< ಲೂಕನು 16 >

1 ಯೇಸು ತನ್ನ ಶಿಷ್ಯರಿಗೂ ಹೇಳಿದ್ದೇನಂದರೆ, “ಐಶ್ವರ್ಯವಂತನಾದ ಒಬ್ಬ ಮನುಷ್ಯನಿಗೆ ಒಬ್ಬ ಪಾರುಪಾತ್ಯಗಾರನಿದ್ದನು. ಅವನ ಕುರಿತು ಯಜಮಾನನ ಬಳಿಯಲ್ಲಿ, ಇವನು ನಿನ್ನ ಆಸ್ತಿಯನ್ನು ಹಾಳುಮಾಡುತ್ತಾ ಇದ್ದಾನೆ ಎಂದು ಯಾರೋ ದೂರು ಹೇಳಿರಲಾಗಿ,
ਅਪਰਞ੍ਚ ਯੀਸ਼ੁਃ ਸ਼ਿਸ਼਼੍ਯੇਭ੍ਯੋਨ੍ਯਾਮੇਕਾਂ ਕਥਾਂ ਕਥਯਾਮਾਸ ਕਸ੍ਯਚਿਦ੍ ਧਨਵਤੋ ਮਨੁਸ਼਼੍ਯਸ੍ਯ ਗ੍ਰੁʼਹਕਾਰ੍ੱਯਾਧੀਸ਼ੇ ਸਮ੍ਪੱਤੇਰਪਵ੍ਯਯੇ(ਅ)ਪਵਾਦਿਤੇ ਸਤਿ
2 ಯಜಮಾನನು ಅವನನ್ನು ಕರೆದು, ‘ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವ ಸಂಗತಿ? ನಿನ್ನ ಪಾರುಪಾತ್ಯೆಯ ಲೆಕ್ಕವನ್ನು ಒಪ್ಪಿಸು, ನೀನು ಇನ್ನು ಪಾರುಪಾತ್ಯಗಾರನಾಗಿರುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಿದನು.
ਤਸ੍ਯ ਪ੍ਰਭੁਸ੍ਤਮ੍ ਆਹੂਯ ਜਗਾਦ, ਤ੍ਵਯਿ ਯਾਮਿਮਾਂ ਕਥਾਂ ਸ਼੍ਰੁʼਣੋਮਿ ਸਾ ਕੀਦ੍ਰੁʼਸ਼ੀ? ਤ੍ਵੰ ਗ੍ਰੁʼਹਕਾਰ੍ੱਯਾਧੀਸ਼ਕਰ੍ੰਮਣੋ ਗਣਨਾਂ ਦਰ੍ਸ਼ਯ ਗ੍ਰੁʼਹਕਾਰ੍ੱਯਾਧੀਸ਼ਪਦੇ ਤ੍ਵੰ ਨ ਸ੍ਥਾਸ੍ਯਸਿ|
3 ಹೀಗಿರಲಾಗಿ ಆ ಪಾರುಪಾತ್ಯಗಾರನು, ‘ನಾನೇನು ಮಾಡಲಿ? ನನ್ನ ಯಜಮಾನನು ನನ್ನಿಂದ ಈ ಪಾರುಪಾತ್ಯೆಯ ಕೆಲಸವನ್ನು ತೆಗೆದುಬಿಡುತ್ತಾನಲ್ಲಾ. ಅಗೆಯುವದಕ್ಕೆ ನನಗೆ ಬಲವಿಲ್ಲ, ಭಿಕ್ಷೆ ಬೇಡುವುದಕ್ಕೆ ನನಗೆ ನಾಚಿಕೆಯಾಗುತ್ತದೆ.
ਤਦਾ ਸ ਗ੍ਰੁʼਹਕਾਰ੍ੱਯਾਧੀਸ਼ੋ ਮਨਸਾ ਚਿਨ੍ਤਯਾਮਾਸ, ਪ੍ਰਭੁ ਰ੍ਯਦਿ ਮਾਂ ਗ੍ਰੁʼਹਕਾਰ੍ੱਯਾਧੀਸ਼ਪਦਾਦ੍ ਭ੍ਰੰਸ਼ਯਤਿ ਤਰ੍ਹਿ ਕਿੰ ਕਰਿਸ਼਼੍ਯੇ(ਅ)ਹੰ? ਮ੍ਰੁʼਦੰ ਖਨਿਤੁੰ ਮਮ ਸ਼ਕ੍ਤਿ ਰ੍ਨਾਸ੍ਤਿ ਭਿਕ੍ਸ਼਼ਿਤੁਞ੍ਚ ਲੱਜਿਸ਼਼੍ਯੇ(ਅ)ਹੰ|
4 ಈ ಪಾರುಪಾತ್ಯೆಯ ಕೆಲಸದಿಂದ ನನ್ನನ್ನು ತೆಗೆದ ಮೇಲೆ ಜನರು ನನ್ನನ್ನು ತಮ್ಮ ಮನೆಗಳೊಳಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ನನಗೆ ಗೊತ್ತಿದೆ’ ಎಂದು ತನ್ನೊಳಗೆ ಅಂದುಕೊಂಡು,
ਅਤਏਵ ਮਯਿ ਗ੍ਰੁʼਹਕਾਰ੍ੱਯਾਧੀਸ਼ਪਦਾਤ੍ ਚ੍ਯੁਤੇ ਸਤਿ ਯਥਾ ਲੋਕਾ ਮਹ੍ਯਮ੍ ਆਸ਼੍ਰਯੰ ਦਾਸ੍ਯਨ੍ਤਿ ਤਦਰ੍ਥੰ ਯਤ੍ਕਰ੍ੰਮ ਮਯਾ ਕਰਣੀਯੰ ਤਨ੍ ਨਿਰ੍ਣੀਯਤੇ|
5 ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನೂ ಕರೆದು ಮೊದಲನೆಯವನನ್ನು, ‘ನೀನು ನನ್ನ ಯಜಮಾನನಿಗೆ ಎಷ್ಟು ಕೊಡಬೇಕು?’ ಎಂದು ಕೇಳಲು,
ਪਸ਼੍ਚਾਤ੍ ਸ ਸ੍ਵਪ੍ਰਭੋਰੇਕੈਕਮ੍ ਅਧਮਰ੍ਣਮ੍ ਆਹੂਯ ਪ੍ਰਥਮੰ ਪਪ੍ਰੱਛ, ਤ੍ਵੱਤੋ ਮੇ ਪ੍ਰਭੁਣਾ ਕਤਿ ਪ੍ਰਾਪ੍ਯਮ੍?
6 ಅವನು ‘ನೂರು ಬುದ್ದಲಿ ಎಣ್ಣೆ’ ಎಂದಾಗ ಅವನಿಗೆ, ‘ಈ ನಿನ್ನ ಪತ್ರವನ್ನು ತೆಗೆದುಕೊಂಡು ಬೇಗ ಐವತ್ತು ಬುದ್ದಲಿ ಎಂದು ಬರೆ’ ಎಂದು ಹೇಳಿದನು.
ਤਤਃ ਸ ਉਵਾਚ, ਏਕਸ਼ਤਾਢਕਤੈਲਾਨਿ; ਤਦਾ ਗ੍ਰੁʼਹਕਾਰ੍ੱਯਾਧੀਸ਼ਃ ਪ੍ਰੋਵਾਚ, ਤਵ ਪਤ੍ਰਮਾਨੀਯ ਸ਼ੀਘ੍ਰਮੁਪਵਿਸ਼੍ਯ ਤਤ੍ਰ ਪਞ੍ਚਾਸ਼ਤੰ ਲਿਖ|
7 ಬಳಿಕ ಮತ್ತೊಬ್ಬನನ್ನು, ‘ನೀನು ಎಷ್ಟು ಕೊಡಬೇಕು?’ ಎಂದು ಕೇಳಲು ಅವನು, ‘ನೂರು ಖಂಡುಗ ಗೋದಿ’ ಅಂದಾಗ ಅವನಿಗೆ, ‘ಈ ನಿನ್ನ ಪತ್ರವನ್ನು ತೆಗೆದುಕೊಂಡು ಎಂಭತ್ತು ಖಂಡುಗ ಎಂದು ಬರೆ’ ಎಂದು ಹೇಳಿದನು.
ਪਸ਼੍ਚਾਦਨ੍ਯਮੇਕੰ ਪਪ੍ਰੱਛ, ਤ੍ਵੱਤੋ ਮੇ ਪ੍ਰਭੁਣਾ ਕਤਿ ਪ੍ਰਾਪ੍ਯਮ੍? ਤਤਃ ਸੋਵਾਦੀਦ੍ ਏਕਸ਼ਤਾਢਕਗੋਧੂਮਾਃ; ਤਦਾ ਸ ਕਥਯਾਮਾਸ, ਤਵ ਪਤ੍ਰਮਾਨੀਯ ਅਸ਼ੀਤਿੰ ਲਿਖ|
8 ಯಜಮಾನನು ಇದನ್ನು ಕೇಳಿ ಅಪ್ರಾಮಾಣಿಕನಾದ ಆ ಪಾರುಪಾತ್ಯಗಾರನನ್ನು ಕುರಿತು, ಇವನು ಜಾಣತನ ಮಾಡಿದನು ಎಂದು ಹೊಗಳಿದನು. ಏಕೆಂದರೆ ಈ ಲೋಕದ ಜನರು ತಮ್ಮ ವಿಷಯಗಳಲ್ಲಿ ಬೆಳಕಿನ ಜನರಿಗಿಂತಲೂ ಜಾಣರಾಗಿದ್ದಾರೆ. (aiōn g165)
ਤੇਨੈਵ ਪ੍ਰਭੁਸ੍ਤਮਯਥਾਰ੍ਥਕ੍ਰੁʼਤਮ੍ ਅਧੀਸ਼ੰ ਤਦ੍ਬੁੱਧਿਨੈਪੁਣ੍ਯਾਤ੍ ਪ੍ਰਸ਼ਸ਼ੰਸ; ਇੱਥੰ ਦੀਪ੍ਤਿਰੂਪਸਨ੍ਤਾਨੇਭ੍ਯ ਏਤਤ੍ਸੰਸਾਰਸ੍ਯ ਸਨ੍ਤਾਨਾ ਵਰ੍ੱਤਮਾਨਕਾਲੇ(ਅ)ਧਿਕਬੁੱਧਿਮਨ੍ਤੋ ਭਵਨ੍ਤਿ| (aiōn g165)
9 “ಅನ್ಯಾಯದ ಧನದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ಅದು ನಿಮ್ಮ ಕೈಬಿಟ್ಟುಹೋದಾಗ ಅವರು ನಿಮ್ಮನ್ನು ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವರು ಎಂದು ನಾನು ನಿಮಗೆ ಹೇಳುತ್ತೇನೆ. (aiōnios g166)
ਅਤੋ ਵਦਾਮਿ ਯੂਯਮਪ੍ਯਯਥਾਰ੍ਥੇਨ ਧਨੇਨ ਮਿਤ੍ਰਾਣਿ ਲਭਧ੍ਵੰ ਤਤੋ ਯੁਸ਼਼੍ਮਾਸੁ ਪਦਭ੍ਰਸ਼਼੍ਟੇਸ਼਼੍ਵਪਿ ਤਾਨਿ ਚਿਰਕਾਲਮ੍ ਆਸ਼੍ਰਯੰ ਦਾਸ੍ਯਨ੍ਤਿ| (aiōnios g166)
10 ೧೦ ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು. ಸಣ್ಣ ವಿಷಯಗಳಲ್ಲಿ ಅಪ್ರಾಮಾಣಿಕನಾಗಿರುವವನು ಬಹಳವಾದದ್ದರಲ್ಲಿಯೂ ಅಪ್ರಾಮಾಣಿಕನಾಗಿರುವನು.
ਯਃ ਕਸ਼੍ਚਿਤ੍ ਕ੍ਸ਼਼ੁਦ੍ਰੇ ਕਾਰ੍ੱਯੇ ਵਿਸ਼੍ਵਾਸ੍ਯੋ ਭਵਤਿ ਸ ਮਹਤਿ ਕਾਰ੍ੱਯੇਪਿ ਵਿਸ਼੍ਵਾਸ੍ਯੋ ਭਵਤਿ, ਕਿਨ੍ਤੁ ਯਃ ਕਸ਼੍ਚਿਤ੍ ਕ੍ਸ਼਼ੁਦ੍ਰੇ ਕਾਰ੍ੱਯੇ(ਅ)ਵਿਸ਼੍ਵਾਸ੍ਯੋ ਭਵਤਿ ਸ ਮਹਤਿ ਕਾਰ੍ੱਯੇਪ੍ਯਵਿਸ਼੍ਵਾਸ੍ਯੋ ਭਵਤਿ|
11 ೧೧ ಹೀಗಿರುವುದರಿಂದ ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸಿಕೊಟ್ಟಾರು?
ਅਤਏਵ ਅਯਥਾਰ੍ਥੇਨ ਧਨੇਨ ਯਦਿ ਯੂਯਮਵਿਸ਼੍ਵਾਸ੍ਯਾ ਜਾਤਾਸ੍ਤਰ੍ਹਿ ਸਤ੍ਯੰ ਧਨੰ ਯੁਸ਼਼੍ਮਾਕੰ ਕਰੇਸ਼਼ੁ ਕਃ ਸਮਰ੍ਪਯਿਸ਼਼੍ਯਤਿ?
12 ೧೨ ಮತ್ತೊಬ್ಬನ ಸೊತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಮ್ಮದನ್ನು ನಿಮಗೆ ಯಾರು ಒಪ್ಪಿಸಿಕೊಟ್ಟಾರು?
ਯਦਿ ਚ ਪਰਧਨੇਨ ਯੂਯਮ੍ ਅਵਿਸ਼੍ਵਾਸ੍ਯਾ ਭਵਥ ਤਰ੍ਹਿ ਯੁਸ਼਼੍ਮਾਕੰ ਸ੍ਵਕੀਯਧਨੰ ਯੁਸ਼਼੍ਮਭ੍ਯੰ ਕੋ ਦਾਸ੍ਯਤਿ?
13 ೧೩ ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು, ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಒಟ್ಟಿಗೆ ಸೇವಿಸಲಾರಿರಿ” ಅಂದನು.
ਕੋਪਿ ਦਾਸ ਉਭੌ ਪ੍ਰਭੂ ਸੇਵਿਤੁੰ ਨ ਸ਼ਕ੍ਨੋਤਿ, ਯਤ ਏਕਸ੍ਮਿਨ੍ ਪ੍ਰੀਯਮਾਣੋ(ਅ)ਨ੍ਯਸ੍ਮਿੰਨਪ੍ਰੀਯਤੇ ਯਦ੍ਵਾ ਏਕੰ ਜਨੰ ਸਮਾਦ੍ਰੁʼਤ੍ਯ ਤਦਨ੍ਯੰ ਤੁੱਛੀਕਰੋਤਿ ਤਦ੍ਵਦ੍ ਯੂਯਮਪਿ ਧਨੇਸ਼੍ਵਰੌ ਸੇਵਿਤੁੰ ਨ ਸ਼ਕ੍ਨੁਥ|
14 ೧೪ ಫರಿಸಾಯರು ಹಣದಾಸೆಯುಳ್ಳವರಾಗಿದ್ದರಿಂದ ಈ ಮಾತುಗಳನ್ನೆಲ್ಲಾ ಕೇಳಿ ಆತನನ್ನು ಹಾಸ್ಯ ಮಾಡಿದರು.
ਤਦੈਤਾਃ ਸਰ੍ੱਵਾਃ ਕਥਾਃ ਸ਼੍ਰੁਤ੍ਵਾ ਲੋਭਿਫਿਰੂਸ਼ਿਨਸ੍ਤਮੁਪਜਹਸੁਃ|
15 ೧೫ ಆಗ ಆತನು ಅವರಿಗೆ ಹೇಳಿದ್ದೇನಂದರೆ, “ಮನುಷ್ಯರ ಮುಂದೆ ನೀತಿವಂತರೆಂದು ತೋರಿಸಿಕೊಳ್ಳುವವರು ನೀವು, ಆದರೆ ದೇವರು ನಿಮ್ಮ ಹೃದಯಗಳನ್ನು ಬಲ್ಲವನಾಗಿದ್ದಾನೆ. ಮನುಷ್ಯರ ದೃಷ್ಟಿಯಲ್ಲಿ ಶ್ರೇಷ್ಠವೆನಿಸಿಕೊಳ್ಳುವಂಥದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.
ਤਤਃ ਸ ਉਵਾਚ, ਯੂਯੰ ਮਨੁਸ਼਼੍ਯਾਣਾਂ ਨਿਕਟੇ ਸ੍ਵਾਨ੍ ਨਿਰ੍ਦੋਸ਼਼ਾਨ੍ ਦਰ੍ਸ਼ਯਥ ਕਿਨ੍ਤੁ ਯੁਸ਼਼੍ਮਾਕਮ੍ ਅਨ੍ਤਃਕਰਣਾਨੀਸ਼੍ਵਰੋ ਜਾਨਾਤਿ, ਯਤ੍ ਮਨੁਸ਼਼੍ਯਾਣਾਮ੍ ਅਤਿ ਪ੍ਰਸ਼ੰਸ੍ਯੰ ਤਦ੍ ਈਸ਼੍ਵਰਸ੍ਯ ਘ੍ਰੁʼਣ੍ਯੰ|
16 ೧೬ “ಧರ್ಮಶಾಸ್ತ್ರವೂ ಪ್ರವಾದನೆಗಳೂ ಯೋಹಾನನ ತನಕವೇ. ಆ ನಂತರದ ದಿನಗಳಿಂದ ದೇವರ ರಾಜ್ಯದ ಸುವಾರ್ತೆಯು ಸಾರಲ್ಪಡುತ್ತಲಿದೆ. ಅದರಲ್ಲಿ ಎಲ್ಲರೂ ಬಲವಂತವಾಗಿ ನುಗ್ಗಲು ಯತ್ನಿಸುತ್ತಿದ್ದಾರೆ.
ਯੋਹਨ ਆਗਮਨਪਰ੍ੱਯਨਤੰ ਯੁਸ਼਼੍ਮਾਕੰ ਸਮੀਪੇ ਵ੍ਯਵਸ੍ਥਾਭਵਿਸ਼਼੍ਯਦ੍ਵਾਦਿਨਾਂ ਲੇਖਨਾਨਿ ਚਾਸਨ੍ ਤਤਃ ਪ੍ਰਭ੍ਰੁʼਤਿ ਈਸ਼੍ਵਰਰਾਜ੍ਯਸ੍ਯ ਸੁਸੰਵਾਦਃ ਪ੍ਰਚਰਤਿ, ਏਕੈਕੋ ਲੋਕਸ੍ਤਨ੍ਮਧ੍ਯੰ ਯਤ੍ਨੇਨ ਪ੍ਰਵਿਸ਼ਤਿ ਚ|
17 ೧೭ ಧರ್ಮಶಾಸ್ತ್ರದೊಳಗಿನ ಒಂದು ಗುಡಸಾದರೂ ಬಿದ್ದು ಹೋಗುವುದಕ್ಕಿಂತಲೂ ಆಕಾಶವೂ ಭೂಮಿಯೂ ಅಳಿದುಹೋಗುವುದು ಸುಲಭ.
ਵਰੰ ਨਭਸਃ ਪ੍ਰੁʼਥਿਵ੍ਯਾਸ਼੍ਚ ਲੋਪੋ ਭਵਿਸ਼਼੍ਯਤਿ ਤਥਾਪਿ ਵ੍ਯਵਸ੍ਥਾਯਾ ਏਕਬਿਨ੍ਦੋਰਪਿ ਲੋਪੋ ਨ ਭਵਿਸ਼਼੍ਯਤਿ|
18 ೧೮ “ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಮಾಡಿಕೊಳ್ಳುವ ಪ್ರತಿಯೊಬ್ಬನು ವ್ಯಭಿಚಾರ ಮಾಡುವವನಾಗಿದ್ದಾನೆ. ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.
ਯਃ ਕਸ਼੍ਚਿਤ੍ ਸ੍ਵੀਯਾਂ ਭਾਰ੍ੱਯਾਂ ਵਿਹਾਯ ਸ੍ਤ੍ਰਿਯਮਨ੍ਯਾਂ ਵਿਵਹਤਿ ਸ ਪਰਦਾਰਾਨ੍ ਗੱਛਤਿ, ਯਸ਼੍ਚ ਤਾ ਤ੍ਯਕ੍ਤਾਂ ਨਾਰੀਂ ਵਿਵਹਤਿ ਸੋਪਿ ਪਰਦਾਰਾਨ ਗੱਛਤਿ|
19 ೧೯ “ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು. ಅವನು ಬೆಲೆಬಾಳುವ ನಯವಾದ ನಾರುಮಡಿ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು, ಪ್ರತಿದಿನವು ಸುಖಸಂತೋಷಗಳಲ್ಲಿ ಜೀವಿಸುತ್ತಿದ್ದನು.
ਏਕੋ ਧਨੀ ਮਨੁਸ਼਼੍ਯਃ ਸ਼ੁਕ੍ਲਾਨਿ ਸੂਕ੍ਸ਼਼੍ਮਾਣਿ ਵਸ੍ਤ੍ਰਾਣਿ ਪਰ੍ੱਯਦਧਾਤ੍ ਪ੍ਰਤਿਦਿਨੰ ਪਰਿਤੋਸ਼਼ਰੂਪੇਣਾਭੁੰਕ੍ਤਾਪਿਵੱਚ|
20 ೨೦ ಅವನ ಮನೇ ಬಾಗಿಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು. ಇವನು ಮೈತುಂಬಾ ಹುಣ್ಣೆದ್ದವನು.
ਸਰ੍ੱਵਾਙ੍ਗੇ ਕ੍ਸ਼਼ਤਯੁਕ੍ਤ ਇਲਿਯਾਸਰਨਾਮਾ ਕਸ਼੍ਚਿਦ੍ ਦਰਿਦ੍ਰਸ੍ਤਸ੍ਯ ਧਨਵਤੋ ਭੋਜਨਪਾਤ੍ਰਾਤ੍ ਪਤਿਤਮ੍ ਉੱਛਿਸ਼਼੍ਟੰ ਭੋਕ੍ਤੁੰ ਵਾਞ੍ਛਨ੍ ਤਸ੍ਯ ਦ੍ਵਾਰੇ ਪਤਿਤ੍ਵਾਤਿਸ਼਼੍ਠਤ੍;
21 ೨೧ ಐಶ್ವರ್ಯವಂತನ ಮೇಜಿನಿಂದ ಬಿದ್ದ ಎಂಜಲನ್ನು ತಿಂದು ಹಸಿವು ತೀರಿಸಿಕೊಳ್ಳಬೇಕೆಂದಿದ್ದನು. ಇಷ್ಟು ಮಾತ್ರವಲ್ಲದೆ ನಾಯಿಗಳು ಸಹ ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.
ਅਥ ਸ਼੍ਵਾਨ ਆਗਤ੍ਯ ਤਸ੍ਯ ਕ੍ਸ਼਼ਤਾਨ੍ਯਲਿਹਨ੍|
22 ೨೨ ಹೀಗಿರುವಲ್ಲಿ ಸ್ವಲ್ಪ ಕಾಲವಾದ ಮೇಲೆ ಆ ಭಿಕ್ಷುಕನು ಸತ್ತನು. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಆ ಐಶ್ವರ್ಯವಂತನು ಸಹ ಸತ್ತನು. ಅವನನ್ನು ಹೂಣಿಟ್ಟರು.
ਕਿਯਤ੍ਕਾਲਾਤ੍ਪਰੰ ਸ ਦਰਿਦ੍ਰਃ ਪ੍ਰਾਣਾਨ੍ ਜਹੌ; ਤਤਃ ਸ੍ਵਰ੍ਗੀਯਦੂਤਾਸ੍ਤੰ ਨੀਤ੍ਵਾ ਇਬ੍ਰਾਹੀਮਃ ਕ੍ਰੋਡ ਉਪਵੇਸ਼ਯਾਮਾਸੁਃ|
23 ೨೩ ಅವನು ಪಾತಾಳದೊಳಗೆ ಯಾತನೆಪಡುತ್ತಾ ಇರುವಲ್ಲಿ ಕಣ್ಣೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ನೋಡಿ, (Hadēs g86)
ਪਸ਼੍ਚਾਤ੍ ਸ ਧਨਵਾਨਪਿ ਮਮਾਰ, ਤੰ ਸ਼੍ਮਸ਼ਾਨੇ ਸ੍ਥਾਪਯਾਮਾਸੁਸ਼੍ਚ; ਕਿਨ੍ਤੁ ਪਰਲੋਕੇ ਸ ਵੇਦਨਾਕੁਲਃ ਸਨ੍ ਊਰ੍ੱਧ੍ਵਾਂ ਨਿਰੀਕ੍ਸ਼਼੍ਯ ਬਹੁਦੂਰਾਦ੍ ਇਬ੍ਰਾਹੀਮੰ ਤਤ੍ਕ੍ਰੋਡ ਇਲਿਯਾਸਰਞ੍ਚ ਵਿਲੋਕ੍ਯ ਰੁਵੰਨੁਵਾਚ; (Hadēs g86)
24 ೨೪ ‘ತಂದೆಯೇ, ಅಬ್ರಹಾಮನೇ ನನ್ನ ಮೇಲೆ ಕರುಣೆ ಇಟ್ಟು ಲಾಜರನನ್ನು ಕಳುಹಿಸು ಅವನು ತನ್ನ ತುದಿ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ಏಕೆಂದರೆ ಈ ಉರಿಯಲ್ಲಿ ಸಂಕಟಪಡುತ್ತಿದ್ದೇನೆ’ ಎಂದು ಕೂಗಿ ಹೇಳಿದನು.
ਹੇ ਪਿਤਰ੍ ਇਬ੍ਰਾਹੀਮ੍ ਅਨੁਗ੍ਰੁʼਹ੍ਯ ਅਙ੍ਗੁਲ੍ਯਗ੍ਰਭਾਗੰ ਜਲੇ ਮੱਜਯਿਤ੍ਵਾ ਮਮ ਜਿਹ੍ਵਾਂ ਸ਼ੀਤਲਾਂ ਕਰ੍ੱਤੁਮ੍ ਇਲਿਯਾਸਰੰ ਪ੍ਰੇਰਯ, ਯਤੋ ਵਹ੍ਨਿਸ਼ਿਖਾਤੋਹੰ ਵ੍ਯਥਿਤੋਸ੍ਮਿ|
25 ೨೫ ಆದರೆ ಅಬ್ರಹಾಮನು, ‘ಕಂದಾ, ನೀನು ಆಶಿಸಿದ ಸುಖಸಂಪತ್ತನ್ನು ನಿನ್ನ ಜೀವಮಾನದಲ್ಲಿ ಹೊಂದಿದ್ದಿ. ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬುದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ.
ਤਦਾ ਇਬ੍ਰਾਹੀਮ੍ ਬਭਾਸ਼਼ੇ, ਹੇ ਪੁਤ੍ਰ ਤ੍ਵੰ ਜੀਵਨ੍ ਸਮ੍ਪਦੰ ਪ੍ਰਾਪ੍ਤਵਾਨ੍ ਇਲਿਯਾਸਰਸ੍ਤੁ ਵਿਪਦੰ ਪ੍ਰਾਪ੍ਤਵਾਨ੍ ਏਤਤ੍ ਸ੍ਮਰ, ਕਿਨ੍ਤੁ ਸਮ੍ਪ੍ਰਤਿ ਤਸ੍ਯ ਸੁਖੰ ਤਵ ਚ ਦੁਃਖੰ ਭਵਤਿ|
26 ೨೬ ಇದು ಮಾತ್ರವಲ್ಲದೆ ನಮಗೂ ನಿಮಗೂ ನಡುವೆ ದೊಡ್ಡದೊಂದು ಆಳವಾದ ಕಂದಕ ಇದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಹೋಗಬೇಕೆಂದಿರುವವರು ಹೋಗಲಾರರು. ಮತ್ತು ಆ ಕಡೆಯಿಂದ ನಮ್ಮ ಬಳಿಗೆ ಯಾರಿಂದಲೂ ಬರಲಿಕ್ಕಾಗದು’ ಅಂದನು.
ਅਪਰਮਪਿ ਯੁਸ਼਼੍ਮਾਕਮ੍ ਅਸ੍ਮਾਕਞ੍ਚ ਸ੍ਥਾਨਯੋ ਰ੍ਮਧ੍ਯੇ ਮਹਦ੍ਵਿੱਛੇਦੋ(ਅ)ਸ੍ਤਿ ਤਤ ਏਤਤ੍ਸ੍ਥਾਨਸ੍ਯ ਲੋਕਾਸ੍ਤਤ੍ ਸ੍ਥਾਨੰ ਯਾਤੁੰ ਯਦ੍ਵਾ ਤਤ੍ਸ੍ਥਾਨਸ੍ਯ ਲੋਕਾ ਏਤਤ੍ ਸ੍ਥਾਨਮਾਯਾਤੁੰ ਨ ਸ਼ਕ੍ਨੁਵਨ੍ਤਿ|
27 ೨೭ ಆಗ ಅವನು, ‘ಅಪ್ಪಾ, ಹಾಗಾದರೆ ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.
ਤਦਾ ਸ ਉਕ੍ਤਵਾਨ੍, ਹੇ ਪਿਤਸ੍ਤਰ੍ਹਿ ਤ੍ਵਾਂ ਨਿਵੇਦਯਾਮਿ ਮਮ ਪਿਤੁ ਰ੍ਗੇਹੇ ਯੇ ਮਮ ਪਞ੍ਚ ਭ੍ਰਾਤਰਃ ਸਨ੍ਤਿ
28 ೨೮ ನನಗೆ ಐದು ಮಂದಿ ಅಣ್ಣತಮ್ಮಂದಿರಿದ್ದಾರೆ. ಅವರು ಸಹ ಈ ಯಾತನೆಯ ಸ್ಥಳಕ್ಕೆ ಬಾರದಂತೆ ಅವನು ತಾನು ಕಂಡದ್ದನ್ನು ಅವರಿಗೆ ಚೆನ್ನಾಗಿ ತಿಳಿಸಿ ಹೇಳಲಿ’ ಅಂದನು.
ਤੇ ਯਥੈਤਦ੍ ਯਾਤਨਾਸ੍ਥਾਨੰ ਨਾਯਾਸ੍ਯਨ੍ਤਿ ਤਥਾ ਮਨ੍ਤ੍ਰਣਾਂ ਦਾਤੁੰ ਤੇਸ਼਼ਾਂ ਸਮੀਪਮ੍ ਇਲਿਯਾਸਰੰ ਪ੍ਰੇਰਯ|
29 ೨೯ ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರವೂ ಪ್ರವಾದಿಗಳ ಗ್ರಂಥಗಳೂ ಅವರಲ್ಲಿ ಅವೆ, ಅವುಗಳನ್ನು ಕೇಳಲಿ’ ಅನ್ನಲು,
ਤਤ ਇਬ੍ਰਾਹੀਮ੍ ਉਵਾਚ, ਮੂਸਾਭਵਿਸ਼਼੍ਯਦ੍ਵਾਦਿਨਾਞ੍ਚ ਪੁਸ੍ਤਕਾਨਿ ਤੇਸ਼਼ਾਂ ਨਿਕਟੇ ਸਨ੍ਤਿ ਤੇ ਤਦ੍ਵਚਨਾਨਿ ਮਨ੍ਯਨ੍ਤਾਂ|
30 ೩೦ ಅವನು ‘ತಂದೆಯೇ, ಅಬ್ರಹಾಮನೇ ಹಾಗಲ್ಲ. ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವರು’ ಅಂದನು.
ਤਦਾ ਸ ਨਿਵੇਦਯਾਮਾਸ, ਹੇ ਪਿਤਰ੍ ਇਬ੍ਰਾਹੀਮ੍ ਨ ਤਥਾ, ਕਿਨ੍ਤੁ ਯਦਿ ਮ੍ਰੁʼਤਲੋਕਾਨਾਂ ਕਸ਼੍ਚਿਤ੍ ਤੇਸ਼਼ਾਂ ਸਮੀਪੰ ਯਾਤਿ ਤਰ੍ਹਿ ਤੇ ਮਨਾਂਸਿ ਵ੍ਯਾਘੋਟਯਿਸ਼਼੍ਯਨ੍ਤਿ|
31 ೩೧ ಅಬ್ರಹಾಮನು ಅವನಿಗೆ, ‘ಅವರು ಮೋಶೆಯ ಮಾತನ್ನೂ ಪ್ರವಾದಿಗಳ ಮಾತನ್ನೂ ಕೇಳದಿದ್ದರೆ ಸತ್ತುಹೋಗಿದ್ದವನೊಬ್ಬನು ಜೀವಿತನಾಗಿ ಎದ್ದರೂ ಅವರು ಒಪ್ಪುವುದಿಲ್ಲ’ ಎಂದು ಹೇಳಿದನು.”
ਤਤ ਇਬ੍ਰਾਹੀਮ੍ ਜਗਾਦ, ਤੇ ਯਦਿ ਮੂਸਾਭਵਿਸ਼਼੍ਯਦ੍ਵਾਦਿਨਾਞ੍ਚ ਵਚਨਾਨਿ ਨ ਮਨ੍ਯਨ੍ਤੇ ਤਰ੍ਹਿ ਮ੍ਰੁʼਤਲੋਕਾਨਾਂ ਕਸ੍ਮਿੰਸ਼੍ਚਿਦ੍ ਉੱਥਿਤੇਪਿ ਤੇ ਤਸ੍ਯ ਮਨ੍ਤ੍ਰਣਾਂ ਨ ਮੰਸ੍ਯਨ੍ਤੇ|

< ಲೂಕನು 16 >