< ಮತ್ತಾಯನು 13 >

1 ಆದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸಮುದ್ರದ ದಡದಲ್ಲಿ ಕುಳಿತುಕೊಂಡನು.
અપરઞ્ચ તસ્મિન્ દિને યીશુઃ સદ્મનો ગત્વા સરિત્પતે રોધસિ સમુપવિવેશ|
2 ಬಹಳ ಜನರ ಗುಂಪು ಆತನ ಬಳಿಗೆ ಸೇರಿಬಂದುದರಿಂದ ಆತನು ದೋಣಿ ಹತ್ತಿ ಕುಳಿತುಕೊಂಡನು. ಆ ಜನರೆಲ್ಲರೂ ದಡದಲ್ಲಿ ನಿಂತಿದ್ದರು.
તત્ર તત્સન્નિધૌ બહુજનાનાં નિવહોપસ્થિતેઃ સ તરણિમારુહ્ય સમુપાવિશત્, તેન માનવા રોધસિ સ્થિતવન્તઃ|
3 ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಹೇಳಿದನು.
તદાનીં સ દૃષ્ટાન્તૈસ્તાન્ ઇત્થં બહુશ ઉપદિષ્ટવાન્| પશ્યત, કશ્ચિત્ કૃષીવલો બીજાનિ વપ્તું બહિર્જગામ,
4 “ಕೇಳಿರಿ, ಬಿತ್ತುವವನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಅವುಗಳನ್ನು ತಿಂದು ಬಿಟ್ಟವು.
તસ્ય વપનકાલે કતિપયબીજેષુ માર્ગપાર્શ્વે પતિતેષુ વિહગાસ્તાનિ ભક્ષિતવન્તઃ|
5 ಕೆಲವು ಬೀಜಗಳು ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು. ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗ ಮೊಳೆತವು.
અપરં કતિપયબીજેષુ સ્તોકમૃદ્યુક્તપાષાણે પતિતેષુ મૃદલ્પત્વાત્ તત્ક્ષણાત્ તાન્યઙ્કુરિતાનિ,
6 ಆದರೆ ಬಿಸಿಲೇರಿದಾಗ ಬೇರಿಲ್ಲದ ಕಾರಣ ಬಾಡಿ ಒಣಗಿಹೋದವು.
કિન્તુ રવાવુદિતે દગ્ધાનિ તેષાં મૂલાપ્રવિષ્ટત્વાત્ શુષ્કતાં ગતાનિ ચ|
7 ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು, ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
અપરં કતિપયબીજેષુ કણ્ટકાનાં મધ્યે પતિતેષુ કણ્ટકાન્યેધિત્વા તાનિ જગ્રસુઃ|
8 ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಕೆಲವು ನೂರರಷ್ಟು ಕೆಲವು ಅರವತ್ತರಷ್ಟು, ಕೆಲವು ಮೂವತ್ತರಷ್ಟು ಫಲವನ್ನು ಕೊಟ್ಟವು.
અપરઞ્ચ કતિપયબીજાનિ ઉર્વ્વરાયાં પતિતાનિ; તેષાં મધ્યે કાનિચિત્ શતગુણાનિ કાનિચિત્ ષષ્ટિગુણાનિ કાનિચિત્ ત્રિંશગુંણાનિ ફલાનિ ફલિતવન્તિ|
9 ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಅಂದನು.
શ્રોતું યસ્ય શ્રુતી આસાતે સ શૃણુયાત્|
10 ೧೦ ತರುವಾಯ ಆತನ ಶಿಷ್ಯರು ಬಂದು, “ಏಕೆ ಸಾಮ್ಯರೂಪವಾಗಿ ಜನರ ಗುಂಪಿನ ಸಂಗಡ ಮಾತನಾಡುತ್ತಿ?” ಎಂದು ಕೇಳಿದರು.
અનન્તરં શિષ્યૈરાગત્ય સોઽપૃચ્છ્યત, ભવતા તેભ્યઃ કુતો દૃષ્ટાન્તકથા કથ્યતે?
11 ೧೧ ಅದಕ್ಕಾತನು ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ಪರಲೋಕ ರಾಜ್ಯದ ಮರ್ಮಗಳನ್ನು ತಿಳಿಯುವ ಭಾಗ್ಯವು ನಿಮಗೆ ಕೊಟ್ಟಿದೆ ಅವರಿಗೆ ಕೊಟ್ಟಿಲ್ಲ.
તતઃ સ પ્રત્યવદત્, સ્વર્ગરાજ્યસ્ય નિગૂઢાં કથાં વેદિતું યુષ્મભ્યં સામર્થ્યમદાયિ, કિન્તુ તેભ્યો નાદાયિ|
12 ೧೨ ಏಕೆಂದರೆ ಇದ್ದವನಿಗೆ ಕೊಡಲ್ಪಡುವುದು ಅವನಿಗೆ ಇನ್ನೂ ಹೆಚ್ಚು ಸಮೃದ್ಧಿಯಾಗುವುದು ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು.
યસ્માદ્ યસ્યાન્તિકે વર્દ્ધતે, તસ્માયેવ દાયિષ્યતે, તસ્માત્ તસ્ય બાહુલ્યં ભવિષ્યતિ, કિન્તુ યસ્યાન્તિકે ન વર્દ્ધતે, તસ્ય યત્ કિઞ્ચનાસ્તે, તદપિ તસ્માદ્ આદાયિષ્યતે|
13 ೧೩ ನಾನು ಅವರ ಸಂಗಡ ಸಾಮ್ಯರೂಪವಾಗಿ ಮಾತನಾಡುವುದಕ್ಕೆ ಕಾರಣವೇನೆಂದರೆ, ಅವರು ಕಂಡರೂ ಕಾಣುವುದಿಲ್ಲ. ಅವರು ಕೇಳಿದರೂ ನಿಜವಾಗಿಯೂ ಆಲಿಸುವುದಿಲ್ಲ ಮತ್ತು ತಿಳಿದುಕೊಳ್ಳುವುದಿಲ್ಲ.
તે પશ્યન્તોપિ ન પશ્યન્તિ, શૃણ્વન્તોપિ ન શૃણ્વન્તિ, બુધ્યમાના અપિ ન બુધ્યન્તે ચ, તસ્માત્ તેભ્યો દૃષ્ટાન્તકથા કથ્યતે|
14 ೧೪ “ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ. ಅದೇನೆಂದರೆ, ‘ನೀವು ಕೇಳುತ್ತೀರಿ, ಕೇಳಿದರೂ ತಿಳಿದುಕೊಳ್ಳುವುದೇ ಇಲ್ಲ. ನೀವು ನೋಡುತ್ತೀರಿ, ನೋಡಿದರೂ ಗ್ರಹಿಸುವುದೇ ಇಲ್ಲ.
યથા કર્ણૈઃ શ્રોષ્યથ યૂયં વૈ કિન્તુ યૂયં ન ભોત્સ્યથ| નેત્રૈર્દ્રક્ષ્યથ યૂયઞ્ચ પરિજ્ઞાતું ન શક્ષ્યથ| તે માનુષા યથા નૈવ પરિપશ્યન્તિ લોચનૈઃ| કર્ણૈ ર્યથા ન શૃણ્વન્તિ ન બુધ્યન્તે ચ માનસૈઃ| વ્યાવર્ત્તિતેષુ ચિત્તેષુ કાલે કુત્રાપિ તૈર્જનૈઃ| મત્તસ્તે મનુજાઃ સ્વસ્થા યથા નૈવ ભવન્તિ ચ| તથા તેષાં મનુષ્યાણાં ક્રિયન્તે સ્થૂલબુદ્ધયઃ| બધિરીભૂતકર્ણાશ્ચ જાતાશ્ચ મુદ્રિતા દૃશઃ|
15 ೧೫ ಈ ಜನರ ಹೃದಯವು ಮಂಕಾಯಿತು. ಇವರ ಕಿವಿಗಳು ಮಂದವಾದವು. ಇವರು ಕಣ್ಣು ಮುಚ್ಚಿಕೊಂಡಿದ್ದಾರೆ. ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ, ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆ ಹೊಂದಬಾರದೆಂದು ನಿರ್ಧಾರ ಮಾಡಿಕೊಂಡಿದ್ದಾರೆ’” ಎಂಬುದೇ.
યદેતાનિ વચનાનિ યિશયિયભવિષ્યદ્વાદિના પ્રોક્તાનિ તેષુ તાનિ ફલન્તિ|
16 ೧೬ “ಆದರೆ ನೀವು ಧನ್ಯರು ಏಕೆಂದರೆನಿಮ್ಮ ಕಣ್ಣುಗಳು ಕಾಣುತ್ತವೆ, ನಿಮ್ಮ ಕಿವಿಗಳು ಕೇಳುತ್ತವೆ.
કિન્તુ યુષ્માકં નયનાનિ ધન્યાનિ, યસ્માત્ તાનિ વીક્ષન્તે; ધન્યાશ્ચ યુષ્માકં શબ્દગ્રહાઃ, યસ્માત્ તૈરાકર્ણ્યતે|
17 ೧೭ ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ನೋಡುತ್ತಿರುವ ಕಾರ್ಯಗಳನ್ನು ಬಹು ಮಂದಿ ಪ್ರವಾದಿಗಳೂ, ನೀತಿವಂತರೂ ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಾಗಲಿಲ್ಲ. ನೀವು ಕೇಳುತ್ತಿರುವ ಸಂಗತಿಗಳನ್ನು ಅವರು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಾಗಲಿಲ್ಲ.
મયા યૂયં તથ્યં વચામિ યુષ્માભિ ર્યદ્યદ્ વીક્ષ્યતે, તદ્ બહવો ભવિષ્યદ્વાદિનો ધાર્મ્મિકાશ્ચ માનવા દિદૃક્ષન્તોપિ દ્રષ્ટું નાલભન્ત, પુનશ્ચ યૂયં યદ્યત્ શૃણુથ, તત્ તે શુશ્રૂષમાણા અપિ શ્રોતું નાલભન્ત|
18 ೧೮ “ಬಿತ್ತುವವನ ವಿಷಯವಾದ ಸಾಮ್ಯದ ಅರ್ಥವನ್ನು ಕೇಳಿರಿ.
કૃષીવલીયદૃષ્ટાન્તસ્યાર્થં શૃણુત|
19 ೧೯ ಯಾವನಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ತಿಳಿದುಕೊಳ್ಳದೆ ಇದ್ದರೆದುಷ್ಟನು ಬಂದು ಆತನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಹಾಕುತ್ತಾನೆ. ಇವನೇ ಬೀಜ ಬಿದ್ದ ದಾರಿಯ ಮಗ್ಗುಲಾಗಿರುವನು.
માર્ગપાર્શ્વે બીજાન્યુપ્તાનિ તસ્યાર્થ એષઃ, યદા કશ્ચિત્ રાજ્યસ્ય કથાં નિશમ્ય ન બુધ્યતે, તદા પાપાત્માગત્ય તદીયમનસ ઉપ્તાં કથાં હરન્ નયતિ|
20 ೨೦ ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟವನು ಯಾರೆಂದರೆ, ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸಿದರೂ,
અપરં પાષાણસ્થલે બીજાન્યુપ્તાનિ તસ્યાર્થ એષઃ; કશ્ચિત્ કથાં શ્રુત્વૈવ હર્ષચિત્તેન ગૃહ્લાતિ,
21 ೨೧ ತನಗೆ ಬೇರಿಲ್ಲದ ಕಾರಣ ಇವನು ಸ್ವಲ್ಪ ಕಾಲ ಮಾತ್ರವೇ ಇದ್ದು ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಕೂಡಲೆ ಎಡವಿ ಬೀಳುತ್ತಾನೆ.
કિન્તુ તસ્ય મનસિ મૂલાપ્રવિષ્ટત્વાત્ સ કિઞ્ચિત્કાલમાત્રં સ્થિરસ્તિષ્ઠતિ; પશ્ચાત તત્કથાકારણાત્ કોપિ ક્લેસ્તાડના વા ચેત્ જાયતે, તર્હિ સ તત્ક્ષણાદ્ વિઘ્નમેતિ|
22 ೨೨ ಮುಳ್ಳುಗಿಡಗಳ ನೆಲದಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಯೂ, ಐಶ್ವರ್ಯದ ಮೋಸತನವೂ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ಫಲವನ್ನು ಕೊಡದೇ ಇರುತ್ತಾನೆ. (aiōn g165)
અપરં કણ્ટકાનાં મધ્યે બીજાન્યુપ્તાનિ તદર્થ એષઃ; કેનચિત્ કથાયાં શ્રુતાયાં સાંસારિકચિન્તાભિ ર્ભ્રાન્તિભિશ્ચ સા ગ્રસ્યતે, તેન સા મા વિફલા ભવતિ| (aiōn g165)
23 ೨೩ ಒಳ್ಳೆಯ ಮಣ್ಣಿನಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿ ತಿಳಿದುಕೊಂಡು ಫಲವಂತನಾಗಿ ನೂರರಷ್ಟಾಗಲಿ, ಅರವತ್ತರಷ್ಟಾಗಲಿ, ಮೂವತ್ತರಷ್ಟಾಗಲಿ ಫಲವನ್ನು ಕೊಡುವವನೇ” ಎಂದು ಹೇಳಿದನು.
અપરમ્ ઉર્વ્વરાયાં બીજાન્યુપ્તાનિ તદર્થ એષઃ; યે તાં કથાં શ્રુત્વા વુધ્યન્તે, તે ફલિતાઃ સન્તઃ કેચિત્ શતગુણાનિ કેચિત ષષ્ટિગુણાનિ કેચિચ્ચ ત્રિંશદ્ગુણાનિ ફલાનિ જનયન્તિ|
24 ೨೪ ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ.
અનન્તરં સોપરામેકાં દૃષ્ટાન્તકથામુપસ્થાપ્ય તેભ્યઃ કથયામાસ; સ્વર્ગીયરાજ્યં તાદૃશેન કેનચિદ્ ગૃહસ્થેનોપમીયતે, યેન સ્વીયક્ષેત્રે પ્રશસ્તબીજાન્યૌપ્યન્ત|
25 ೨೫ ಆದರೆ ಜನರು ನಿದ್ರೆ ಮಾಡುವ ಸಮಯದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಕಳೆಯನ್ನು ಬಿತ್ತಿ ಹೋದನು.
કિન્તુ ક્ષણદાયાં સકલલોકેષુ સુપ્તેષુ તસ્ય રિપુરાગત્ય તેષાં ગોધૂમબીજાનાં મધ્યે વન્યયવમબીજાન્યુપ્ત્વા વવ્રાજ|
26 ೨೬ ಗೋದಿಯು ಬೆಳೆದು ಫಲ ಬಿಟ್ಟಾಗ ಕಳೆಯು ಸಹ ಕಾಣ ಬಂದಿತು.
તતો યદા બીજેભ્યોઽઙ્કરા જાયમાનાઃ કણિશાનિ ઘૃતવન્તઃ; તદા વન્યયવસાન્યપિ દૃશ્યમાનાન્યભવન્|
27 ೨೭ ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು, ‘ಅಯ್ಯಾ ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ್ದಿಯಲ್ಲಾ ಕಳೆ ಎಲ್ಲಿಂದ ಬಂದಿತು?’ ಎಂದು ಕೇಳಿದರು.
તતો ગૃહસ્થસ્ય દાસેયા આગમ્ય તસ્મૈ કથયાઞ્ચક્રુઃ, હે મહેચ્છ, ભવતા કિં ક્ષેત્રે ભદ્રબીજાનિ નૌપ્યન્ત? તથાત્વે વન્યયવસાનિ કૃત આયન્?
28 ೨೮ ಅದಕ್ಕೆ ಅವನು, ‘ಇದು ವೈರಿ ಮಾಡಿದ ಕೆಲಸ’ ಎಂದು ಹೇಳಿದನು, ಅದಕ್ಕೆ ಆಳುಗಳು ಅವನಿಗೆ, ‘ಹಾಗಾದರೆ ನಾವು ಹೋಗಿ ಅದನ್ನು ಕಿತ್ತುಹಾಕುವುದು ನಿಮಗೆ ಇಷ್ಟವಿದೆಯೋ?’ ಎಂದು ಕೇಳಿದರು.
તદાનીં તેન તે પ્રતિગદિતાઃ, કેનચિત્ રિપુણા કર્મ્મદમકારિ| દાસેયાઃ કથયામાસુઃ, વયં ગત્વા તાન્યુત્પાય્ય ક્ષિપામો ભવતઃ કીદૃશીચ્છા જાયતે?
29 ೨೯ ಅವರಿಗೆ ಅವನು, ‘ಬೇಡ, ಕಳೆಯನ್ನು ಕೀಳುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ.
તેનાવાદિ, નહિ, શઙ્કેઽહં વન્યયવસોત્પાટનકાલે યુષ્માભિસ્તૈઃ સાકં ગોધૂમા અપ્યુત્પાટિષ્યન્તે|
30 ೩೦ ಸುಗ್ಗಿ ಕಾಲದ ತನಕ ಎರಡೂ ಒಟ್ಟಿಗೆ ಬೆಳೆಯಲಿ. ಸುಗ್ಗಿ ಕಾಲದಲ್ಲಿ ನಾನು ಕೊಯ್ಯುವವರಿಗೆ, ಮೊದಲು ಕಳೆಯನ್ನು ಕಿತ್ತು ತೆಗೆದು ಹೊರೆಕಟ್ಟಿ ಅದನ್ನು ಸುಡುವುದಕ್ಕೆ ಹಾಕಿ, ಗೋದಿಯನ್ನು ಕೂಡಿಸಿ ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು’” ಅಂದನು.
અતઃ શ્સ્યકર્ત્તનકાલં યાવદ્ ઉભયાન્યપિ સહ વર્દ્ધન્તાં, પશ્ચાત્ કર્ત્તનકાલે કર્ત્તકાન્ વક્ષ્યામિ, યૂયમાદૌ વન્યયવસાનિ સંગૃહ્ય દાહયિતું વીટિકા બદ્વ્વા સ્થાપયત; કિન્તુ સર્વ્વે ગોધૂમા યુષ્માભિ ર્ભાણ્ડાગારં નીત્વા સ્થાપ્યન્તામ્|
31 ೩೧ ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು.
અનન્તરં સોપરામેકાં દૃષ્ટાન્તકથામુત્થાપ્ય તેભ્યઃ કથિતવાન્ કશ્ચિન્મનુજઃ સર્ષપબીજમેકં નીત્વા સ્વક્ષેત્ર ઉવાપ|
32 ೩೨ ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. ಆದರೂ ಬೆಳೆದ ಮೇಲೆ ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ” ಎಂದು ಹೇಳಿದನು.
સર્ષપબીજં સર્વ્વસ્માદ્ બીજાત્ ક્ષુદ્રમપિ સદઙ્કુરિતં સર્વ્વસ્માત્ શાકાત્ બૃહદ્ ભવતિ; સ તાદૃશસ્તરુ ર્ભવતિ, યસ્ય શાખાસુ નભસઃ ખગા આગત્ય નિવસન્તિ; સ્વર્ગીયરાજ્યં તાદૃશસ્ય સર્ષપૈકસ્ય સમમ્|
33 ೩೩ ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.”
પુનરપિ સ ઉપમાકથામેકાં તેભ્યઃ કથયાઞ્ચકાર; કાચન યોષિત્ યત્ કિણ્વમાદાય દ્રોણત્રયમિતગોધૂમચૂર્ણાનાં મધ્યે સર્વ્વેષાં મિશ્રીભવનપર્ય્યન્તં સમાચ્છાદ્ય નિધત્તવતી, તત્કિણ્વમિવ સ્વર્ગરાજ્યં|
34 ೩೪ ಯೇಸು ಈ ಸಂಗತಿಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು. ಸಾಮ್ಯವಿಲ್ಲದೆ ಏನನ್ನೂ ಹೇಳಲಿಲ್ಲ.
ઇત્થં યીશુ ર્મનુજનિવહાનાં સન્નિધાવુપમાકથાભિરેતાન્યાખ્યાનાનિ કથિતવાન્ ઉપમાં વિના તેભ્યઃ કિમપિ કથાં નાકથયત્|
35 ೩೫ ಹೀಗೆ, “ನಾನು ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು; ಲೋಕದ ಆರಂಭದಿಂದ ಮರೆಯಾಗಿದ್ದವುಗಳನ್ನು ಗೋಚರಪಡಿಸುವೆನು” ಎಂದು ಪ್ರವಾದಿಯ ಮುಖಾಂತರ ನುಡಿದ ಮಾತು ನೆರವೇರಿತು.
એતેન દૃષ્ટાન્તીયેન વાક્યેન વ્યાદાય વદનં નિજં| અહં પ્રકાશયિષ્યામિ ગુપ્તવાક્યં પુરાભવં| યદેતદ્વચનં ભવિષ્યદ્વાદિના પ્રોક્તમાસીત્, તત્ સિદ્ધમભવત્|
36 ೩೬ ಅನಂತರ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಹೋದನು. ಆಗ ಆತನ ಶಿಷ್ಯರು ಆತನ ಬಳಿಗೆ ಬಂದು, ಹೊಲದ ಕಳೆಯ ಸಾಮ್ಯದ ಅರ್ಥವನ್ನು ನಮಗೆ ವಿವರಿಸು ಅಂದರು.
સર્વ્વાન્ મનુજાન્ વિસૃજ્ય યીશૌ ગૃહં પ્રવિષ્ટે તચ્છિષ્યા આગત્ય યીશવે કથિતવન્તઃ, ક્ષેત્રસ્ય વન્યયવસીયદૃષ્ટાન્તકથામ્ ભવાન અસ્માન્ સ્પષ્ટીકૃત્ય વદતુ|
37 ೩೭ ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ಒಳ್ಳೆಯ ಬೀಜವನ್ನು ಬಿತ್ತುವವನು ಮನುಷ್ಯಕುಮಾರನು.
તતઃ સ પ્રત્યુવાચ, યેન ભદ્રબીજાન્યુપ્યન્તે સ મનુજપુત્રઃ,
38 ೩೮ ಹೊಲವೆಂದರೆ ಈ ಲೋಕ. ಒಳ್ಳೆಯ ಬೀಜವೆಂದರೆರಾಜ್ಯದ ಮಕ್ಕಳು.
ક્ષેત્રં જગત્, ભદ્રબીજાની રાજ્યસ્ય સન્તાનાઃ,
39 ೩೯ ಕಳೆಯೆಂದರೆ ದುಷ್ಟನ ಮಕ್ಕಳು. ಅದನ್ನು ಬಿತ್ತುವ ವೈರಿ ಎಂದರೆ ಸೈತಾನನು. ಸುಗ್ಗಿಯ ಕಾಲವೆಂದರೆ ಯುಗದ ಸಮಾಪ್ತಿ. ಕೊಯ್ಯುವವರು ಅಂದರೆ ದೇವದೂತರು. (aiōn g165)
વન્યયવસાનિ પાપાત્મનઃ સન્તાનાઃ| યેન રિપુણા તાન્યુપ્તાનિ સ શયતાનઃ, કર્ત્તનસમયશ્ચ જગતઃ શેષઃ, કર્ત્તકાઃ સ્વર્ગીયદૂતાઃ| (aiōn g165)
40 ೪೦ ಹೀಗಿರಲಾಗಿ ಹೇಗೆ ಕಳೆಯನ್ನು ಆರಿಸಿ ತೆಗೆದು ಸುಟ್ಟುಬಿಡುತ್ತಾರೋ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಸಂಭವಿಸುವುದು. (aiōn g165)
યથા વન્યયવસાનિ સંગૃહ્ય દાહ્યન્તે, તથા જગતઃ શેષે ભવિષ્યતિ; (aiōn g165)
41 ೪೧ ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದೊಳಗಿಂದ ಪಾಪಕ್ಕೆ ಕಾರಣವಾದವರೆಲ್ಲರನ್ನೂ ಅಧರ್ಮಿಗಳನ್ನೂ ಕೂಡಿಸಿ ಬೆಂಕಿ ಕೊಂಡದಲ್ಲಿ ಹಾಕುವರು.
અર્થાત્ મનુજસુતઃ સ્વાંયદૂતાન્ પ્રેષયિષ્યતિ, તેન તે ચ તસ્ય રાજ્યાત્ સર્વ્વાન્ વિઘ્નકારિણોઽધાર્મ્મિકલોકાંશ્ચ સંગૃહ્ય
42 ೪೨ ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು
યત્ર રોદનં દન્તઘર્ષણઞ્ચ ભવતિ, તત્રાગ્નિકુણ્ડે નિક્ષેપ્સ્યન્તિ|
43 ೪೩ ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದ್ದಕ್ಕೆ ಕಿವಿಗಳುಳ್ಳವನು ಕೇಳಿಸಿಕೊಳ್ಳಲಿ ಅಂದನು.
તદાનીં ધાર્મ્મિકલોકાઃ સ્વેષાં પિતૂ રાજ્યે ભાસ્કરઇવ તેજસ્વિનો ભવિષ્યન્તિ| શ્રોતું યસ્ય શ્રુતી આસાતે, મ શૃણુયાત્|
44 ೪೪ “ಪರಲೋಕ ರಾಜ್ಯವು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಟ್ಟು. ತನಗಾದ ಸಂತೋಷದಿಂದ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.
અપરઞ્ચ ક્ષેત્રમધ્યે નિધિં પશ્યન્ યો ગોપયતિ, તતઃ પરં સાનન્દો ગત્વા સ્વીયસર્વ્વસ્વં વિક્રીય ત્તક્ષેત્રં ક્રીણાતિ, સ ઇવ સ્વર્ગરાજ્યં|
45 ೪೫ ಮತ್ತು ಪರಲೋಕ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
અન્યઞ્ચ યો વણિક્ ઉત્તમાં મુક્તાં ગવેષયન્
46 ೪೬ ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.
મહાર્ઘાં મુક્તાં વિલોક્ય નિજસર્વ્વસ્વં વિક્રીય તાં ક્રીણાતિ, સ ઇવ સ્વર્ગરાજ્યં|
47 ೪೭ “ಪರಲೋಕ ರಾಜ್ಯವು ಸಮುದ್ರದಲ್ಲಿ ಎಲ್ಲಾ ತರವಾದ ಮೀನುಗಳನ್ನು ಹಿಡಿಯುವ ಒಂದು ಬಲೆಗೆ ಹೋಲಿಕೆಯಾಗಿದೆ.
પુનશ્ચ સમુદ્રો નિક્ષિપ્તઃ સર્વ્વપ્રકારમીનસંગ્રાહ્યાનાયઇવ સ્વર્ગરાજ્યં|
48 ೪೮ ಅದು ತುಂಬಿದ ಮೇಲೆ ಬೆಸ್ತರು ಅದನ್ನು ದಡಕ್ಕೆ ಎಳೆದುತಂದು ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿಬಿಡುವರು.
તસ્મિન્ આનાયે પૂર્ણે જના યથા રોધસ્યુત્તોલ્ય સમુપવિશ્ય પ્રશસ્તમીનાન્ સંગ્રહ્ય ભાજનેષુ નિદધતે, કુત્સિતાન્ નિક્ષિપન્તિ;
49 ೪೯ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಆಗುವುದು. ದೇವದೂತರು ಹೊರಟು ಬಂದು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆ ಮಾಡಿ ಅವರನ್ನು ಬೆಂಕಿಯ ಕೊಂಡದಲ್ಲಿ ಹಾಕುವರು. (aiōn g165)
તથૈવ જગતઃ શેષે ભવિષ્યતિ, ફલતઃ સ્વર્ગીયદૂતા આગત્ય પુણ્યવજ્જનાનાં મધ્યાત્ પાપિનઃ પૃથક્ કૃત્વા વહ્નિકુણ્ડે નિક્ષેપ્સ્યન્તિ, (aiōn g165)
50 ೫೦ ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
તત્ર રોદનં દન્તૈ ર્દન્તઘર્ષણઞ્ચ ભવિષ્યતઃ|
51 ೫೧ “ಈ ಎಲ್ಲಾ ಸಂಗತಿಗಳು ನಿಮಗೆ ಅರ್ಥವಾಯಿತೋ” ಎಂದು ಕೇಳಲು, ಶಿಷ್ಯರು, “ಅರ್ಥವಾಯಿತು” ಅಂದರು.
યીશુના તે પૃષ્ટા યુષ્માભિઃ કિમેતાન્યાખ્યાનાન્યબુધ્યન્ત? તદા તે પ્રત્યવદન્, સત્યં પ્રભો|
52 ೫೨ ಆಗ ಆತನು ಅವರಿಗೆ, “ಹೀಗಿರಲಾಗಿ ಪರಲೋಕ ರಾಜ್ಯದ ವಿಷಯವಾಗಿ ಉಪದೇಶಹೊಂದಿ ಶಿಕ್ಷಿತನಾದ ಪ್ರತಿಯೊಬ್ಬ ಶಾಸ್ತ್ರೋಪದೇಶಕನು, ತನ್ನ ಬೊಕ್ಕಸದೊಳಗಿನಿಂದ ಹೊಸ ವಸ್ತುಗಳನ್ನೂ, ಹಳೆಯ ವಸ್ತುಗಳನ್ನೂ ಹೊರಗೆ ತೆಗೆಯುವಂಥ ಮನೆ ಯಜಮಾನನಿಗೆ ಹೋಲಿಕೆಯಾಗಿದ್ದಾನೆ” ಎಂದು ಹೇಳಿದನು.
તદાનીં સ કથિતવાન્, નિજભાણ્ડાગારાત્ નવીનપુરાતનાનિ વસ્તૂનિ નિર્ગમયતિ યો ગૃહસ્થઃ સ ઇવ સ્વર્ગરાજ્યમધિ શિક્ષિતાઃ સ્વર્વ ઉપદેષ્ટારઃ|
53 ೫೩ ಯೇಸು ಈ ಸಾಮ್ಯಗಳನ್ನು ಹೇಳಿ ಮುಗಿಸಿದ ಮೇಲೆ ಅಲ್ಲಿಂದ ಹೊರಟು ಹೋದನು.
અનન્તરં યીશુરેતાઃ સર્વ્વા દૃષ્ટાન્તકથાઃ સમાપ્ય તસ્માત્ સ્થાનાત્ પ્રતસ્થે| અપરં સ્વદેશમાગત્ય જનાન્ ભજનભવન ઉપદિષ્ટવાન્;
54 ೫೪ ತರುವಾಯ ಆತನು ತನ್ನ ಸ್ವಂತ ಊರಿಗೆ ಬಂದು ಅವರ ಸಭಾಮಂದಿರದಲ್ಲಿ ಜನರಿಗೆ ಉಪದೇಶಮಾಡುತ್ತಿದ್ದನು. ಅವರು ಅದನ್ನು ಕೇಳಿ ಆಶ್ಚರ್ಯ ಪಟ್ಟು, “ಇವನಿಗೆ ಈ ಜ್ಞಾನವೂ ಈ ಮಹತ್ಕಾರ್ಯಗಳೂ ಎಲ್ಲಿಂದ ಬಂದಿದ್ದಾವು?
તે વિસ્મયં ગત્વા કથિતવન્ત એતસ્યૈતાદૃશં જ્ઞાનમ્ આશ્ચર્ય્યં કર્મ્મ ચ કસ્માદ્ અજાયત?
55 ೫೫ ಇವನು ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳೆಂಬುವವಳಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವರು ಇವನ ತಮ್ಮಂದಿರಲ್ಲವೇ?
કિમયં સૂત્રધારસ્ય પુત્રો નહિ? એતસ્ય માતુ ર્નામ ચ કિં મરિયમ્ નહિ? યાકુબ્-યૂષફ્-શિમોન્-યિહૂદાશ્ચ કિમેતસ્ય ભ્રાતરો નહિ?
56 ೫೬ ಇವನ ತಂಗಿಯರೆಲ್ಲರೂ ನಮ್ಮಲ್ಲಿ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವೂ ಇವನಿಗೆ ಎಲ್ಲಿಂದ ಬಂದಿದ್ದಾವು?” ಎಂದು ಅಂದುಕೊಂಡು ಆತನ ವಿಷಯದಲ್ಲಿ ತಿರಸ್ಕಾರವುಳ್ಳವರಾದರು.
એતસ્ય ભગિન્યશ્ચ કિમસ્માકં મધ્યે ન સન્તિ? તર્હિ કસ્માદયમેતાનિ લબ્ધવાન્? ઇત્થં સ તેષાં વિઘ્નરૂપો બભૂવ;
57 ೫೭ ಆದರೆ ಯೇಸುವು ಅವರಿಗೆ “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು. ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ” ಅಂದನು.
તતો યીશુના નિગદિતં સ્વદેશીયજનાનાં મધ્યં વિના ભવિષ્યદ્વાદી કુત્રાપ્યન્યત્ર નાસમ્માન્યો ભવતી|
58 ೫೮ ಅವರ ಅಪನಂಬಿಕೆಯ ನಿಮಿತ್ತ ಆತನು ಅಲ್ಲಿ ಹೆಚ್ಚು ಮಹತ್ಕಾರ್ಯಗಳನ್ನು ಮಾಡಲಿಲ್ಲ.
તેષામવિશ્વાસહેતોઃ સ તત્ર સ્થાને બહ્વાશ્ચર્ય્યકર્મ્માણિ ન કૃતવાન્|

< ಮತ್ತಾಯನು 13 >