< ಲೂಕನು 15 >

1 ಯೇಸುವಿನ ಉಪದೇಶವನ್ನು ಕೇಳಬೇಕೆಂದು ಎಲ್ಲಾ ಸುಂಕದವರೂ ಪಾಪಿಗಳೂ ಆತನ ಬಳಿಗೆ ಬರುತ್ತಿದ್ದರು.
તદા કરસઞ્ચાયિનઃ પાપિનશ્ચ લોકા ઉપદેશ્કથાં શ્રોતું યીશોઃ સમીપમ્ આગચ્છન્|
2 ಫರಿಸಾಯರೂ ಶಾಸ್ತ್ರಿಗಳೂ, “ಇವನು ಪಾಪಿಗಳನ್ನು ಸೇರಿಸಿಕೊಂಡು ಅವರ ಜೊತೆಯಲ್ಲಿ ಊಟಮಾಡುತ್ತಾನೆ” ಎಂದು ಹೇಳಿಕೊಂಡು ಗೊಣಗುಟ್ಟುತ್ತಿದ್ದರು.
તતઃ ફિરૂશિન ઉપાધ્યાયાશ્ચ વિવદમાનાઃ કથયામાસુઃ એષ માનુષઃ પાપિભિઃ સહ પ્રણયં કૃત્વા તૈઃ સાર્દ્ધં ભુંક્તે|
3 ಆಗ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು.
તદા સ તેભ્ય ઇમાં દૃષ્ટાન્તકથાં કથિતવાન્,
4 ಅದೇನೆಂದರೆ, “ನಿಮ್ಮೊಳಗೆ ಯಾವ ಮನುಷ್ಯನಾದರೂ ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ಕಳೆದುಹೋದರೆ ಅವನು ತೊಂಬತ್ತೊಂಬತ್ತನ್ನೂ ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದೆ ಇದ್ದಾನೆಯೇ?
કસ્યચિત્ શતમેષેષુ તિષ્ઠત્મુ તેષામેકં સ યદિ હારયતિ તર્હિ મધ્યેપ્રાન્તરમ્ એકોનશતમેષાન્ વિહાય હારિતમેષસ્ય ઉદ્દેશપ્રાપ્તિપર્ય્યનતં ન ગવેષયતિ, એતાદૃશો લોકો યુષ્માકં મધ્યે ક આસ્તે?
5 ಸಿಕ್ಕಿದ ಮೇಲೆ ಅವನು ಸಂತೋಷದಿಂದ ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು,
તસ્યોદ્દેશં પ્રાપ્ય હૃષ્ટમનાસ્તં સ્કન્ધે નિધાય સ્વસ્થાનમ્ આનીય બન્ધુબાન્ધવસમીપવાસિન આહૂય વક્તિ,
6 ಮನೆಗೆ ಬಂದು ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕೂಡಿಸಿ, ‘ಕಳೆದುಹೋಗಿದ್ದ ಕುರಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ’ ಎಂದು ಅವರಿಗೆ ಹೇಳುವನಲ್ಲವೇ.
હારિતં મેષં પ્રાપ્તોહમ્ અતો હેતો ર્મયા સાર્દ્ધમ્ આનન્દત|
7 ಅದರಂತೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ಅವಶ್ಯವಿಲ್ಲದ ತೊಂಬತ್ತೊಂಬತ್ತು ಮಂದಿ ನೀತಿವಂತರಿಗಿಂತ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಹೆಚ್ಚು ಸಂತೋಷವುಂಟಾಗುವುದೆಂದು ನಿಮಗೆ ಹೇಳುತ್ತೇನೆ.
તદ્વદહં યુષ્માન્ વદામિ, યેષાં મનઃપરાવર્ત્તનસ્ય પ્રયોજનં નાસ્તિ, તાદૃશૈકોનશતધાર્મ્મિકકારણાદ્ ય આનન્દસ્તસ્માદ્ એકસ્ય મનઃપરિવર્ત્તિનઃ પાપિનઃ કારણાત્ સ્વર્ગે ઽધિકાનન્દો જાયતે|
8 “ಇಲ್ಲವೇ ಒಬ್ಬ ಹೆಂಗಸಿನ ಬಳಿಯಲ್ಲಿ ಹತ್ತು ಬೆಳ್ಳಿನಾಣ್ಯಗಳಿರಲಾಗಿ ಒಂದು ಬೆಳ್ಳಿನಾಣ್ಯ ಕಳೆದು ಹೋದರೆ ದೀಪಹಚ್ಚಿ, ಮನೆಯನ್ನು ಗುಡಿಸಿ ಸಿಕ್ಕುವ ತನಕ ಅದನ್ನು ಎಚ್ಚರದಿಂದ ಹುಡುಕದೆ ಇದ್ದಾಳೂ?
અપરઞ્ચ દશાનાં રૂપ્યખણ્ડાનામ્ એકખણ્ડે હારિતે પ્રદીપં પ્રજ્વાલ્ય ગૃહં સમ્માર્જ્ય તસ્ય પ્રાપ્તિં યાવદ્ યત્નેન ન ગવેષયતિ, એતાદૃશી યોષિત્ કાસ્તે?
9 ಸಿಕ್ಕಿದ ಮೇಲೆ ಆಕೆಯು ತನ್ನ ಗೆಳತಿಯರನ್ನೂ ನೆರೆಹೊರೆಯವರನ್ನೂ ಸೇರಿಸಿಕೊಂಡು, ‘ಕಳೆದು ಹೋಗಿದ್ದ ಬೆಳ್ಳಿನಾಣ್ಯ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ’ ಎಂದು ಹೇಳುವಳಲ್ಲವೇ.
પ્રાપ્તે સતિ બન્ધુબાન્ધવસમીપવાસિનીરાહૂય કથયતિ, હારિતં રૂપ્યખણ્ડં પ્રાપ્તાહં તસ્માદેવ મયા સાર્દ્ધમ્ આનન્દત|
10 ೧೦ ಅದರಂತೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವುದೆಂದು ನಿಮಗೆ ಹೇಳುತ್ತೇನೆ” ಅಂದನು.
તદ્વદહં યુષ્માન્ વ્યાહરામિ, એકેન પાપિના મનસિ પરિવર્ત્તિતે, ઈશ્વરસ્ય દૂતાનાં મધ્યેપ્યાનન્દો જાયતે|
11 ೧೧ ಇನ್ನೂ ಆತನು ಹೇಳಿದ್ದೇನಂದರೆ, “ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು.
અપરઞ્ચ સ કથયામાસ, કસ્યચિદ્ દ્વૌ પુત્રાવાસ્તાં,
12 ೧೨ ಅವರಲ್ಲಿ ಕಿರಿಯವನು ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು’ ಎಂದು ಕೇಳಿಕೊಳ್ಳಲು ತಂದೆಯು ಆಸ್ತಿಯನ್ನು ಅವರಿಗೆ ಹಂಚಿಕೊಟ್ಟನು.
તયોઃ કનિષ્ઠઃ પુત્રઃ પિત્રે કથયામાસ, હે પિતસ્તવ સમ્પત્ત્યા યમંશં પ્રાપ્સ્યામ્યહં વિભજ્ય તં દેહિ, તતઃ પિતા નિજાં સમ્પત્તિં વિભજ્ય તાભ્યાં દદૌ|
13 ೧೩ ಸ್ವಲ್ಪ ದಿನದ ಮೇಲೆ ಆ ಕಿರಿಯ ಮಗನು ತನ್ನ ಪಾಲನ್ನೆಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಹೊರಟುಹೋಗಿ ಅಲ್ಲಿ ಪಟಿಂಗನಾಗಿ ಬದುಕಿ ತನ್ನ ಆಸ್ತಿಯನ್ನು ಹಾಳುಮಾಡಿಕೊಂಡನು.
કતિપયાત્ કાલાત્ પરં સ કનિષ્ઠપુત્રઃ સમસ્તં ધનં સંગૃહ્ય દૂરદેશં ગત્વા દુષ્ટાચરણેન સર્વ્વાં સમ્પત્તિં નાશયામાસ|
14 ೧೪ ಹೀಗೆ ಅವನು ಎಲ್ಲಾ ಹಾಳುಮಾಡಿಕೊಂಡ ಮೇಲೆ ಆ ದೇಶದಲ್ಲೆಲ್ಲಾ ಘೋರವಾದ ಬರ ಬಂದು ಏನೂ ಗತಿಯಿಲ್ಲದವನಾದನು.
તસ્ય સર્વ્વધને વ્યયં ગતે તદ્દેશે મહાદુર્ભિક્ષં બભૂવ, તતસ્તસ્ય દૈન્યદશા ભવિતુમ્ આરેભે|
15 ೧೫ ಆಗ ಅವನು ಹೋಗಿ ಆ ದೇಶದ ನಿವಾಸಿಗಳೊಳಗೆ ಒಬ್ಬನಲ್ಲಿ ಸೇರಿಕೊಂಡನು. ಆ ಮನುಷ್ಯನು ಹಂದಿಗಳನ್ನು ಮೇಯಿಸುವುದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು.
તતઃ પરં સ ગત્વા તદ્દેશીયં ગૃહસ્થમેકમ્ આશ્રયત; તતઃ સતં શૂકરવ્રજં ચારયિતું પ્રાન્તરં પ્રેષયામાસ|
16 ೧೬ ಹೀಗಿರಲಾಗಿ ಅವನು ಹಂದಿ ತಿನ್ನುತ್ತಿದ್ದ ಕಾಯಿಗಳನ್ನಾದರೂ ತಿಂದು ಹಸಿವನ್ನು ತೀರಿಸಿಕೊಳ್ಳಬೇಕೆಂದು ಆಸೆಪಟ್ಟನು, ಆದರೂ ಯಾರೂ ಅವನಿಗೆ ಕೊಡಲಿಲ್ಲ.
કેનાપિ તસ્મૈ ભક્ષ્યાદાનાત્ સ શૂકરફલવલ્કલેન પિચિણ્ડપૂરણાં વવાઞ્છ|
17 ೧೭ ಆಗ ಅವನಿಗೆ ಬುದ್ಧಿಬಂದು ಅವನು, ‘ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ಬೇಕಾದಷ್ಟು ಆಹಾರವಿದೆ, ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಿದ್ದೇನೆ.
શેષે સ મનસિ ચેતનાં પ્રાપ્ય કથયામાસ, હા મમ પિતુઃ સમીપે કતિ કતિ વેતનભુજો દાસા યથેષ્ટં તતોધિકઞ્ચ ભક્ષ્યં પ્રાપ્નુવન્તિ કિન્ત્વહં ક્ષુધા મુમૂર્ષુઃ|
18 ೧೮ ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ, ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ನಾನು ಪಾಪ ಮಾಡಿದ್ದೇನೆ.
અહમુત્થાય પિતુઃ સમીપં ગત્વા કથામેતાં વદિષ્યામિ, હે પિતર્ ઈશ્વરસ્ય તવ ચ વિરુદ્ધં પાપમકરવમ્
19 ೧೯ ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ, ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು’ ಎಂದು ಹೇಳುವೆನು ಅಂದುಕೊಂಡು,
તવ પુત્રઇતિ વિખ્યાતો ભવિતું ન યોગ્યોસ્મિ ચ, માં તવ વૈતનિકં દાસં કૃત્વા સ્થાપય|
20 ೨೦ ಎದ್ದು ತನ್ನ ತಂದೆಯ ಕಡೆಗೆ ಬಂದನು. “ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು, ಅವನಿಗೆ ಬಹಳವಾಗಿ ಮುದ್ದಿಟ್ಟನು.
પશ્ચાત્ સ ઉત્થાય પિતુઃ સમીપં જગામ; તતસ્તસ્ય પિતાતિદૂરે તં નિરીક્ષ્ય દયાઞ્ચક્રે, ધાવિત્વા તસ્ય કણ્ઠં ગૃહીત્વા તં ચુચુમ્બ ચ|
21 ೨೧ ಆದರೂ ಮಗನು ಅವನಿಗೆ, ‘ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ. ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಲು,
તદા પુત્ર ઉવાચ, હે પિતર્ ઈશ્વરસ્ય તવ ચ વિરુદ્ધં પાપમકરવં, તવ પુત્રઇતિ વિખ્યાતો ભવિતું ન યોગ્યોસ્મિ ચ|
22 ೨೨ ತಂದೆಯು ತನ್ನ ಆಳುಗಳಿಗೆ, ‘ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ಉಡಿಸಿ, ಇವನ ಕೈಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಜೋಡು ಮೆಡಿಸಿರಿ,
કિન્તુ તસ્ય પિતા નિજદાસાન્ આદિદેશ, સર્વ્વોત્તમવસ્ત્રાણ્યાનીય પરિધાપયતૈનં હસ્તે ચાઙ્ગુરીયકમ્ અર્પયત પાદયોશ્ચોપાનહૌ સમર્પયત;
23 ೨೩ ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ, ಹಬ್ಬಮಾಡೋಣ, ಉಲ್ಲಾಸಪಡೋಣ.
પુષ્ટં ગોવત્સમ્ આનીય મારયત ચ તં ભુક્ત્વા વયમ્ આનન્દામ|
24 ೨೪ ಈ ನನ್ನ ಮಗನು ಸತ್ತವನಾಗಿದ್ದನು, ತಿರುಗಿ ಬದುಕಿ ಬಂದಿದ್ದಾನೆ. ಪೋಲಿಹೋಗಿದ್ದನು, ಸಿಕ್ಕಿದನು’ ಎಂದು ಹೇಳಿ ಉಲ್ಲಾಸಪಡುವುದಕ್ಕೆ ತೊಡಗಿದರು.
યતો મમ પુત્રોયમ્ અમ્રિયત પુનરજીવીદ્ હારિતશ્ચ લબ્ધોભૂત્ તતસ્ત આનન્દિતુમ્ આરેભિરે|
25 ೨೫ ಆದರೆ ಅವನ ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಯ ಸಮೀಪಕ್ಕೆ ಬರುತ್ತಿರುವಾಗ ವಾದ್ಯಘೋಷಗಳನ್ನೂ ನರ್ತನಗಳನ್ನು ಕೇಳಿ,
તત્કાલે તસ્ય જ્યેષ્ઠઃ પુત્રઃ ક્ષેત્ર આસીત્| અથ સ નિવેશનસ્ય નિકટં આગચ્છન્ નૃત્યાનાં વાદ્યાનાઞ્ચ શબ્દં શ્રુત્વા
26 ೨೬ ಆಳುಗಳಲ್ಲಿ ಒಬ್ಬನನ್ನು ತನ್ನ ಬಳಿಗೆ ಕರೆದು, ಇದೇನು ಎಂದು ವಿಚಾರಿಸಿದನು.
દાસાનામ્ એકમ્ આહૂય પપ્રચ્છ, કિં કારણમસ્ય?
27 ೨೭ ಆಳು ಅವನಿಗೆ, ‘ನಿನ್ನ ತಮ್ಮ ಬಂದಿದ್ದಾನೆ. ಇವನು ಸುರಕ್ಷಿತನಾಗಿ ಬಂದದ್ದರಿಂದ ನಿನ್ನ ತಂದೆಯು ಆ ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ’ ಎಂದು ಹೇಳಿದನು.
તતઃ સોવાદીત્, તવ ભ્રાતાગમત્, તવ તાતશ્ચ તં સુશરીરં પ્રાપ્ય પુષ્ટં ગોવત્સં મારિતવાન્|
28 ೨೮ ಇದನ್ನು ಕೇಳಿ ಹಿರಿಯ ಮಗನು ಕೋಪಗೊಂಡು ಮನೆ ಒಳಕ್ಕೆ ಹೋಗಲು ಇಷ್ಟಪಡಲಿಲ್ಲ. ಆಗ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು.
તતઃ સ પ્રકુપ્ય નિવેશનાન્તઃ પ્રવેષ્ટું ન સમ્મેને; તતસ્તસ્ય પિતા બહિરાગત્ય તં સાધયામાસ|
29 ೨೯ ಆದರೆ ಅವನು ತನ್ನ ತಂದೆಗೆ, ‘ನೋಡು, ಇಷ್ಟು ವರ್ಷ ನಿನಗೆ ಸೇವೆ ಮಾಡಿದ್ದೇನೆ, ಮತ್ತು ನಾನು ನಿನ್ನ ಅಪ್ಪಣೆಗಳಲ್ಲಿ ಒಂದನ್ನಾದರೂ ಎಂದೂ ಮೀರಲಿಲ್ಲ. ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ.
તતઃ સ પિતરં પ્રત્યુવાચ, પશ્ય તવ કાઞ્ચિદપ્યાજ્ઞાં ન વિલંઘ્ય બહૂન્ વત્સરાન્ અહં ત્વાં સેવે તથાપિ મિત્રૈઃ સાર્દ્ધમ્ ઉત્સવં કર્ત્તું કદાપિ છાગમેકમપિ મહ્યં નાદદાઃ;
30 ೩೦ ಆದರೆ ಸೂಳೆಯರನ್ನು ಕಟ್ಟಿಕೊಂಡು ನಿನ್ನ ಬದುಕನ್ನು ಹಾಳುಮಾಡಿದ ಈ ನಿನ್ನ ಮಗನು ಬಂದಾಗ ಕೊಬ್ಬಿದ ಕರುವನ್ನು ಇವನಿಗೆ ಕೊಯ್ಸಿದಿಯಲ್ಲಾ’ ಎಂದು ಉತ್ತರಕೊಟ್ಟನು.
કિન્તુ તવ યઃ પુત્રો વેશ્યાગમનાદિભિસ્તવ સમ્પત્તિમ્ અપવ્યયિતવાન્ તસ્મિન્નાગતમાત્રે તસ્યૈવ નિમિત્તં પુષ્ટં ગોવત્સં મારિતવાન્|
31 ೩೧ ಅದಕ್ಕೆ ತಂದೆಯು, ‘ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ ಮತ್ತು ನನ್ನದೆಲ್ಲಾ ನಿನ್ನದೇ.
તદા તસ્ય પિતાવોચત્, હે પુત્ર ત્વં સર્વ્વદા મયા સહાસિ તસ્માન્ મમ યદ્યદાસ્તે તત્સર્વ્વં તવ|
32 ೩೨ ಆದರೆ ಉಲ್ಲಾಸಪಡುವುದೂ ಸಂತೋಷಗೊಳ್ಳುವುದೂ ನ್ಯಾಯವಾದದ್ದೇ, ಏಕೆಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ತಿರುಗಿ ಬದುಕಿ ಬಂದಿದ್ದಾನೆ; ಪೋಲಿಹೋಗಿದ್ದನು, ಸಿಕ್ಕಿದನು’” ಎಂದು ಹೇಳಿದನು.
કિન્તુ તવાયં ભ્રાતા મૃતઃ પુનરજીવીદ્ હારિતશ્ચ ભૂત્વા પ્રાપ્તોભૂત્, એતસ્માત્ કારણાદ્ ઉત્સવાનન્દૌ કર્ત્તુમ્ ઉચિતમસ્માકમ્|

< ಲೂಕನು 15 >