< ಲೂಕನು 19 >

1 ಯೇಸು ಯೆರಿಕೋ ಊರನ್ನು ಪ್ರವೇಶಿಸಿ ಹಾದುಹೋಗುವಾಗ,
যদা যীশু র্যিরীহোপুরং প্রৱিশ্য তন্মধ্যেন গচ্ছংস্তদা
2 ಅಲ್ಲಿ ಜಕ್ಕಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಸುಂಕವಸೂಲಿಯ ಮುಖ್ಯಸ್ಥನು ಮತ್ತು ಐಶ್ವರ್ಯವಂತನಾಗಿದ್ದನು.
সক্কেযনামা করসঞ্চাযিনাং প্রধানো ধনৱানেকো
3 ಅವನು ಯೇಸು ಹೇಗಿದ್ದಾನೆಂದು ನೋಡಲು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದುದರಿಂದ, ಜನರ ಗುಂಪಿನ ನಿಮಿತ್ತ ನೋಡಲಾರದೆ ಹೋದನು.
যীশুঃ কীদৃগিতি দ্রষ্টুং চেষ্টিতৱান্ কিন্তু খর্ৱ্ৱৎৱাল্লোকসংঘমধ্যে তদ্দর্শনমপ্রাপ্য
4 ಆದಕಾರಣ ಆತನನ್ನು ನೋಡುವುದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು.
যেন পথা স যাস্যতি তৎপথেঽগ্রে ধাৱিৎৱা তং দ্রষ্টুম্ উডুম্বরতরুমারুরোহ|
5 ಯೇಸು ಅಲ್ಲಿಗೆ ಬಂದು ಮೇಲಕ್ಕೆ ನೋಡಿ, “ಜಕ್ಕಾಯನೇ, ತಟ್ಟನೆ ಇಳಿದು ಬಾ, ನಾನು ಈಹೊತ್ತು ನಿನ್ನ ಮನೆಯಲ್ಲಿ ಉಳಿದುಕೊಳ್ಳಬೇಕು” ಎಂದು ಅವನಿಗೆ ಹೇಳಲು,
পশ্চাদ্ যীশুস্তৎস্থানম্ ইৎৱা ঊর্দ্ধ্ৱং ৱিলোক্য তং দৃষ্ট্ৱাৱাদীৎ, হে সক্কেয ৎৱং শীঘ্রমৱরোহ মযাদ্য ৎৱদ্গেহে ৱস্তৱ্যং|
6 ಅವನು ತಕ್ಷಣ ಇಳಿದು ಬಂದು ಆತನನ್ನು ಸಂತೋಷದಿಂದ ಬರಮಾಡಿಕೊಂಡನು.
ততঃ স শীঘ্রমৱরুহ্য সাহ্লাদং তং জগ্রাহ|
7 ಇದನ್ನು ನೋಡಿದವರೆಲ್ಲರು, “ಈತನು ಪಾಪಿಯಾಗಿರುವವನ ಬಳಿಯಲ್ಲಿ ಉಳಿದುಕೊಳ್ಳುವುದಕ್ಕೆ ಹೋಗಿದ್ದಾನೆ” ಎಂದು ಗೊಣಗುಟ್ಟಿದರು.
তদ্ দৃষ্ট্ৱা সর্ৱ্ৱে ৱিৱদমানা ৱক্তুমারেভিরে, সোতিথিৎৱেন দুষ্টলোকগৃহং গচ্ছতি|
8 ಆದರೆ ಜಕ್ಕಾಯನು ನಿಂತುಕೊಂಡು “ಕರ್ತನಿಗೆ, ಕರ್ತನೇ, ನೋಡು, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಕಿತ್ತುಕೊಂಡಿದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ” ಎಂದು ಹೇಳಿದನು.
কিন্তু সক্কেযো দণ্ডাযমানো ৱক্তুমারেভে, হে প্রভো পশ্য মম যা সম্পত্তিরস্তি তদর্দ্ধং দরিদ্রেভ্যো দদে, অপরম্ অন্যাযং কৃৎৱা কস্মাদপি যদি কদাপি কিঞ্চিৎ মযা গৃহীতং তর্হি তচ্চতুর্গুণং দদামি|
9 ಇದನ್ನು ಕೇಳಿ ಯೇಸು, “ಈಹೊತ್ತು ಈ ಮನೆಗೆ ರಕ್ಷಣೆಯಾಯಿತು. ಇವನು ಸಹ ಅಬ್ರಹಾಮನ ವಂಶದವನಲ್ಲವೇ.
তদা যীশুস্তমুক্তৱান্ অযমপি ইব্রাহীমঃ সন্তানোঽতঃ কারণাদ্ অদ্যাস্য গৃহে ত্রাণমুপস্থিতং|
10 ೧೦ ಮನುಷ್ಯಕುಮಾರನು ದಾರಿತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕೆ ಬಂದನು” ಎಂದು ಹೇಳಿದನು.
১০যদ্ হারিতং তৎ মৃগযিতুং রক্ষিতুঞ্চ মনুষ্যপুত্র আগতৱান্|
11 ೧೧ ಜನರು ಈ ಮಾತುಗಳನ್ನು ಕೇಳುತ್ತಿರಲಾಗಿ ಯೇಸು ತಾನು ಯೆರೂಸಲೇಮಿಗೆ ಸಮೀಪವಾಗಿದ್ದದರಿಂದಲೂ ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗುವ ಹಾಗಿದೆ ಎಂದು ಅವರು ಭಾವಿಸಿದ್ದರಿಂದಲೂ ಇನ್ನೂ ಒಂದು ಸಾಮ್ಯವನ್ನು ಅವರಿಗೆ ಹೇಳಿದನು.
১১অথ স যিরূশালমঃ সমীপ উপাতিষ্ঠদ্ ঈশ্ৱররাজৎৱস্যানুষ্ঠানং তদৈৱ ভৱিষ্যতীতি লোকৈরন্ৱভূযত, তস্মাৎ স শ্রোতৃভ্যঃ পুনর্দৃষ্টান্তকথাম্ উত্থাপ্য কথযামাস|
12 ೧೨ ಅದೇನೆಂದರೆ, “ಶ್ರೀಮಂತನಾದ ಒಬ್ಬ ಮನುಷ್ಯನು ತಾನು ರಾಜ್ಯಾಧಿಕಾರವನ್ನು ಪಡೆದುಕೊಂಡು ಬರಬೇಕೆಂದು ದೂರದೇಶಕ್ಕೆ ಹೊರಟನು.
১২কোপি মহাল্লোকো নিজার্থং রাজৎৱপদং গৃহীৎৱা পুনরাগন্তুং দূরদেশং জগাম|
13 ೧೩ ಹೊರಡುವಾಗ ತನ್ನ ಆಳುಗಳಲ್ಲಿ ಹತ್ತು ಮಂದಿಯನ್ನು ಕರೆದು ಅವರಿಗೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, ‘ನಾನು ಬರುವ ತನಕ ವ್ಯಾಪಾರಮಾಡಿಕೊಂಡಿರಿ’ ಎಂದು ಹೇಳಿ ಹೊರಟು ಹೋದನು.
১৩যাত্রাকালে নিজান্ দশদাসান্ আহূয দশস্ৱর্ণমুদ্রা দত্ত্ৱা মমাগমনপর্য্যন্তং ৱাণিজ্যং কুরুতেত্যাদিদেশ|
14 ೧೪ ಆದರೆ ಅವನ ಪಟ್ಟಣದ ನಿವಾಸಿಗಳು ಅವನನ್ನು ದ್ವೇಷಿಸಿ ಅವನ ಹಿಂದೆ ರಾಯಭಾರಿಗಳನ್ನು ಕಳುಹಿಸಿ ‘ನೀನು ನಮ್ಮ ಮೇಲೆ ದೊರೆತನಮಾಡುವುದು ನಮಗೆ ಇಷ್ಟವಿಲ್ಲ’ ಎಂದು ಹೇಳಿಸಿದರು.
১৪কিন্তু তস্য প্রজাস্তমৱজ্ঞায মনুষ্যমেনম্ অস্মাকমুপরি রাজৎৱং ন কারযিৱ্যাম ইমাং ৱার্ত্তাং তন্নিকটে প্রেরযামাসুঃ|
15 ೧೫ ಆ ಮೇಲೆ ಅವನು ರಾಜ್ಯಾಧಿಕಾರವನ್ನು ಪಡೆದುಕೊಂಡು ಹಿಂತಿರುಗಿ ಬಂದು, ತಾನು ಹಣವನ್ನು ಕೊಟ್ಟಿದ್ದ ಆಳುಗಳು ವ್ಯಾಪಾರದಿಂದ ಎಷ್ಟೆಷ್ಟು ಲಾಭ ಸಂಪಾದಿಸಿಕೊಂಡಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ, ಅವರನ್ನು ತನ್ನ ಬಳಿಗೆ ಕರೆಯಿಸಿದನು.
১৫অথ স রাজৎৱপদং প্রাপ্যাগতৱান্ একৈকো জনো বাণিজ্যেন কিং লব্ধৱান্ ইতি জ্ঞাতুং যেষু দাসেষু মুদ্রা অর্পযৎ তান্ আহূযানেতুম্ আদিদেশ|
16 ೧೬ ಮೊದಲನೆಯವನು ಆತನ ಮುಂದೆ ಬಂದು, ‘ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಹತ್ತು ನಾಣ್ಯಗಳು ಸಂಪಾದನೆಯಾದವು’ ಅನ್ನಲು,
১৬তদা প্রথম আগত্য কথিতৱান্, হে প্রভো তৱ তযৈকযা মুদ্রযা দশমুদ্রা লব্ধাঃ|
17 ೧೭ ಅವನು ಅವನಿಗೆ, ‘ಭಲಾ! ನೀನು ಒಳ್ಳೆಯ ಆಳು, ನೀನು ಬಹು ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿದ್ದರಿಂದ ಹತ್ತು ಗ್ರಾಮಗಳ ಮೇಲೆ ಅಧಿಕಾರಿಯಾಗಿರು’ ಎಂದು ಹೇಳಿದನು.
১৭ততঃ স উৱাচ ৎৱমুত্তমো দাসঃ স্ৱল্পেন ৱিশ্ৱাস্যো জাত ইতঃ কারণাৎ ৎৱং দশনগরাণাম্ অধিপো ভৱ|
18 ೧೮ ಎರಡನೆಯವನು ಬಂದು, ‘ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಐದು ನಾಣ್ಯಗಳು ದೊರಕಿದವು’ ಅನ್ನಲು,
১৮দ্ৱিতীয আগত্য কথিতৱান্, হে প্রভো তৱৈকযা মুদ্রযা পঞ্চমুদ্রা লব্ধাঃ|
19 ೧೯ ಅವನು ಆ ಆಳಿಗೆ, ‘ನೀನು ಸಹ ಐದು ಗ್ರಾಮಗಳ ಮೇಲೆ ಅಧಿಕಾರಿಯಾಗಿರು’ ಎಂದು ಹೇಳಿದನು.
১৯ততঃ স উৱাচ, ৎৱং পঞ্চানাং নগরাণামধিপতি র্ভৱ|
20 ೨೦ ಬಳಿಕ ಮತ್ತೊಬ್ಬನು ಬಂದು, ‘ದೊರೆಯೇ, ಇಗೋ ನೀನು ಕೊಟ್ಟ ನಾಣ್ಯ. ನೀನು ಇಡದೆಯಿರುವುದನ್ನು ಎತ್ತಿಕೊಂಡು ಹೋಗುವವನು, ಬಿತ್ತದೆಯಿರುವುದನ್ನು ಕೊಯ್ಯುವ ಕಠಿಣ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು’ ಅಂದನು.
২০ততোন্য আগত্য কথযামাস, হে প্রভো পশ্য তৱ যা মুদ্রা অহং ৱস্ত্রে বদ্ধ্ৱাস্থাপযং সেযং|
21 ೨೧
২১ৎৱং কৃপণো যন্নাস্থাপযস্তদপি গৃহ্লাসি, যন্নাৱপস্তদেৱ চ ছিনৎসি ততোহং ৎৱত্তো ভীতঃ|
22 ೨೨ ಅದಕ್ಕೆ ಅವನು, ‘ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ತೀರ್ಪುಮಾಡುತ್ತೇನೆ. ನಾನು ಇಡದೆಯಿರುವುದನ್ನು ಎತ್ತಿಕೊಂಡು ಹೋಗುವವನು, ಬಿತ್ತದೆಯಿರುವುದನ್ನು ಕೊಯ್ಯುವ ಉಗ್ರವಾದ ಮನುಷ್ಯನು ಎಂದು ತಿಳಿದಿರುವೆಯಾ?
২২তদা স জগাদ, রে দুষ্টদাস তৱ ৱাক্যেন ৎৱাং দোষিণং করিষ্যামি, যদহং নাস্থাপযং তদেৱ গৃহ্লামি, যদহং নাৱপঞ্চ তদেৱ ছিনদ্মি, এতাদৃশঃ কৃপণোহমিতি যদি ৎৱং জানাসি,
23 ೨೩ ಹಾಗಾದರೆ ನೀನು ನನ್ನ ಹಣವನ್ನು ಬಡ್ಡಿಗೆ ಯಾಕೆ ಕೊಡಲಿಲ್ಲ? ಆ ಮೇಲೆ ನಾನು ಬಂದು ಅದನ್ನು ಬಡ್ಡಿ ಸಹಿತ ತೆಗೆದುಕೊಳ್ಳುತ್ತಿದ್ದೆನು’ ಎಂದು ಹೇಳಿ,
২৩তর্হি মম মুদ্রা বণিজাং নিকটে কুতো নাস্থাপযঃ? তযা কৃতেঽহম্ আগত্য কুসীদেন সার্দ্ধং নিজমুদ্রা অপ্রাপ্স্যম্|
24 ೨೪ ಹತ್ತಿರ ನಿಂತಿದ್ದವರಿಗೆ, ‘ಆ ನಾಣ್ಯವನ್ನು ಅವನಿಂದ ತೆಗೆದುಕೊಂಡು ಹತ್ತು ಚಿನ್ನದ ನಾಣ್ಯಗಳುಳ್ಳವನಿಗೆ ಕೊಡಿರಿ’ ಎಂದು ಹೇಳಿದನು.
২৪পশ্চাৎ স সমীপস্থান্ জনান্ আজ্ঞাপযৎ অস্মাৎ মুদ্রা আনীয যস্য দশমুদ্রাঃ সন্তি তস্মৈ দত্ত|
25 ೨೫ ಅವರು, ‘ದೊರೆಯೇ, ಹತ್ತು ನಾಣ್ಯಗಳು ಅವನಲ್ಲಿ ಅವೆಯಲ್ಲಾ’ ಎಂದು ಅವನಿಗೆ ಹೇಳಿದರು.
২৫তে প্রোচুঃ প্রভোঽস্য দশমুদ্রাঃ সন্তি|
26 ೨೬ ಅದಕ್ಕವನು, ‘ಇದ್ದವರಿಗೆಲ್ಲಾ ಕೊಡಲ್ಪಡುವುದು, ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು’ ಎಂದು ನಾನು ನಿಮಗೆ ಹೇಳುತ್ತೇನೆ
২৬যুষ্মানহং ৱদামি যস্যাশ্রযে ৱদ্ধতে ঽধিকং তস্মৈ দাযিষ্যতে, কিন্তু যস্যাশ্রযে ন ৱর্দ্ধতে তস্য যদ্যদস্তি তদপি তস্মান্ নাযিষ্যতে|
27 ೨೭ ಮತ್ತು ತಮ್ಮ ಮೇಲೆ ನಾನು ದೊರೆತನ ಮಾಡುವುದು ಇಷ್ಟವಿಲ್ಲವೆಂದು ಹೇಳಿದ ಆ ನನ್ನ ವೈರಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ” ಅಂದನು.
২৭কিন্তু মমাধিপতিৎৱস্য ৱশৎৱে স্থাতুম্ অসম্মন্যমানা যে মম রিপৱস্তানানীয মম সমক্ষং সংহরত|
28 ೨೮ ಯೇಸು ಈ ಮಾತುಗಳನ್ನು ಹೇಳಿದ ಮೇಲೆ ಗಟ್ಟಾ ಹತ್ತಿ ಯೆರೂಸಲೇಮಿಗೆ ಮುಂದಾಗಿ ಹೋದನು.
২৮ইত্যুপদেশকথাং কথযিৎৱা সোগ্রগঃ সন্ যিরূশালমপুরং যযৌ|
29 ೨೯ ಅನಂತರ ಆತನು ಎಣ್ಣೆಮರಗಳ ಗುಡ್ಡ ಎನಿಸಿಕೊಳ್ಳುವ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ ಶಿಷ್ಯರಲ್ಲಿ ಇಬ್ಬರನ್ನು ಕರೆದು,
২৯ততো বৈৎফগীবৈথনীযাগ্রামযোঃ সমীপে জৈতুনাদ্রেরন্তিকম্ ইৎৱা শিষ্যদ্ৱযম্ ইত্যুক্ত্ৱা প্রেষযামাস,
30 ೩೦ “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ, ಅದರೊಳಗೆ ಹೋಗುತ್ತಿರುವಾಗಲೇ ಅಲ್ಲಿ ಕಟ್ಟಿರುವ ಒಂದು ಕತ್ತೆಮರಿಯನ್ನು ಕಾಣುವಿರಿ. ಇದುವರೆಗೆ ಅದರ ಮೇಲೆ ಯಾರೂ ಹತ್ತಿರುವುದಿಲ್ಲ, ಅದನ್ನು ಬಿಚ್ಚಿ ಕರೆತನ್ನಿರಿ.
৩০যুৱামমুং সম্মুখস্থগ্রামং প্রৱিশ্যৈৱ যং কোপি মানুষঃ কদাপি নারোহৎ তং গর্দ্দভশাৱকং বদ্ধং দ্রক্ষ্যথস্তং মোচযিৎৱানযতং|
31 ೩೧ ಯಾವನಾದರೂ ನಿಮ್ಮನ್ನು ‘ಮರಿಯನ್ನು ಯಾಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ ‘ಇದು ಕರ್ತನಿಗೆ ಬೇಕಾಗಿದೆ ಅನ್ನಿರಿ’” ಎಂದು ಹೇಳಿಕಳುಹಿಸಿದನು.
৩১তত্র কুতো মোচযথঃ? ইতি চেৎ কোপি ৱক্ষ্যতি তর্হি ৱক্ষ্যথঃ প্রভেরত্র প্রযোজনম্ আস্তে|
32 ೩೨ ಕಳುಹಿಸಲ್ಪಟ್ಟವರು ಹೋಗಿ ಆತನು ತಮಗೆ ಹೇಳಿದಂತೆಯೇ ಕಂಡರು.
৩২তদা তৌ প্ররিতৌ গৎৱা তৎকথানুসারেণ সর্ৱ্ৱং প্রাপ্তৌ|
33 ೩೩ ಅವರು ಆ ಕತ್ತೆಮರಿಯನ್ನು ಬಿಚ್ಚುತ್ತಿರುವಾಗ ಅದರ ಯಜಮಾನನು, “ಈ ಮರಿಯನ್ನು ಯಾಕೆ ಬಿಚ್ಚುತ್ತೀರಿ?” ಎಂದು ಅವರನ್ನು ಕೇಳಿದ್ದಕ್ಕೆ
৩৩গর্দভশাৱকমোচনকালে তৎৱামিন ঊচুঃ, গর্দভশাৱকং কুতো মোচযথঃ?
34 ೩೪ ಅವರು, “ಇದು ಕರ್ತನಿಗೆ ಬೇಕಾಗಿದೆ” ಎಂದು ಹೇಳಿದರು.
৩৪তাৱূচতুঃ প্রভোরত্র প্রযোজনম্ আস্তে|
35 ೩೫ ಅದನ್ನು ಯೇಸುವಿನ ಬಳಿಗೆ ತಂದು ತಮ್ಮ ಬಟ್ಟೆಗಳನ್ನು ಆ ಕತ್ತೆಮರಿಯ ಮೇಲೆ ಹಾಕಿ ಯೇಸುವನ್ನು ಕುಳ್ಳಿರಿಸಿದರು.
৩৫পশ্চাৎ তৌ তং গর্দভশাৱকং যীশোরন্তিকমানীয তৎপৃষ্ঠে নিজৱসনানি পাতযিৎৱা তদুপরি যীশুমারোহযামাসতুঃ|
36 ೩೬ ಆತನು ಹೋಗುತ್ತಿರುವಾಗ ಅವರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.
৩৬অথ যাত্রাকালে লোকাঃ পথি স্ৱৱস্ত্রাণি পাতযিতুম্ আরেভিরে|
37 ೩೭ ಆತನು ಪಟ್ಟಣವನ್ನು ಸಮೀಪಿಸಿ ಎಣ್ಣೆಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಬಂದಾಗ ಶಿಷ್ಯರ ಗುಂಪೆಲ್ಲಾ ಸಂತೋಷಪಡುತ್ತಾ ತಾವು ಕಂಡಿದ್ದ ಎಲ್ಲಾ ಮಹತ್ಕಾರ್ಯಗಳ ವಿಷಯದಲ್ಲಿ,
৩৭অপরং জৈতুনাদ্রেরুপত্যকাম্ ইৎৱা শিষ্যসংঘঃ পূর্ৱ্ৱদৃষ্টানি মহাকর্ম্মাণি স্মৃৎৱা,
38 ೩೮ “ಕರ್ತನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ, ಪರಲೋಕದಲ್ಲಿ ಸಮಾಧಾನ, ಮೇಲಣಲೋಕಗಳಲ್ಲಿ ಮಹಿಮೆ” ಎಂದು ಮಹಾ ಶಬ್ದದಿಂದ ದೇವರನ್ನು ಕೊಂಡಾಡುವುದಕ್ಕೆ ತೊಡಗಿದರು.
৩৮যো রাজা প্রভো র্নাম্নাযাতি স ধন্যঃ স্ৱর্গে কুশলং সর্ৱ্ৱোচ্চে জযধ্ৱনি র্ভৱতু, কথামেতাং কথযিৎৱা সানন্দম্ উচৈরীশ্ৱরং ধন্যং ৱক্তুমারেভে|
39 ೩೯ ಜನರ ಗುಂಪಿನೊಳಗಿದ್ದ ಫರಿಸಾಯರಲ್ಲಿ ಕೆಲವರು ಆತನಿಗೆ, “ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು” ಎಂದು ಹೇಳಿದ್ದಕ್ಕೆ,
৩৯তদা লোকারণ্যমধ্যস্থাঃ কিযন্তঃ ফিরূশিনস্তৎ শ্রুৎৱা যীশুং প্রোচুঃ, হে উপদেশক স্ৱশিষ্যান্ তর্জয|
40 ೪೦ ಆತನು, “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು” ಎಂದು ನಿಮಗೆ ಹೇಳುತ್ತೇನೆ ಅಂದನು.
৪০স উৱাচ, যুষ্মানহং ৱদামি যদ্যমী নীরৱাস্তিষ্ঠন্তি তর্হি পাষাণা উচৈঃ কথাঃ কথযিষ্যন্তি|
41 ೪೧ ತರುವಾಯ ಆತನು ಯೆರೂಸಲೇಮ್ ಪಟ್ಟಣದ ಸಮೀಪಕ್ಕೆ ಬಂದಾಗ ಆ ಪಟ್ಟಣವನ್ನು ನೋಡಿ ಅದರ ವಿಷಯವಾಗಿ ಕಣ್ಣೀರಿಡುತ್ತಾ,
৪১পশ্চাৎ তৎপুরান্তিকমেত্য তদৱলোক্য সাশ্রুপাতং জগাদ,
42 ೪೨ “ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡಿದ್ದರೆ ಎಷ್ಟೋ ಒಳ್ಳೆಯದು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ.
৪২হা হা চেৎ ৎৱমগ্রেঽজ্ঞাস্যথাঃ, তৱাস্মিন্নেৱ দিনে ৱা যদি স্ৱমঙ্গলম্ উপালপ্স্যথাঃ, তর্হ্যুত্তমম্ অভৱিষ্যৎ, কিন্তু ক্ষণেস্মিন্ তত্তৱ দৃষ্টেরগোচরম্ ভৱতি|
43 ೪೩ ದೇವರು ನಿನಗೆ ದರ್ಶನಕೊಟ್ಟ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ, ನಿನ್ನ ವೈರಿಗಳು ನಿನ್ನ ಸುತ್ತಲೂ ಒಡ್ದುಕಟ್ಟಿ, ಮುತ್ತಿಗೆ ಹಾಕಿ, ಎಲ್ಲಾ ಕಡೆಗಳಿಂದ ನಿನ್ನನ್ನು ಒಂದುಗೂಡಿಸಿ, ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ, ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿನಗಳು ನಿನ್ನ ಮೇಲೆ ಬರುವವು” ಅಂದನು.
৪৩ৎৱং স্ৱত্রাণকালে ন মনো ন্যধত্থা ইতি হেতো র্যৎকালে তৱ রিপৱস্ত্ৱাং চতুর্দিক্ষু প্রাচীরেণ ৱেষ্টযিৎৱা রোৎস্যন্তি
44 ೪೪
৪৪বালকৈঃ সার্দ্ধং ভূমিসাৎ করিষ্যন্তি চ ৎৱন্মধ্যে পাষাণৈকোপি পাষাণোপরি ন স্থাস্যতি চ, কাল ঈদৃশ উপস্থাস্যতি|
45 ೪೫ ಬಳಿಕ ಆತನು ದೇವಾಲಯಕ್ಕೆ ಹೋಗಿ ವ್ಯಾಪಾರಮಾಡುವವರನ್ನು ಹೊರಹಾಕುವುದಕ್ಕೆ ಪ್ರಾರಂಭಿಸಿ ಅವರಿಗೆ,
৪৫অথ মধ্যেমন্দিরং প্রৱিশ্য তত্রত্যান্ ক্রযিৱিক্রযিণো বহিষ্কুর্ৱ্ৱন্
46 ೪೬ “‘ನನ್ನ ಆಲಯವು ಪ್ರಾರ್ಥನಾಲಯವಾಗಿರುವುದು’ ಎಂದು ಬರೆಯಲ್ಪಟ್ಟಿದೆಯಲ್ಲಾ, ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ” ಎಂದು ಹೇಳಿ ಅವರನ್ನು ಹೊರಗೆ ಅಟ್ಟಿದನು.
৪৬অৱদৎ মদ্গৃহং প্রার্থনাগৃহমিতি লিপিরাস্তে কিন্তু যূযং তদেৱ চৈরাণাং গহ্ৱরং কুরুথ|
47 ೪೭ ಅಲ್ಲದೆ ಆತನು ಪ್ರತಿದಿನ ದೇವಾಲಯದಲ್ಲಿ ಬಂದು ಬೋಧನೆ ಮಾಡುತ್ತಿದ್ದನು. ಅಷ್ಟರಲ್ಲಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಪ್ರಜೆಗಳಲ್ಲಿ ನಾಯಕರೂ ಆತನನ್ನು ಕೊಲ್ಲುವುದಕ್ಕೆ ಸಂದರ್ಭನೋಡುತ್ತಿದ್ದರು.
৪৭পশ্চাৎ স প্রত্যহং মধ্যেমন্দিরম্ উপদিদেশ; ততঃ প্রধানযাজকা অধ্যাপকাঃ প্রাচীনাশ্চ তং নাশযিতুং চিচেষ্টিরে;
48 ೪೮ ಆದರೆ ಜನರೆಲ್ಲರು ಆತನ ಹತ್ತಿರದಲ್ಲಿದ್ದುಕೊಂಡು ಬೋಧನೆಯನ್ನು ಗಮನಿಸಿ ಕೇಳುತ್ತಿದ್ದುದರಿಂದ ಏನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ.
৪৮কিন্তু তদুপদেশে সর্ৱ্ৱে লোকা নিৱিষ্টচিত্তাঃ স্থিতাস্তস্মাৎ তে তৎকর্ত্তুং নাৱকাশং প্রাপুঃ|

< ಲೂಕನು 19 >