< ಲೂಕನು 22 >

1 ಪಸ್ಕವೆಂದು ಕರೆಯಲ್ಪಡುವ ಹುಳಿಯಿಲ್ಲದ ರೊಟ್ಟಿಯ ಹಬ್ಬವು ಹತ್ತಿರವಾದಾಗ,
અપરઞ્ચ કિણ્વશૂન્યપૂપોત્સવસ્ય કાલ ઉપસ્થિતે
2 ಮುಖ್ಯಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಕೊಲ್ಲಬೇಕೆಂದಿದ್ದರು. ಆದರೆ ಜನರಿಗೆ ಹೆದರಿ ತಕ್ಕ ಮಾರ್ಗವನ್ನು ಹುಡುಕುತ್ತಿದ್ದರು.
પ્રધાનયાજકા અધ્યાયકાશ્ચ યથા તં હન્તું શક્નુવન્તિ તથોપાયામ્ અચેષ્ટન્ત કિન્તુ લોકેભ્યો બિભ્યુઃ|
3 ಆಗ ಸೈತಾನನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತನೆಂಬ ಯೂದನಲ್ಲಿ ಪ್ರವೇಶಿಸಲು,
એતસ્તિન્ સમયે દ્વાદશશિષ્યેષુ ગણિત ઈષ્કરિયોતીયરૂઢિમાન્ યો યિહૂદાસ્તસ્યાન્તઃકરણં શૈતાનાશ્રિતત્વાત્
4 ಅವನು ಮುಖ್ಯಯಾಜಕರ ಬಳಿಗೂ ಕಾವಲಿನ ದಳವಾಯಿಗಳ ಬಳಿಗೂ ಹೋಗಿ ತಾನು ಯೇಸುವನ್ನು ಹಿಡಿದುಕೊಡುವ ಉಪಾಯವನ್ನು ಕುರಿತು ಅವರ ಸಂಗಡ ಮಾತನಾಡಿದನು.
સ ગત્વા યથા યીશું તેષાં કરેષુ સમર્પયિતું શક્નોતિ તથા મન્ત્રણાં પ્રધાનયાજકૈઃ સેનાપતિભિશ્ચ સહ ચકાર|
5 ಅವರು ಸಂತೋಷಪಟ್ಟು ನಿನಗೆ ಹಣ ಕೊಡುತ್ತೇವೆಂದು ಒಪ್ಪಂದ ಮಾಡಲು,
તેન તે તુષ્ટાસ્તસ્મૈ મુદ્રાં દાતું પણં ચક્રુઃ|
6 ಅವನು ಒಪ್ಪಿಕೊಂಡು, ಜನಸಮೂಹವಿಲ್ಲದಿರುವಾಗ ಆತನನ್ನು ಅವರಿಗೆ ಹಿಡಿದುಕೊಡುವುದಕ್ಕೆ ಅನುಕೂಲವಾದ ಸಂದರ್ಭವನ್ನು ನೋಡುತ್ತಿದ್ದನು.
તતઃ સોઙ્ગીકૃત્ય યથા લોકાનામગોચરે તં પરકરેષુ સમર્પયિતું શક્નોતિ તથાવકાશં ચેષ્ટિતુમારેભે|
7 ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯತಕ್ಕ ದಿನ ಬಂದಾಗ,
અથ કિણ્વશૂન્યપૂપોત્મવદિને, અર્થાત્ યસ્મિન્ દિને નિસ્તારોત્સવસ્ય મેષો હન્તવ્યસ્તસ્મિન્ દિને
8 ಯೇಸು ಪೇತ್ರನಿಗೂ ಯೋಹಾನನಿಗೂ, “ನೀವು ಹೋಗಿ ನಾವು ಪಸ್ಕದ ಊಟಮಾಡುವಂತೆ ಸಿದ್ಧಮಾಡಿರಿ” ಎಂದು ಹೇಳಿ ಅವರನ್ನು ಕಳುಹಿಸಿದನು.
યીશુઃ પિતરં યોહનઞ્ચાહૂય જગાદ, યુવાં ગત્વાસ્માકં ભોજનાર્થં નિસ્તારોત્સવસ્ય દ્રવ્યાણ્યાસાદયતં|
9 ಅವರು, “ನಾವು ಎಲ್ಲಿ ಸಿದ್ಧಮಾಡಬೇಕನ್ನುತ್ತೀ?” ಎಂದು ಆತನನ್ನು ಕೇಳಲು,
તદા તૌ પપ્રચ્છતુઃ કુચાસાદયાવો ભવતઃ કેચ્છા?
10 ೧೦ ಆತನು ಅವರಿಗೆ, “ನೋಡಿರಿ, ನೀವು ಪಟ್ಟಣದೊಳಕ್ಕೆ ಹೋದ ಮೇಲೆ ಒಬ್ಬ ಮನುಷ್ಯನು ತುಂಬಿದ ಕೊಡವನ್ನು ಹೊತ್ತುಕೊಂಡು ನಿಮ್ಮೆದುರಿಗೆ ಬರುವನು. ಅವನು ಹೋಗುವ ಮನೆಗೆ ನೀವು ಅವನ ಹಿಂದೆ ಹೋಗಿ,
તદા સોવાદીત્, નગરે પ્રવિષ્ટે કશ્ચિજ્જલકુમ્ભમાદાય યુવાં સાક્ષાત્ કરિષ્યતિ સ યન્નિવેશનં પ્રવિશતિ યુવામપિ તન્નિવેશનં તત્પશ્ચાદિત્વા નિવેશનપતિમ્ ઇતિ વાક્યં વદતં,
11 ೧೧ ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರ ಸಂಗಡ ಪಸ್ಕದ ಊಟವನ್ನು ಮಾಡುವುದಕ್ಕಾಗಿ ವಿಶೇಷವಾದ ಕೊಠಡಿ ಎಲ್ಲಿ?’ ಎಂದು ನಿನ್ನನ್ನು ವಿಚಾರಿಸಲು ನಮ್ಮ ಗುರು ಹೇಳಿದ್ದಾನೆ, ಎಂದು ಹೇಳಿರಿ.
યત્રાહં નિસ્તારોત્સવસ્ય ભોજ્યં શિષ્યૈઃ સાર્દ્ધં ભોક્તું શક્નોમિ સાતિથિશાલા કુત્ર? કથામિમાં પ્રભુસ્ત્વાં પૃચ્છતિ|
12 ೧೨ ಅವನು ತಕ್ಕ ಪೀಠೋಪಕರಣಗಳಿಂದ ಅಲಂಕೃತವಾದ ಮೇಲ್ಮಾಳಿಗೆಯಲ್ಲಿ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ನೀವು ಭೋಜನಕ್ಕೆ ಸಿದ್ಧ ಮಾಡಿರಿ” ಎಂದು ಹೇಳಿ ಕಳುಹಿಸಿದನು.
તતઃ સ જનો દ્વિતીયપ્રકોષ્ઠીયમ્ એકં શસ્તં કોષ્ઠં દર્શયિષ્યતિ તત્ર ભોજ્યમાસાદયતં|
13 ೧೩ ಅವರು ಹೊರಟು ಆತನು ತಮಗೆ ಹೇಳಿದಂತೆ ಕಂಡು ಪಸ್ಕ ಹಬ್ಬಕ್ಕೆ ಸಿದ್ಧಮಾಡಿದರು.
તતસ્તૌ ગત્વા તદ્વાક્યાનુસારેણ સર્વ્વં દૃષ્દ્વા તત્ર નિસ્તારોત્સવીયં ભોજ્યમાસાદયામાસતુઃ|
14 ೧೪ ಆ ಸಮಯ ಬಂದಾಗ ಆತನು ತನ್ನ ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಊಟಕ್ಕೆ ಕುಳಿತುಕೊಂಡನು.
અથ કાલ ઉપસ્થિતે યીશુ ર્દ્વાદશભિઃ પ્રેરિતૈઃ સહ ભોક્તુમુપવિશ્ય કથિતવાન્
15 ೧೫ ಆಗ ಆತನು ಅವರಿಗೆ, “ನಾನು ಯಾತನೆಯನ್ನು ಅನುಭವಿಸುವುದಕ್ಕಿಂತ ಮೊದಲೇ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವುದಕ್ಕೆ ಮನಃಪೂರ್ವಕವಾಗಿ ಬಯಸಿದ್ದೇನೆ.
મમ દુઃખભોગાત્ પૂર્વ્વં યુભાભિઃ સહ નિસ્તારોત્સવસ્યૈતસ્ય ભોજ્યં ભોક્તું મયાતિવાઞ્છા કૃતા|
16 ೧೬ ಇನ್ನು ದೇವರ ರಾಜ್ಯದಲ್ಲಿಇದು ನೆರವೇರುವ ತನಕ ನಾನು ಇನ್ನು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಎಂದು ಹೇಳಿದನು.
યુષ્માન્ વદામિ, યાવત્કાલમ્ ઈશ્વરરાજ્યે ભોજનં ન કરિષ્યે તાવત્કાલમ્ ઇદં ન ભોક્ષ્યે|
17 ೧೭ ಆ ಮೇಲೆ ಆತನು (ದ್ರಾಕ್ಷಾರಸದ) ಪಾತ್ರೆಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ, “ಇದನ್ನು ತೆಗೆದುಕೊಂಡು ಹಂಚಿಕೊಂಡು ಕುಡಿಯಿರಿ.
તદા સ પાનપાત્રમાદાય ઈશ્વરસ્ય ગુણાન્ કીર્ત્તયિત્વા તેભ્યો દત્વાવદત્, ઇદં ગૃહ્લીત યૂયં વિભજ્ય પિવત|
18 ೧೮ ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ” ಅಂದನು.
યુષ્માન્ વદામિ યાવત્કાલમ્ ઈશ્વરરાજત્વસ્ય સંસ્થાપનં ન ભવતિ તાવદ્ દ્રાક્ષાફલરસં ન પાસ્યામિ|
19 ೧೯ ಬಳಿಕ ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ” ಅಂದನು.
તતઃ પૂપં ગૃહીત્વા ઈશ્વરગુણાન્ કીર્ત્તયિત્વા ભઙ્ક્તા તેભ્યો દત્વાવદત્, યુષ્મદર્થં સમર્પિતં યન્મમ વપુસ્તદિદં, એતત્ કર્મ્મ મમ સ્મરણાર્થં કુરુધ્વં|
20 ೨೦ ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ, ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.
અથ ભોજનાન્તે તાદૃશં પાત્રં ગૃહીત્વાવદત્, યુષ્મત્કૃતે પાતિતં યન્મમ રક્તં તેન નિર્ણીતનવનિયમરૂપં પાનપાત્રમિદં|
21 ೨೧ “ಆದರೂ ನೋಡಿರಿ, ನನ್ನನ್ನು ಹಿಡಿದುಕೊಡುವವನು ನನ್ನೊಡನೆ ಮೇಜಿನ ಮೇಲೆ ಕೈಯಿಟ್ಟು ಊಟಮಾಡುತ್ತಿದ್ದಾನೆ.
પશ્યત યો માં પરકરેષુ સમર્પયિષ્યતિ સ મયા સહ ભોજનાસન ઉપવિશતિ|
22 ೨೨ ನಿರ್ಣಯವಾಗಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ, ಆದರೆ ಆತನನ್ನು ಹಿಡಿದುಕೊಡುವ ಮನುಷ್ಯನ ಗತಿಯನ್ನು ಏನು ಹೇಳಲಿ” ಅಂದನು.
યથા નિરૂપિતમાસ્તે તદનુસારેણા મનુષ્યપુત્રસ્ય ગતિ ર્ભવિષ્યતિ કિન્તુ યસ્તં પરકરેષુ સમર્પયિષ્યતિ તસ્ય સન્તાપો ભવિષ્યતિ|
23 ೨೩ ಇದನ್ನು ಕೇಳಿ ಅವರು, ಇಂಥ ಕೆಲಸವನ್ನು ಮಾಡಬೇಕೆಂದಿರುವವನು ನಮ್ಮಲ್ಲಿ ಯಾವನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.
તદા તેષાં કો જન એતત્ કર્મ્મ કરિષ્યતિ તત્ તે પરસ્પરં પ્રષ્ટુમારેભિરે|
24 ೨೪ ಇದಲ್ಲದೆ ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು.
અપરં તેષાં કો જનઃ શ્રેષ્ઠત્વેન ગણયિષ્યતે, અત્રાર્થે તેષાં વિવાદોભવત્|
25 ೨೫ ಆಗ ಆತನು ಅವರಿಗೆ, “ಅನ್ಯಜನಾಂಗದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮೇಲೆ ಅಧಿಕಾರದಿಂದ ಆಡಳಿತ ನಡಿಸುವವರು ಉಪಕಾರಿಗಳೆಂದು ಕರೆಸಿಕೊಳ್ಳುತ್ತಾರೆ.
અસ્માત્ કારણાત્ સોવદત્, અન્યદેશીયાનાં રાજાનઃ પ્રજાનામુપરિ પ્રભુત્વં કુર્વ્વન્તિ દારુણશાસનં કૃત્વાપિ તે ભૂપતિત્વેન વિખ્યાતા ભવન્તિ ચ|
26 ೨೬ ನೀವು ಹಾಗಿರಬಾರದು, ನಿಮ್ಮಲ್ಲಿ ದೊಡ್ಡವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು.
કિન્તુ યુષ્માકં તથા ન ભવિષ્યતિ, યો યુષ્માકં શ્રેષ્ઠો ભવિષ્યતિ સ કનિષ્ઠવદ્ ભવતુ, યશ્ચ મુખ્યો ભવિષ્યતિ સ સેવકવદ્ભવતુ|
27 ೨೭ ಯಾರು ದೊಡ್ಡವನು? ಊಟಕ್ಕೆ ಕುಳಿತವನೋ ಸೇವೆಮಾಡುವವನೋ? ಊಟಕ್ಕೆ ಕುಳಿತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.
ભોજનોપવિષ્ટપરિચારકયોઃ કઃ શ્રેષ્ઠઃ? યો ભોજનાયોપવિશતિ સ કિં શ્રેષ્ઠો ન ભવતિ? કિન્તુ યુષ્માકં મધ્યેઽહં પરિચારકઇવાસ્મિ|
28 ೨೮ ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು.
અપરઞ્ચ યુયં મમ પરીક્ષાકાલે પ્રથમમારભ્ય મયા સહ સ્થિતા
29 ೨೯ ಆದುದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿರುವ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ;
એતત્કારણાત્ પિત્રા યથા મદર્થં રાજ્યમેકં નિરૂપિતં તથાહમપિ યુષ્મદર્થં રાજ્યં નિરૂપયામિ|
30 ೩೦ ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರ್ಪುಮಾಡುವಿರಿ.
તસ્માન્ મમ રાજ્યે ભોજનાસને ચ ભોજનપાને કરિષ્યધ્વે સિંહાસનેષૂપવિશ્ય ચેસ્રાયેલીયાનાં દ્વાદશવંશાનાં વિચારં કરિષ્યધ્વે|
31 ೩೧ “ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿನ್ನನ್ನು ಗೋದಿಯಂತೆ ಕೇರಬೇಕೆಂದು ಅಪ್ಪಣೆ ಕೇಳಿಕೊಂಡನು.
અપરં પ્રભુરુવાચ, હે શિમોન્ પશ્ય તિતઉના ધાન્યાનીવ યુષ્માન્ શૈતાન્ ચાલયિતુમ્ ઐચ્છત્,
32 ೩೨ ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು” ಎಂದು ಹೇಳಿದನು.
કિન્તુ તવ વિશ્વાસસ્ય લોપો યથા ન ભવતિ એતત્ ત્વદર્થં પ્રાર્થિતં મયા, ત્વન્મનસિ પરિવર્ત્તિતે ચ ભ્રાતૃણાં મનાંસિ સ્થિરીકુરુ|
33 ೩೩ ಆದರೆ ಅವನು, “ಕರ್ತನೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಅನ್ನಲು,
તદા સોવદત્, હે પ્રભોહં ત્વયા સાર્દ્ધં કારાં મૃતિઞ્ચ યાતું મજ્જિતોસ્મિ|
34 ೩೪ ಆತನು, “ಪೇತ್ರನೇ, ನನ್ನ ವಿಷಯದಲ್ಲಿ ಇವನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವ ತನಕ ಈಹೊತ್ತು ಕೋಳಿ ಕೂಗುವುದಿಲ್ಲವೆಂದು ನಿನಗೆ ಹೇಳುತ್ತೇನೆ” ಅಂದನು.
તતઃ સ ઉવાચ, હે પિતર ત્વાં વદામિ, અદ્ય કુક્કુટરવાત્ પૂર્વ્વં ત્વં મત્પરિચયં વારત્રયમ્ અપહ્વોષ્યસે|
35 ೩೫ ಮತ್ತು ಆತನು, “ನಿಮ್ಮನ್ನು ನಾನು ಹಣ, ಕೈಚೀಲಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ?” ಎಂದು ಕೇಳಲು ಅವರು ಏನೂ ಇಲ್ಲವೆಂದು ಉತ್ತರಕೊಟ್ಟರು.
અપરં સ પપ્રચ્છ, યદા મુદ્રાસમ્પુટં ખાદ્યપાત્રં પાદુકાઞ્ચ વિના યુષ્માન્ પ્રાહિણવં તદા યુષ્માકં કસ્યાપિ ન્યૂનતાસીત્? તે પ્રોચુઃ કસ્યાપિ ન|
36 ೩೬ ಅದಕ್ಕೆ ಆತನು, “ಈಗಲಾದರೋ ಹಣವಿದ್ದವನು ಅದನ್ನು ತೆಗೆದುಕೊಳ್ಳಲಿ, ಕೈಚೀಲವಿರುವವನು ಅದನ್ನು ತೆಗೆದುಕೊಳ್ಳಲಿ, ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ.
તદા સોવદત્ કિન્ત્વિદાનીં મુદ્રાસમ્પુટં ખાદ્યપાત્રં વા યસ્યાસ્તિ તેન તદ્ગ્રહીતવ્યં, યસ્ય ચ કૃપાણો નાસ્તિ તેન સ્વવસ્ત્રં વિક્રીય સ ક્રેતવ્યઃ|
37 ೩೭ ಏಕೆಂದರೆ, ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ. ನನ್ನ ವಿಷಯದಲ್ಲಿ ಬರೆಯಲ್ಪಟ್ಟಿರುವ ಎಲ್ಲವು ನೆರವೇರಬೇಕು” ಎಂದು ಹೇಳಿದನು.
યતો યુષ્માનહં વદામિ, અપરાધિજનૈઃ સાર્દ્ધં ગણિતઃ સ ભવિષ્યતિ| ઇદં યચ્છાસ્ત્રીયં વચનં લિખિતમસ્તિ તન્મયિ ફલિષ્યતિ યતો મમ સમ્બન્ધીયં સર્વ્વં સેત્સ્યતિ|
38 ೩೮ ಅವರು, “ಕರ್ತನೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ” ಅನ್ನಲು, ಆತನು ಅವರಿಗೆ, “ಅಷ್ಟು ಸಾಕು” ಅಂದನು.
તદા તે પ્રોચુઃ પ્રભો પશ્ય ઇમૌ કૃપાણૌ| તતઃ સોવદદ્ એતૌ યથેષ્ટૌ|
39 ೩೯ ತರುವಾಯ ಆತನು ಪ್ರತಿದಿನದಂತೆ ಹೊರಟು ಎಣ್ಣೆಮರಗಳ ಗುಡ್ಡಕ್ಕೆ ಹೋದನು. ಶಿಷ್ಯರೂ ಆತನ ಹಿಂದೆ ಹೋದರು.
અથ સ તસ્માદ્વહિ ર્ગત્વા સ્વાચારાનુસારેણ જૈતુનનામાદ્રિં જગામ શિષ્યાશ્ચ તત્પશ્ચાદ્ યયુઃ|
40 ೪೦ ಆತನು ಆ ಕ್ಲುಪ್ತ ಸ್ಥಳಕ್ಕೆ ಬಂದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
તત્રોપસ્થાય સ તાનુવાચ, યથા પરીક્ષાયાં ન પતથ તદર્થં પ્રાર્થયધ્વં|
41 ೪೧ ಆ ಮೇಲೆ ಆತನು ಅವರನ್ನು ಬಿಟ್ಟು ಕಲ್ಲೆಸೆತದಷ್ಟು ದೂರ ಹೋಗಿ, ಮೊಣಕಾಲೂರಿ,
પશ્ચાત્ સ તસ્માદ્ એકશરક્ષેપાદ્ બહિ ર્ગત્વા જાનુની પાતયિત્વા એતત્ પ્રાર્થયાઞ્ચક્રે,
42 ೪೨ “ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತದಂತೆಯೇ ಆಗಲಿ” ಪ್ರಾರ್ಥಿಸಿದನು.
હે પિત ર્યદિ ભવાન્ સમ્મન્યતે તર્હિ કંસમેનં મમાન્તિકાદ્ દૂરય કિન્તુ મદિચ્છાનુરૂપં ન ત્વદિચ્છાનુરૂપં ભવતુ|
43 ೪೩ ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು, ಆತನನ್ನು ಬಲಪಡಿಸಿದನು.
તદા તસ્મૈ શક્તિં દાતું સ્વર્ગીયદૂતો દર્શનં દદૌ|
44 ೪೪ ಯೇಸು ತೀವ್ರವಾದ ಮನೋವ್ಯಥೆಯುಳ್ಳವನಾಗಿ, ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ, ಆತನ ಬೆವರು ರಕ್ತದ ಹನಿಗಳೋಪಾದಿಯಲ್ಲಿ ನೆಲಕ್ಕೆ ಬೀಳುತ್ತಿತ್ತು.
પશ્ચાત્ સોત્યન્તં યાતનયા વ્યાકુલો ભૂત્વા પુનર્દૃઢં પ્રાર્થયાઞ્ચક્રે, તસ્માદ્ બૃહચ્છોણિતબિન્દવ ઇવ તસ્ય સ્વેદબિન્દવઃ પૃથિવ્યાં પતિતુમારેભિરે|
45 ೪೫ ಆತನು ಪ್ರಾರ್ಥನೆ ಮುಗಿಸಿ ಎದ್ದು ಶಿಷ್ಯರ ಬಳಿಗೆ ಬಂದು, ಅವರು ದುಃಖದಿಂದ ಬಳಲಿಹೋದವರಾಗಿ ನಿದ್ರೆಹತ್ತಿರುವುದನ್ನು ಕಂಡು,
અથ પ્રાર્થનાત ઉત્થાય શિષ્યાણાં સમીપમેત્ય તાન્ મનોદુઃખિનો નિદ્રિતાન્ દૃષ્ટ્વાવદત્
46 ೪೬ ಅವರಿಗೆ, “ನೀವು ನಿದ್ರೆಮಾಡುವುದೇನು? ಏಳಿರಿ, ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
કુતો નિદ્રાથ? પરીક્ષાયામ્ અપતનાર્થં પ્રર્થયધ્વં|
47 ೪೭ ಆತನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ, ಜನರ ಗುಂಪು ಕಾಣಿಸಿತು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನೆಂಬುವನು ಆ ಜನರ ಗುಂಪಿನ ಮುಂದೆ ನಡೆಯುತ್ತಾ, ಯೇಸುವಿಗೆ ಮುದ್ದಿಡುವುದಕ್ಕಾಗಿ ಆತನ ಬಳಿಗೆ ಬರಲು,
એતત્કથાયાઃ કથનકાલે દ્વાદશશિષ્યાણાં મધ્યે ગણિતો યિહૂદાનામા જનતાસહિતસ્તેષામ્ અગ્રે ચલિત્વા યીશોશ્ચુમ્બનાર્થં તદન્તિકમ્ આયયૌ|
48 ೪೮ ಯೇಸು ಅವನಿಗೆ, “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡಿದುಕೊಡುತ್ತೀಯಾ?” ಎಂದು ಕೇಳಿದನು.
તદા યીશુરુવાચ, હે યિહૂદા કિં ચુમ્બનેન મનુષ્યપુત્રં પરકરેષુ સમર્પયસિ?
49 ೪೯ ಆತನ ಸುತ್ತಲಿದ್ದವರು ಘಟನೆಯ ಸೂಕ್ಷ್ಮತೆಯನ್ನು ತಿಳಿದು ತಕ್ಷಣ, “ಕರ್ತನೇ, ನಾವು ಕತ್ತಿಯಿಂದ ಹೊಡೆಯೋಣವೋ?” ಎಂದು ಕೇಳಿದರು.
તદા યદ્યદ્ ઘટિષ્યતે તદનુમાય સઙ્ગિભિરુક્તં, હે પ્રભો વયં કિ ખઙ્ગેન ઘાતયિષ્યામઃ?
50 ೫೦ ಅಷ್ಟರಲ್ಲಿ ಅವರಲ್ಲಿ ಒಬ್ಬನು ಮಹಾಯಾಜಕನ ಆಳನ್ನು ಕತ್ತಿಯಿಂದ ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿ ಹಾಕಿದನು.
તત એકઃ કરવાલેનાહત્ય પ્રધાનયાજકસ્ય દાસસ્ય દક્ષિણં કર્ણં ચિચ્છેદ|
51 ೫೧ ಆದರೆ ಯೇಸು, “ಇಷ್ಟಕ್ಕೇ ಬಿಡಿರಿ” ಎಂದು ಹೇಳಿ ಆ ಆಳಿನ ಕಿವಿಯನ್ನು ಮುಟ್ಟಿ ವಾಸಿಮಾಡಿದನು.
અધૂના નિવર્ત્તસ્વ ઇત્યુક્ત્વા યીશુસ્તસ્ય શ્રુતિં સ્પૃષ્ટ્વા સ્વસ્યં ચકાર|
52 ೫೨ ಬಳಿಕ ಯೇಸು ತನ್ನನ್ನು ಹಿಡಿಯುವುದಕ್ಕೆ ಬಂದ ಮುಖ್ಯಯಾಜಕರಿಗೂ, ದೇವಾಲಯದ ಕಾವಲಿನ ದಳವಾಯಿಗಳಿಗೂ, ಸಭೆಯ ಹಿರಿಯರಿಗೂ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ಬಂದಿರುವಿರಾ?
પશ્ચાદ્ યીશુઃ સમીપસ્થાન્ પ્રધાનયાજકાન્ મન્દિરસ્ય સેનાપતીન્ પ્રાચીનાંશ્ચ જગાદ, યૂયં કૃપાણાન્ યષ્ટીંશ્ચ ગૃહીત્વા માં કિં ચોરં ધર્ત્તુમાયાતાઃ?
53 ೫೩ ನಾನು ಪ್ರತಿದಿನ ದೇವಾಲಯದಲ್ಲಿ ನಿಮ್ಮ ಸಂಗಡ ಇದ್ದಾಗ ನೀವು ನನ್ನ ಮೇಲೆ ಕೈಹಾಕಲಿಲ್ಲ. ಆದರೆ ಇದು ನಿಮ್ಮ ಕಾಲ, ಇದು ಅಂಧಕಾರದ ದೊರೆತನದ ಕಾಲ” ಎಂದು ಹೇಳಿದನು.
યદાહં યુષ્માભિઃ સહ પ્રતિદિનં મન્દિરેઽતિષ્ઠં તદા માં ધર્ત્તં ન પ્રવૃત્તાઃ, કિન્ત્વિદાનીં યુષ્માકં સમયોન્ધકારસ્ય ચાધિપત્યમસ્તિ|
54 ೫೪ ಅವರು ಆತನನ್ನು ಹಿಡಿದು ಮಹಾಯಾಜಕನ ಮನೆಯೊಳಕ್ಕೆ ಕರೆದುಕೊಂಡು ಹೋದರು. ಪೇತ್ರನು ದೂರದಿಂದ ಅವರನ್ನು ಹಿಂಬಾಲಿಸುತ್ತಿದ್ದನು.
અથ તે તં ધૃત્વા મહાયાજકસ્ય નિવેશનં નિન્યુઃ| તતઃ પિતરો દૂરે દૂરે પશ્ચાદિત્વા
55 ೫೫ ಅಂಗಳದ ನಡುವೆ ಅವರು ಬೆಂಕಿ ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡಿರಲು ಅವರ ನಡುವೆ ಪೇತ್ರನೂ ಕುಳಿತುಕೊಂಡನು.
બૃહત્કોષ્ઠસ્ય મધ્યે યત્રાગ્નિં જ્વાલયિત્વા લોકાઃ સમેત્યોપવિષ્ટાસ્તત્ર તૈઃ સાર્દ્ધમ્ ઉપવિવેશ|
56 ೫೬ ಅವನು ಬೆಳಕಿಗೆ ಮುಖವಾಗಿ ಕುಳಿತಿರುವಾಗ ಒಬ್ಬ ದಾಸಿಯು ಅವನನ್ನು ಕಂಡು, ಅವನನ್ನು ದೃಷ್ಟಿಸಿ ನೋಡಿ, “ಇವನು ಸಹ ಅವನ ಸಂಗಡ ಇದ್ದವನು” ಅಂದಳು.
અથ વહ્નિસન્નિધૌ સમુપવેશકાલે કાચિદ્દાસી મનો નિવિશ્ય તં નિરીક્ષ્યાવદત્ પુમાનયં તસ્ય સઙ્ગેઽસ્થાત્|
57 ೫೭ ಆದರೆ ಅವನು, “ನಾನು ಅವನನ್ನು ಅರಿಯೆನಮ್ಮಾ” ಎಂದು ಹೇಳಿದನು.
કિન્તુ સ તદ્ અપહ્નુત્યાવાદીત્ હે નારિ તમહં ન પરિચિનોમિ|
58 ೫೮ ಸ್ವಲ್ಪಹೊತ್ತಿನ ಮೇಲೆ ಮತ್ತೊಬ್ಬನು ಬಂದು ಅವನನ್ನು ಕಂಡು, “ನೀನೂ ಸಹ ಅವರಲ್ಲಿ ಒಬ್ಬನು” ಅನ್ನಲು ಪೇತ್ರನು, “ನಾನಲ್ಲಪ್ಪಾ” ಅಂದನು.
ક્ષણાન્તરેઽન્યજનસ્તં દૃષ્ટ્વાબ્રવીત્ ત્વમપિ તેષાં નિકરસ્યૈકજનોસિ| પિતરઃ પ્રત્યુવાચ હે નર નાહમસ્મિ|
59 ೫೯ ಹೆಚ್ಚು ಕಡಿಮೆ ಒಂದು ಘಂಟೆ ಹೊತ್ತಿನ ಮೇಲೆ ಇನ್ನೊಬ್ಬನು, “ನಿಶ್ಚಯವಾಗಿ ಇವನು ಸಹ ಅವನ ಸಂಗಡ ಇದ್ದವನು, ಇವನು ಗಲಿಲಾಯದವನಷ್ಟೆ” ಎಂದು ದೃಢವಾಗಿ ಹೇಳಿದನು.
તતઃ સાર્દ્ધદણ્ડદ્વયાત્ પરં પુનરન્યો જનો નિશ્ચિત્ય બભાષે, એષ તસ્ય સઙ્ગીતિ સત્યં યતોયં ગાલીલીયો લોકઃ|
60 ೬೦ ಆದರೆ ಪೇತ್ರನು, “ನೀನು ಹೇಳುವುದೇನೋ ನಾನರಿಯೆನಪ್ಪಾ” ಅಂದನು. ಅವನು ಈ ಮಾತನ್ನು ಆಡುತ್ತಿರುವಾಗಲೇ ಕೋಳಿ ಕೂಗಿತು.
તદા પિતર ઉવાચ હે નર ત્વં યદ્ વદમિ તદહં બોદ્ધું ન શક્નોમિ, ઇતિ વાક્યે કથિતમાત્રે કુક્કુટો રુરાવ|
61 ೬೧ ಕರ್ತನು ಹಿಂತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು. ಆಗ ಪೇತ್ರನು, “ಈಹೊತ್ತು ಕೋಳಿ ಕೂಗುವುದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅವನನ್ನು ಅರಿಯೆನೆಂಬದಾಗಿ ಹೇಳುವಿ” ಎಂದು ಕರ್ತನು ನುಡಿದ ಮಾತನ್ನು ನೆನಪಿಸಿಕೊಂಡು,
તદા પ્રભુણા વ્યાધુટ્ય પિતરે નિરીક્ષિતે કૃકવાકુરવાત્ પૂર્વ્વં માં ત્રિરપહ્નોષ્યસે ઇતિ પૂર્વ્વોક્તં તસ્ય વાક્યં પિતરઃ સ્મૃત્વા
62 ೬೨ ಹೊರಗೆ ಹೋಗಿ ತುಂಬಾ ವ್ಯಥೆಪಟ್ಟು ಅತ್ತನು.
બહિર્ગત્વા મહાખેદેન ચક્રન્દ|
63 ೬೩ ಆ ಮೇಲೆ ಯೇಸುವನ್ನು ಹಿಡಿದವರು ಆತನನ್ನು ಪರಿಹಾಸ್ಯಮಾಡುತ್ತಾ, ಆತನಿಗೆ ಮುಸುಕುಹಾಕಿ ಹೊಡೆದು, “ನಿನ್ನನ್ನು ಹೊಡೆದವನಾರು? ಪ್ರವಾದನೆ ಹೇಳು” ಎಂದು ಆತನನ್ನು ಕೇಳಿದರು.
તદા યૈ ર્યીશુર્ધૃતસ્તે તમુપહસ્ય પ્રહર્ત્તુમારેભિરે|
64 ೬೪
વસ્ત્રેણ તસ્ય દૃશૌ બદ્ધ્વા કપોલે ચપેટાઘાતં કૃત્વા પપ્રચ્છુઃ, કસ્તે કપોલે ચપેટાઘાતં કૃતવાન? ગણયિત્વા તદ્ વદ|
65 ೬೫ ಆತನ ಕುರಿತು ಇನ್ನೂ ಅನೇಕ ದೂಷಣೆಯ ಮಾತುಗಳನ್ನಾಡಿದರು.
તદન્યત્ તદ્વિરુદ્ધં બહુનિન્દાવાક્યં વક્તુમારેભિરે|
66 ೬೬ ಬೆಳಗಾಗುವಾಗ ಯೆಹೂದ್ಯರ ಹಿರೀಸಭೆಯವರು, ಮುಖ್ಯಯಾಜಕರು ಮತ್ತು ಶಾಸ್ತ್ರಿಗಳು ಕೂಡಿ ಆತನನ್ನು ತಮ್ಮ ನ್ಯಾಯವಿಚಾರಣಾಸಭೆಗೆ ತೆಗೆದುಕೊಂಡು ಬಂದು,
અથ પ્રભાતે સતિ લોકપ્રાઞ્ચઃ પ્રધાનયાજકા અધ્યાપકાશ્ચ સભાં કૃત્વા મધ્યેસભં યીશુમાનીય પપ્રચ્છુઃ, ત્વમ્ અભિષિકતોસિ ન વાસ્માન્ વદ|
67 ೬೭ “ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು” ಅಂದರು. ಆತನು ಅವರಿಗೆ, “ನಾನು ನಿಮಗೆ ಹೇಳಿದರೆ ನೀವು ನಂಬುವುದಿಲ್ಲ.
સ પ્રત્યુવાચ, મયા તસ્મિન્નુક્તેઽપિ યૂયં ન વિશ્વસિષ્યથ|
68 ೬೮ ನಾನು ನಿಮ್ಮನ್ನು ಏನಾದರೂ ಕೇಳಿದರೆ ನೀವು ಉತ್ತರಕೊಡುವುದಿಲ್ಲ.
કસ્મિંશ્ચિદ્વાક્યે યુષ્માન્ પૃષ્ટેઽપિ માં ન તદુત્તરં વક્ષ્યથ ન માં ત્યક્ષ્યથ ચ|
69 ೬೯ ಆದರೆ ಇಂದಿನಿಂದ ಮನುಷ್ಯಕುಮಾರನು ಸರ್ವಶಕ್ತನಾದ ದೇವರ ಬಲಗಡೆಯಲ್ಲಿ ಆಸೀನನಾಗಿರುವನು” ಎಂದು ಹೇಳಿದನು.
કિન્ત્વિતઃ પરં મનુજસુતઃ સર્વ્વશક્તિમત ઈશ્વરસ્ય દક્ષિણે પાર્શ્વે સમુપવેક્ષ્યતિ|
70 ೭೦ ಆಗ ಎಲ್ಲರು, “ಹಾಗಾದರೆ ನೀನು ದೇವರ ಕುಮಾರನೋ?” ಎಂದು ಕೇಳಲು ಆತನು ಅವರಿಗೆ, “ನನ್ನನ್ನು ಕುರಿತು ದೇವಕುಮಾರನೆಂದು ನೀವೇ ಹೇಳಿದ್ದೀರಿ” ಎಂದು ಹೇಳಿದನು.
તતસ્તે પપ્રચ્છુઃ, ર્તિહ ત્વમીશ્વરસ્ય પુત્રઃ? સ કથયામાસ, યૂયં યથાર્થં વદથ સ એવાહં|
71 ೭೧ ಅದಕ್ಕೆ ಅವರು, “ನಮಗೆ ಸಾಕ್ಷಿ ಇನ್ನು ಯಾತಕ್ಕೆ ಬೇಕು? ನಾವೇ ಇವನ ಬಾಯಿಂದ ಕೇಳಿದೆವಲ್ಲಾ” ಅಂದರು.
તદા તે સર્વ્વે કથયામાસુઃ, ર્તિહ સાક્ષ્યેઽન્સસ્મિન્ અસ્માકં કિં પ્રયોજનં? અસ્ય સ્વમુખાદેવ સાક્ષ્યં પ્રાપ્તમ્|

< ಲೂಕನು 22 >