬಂದು ಆತನ ಮಹಿಮೆ ಹೆಚ್ಚಾಗುವುದಾದರೆ ಇನ್ನು ನನ್ನನ್ನು ಪಾಪಿಯೆಂದು ಪರಿಗಣಿಸುವುದು ಯಾಕೆ?
មម មិថ្យាវាក្យវទនាទ៑ យទីឝ្វរស្យ សត្យត្វេន តស្យ មហិមា វទ៌្ធតេ តហ៌ិ កស្មាទហំ វិចារេៜបរាធិត្វេន គណ្យោ ភវាមិ?
8 “ಒಳ್ಳೆಯದಾಗುವಂತೆ, ಕೆಟ್ಟದ್ದನ್ನೇ ಏಕೆ ಮಾಡಬಾರದು?” ಈ ರೀತಿ ಸ್ವತಃ ನಾನೇ ಬೋಧಿಸುತ್ತಿರುವುದಾಗಿ ಕೆಲವರು ನನ್ನನ್ನು ದೂಷಿಸಿ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರಿಗೆ ತಕ್ಕ ಶಿಕ್ಷೆಯಾಗುವುದು ನ್ಯಾಯಸಮ್ಮತವಾದುದು.
មង្គលាត៌្ហំ បាបមបិ ករណីយមិតិ វាក្យំ ត្វយា កុតោ នោច្យតេ? កិន្តុ យៃរុច្យតេ តេ និតាន្តំ ទណ្ឌស្យ បាត្រាណិ ភវន្តិ; តថាបិ តទ្វាក្យម៑ អស្មាភិរប្យុច្យត ឥត្យស្មាកំ គ្លានិំ កុវ៌្វន្តះ កិយន្តោ លោកា វទន្តិ។
9 ಹಾಗಾದರೆ ಏನು ಹೇಳಬೇಕು? ನಾವು ಅನ್ಯರಿಗಿಂತ ಶ್ರೇಷ್ಠರೋ? ಎಷ್ಟು ಮಾತ್ರಕ್ಕೂ ಇಲ್ಲ. ಯೆಹೂದ್ಯರೇ ಆಗಲಿ ಗ್ರೀಕರೇ ಆಗಲಿ ಎಲ್ಲರೂ ಪಾಪಕ್ಕೆ ಒಳಗಾಗಿ ಅಪರಾಧಿಗಳಾಗಿದ್ದಾರೆಂದು ಮೊದಲೇ ತೋರಿಸಿಕೊಟ್ಟಿದ್ದೇವಲ್ಲಾ.
អន្យលោកេភ្យោ វយំ កិំ ឝ្រេឞ្ឋាះ? កទាចន នហិ យតោ យិហូទិនោ ៜន្យទេឝិនឝ្ច សវ៌្វឯវ បាបស្យាយត្តា ឥត្យស្យ ប្រមាណំ វយំ បូវ៌្វម៑ អទទាម។
10 ೧೦ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, “ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ;
លិបិ រ្យថាស្តេ, នៃកោបិ ធាម៌្មិកោ ជនះ។
11 ೧೧ ತಿಳಿವಳಿಕೆಯುಳ್ಳವನು ಇಲ್ಲ, ದೇವರನ್ನು ಹುಡುಕುವವನು ಇಲ್ಲ.
តថា ជ្ញានីឝ្វរជ្ញានី មានវះ កោបិ នាស្តិ ហិ។
12 ೧೨ ಎಲ್ಲರೂ ದಾರಿತಪ್ಪಿ ನಡೆಯುತ್ತಾ, ಕೆಟ್ಟುಹೋಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.
វិមាគ៌គាមិនះ សវ៌្វេ សវ៌្វេ ទុឞ្កម៌្មការិណះ។ ឯកោ ជនោបិ នោ តេឞាំ សាធុកម៌្ម ករោតិ ច។
13 ೧೩ ಅವರ ಗಂಟಲು ತೆರೆದಿರುವ ಸಮಾಧಿಯಾಗಿದೆ. ಅವರು ನಾಲಿಗೆಯಿಂದ ವಂಚನೆಯ ಮಾತುಗಳನ್ನಾಡುತ್ತಾರೆ. ಅವರ ತುಟಿಯ ಹಿಂದೆ ಹಾವಿನ ವಿಷವಿದೆ.
តថា តេឞាន្តុ វៃ កណ្ឋា អនាវ្ឫតឝ្មឝានវត៑។ ស្តុតិវាទំ ប្រកុវ៌្វន្តិ ជិហ្វាភិស្តេ តុ កេវលំ។ តេឞាមោឞ្ឋស្យ និម្នេ តុ វិឞំ តិឞ្ឋតិ សប៌្បវត៑។
14 ೧೪ ಅವರ ಬಾಯಿ ಶಾಪದಿಂದಲೂ ಕ್ರೋಧದ ಮಾತುಗಳಿಂದಲೂ, ತುಂಬಿದೆ.
មុខំ តេឞាំ ហិ ឝាបេន កបដេន ច បូយ៌្យតេ។
15 ೧೫ ಅವರ ಕಾಲುಗಳು ರಕ್ತವನ್ನು ಸುರಿಸಲು ಆತುರಪಡುತ್ತವೆ.
រក្តបាតាយ តេឞាំ តុ បទានិ ក្ឞិប្រគានិ ច។
16 ೧೬ ಅವರು ಹೋದ ದಾರಿಗಳಲ್ಲಿ ನಾಶಸಂಕಟಗಳು ಪೀಡೆಗಳು ಉಂಟಾಗುತ್ತವೆ.
បថិ តេឞាំ មនុឞ្យាណាំ នាឝះ ក្លេឝឝ្ច កេវលះ។
17 ೧೭ ಸಮಾಧಾನದ ಮಾರ್ಗವನ್ನೇ ಅರಿಯರು.
តេ ជនា នហិ ជានន្តិ បន្ថានំ សុខទាយិនំ។
18 ೧೮ ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ” ಎಂದು ಹೀಗೆ ಬರೆದಿದೆಯಲ್ಲಾ.
បរមេឝាទ៑ ភយំ យត្តត៑ តច្ចក្ឞុឞោរគោចរំ។
19 ೧೯ ಧರ್ಮಶಾಸ್ತ್ರದ ನುಡಿಗಳೆಲ್ಲವು ಆ ಶಾಸ್ತ್ರಕ್ಕೆ ಒಳಗಾದವರಿಗೆ ಹೇಳಿವೆಯೆಂದು ಬಲ್ಲೆವಷ್ಟೆ. ಹೀಗೆ ಎಲ್ಲರ ಬಾಯಿ ಕಟ್ಟಿಹೋಗುವುದು. ಲೋಕವೆಲ್ಲಾ ದೇವರ ಮುಂದೆ ಅಪರಾಧಿಯಾಗಿ ನಿಲ್ಲುವುದು.
វ្យវស្ថាយាំ យទ្យល្លិខតិ តទ៑ វ្យវស្ថាធីនាន៑ លោកាន៑ ឧទ្ទិឝ្យ លិខតីតិ វយំ ជានីមះ។ តតោ មនុឞ្យមាត្រោ និរុត្តរះ សន៑ ឦឝ្វរស្យ សាក្ឞាទ៑ អបរាធី ភវតិ។
20 ೨೦ ಯಾಕೆಂದರೆ ಯಾವ ಮನುಷ್ಯನಾದರೂ ನೇಮನಿಷ್ಠೆಗಳನ್ನು ಅನುಸರಿಸಿ ದೇವರ ಸನ್ನಿಧಿಯಲ್ಲಿ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ. ಧರ್ಮಶಾಸ್ತ್ರದಿಂದ ಪಾಪದ ಅರಿವು ಉಂಟಾಗುತ್ತದಷ್ಟೆ.
អតឯវ វ្យវស្ថានុរូបៃះ កម៌្មភិះ កឝ្ចិទបិ ប្រាណីឝ្វរស្យ សាក្ឞាត៑ សបុណ្យីក្ឫតោ ភវិតុំ ន ឝក្ឞ្យតិ យតោ វ្យវស្ថយា បាបជ្ញានមាត្រំ ជាយតេ។
21 ೨೧ ಈಗಲಾದರೋ ದೇವರಿಂದ ದೊರಕುವ ನೀತಿಯು ನಂಬುವವರೆಲ್ಲರಿಗೆ ಧರ್ಮಶಾಸ್ತ್ರ ನಿಯಮಗಳಿಲ್ಲದೆ ಪ್ರಕಟವಾಗಿದೆ. ಅದು ಮೋಶೆಯ ಧರ್ಮಶಾಸ್ತ್ರದಿಂದಲೂ ಪ್ರವಾದಿಗಳ ನುಡಿಗಳಿಂದಲೂ ಸಾಕ್ಷಿಗೊಂಡಿರುತ್ತವೆ.
កិន្តុ វ្យវស្ថាយាះ ប្ឫថគ៑ ឦឝ្វរេណ ទេយំ យត៑ បុណ្យំ តទ៑ វ្យវស្ថាយា ភវិឞ្យទ្វាទិគណស្យ ច វចនៃះ ប្រមាណីក្ឫតំ សទ៑ ឥទានីំ ប្រកាឝតេ។
22 ೨೨ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರ ಮೂಲಕವೇ ವಿಶ್ವಾಸಿಗಳೆಲ್ಲರಿಗೆ ದೇವರ ನೀತಿಯು ಉಂಟಾಗುತ್ತದೆ. ಇದರಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ.
យីឝុខ្រីឞ្ដេ វិឝ្វាសករណាទ៑ ឦឝ្វរេណ ទត្តំ តត៑ បុណ្យំ សកលេឞុ ប្រកាឝិតំ សត៑ សវ៌្វាន៑ វិឝ្វាសិនះ ប្រតិ វត៌្តតេ។
23 ೨೩ ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೇ ಹೋಗಿದ್ದಾರೆ.
តេឞាំ កោបិ ប្រភេទោ នាស្តិ, យតះ សវ៌្វឯវ បាបិន ឦឝ្វរីយតេជោហីនាឝ្ច ជាតាះ។
24 ೨೪ ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಅದು ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವುದು.
ត ឦឝ្វរស្យានុគ្រហាទ៑ មូល្យំ វិនា ខ្រីឞ្ដក្ឫតេន បរិត្រាណេន សបុណ្យីក្ឫតា ភវន្តិ។
25 ೨೫ ಪೂರ್ವ ಕಾಲದಲ್ಲಿ ಮಾನವರ ಪಾಪವನ್ನು ದಂಡಿಸದೆ ತಾಳ್ಮೆಯಿಂದಿದ್ದ ದೇವರು, ನಂಬಿಕೆಯುಳ್ಳವರಿಗೆ ಪಾಪಕ್ಷಮೆಯನ್ನು ತರುವ ಸಲುವಾಗಿ ಯೇಸುಕ್ರಿಸ್ತನನ್ನು ರಕ್ತಧಾರೆ ಎರೆಯುವಂತೆ ಮಾಡಿದನು.
យស្មាត៑ ស្វឝោណិតេន វិឝ្វាសាត៑ បាបនាឝកោ ពលី ភវិតុំ ស ឯវ បូវ៌្វម៑ ឦឝ្វរេណ និឝ្ចិតះ, ឥត្ថម៑ ឦឝ្វរីយសហិឞ្ណុត្វាត៑ បុរាក្ឫតបាបានាំ មាជ៌្ជនករណេ ស្វីយយាថាត៌្ហ្យំ តេន ប្រកាឝ្យតេ,
26 ೨೬ ಯೇಸುಕ್ರಿಸ್ತನಲ್ಲಿ ನಂಬಿಕೆ ಇಡುವವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವುದಕ್ಕಾಗಿಯು ತಾನು ಸತ್ಯಸ್ವರೂಪನೂ, ನೀತಿವಂತನೂ ಎಂದು ವ್ಯಕ್ತಪಡಿಸುವ ಸಲುವಾಗಿಯೂ ಪ್ರಸ್ತುತ ಕಾಲದಲ್ಲಿ ದೇವರು ಹೀಗೆ ಮಾಡಿದರು.
វត៌្តមានកាលីយមបិ ស្វយាថាត៌្ហ្យំ តេន ប្រកាឝ្យតេ, អបរំ យីឝៅ វិឝ្វាសិនំ សបុណ្យីកុវ៌្វន្នបិ ស យាថាត៌្ហិកស្តិឞ្ឋតិ។
27 ೨೭ ಹಾಗಾದರೆ ನಮ್ಮನ್ನು ನಾವು ಹೊಗಳಿಕೊಳ್ಳುವುದಕ್ಕೆ ಅವಕಾಶವೆಲ್ಲಿ? ಅದು ಇಲ್ಲದೆ ಹೋಯಿತು. ಯಾವ ಆಧಾರದಿಂದ? ಕರ್ಮಮಾರ್ಗವನ್ನು ಅನುಸರಿಸುವುದರಿಂದಲೋ? ಅಲ್ಲ. ನಂಬಿಕೆಮಾರ್ಗವನ್ನು ಅನುಸರಿಸುವುದರಿಂದಲೇ.
តហ៌ិ កុត្រាត្មឝ្លាឃា? សា ទូរីក្ឫតា; កយា វ្យវស្ថយា? កិំ ក្រិយារូបវ្យវស្ថយា? ឥត្ថំ នហិ កិន្តុ តត៑ កេវលវិឝ្វាសរូបយា វ្យវស្ថយៃវ ភវតិ។
28 ೨೮ ಧರ್ಮಶಾಸ್ತ್ರ ಸಂಬಂಧವಾದ ಕರ್ಮಗಳಿಲ್ಲದೆ ನಂಬಿಕೆಯಿಂದಲೇ ಮನುಷ್ಯರು ನೀತಿವಂತರೆಂದು ನಿರ್ಣಯಿಸಲ್ಪಡುವರೆಂಬುದಾಗಿ ನಿಶ್ಚಯಮಾಡಿಕೊಂಡಿದ್ದೇವಲ್ಲಾ
អតឯវ វ្យវស្ថានុរូបាះ ក្រិយា វិនា កេវលេន វិឝ្វាសេន មានវះ សបុណ្យីក្ឫតោ ភវិតុំ ឝក្នោតីត្យស្យ រាទ្ធាន្តំ ទឝ៌យាមះ។
29 ೨೯ ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿದ್ದಾನೋ? ಹೌದು ದೇವರು ಒಬ್ಬನೇ ಹೀಗಿರಲಾಗಿ ಆತನು ಅನ್ಯಜನರಿಗೂ ಸಹ ದೇವರಾಗಿದ್ದಾನೆ.
ស កិំ កេវលយិហូទិនាម៑ ឦឝ្វរោ ភវតិ? ភិន្នទេឝិនាម៑ ឦឝ្វរោ ន ភវតិ? ភិន្នទេឝិនាមបិ ភវតិ;
30 ೩೦ ಆತನು ಸುನ್ನತಿಯವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕೆ ಅವರ ನಂಬಿಕೆಯೇ ಆಧಾರ. ಹಾಗೆಯೇ ಸುನ್ನತಿಯಿಲ್ಲದವರನ್ನು ನಿರ್ಣಯಿಸುವುದಕ್ಕೂ ನಂಬಿಕೆಯೇ ಕಾರಣ.
យស្មាទ៑ ឯក ឦឝ្វរោ វិឝ្វាសាត៑ ត្វក្ឆេទិនោ វិឝ្វាសេនាត្វក្ឆេទិនឝ្ច សបុណ្យីករិឞ្យតិ។
31 ೩೧ ಹಾಗಾದರೆ ನಂಬಿಕೆಯಿಂದ ಧರ್ಮಶಾಸ್ತ್ರವನ್ನು ತೆಗೆದು ಹಾಕುತ್ತೇವೋ? ಎಂದಿಗೂ ಇಲ್ಲ. ಧರ್ಮಶಾಸ್ತ್ರವನ್ನು ಸ್ಥಿರಪಡಿಸುತ್ತೇವಷ್ಟೇ.
តហ៌ិ វិឝ្វាសេន វយំ កិំ វ្យវស្ថាំ លុម្បាម? ឥត្ថំ ន ភវតុ វយំ វ្យវស្ថាំ សំស្ថាបយាម ឯវ។

< ರೋಮಾಪುರದವರಿಗೆ 3 >