< ಯೋಹಾನನು 11 >

1 ಮಾರ್ಥಳು ಮತ್ತು ಆಕೆಯ ಸಹೋದರಿಯಾದ, ಮರಿಯಳ ಊರಾದ, ಬೇಥಾನ್ಯದಲ್ಲಿ ಲಾಜರನೆಂಬುವನೊಬ್ಬನು ಅಸ್ವಸ್ಥನಾಗಿದ್ದನು.
అనన్తరం మరియమ్ తస్యా భగినీ మర్థా చ యస్మిన్ వైథనీయాగ్రామే వసతస్తస్మిన్ గ్రామే ఇలియాసర్ నామా పీడిత ఏక ఆసీత్|
2 ಈ ಮರಿಯಳು ಕರ್ತನಿಗೆ ತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೆ ಕೂದಲಿನಿಂದ ಒರಸಿದವಳು. ಈಕೆಯ ಸಹೋದರನಾದ ಲಾಜರನೇ ಅಸ್ವಸ್ಥನಾಗಿದ್ದನು.
యా మరియమ్ ప్రభుం సుగన్ధితేలైన మర్ద్దయిత్వా స్వకేశైస్తస్య చరణౌ సమమార్జత్ తస్యా భ్రాతా స ఇలియాసర్ రోగీ|
3 ಹೀಗಿರಲಾಗಿ ಅವನ ಸಹೋದರಿಯರು, “ಕರ್ತನೇ ಇಗೋ, ನೀನು ಪ್ರೀತಿಸುವವನು ಅಸ್ವಸ್ಥನಾಗಿದ್ದಾನೆ” ಎಂಬುದಾಗಿ ಯೇಸುವಿನ ಬಳಿಗೆ ಹೇಳಿ ಕಳುಹಿಸಿದರು.
అపరఞ్చ హే ప్రభో భవాన్ యస్మిన్ ప్రీయతే స ఏవ పీడితోస్తీతి కథాం కథయిత్వా తస్య భగిన్యౌ ప్రేషితవత్యౌ|
4 ಯೇಸು ಇದನ್ನು ಕೇಳಿ, “ಈ ರೋಗವು ಮರಣಕ್ಕಾಗಿ ಬಂದದ್ದಲ್ಲ; ಇದರಿಂದ ದೇವಕುಮಾರನಿಗೆ ಮಹಿಮೆ ಉಂಟಾಗುವಂತೆ ದೇವರ ಮಹಿಮೆಗೋಸ್ಕರ ಬಂದದ್ದು” ಎಂದು ಹೇಳಿದನು.
తదా యీశురిమాం వార్త్తాం శ్రుత్వాకథయత పీడేయం మరణార్థం న కిన్త్వీశ్వరస్య మహిమార్థమ్ ఈశ్వరపుత్రస్య మహిమప్రకాశార్థఞ్చ జాతా|
5 ಮಾರ್ಥಳನ್ನು ಆಕೆಯ ತಂಗಿಯನ್ನು ಮತ್ತು ಲಾಜರನನ್ನು ಯೇಸು ಪ್ರೀತಿಸುತ್ತಿದ್ದನು.
యీశు ర్యద్యపిమర్థాయాం తద్భగిన్యామ్ ఇలియాసరి చాప్రీయత,
6 ಲಾಜರನು ಅಸ್ವಸ್ಥನಾಗಿದ್ದಾನೆಂದು ಆತನು ಕೇಳಿದ ಮೇಲೆಯೂ ಎರಡು ದಿನ ತಾನಿದ್ದ ಸ್ಥಳದಲ್ಲೇ ಉಳಿದುಕೊಂಡನು.
తథాపి ఇలియాసరః పీడాయాః కథం శ్రుత్వా యత్ర ఆసీత్ తత్రైవ దినద్వయమతిష్ఠత్|
7 ಬಳಿಕ ಆತನು ತನ್ನ ಶಿಷ್ಯರಿಗೆ, “ನಾವು ಪುನಃ ಯೂದಾಯಕ್ಕೆ ಹೋಗೋಣ” ಎಂದು ಹೇಳಿದನು.
తతః పరమ్ స శిష్యానకథయద్ వయం పున ర్యిహూదీయప్రదేశం యామః|
8 ಆತನ ಶಿಷ್ಯರು ಆತನಿಗೆ, “ಗುರುವೇ, ಆಗಲೇ ಯೆಹೂದ್ಯರು ನಿನ್ನ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿದ್ದಾರೆ, ಪುನಃ ನೀನು ಅಲ್ಲಿಗೆ ಹೋಗಬೇಕೆಂದಿರುವಿಯಾ?” ಎಂದರು.
తతస్తే ప్రత్యవదన్, హే గురో స్వల్పదినాని గతాని యిహూదీయాస్త్వాం పాషాణై ర్హన్తుమ్ ఉద్యతాస్తథాపి కిం పునస్తత్ర యాస్యసి?
9 ಯೇಸು, “ಹಗಲಿಗೆ ಹನ್ನೆರಡು ತಾಸುಗಳು ಉಂಟಲ್ಲವೇ? ಒಬ್ಬನು ಹಗಲಿನಲ್ಲಿ ನಡೆದರೆ, ಈ ಲೋಕದ ಬೆಳಕು ಕಾಣಿಸುವುದರಿಂದ ಅವನು ಎಡವುದಿಲ್ಲ.
యీశుః ప్రత్యవదత్, ఏకస్మిన్ దినే కిం ద్వాదశఘటికా న భవన్తి? కోపి దివా గచ్ఛన్ న స్ఖలతి యతః స ఏతజ్జగతో దీప్తిం ప్రాప్నోతి|
10 ೧೦ ರಾತ್ರಿಯಲ್ಲಿ ನಡೆದರೆ ತನ್ನಲ್ಲಿ ಬೆಳಕಿಲ್ಲದ್ದರಿಂದ ಅವನು ಎಡವುತ್ತಾನೆ” ಎಂದು ಉತ್ತರಕೊಟ್ಟನು.
కిన్తు రాత్రౌ గచ్ఛన్ స్ఖలతి యతో హేతోస్తత్ర దీప్తి ర్నాస్తి|
11 ೧೧ ಇದನ್ನು ಹೇಳಿದ ಮೇಲೆ ಆತನು ಅವರಿಗೆ, “ನಮ್ಮ ಮಿತ್ರನಾದ ಲಾಜರನು ನಿದ್ರೆ ಮಾಡುತ್ತಿದ್ದಾನೆ, ಆದುದರಿಂದ ನಾನು ಹೋಗಿ ಅವನನ್ನು ನಿದ್ರೆಯಿಂದ ಎಬ್ಬಿಸಬೇಕಾಗಿದೆ” ಎಂದು ಹೇಳಿದನು.
ఇమాం కథాం కథయిత్వా స తానవదద్, అస్మాకం బన్ధుః ఇలియాసర్ నిద్రితోభూద్ ఇదానీం తం నిద్రాతో జాగరయితుం గచ్ఛామి|
12 ೧೨ ಅದಕ್ಕೆ ಶಿಷ್ಯರು, “ಅವನು ನಿದ್ರೆ ಮಾಡುತ್ತಿದ್ದರೆ ಸ್ವಸ್ಥನಾಗುವನು” ಎಂದರು.
యీశు ర్మృతౌ కథామిమాం కథితవాన్ కిన్తు విశ్రామార్థం నిద్రాయాం కథితవాన్ ఇతి జ్ఞాత్వా శిష్యా అకథయన్,
13 ೧೩ ಯೇಸು ಅವನ ಮರಣವನ್ನು ಕುರಿತು ಅದನ್ನು ಹೇಳಿದ್ದನು, ಆದರೆ ಅವರು ವಿಶ್ರಾಂತಿಗಾಗಿ ಮಲಗಿದ್ದಾನೆಂಬುದಾಗಿ ಹೇಳಿದನೆಂದು ಯೋಚಿಸಿದರು.
హే గురో స యది నిద్రాతి తర్హి భద్రమేవ|
14 ೧೪ ಆಗ ಯೇಸು ಸ್ಪಷ್ಟವಾಗಿ ಅವರಿಗೆ, “ಲಾಜರನು ಸತ್ತು ಹೋಗಿದ್ದಾನೆ.
తదా యీశుః స్పష్టం తాన్ వ్యాహరత్, ఇలియాసర్ అమ్రియత;
15 ೧೫ ನಾನು ಅಲ್ಲಿ ಇಲ್ಲದೆ ಹೋದದ್ದು ಒಳ್ಳೆಯದೇ, ನಿಮಗೆ ನನ್ನಲ್ಲಿ ನಂಬಿಕೆ ಬರುವಂತೆ ಇದೆಲ್ಲಾ ನಡೆದಿದೆ. ಬನ್ನಿ, ನಾವು ಅವನ ಬಳಿಗೆ ಹೋಗೋಣ” ಎಂದು ಹೇಳಿದನು
కిన్తు యూయం యథా ప్రతీథ తదర్థమహం తత్ర న స్థితవాన్ ఇత్యస్మాద్ యుష్మన్నిమిత్తమ్ ఆహ్లాదితోహం, తథాపి తస్య సమీపే యామ|
16 ೧೬ ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಯೇಸುವಿನೊಂದಿಗೆ ಸಾಯುವುದಕ್ಕೆ ಹೋಗೋಣ” ಎಂದು ಹೇಳಿದನು.
తదా థోమా యం దిదుమం వదన్తి స సఙ్గినః శిష్యాన్ అవదద్ వయమపి గత్వా తేన సార్ద్ధం మ్రియామహై|
17 ೧೭ ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿನಗಳಾಯಿತೆಂದು ಆತನಿಗೆ ತಿಳಿದು ಬಂದಿತು.
యీశుస్తత్రోపస్థాయ ఇలియాసరః శ్మశానే స్థాపనాత్ చత్వారి దినాని గతానీతి వార్త్తాం శ్రుతవాన్|
18 ೧೮ ಬೇಥಾನ್ಯವು ಯೆರೂಸಲೇಮಿಗೆ ಸಮೀಪವಾಗಿತ್ತು. ಯೆರುಸಲೇಮಿನಿಂದ ಸುಮಾರು ಒಂದು ಹರಿದಾರಿಯಷ್ಟು ಅಂತರವಿತ್ತು.
వైథనీయా యిరూశాలమః సమీపస్థా క్రోశైకమాత్రాన్తరితా;
19 ೧೯ ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋದರನ ವಿಷಯದಲ್ಲಿ ಸಂತೈಸಬೇಕೆಂದು ಬಂದಿದ್ದರು.
తస్మాద్ బహవో యిహూదీయా మర్థాం మరియమఞ్చ భ్యాతృశోకాపన్నాం సాన్త్వయితుం తయోః సమీపమ్ ఆగచ్ఛన్|
20 ೨೦ ಹೀಗಿರುವಲ್ಲಿ ಮಾರ್ಥಳು ಯೇಸು ಬರುತ್ತಾನೆಂದು ಕೇಳಿ ಆತನನ್ನು ಎದುರುಗೊಳ್ಳುವುದಕ್ಕೆ ಎದ್ದು ಹೋದಳು. ಆದರೆ ಮರಿಯಳು ಮನೆಯಲ್ಲೇ ಉಳಿದುಕೊಂಡಿದ್ದಳು.
మర్థా యీశోరాగమనవార్తాం శ్రుత్వైవ తం సాక్షాద్ అకరోత్ కిన్తు మరియమ్ గేహ ఉపవిశ్య స్థితా|
21 ೨೧ ಆಗ ಮಾರ್ಥಳು ಯೇಸುವಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ.
తదా మర్థా యీశుమవాదత్, హే ప్రభో యది భవాన్ అత్రాస్థాస్యత్ తర్హి మమ భ్రాతా నామరిష్యత్|
22 ೨೨ ಈಗಲಾದರೂ ನೀನು ದೇವರನ್ನು ಏನು ಕೇಳಿಕೊಂಡರೂ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ನಾನು ಬಲ್ಲೆನು” ಎಂದು ಹೇಳಿದಳು.
కిన్త్విదానీమపి యద్ ఈశ్వరే ప్రార్థయిష్యతే ఈశ్వరస్తద్ దాస్యతీతి జానేఽహం|
23 ೨೩ ಯೇಸು ಆಕೆಗೆ, “ನಿನ್ನ ತಮ್ಮನು ಪುನಃ ಎದ್ದು ಬರುವನು” ಎಂದು ಹೇಳಿದನು.
యీశురవాదీత్ తవ భ్రాతా సముత్థాస్యతి|
24 ೨೪ ಮಾರ್ಥಳು ಆತನಿಗೆ, “ಸತ್ತವರಿಗೆ ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದು ಬರುವನೆಂದು ನಾನು ಬಲ್ಲೆನು” ಅಂದಳು.
మర్థా వ్యాహరత్ శేషదివసే స ఉత్థానసమయే ప్రోత్థాస్యతీతి జానేఽహం|
25 ೨೫ ಯೇಸು ಆಕೆಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು,
తదా యీశుః కథితవాన్ అహమేవ ఉత్థాపయితా జీవయితా చ యః కశ్చన మయి విశ్వసితి స మృత్వాపి జీవిష్యతి;
26 ೨೬ ಮತ್ತು ಜೀವಿಸುವ ಪ್ರತಿಯೊಬ್ಬನು ನನ್ನಲ್ಲಿ ನಂಬಿಕೆಯಿಟ್ಟರೆ, ಅವನು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯೋ?” ಎಂದು ಕೇಳಿದಕ್ಕೆ, (aiōn g165)
యః కశ్చన చ జీవన్ మయి విశ్వసితి స కదాపి న మరిష్యతి, అస్యాం కథాయాం కిం విశ్వసిషి? (aiōn g165)
27 ೨೭ ಆಕೆಯು ಆತನಿಗೆ, “ಹೌದು ಕರ್ತನೇ, ಲೋಕಕ್ಕೆ ಬರಬೇಕಾದ ದೇವಕುಮಾರನಾದ ಕ್ರಿಸ್ತನು ನೀನೇ ಎಂದು ನಾನು ನಂಬಿದ್ದೇನೆ” ಅಂದಳು.
సావదత్ ప్రభో యస్యావతరణాపేక్షాస్తి భవాన్ సఏవాభిషిక్త్త ఈశ్వరపుత్ర ఇతి విశ్వసిమి|
28 ೨೮ ಇದನ್ನು ಹೇಳಿ ಆಕೆ ಹೋಗಿ ತನ್ನ ತಂಗಿಯಾದ ಮರಿಯಳನ್ನು ಗುಪ್ತವಾಗಿ ಕರೆದು, “ಗುರುವು ಬಂದಿದ್ದಾರೆ, ನಿನ್ನನ್ನು ಕರೆಯುತ್ತಿದ್ದಾರೆ” ಎಂದಳು.
ఇతి కథాం కథయిత్వా సా గత్వా స్వాం భగినీం మరియమం గుప్తమాహూయ వ్యాహరత్ గురురుపతిష్ఠతి త్వామాహూయతి చ|
29 ೨೯ ಮರಿಯಳು ಇದನ್ನು ಕೇಳಿದಾಗ ತಟ್ಟನೆ ಎದ್ದು ಆತನ ಬಳಿಗೆ ಹೋದಳು.
కథామిమాం శ్రుత్వా సా తూర్ణమ్ ఉత్థాయ తస్య సమీపమ్ అగచ్ఛత్|
30 ೩೦ ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ. ಮಾರ್ಥಳು ಆತನನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದನು.
యీశు ర్గ్రామమధ్యం న ప్రవిశ్య యత్ర మర్థా తం సాక్షాద్ అకరోత్ తత్ర స్థితవాన్|
31 ೩೧ ಮರಿಯಳೊಂದಿಗೆ ಮನೆಯಲ್ಲಿ ಇದ್ದುಕೊಂಡು ಆಕೆಯನ್ನು ಸಂತೈಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುವುದನ್ನು ಕಂಡು, ಆಕೆಯು ಅಳುವುದಕ್ಕಾಗಿ ಸಮಾಧಿಗೆ ಹೋಗುತ್ತಿದ್ದಾಳೆಂದು ಭಾವಿಸಿ ಆಕೆಯ ಹಿಂದೆ ಹೋದರು.
యే యిహూదీయా మరియమా సాకం గృహే తిష్ఠన్తస్తామ్ అసాన్త్వయన తే తాం క్షిప్రమ్ ఉత్థాయ గచ్ఛన్తిం విలోక్య వ్యాహరన్, స శ్మశానే రోదితుం యాతి, ఇత్యుక్త్వా తే తస్యాః పశ్చాద్ అగచ్ఛన్|
32 ೩೨ ಮರಿಯಳು ಯೇಸು ಇದ್ದಲ್ಲಿಗೆ ಬಂದು ಆತನನ್ನು ಕಂಡು ಆತನ ಪಾದಗಳಿಗೆ ಅಡ್ಡಬಿದ್ದು ಆತನಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದಳು.
యత్ర యీశురతిష్ఠత్ తత్ర మరియమ్ ఉపస్థాయ తం దృష్ట్వా తస్య చరణయోః పతిత్వా వ్యాహరత్ హే ప్రభో యది భవాన్ అత్రాస్థాస్యత్ తర్హి మమ భ్రాతా నామరిష్యత్|
33 ೩೩ ಆಕೆಯು ಅಳುವುದನ್ನು ಮತ್ತು ಆಕೆಯೊಂದಿಗೆ ಬಂದಿದ್ದ ಯೆಹೂದ್ಯರು ಅಳುವುದನ್ನು ಯೇಸು ನೋಡಿದಾಗ ಯೇಸುವು ಆತ್ಮದಲ್ಲಿ ವ್ಯಸನಪಟ್ಟು ನೊಂದುಕೊಂಡು,
యీశుస్తాం తస్యాః సఙ్గినో యిహూదీయాంశ్చ రుదతో విలోక్య శోకార్త్తః సన్ దీర్ఘం నిశ్వస్య కథితవాన్ తం కుత్రాస్థాపయత?
34 ೩೪ “ಅವನನ್ನು ಎಲ್ಲಿ ಇಟ್ಟಿದ್ದೀರಿ?” ಎಂದನು. ಅವರು ಆತನಿಗೆ, “ಕರ್ತನೇ, ಬಂದು ನೋಡು” ಎಂದರು.
తే వ్యాహరన్, హే ప్రభో భవాన్ ఆగత్య పశ్యతు|
35 ೩೫ ಯೇಸು ಕಣ್ಣೀರಿಟ್ಟನು.
యీశునా క్రన్దితం|
36 ೩೬ ಅದಕ್ಕೆ ಯೆಹೂದ್ಯರು, “ಆಹಾ! ಈತನು ಅವನ ಮೇಲೆ ಎಷ್ಟೋ ಮಮತೆ ಇಟ್ಟಿದ್ದಾನೆ” ಎಂದರು.
అతఏవ యిహూదీయా అవదన్, పశ్యతాయం తస్మిన్ కిదృగ్ అప్రియత|
37 ೩೭ ಅವರಲ್ಲಿ ಕೆಲವರು, “ಈತನು ಆ ಕುರುಡನಿಗೆ ಕಣ್ಣು ಕೊಟ್ಟನಲ್ಲಾ, ಈ ಮನುಷ್ಯನನ್ನು ಸಾಯದ ಹಾಗೆ ಮಾಡಬಹುದಿತ್ತಲ್ಲಾ?” ಎಂದರು.
తేషాం కేచిద్ అవదన్ యోన్ధాయ చక్షుషీ దత్తవాన్ స కిమ్ అస్య మృత్యుం నివారయితుం నాశక్నోత్?
38 ೩೮ ಯೇಸು ತಿರುಗಿ ತನ್ನ ಮನದಲ್ಲಿ ನೊಂದುಕೊಳ್ಳುತ್ತಾ ಸಮಾಧಿಯ ಬಳಿಗೆ ಬಂದನು. ಅದು ಒಂದು ಗವಿಯಾಗಿತ್ತು, ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಿಡಲಾಗಿತ್ತು.
తతో యీశుః పునరన్తర్దీర్ఘం నిశ్వస్య శ్మశానాన్తికమ్ అగచ్ఛత్| తత్ శ్మశానమ్ ఏకం గహ్వరం తన్ముఖే పాషాణ ఏక ఆసీత్|
39 ೩೯ ಯೇಸು, “ಆ ಕಲ್ಲನ್ನು ತೆಗೆದು ಹಾಕಿರಿ” ಎನ್ನಲು, ತೀರಿಹೋದವನ ಸಹೋದರಿಯಾದ ಮಾರ್ಥಳು ಆತನಿಗೆ, “ಕರ್ತನೇ, ಅವನು ಸತ್ತು ನಾಲ್ಕು ದಿನಗಳಾದವು, ಈಗ ದುರ್ವಾಸನೆ ಬಂದಿರಬಹುದು” ಎಂದಳು.
తదా యీశురవదద్ ఏనం పాషాణమ్ అపసారయత, తతః ప్రమీతస్య భగినీ మర్థావదత్ ప్రభో, అధునా తత్ర దుర్గన్ధో జాతః, యతోద్య చత్వారి దినాని శ్మశానే స తిష్ఠతి|
40 ೪೦ ಯೇಸು ಆಕೆಗೆ, “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ?” ಎಂದು ಉತ್ತರ ಕೊಟ್ಟನು
తదా యీశురవాదీత్, యది విశ్వసిషి తర్హీశ్వరస్య మహిమప్రకాశం ద్రక్ష్యసి కథామిమాం కిం తుభ్యం నాకథయం?
41 ೪೧ ಆಗ ಅವರು ಕಲ್ಲನ್ನು ತೆಗೆದು ಹಾಕಿದರು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ತಂದೆಯೇ ನೀನು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
తదా మృతస్య శ్మశానాత్ పాషాణోఽపసారితే యీశురూర్ద్వ్వం పశ్యన్ అకథయత్, హే పిత ర్మమ నేవేసనమ్ అశృణోః కారణాదస్మాత్ త్వాం ధన్యం వదామి|
42 ೪೨ ನೀನು ನನಗೆ ಯಾವಾಗಲೂ ಕಿವಿಗೊಡುತ್ತೀ ಎಂದು ನನಗೆ ತಿಳಿದೇ ಇದೆ. ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿರುವಿ ಎಂದು ಸುತ್ತಲೂ ನಿಂತಿರುವ ಈ ಜನರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದ್ದೇನೆ” ಎಂದು ಹೇಳಿದನು.
త్వం సతతం శృణోషి తదప్యహం జానామి, కిన్తు త్వం మాం యత్ ప్రైరయస్తద్ యథాస్మిన్ స్థానే స్థితా లోకా విశ్వసన్తి తదర్థమ్ ఇదం వాక్యం వదామి|
43 ೪೩ ಆತನು ಹೀಗೆ ಹೇಳಿದ ಮೇಲೆ, “ಲಾಜರನೇ, ಹೊರಗೆ ಬಾ!” ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು.
ఇమాం కథాం కథయిత్వా స ప్రోచ్చైరాహ్వయత్, హే ఇలియాసర్ బహిరాగచ్ఛ|
44 ೪೪ ಸತ್ತಿದ್ದವನು ಹೊರಗೆ ಬಂದನು. ಅವನ ಕೈಕಾಲುಗಳು ಶವ ವಸ್ತ್ರಗಳಿಂದ ಸುತ್ತಿದ್ದವು. ಅವನ ಮುಖಕ್ಕೆ ವಸ್ತ್ರ ಸುತ್ತಲಾಗಿತ್ತು. ಯೇಸು ಅವರಿಗೆ, “ಅವನನ್ನು ಬಿಡಿಸಿರಿ, ಅವನು ಹೋಗಲಿ” ಎಂದು ಹೇಳಿದನು.
తతః స ప్రమీతః శ్మశానవస్త్రై ర్బద్ధహస్తపాదో గాత్రమార్జనవాససా బద్ధముఖశ్చ బహిరాగచ్ఛత్| యీశురుదితవాన్ బన్ధనాని మోచయిత్వా త్యజతైనం|
45 ೪೫ ಆದುದರಿಂದ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಾರ್ಯವನ್ನು ನೋಡಿ ಆತನಲ್ಲಿ ನಂಬಿಕೆಯಿಟ್ಟರು.
మరియమః సమీపమ్ ఆగతా యే యిహూదీయలోకాస్తదా యీశోరేతత్ కర్మ్మాపశ్యన్ తేషాం బహవో వ్యశ్వసన్,
46 ೪೬ ಆದರೆ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ ಕಾರ್ಯಗಳನ್ನು ಅವರಿಗೆ ಹೇಳಿದರು.
కిన్తు కేచిదన్యే ఫిరూశినాం సమీపం గత్వా యీశోరేతస్య కర్మ్మణో వార్త్తామ్ అవదన్|
47 ೪೭ ಆಗ ಮುಖ್ಯಯಾಜಕರೂ ಫರಿಸಾಯರೂ ಹಿರೀಸಭೆಯನ್ನು ಕೂಡಿಸಿ, “ನಾವು ಈಗ ಏನುಮಾಡಬೇಕು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ.
తతః పరం ప్రధానయాజకాః ఫిరూశినాశ్చ సభాం కృత్వా వ్యాహరన్ వయం కిం కుర్మ్మః? ఏష మానవో బహూన్యాశ్చర్య్యకర్మ్మాణి కరోతి|
48 ೪೮ ನಾವು ಅವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಆತನ್ನನ್ನೇ ನಂಬುವರು. ರೋಮನ್ನರು ಬಂದು ನಮ್ಮ ಸ್ಥಳವನ್ನೂ ಮತ್ತು ರಾಷ್ಟ್ರವನ್ನೂ ವಶ ಮಾಡಿಕೊಂಡಾರು” ಎಂದರು.
యదీదృశం కర్మ్మ కర్త్తుం న వారయామస్తర్హి సర్వ్వే లోకాస్తస్మిన్ విశ్వసిష్యన్తి రోమిలోకాశ్చాగత్యాస్మాకమ్ అనయా రాజధాన్యా సార్ద్ధం రాజ్యమ్ ఆఛేత్స్యన్తి|
49 ೪೯ ಆಗ ಅವರಲ್ಲಿ ಆ ವರ್ಷಕ್ಕೆ ಮಹಾಯಾಜಕನಾಗಿದ್ದ ಕಾಯಫನೆಂಬುವನು ಅವರಿಗೆ, “ನಿಮಗೇನೂ ತಿಳಿಯುತ್ತಿಲ್ಲ.
తదా తేషాం కియఫానామా యస్తస్మిన్ వత్సరే మహాయాజకపదే న్యయుజ్యత స ప్రత్యవదద్ యూయం కిమపి న జానీథ;
50 ೫೦ ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಆಲೋಚಿಸುವುದೂ ಇಲ್ಲ” ಎಂಬುದಾಗಿ ಹೇಳಿದನು.
సమగ్రదేశస్య వినాశతోపి సర్వ్వలోకార్థమ్ ఏకస్య జనస్య మరణమ్ అస్మాకం మఙ్గలహేతుకమ్ ఏతస్య వివేచనామపి న కురుథ|
51 ೫೧ ಇದನ್ನು ಅವನು ತನ್ನಷ್ಟಕ್ಕೆ ತಾನೇ ಹೇಳಲಿಲ್ಲ, ಆದರೆ ತಾನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದುದರಿಂದ, ಯೇಸು ಆ ಜನರಿಗೋಸ್ಕರ ಹಾಗೂ
ఏతాం కథాం స నిజబుద్ధ్యా వ్యాహరద్ ఇతి న,
52 ೫೨ ಆ ಜನತೆಗಾಗಿ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಸಹ ಒಟ್ಟುಗೂಡಿಸುವುದಕ್ಕಾಗಿಯೂ ಸಾಯುವುದಕ್ಕಿದ್ದನು, ಎಂಬುದಾಗಿ ಪ್ರವಾದಿಸಿದನು
కిన్తు యీశూస్తద్దేశీయానాం కారణాత్ ప్రాణాన్ త్యక్ష్యతి, దిశి దిశి వికీర్ణాన్ ఈశ్వరస్య సన్తానాన్ సంగృహ్యైకజాతిం కరిష్యతి చ, తస్మిన్ వత్సరే కియఫా మహాయాజకత్వపదే నియుక్తః సన్ ఇదం భవిష్యద్వాక్యం కథితవాన్|
53 ೫೩ ಅವರು ಆ ದಿನದಿಂದ ಆತನನ್ನು ಕೊಲ್ಲುವುದಕ್ಕೆ ಆಲೋಚಿಸುತ್ತಿದ್ದರು.
తద్దినమారభ్య తే కథం తం హన్తుం శక్నువన్తీతి మన్త్రణాం కర్త్తుం ప్రారేభిరే|
54 ೫೪ ಹೀಗಿರಲಾಗಿ ಯೇಸು ಇನ್ನೂ ಯೆಹೂದ್ಯರೊಳಗೆ ಬಹಿರಂಗವಾಗಿ ತಿರುಗಾಡದೆ, ಅಲ್ಲಿಂದ ಅಡವಿಯ ಹತ್ತಿರದ ಪ್ರದೇಶಕ್ಕೆ ಹೋಗಿ, ಎಫ್ರಾಯೀಮ್ ಎಂಬ ಊರಲ್ಲಿ ತನ್ನ ಶಿಷ್ಯರ ಜೊತೆ ಇದ್ದನು.
అతఏవ యిహూదీయానాం మధ్యే యీశుః సప్రకాశం గమనాగమనే అకృత్వా తస్మాద్ గత్వా ప్రాన్తరస్య సమీపస్థాయిప్రదేశస్యేఫ్రాయిమ్ నామ్ని నగరే శిష్యైః సాకం కాలం యాపయితుం ప్రారేభే|
55 ೫೫ ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಾಗಿರಲಾಗಿ, ಬಹು ಜನರು ತಮ್ಮನ್ನು ಶುದ್ಧ ಮಾಡಿಕೊಳ್ಳುವುದಕ್ಕಾಗಿ ಹಬ್ಬಕ್ಕಿಂತ ಮೊದಲೇ ಹಳ್ಳಿಗಳಿಂದ ಯೆರೂಸಲೇಮಿಗೆ ಬಂದರು.
అనన్తరం యిహూదీయానాం నిస్తారోత్సవే నికటవర్త్తిని సతి తదుత్సవాత్ పూర్వ్వం స్వాన్ శుచీన్ కర్త్తుం బహవో జనా గ్రామేభ్యో యిరూశాలమ్ నగరమ్ ఆగచ్ఛన్,
56 ೫೬ ಅವರು ಯೇಸುವನ್ನು ಹುಡುಕುತ್ತಾ ದೇವಾಲಯದಲ್ಲಿ ನಿಂತುಕೊಂಡು, “ಅವನು ಹಬ್ಬಕ್ಕೆ ಬಾರದೇ ಇದ್ದಾನೋ? ನಿಮಗೆ ಹೇಗೆ ತೋರುತ್ತದೆ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಾ ಇದ್ದರು.
యీశోరన్వేషణం కృత్వా మన్దిరే దణ్డాయమానాః సన్తః పరస్పరం వ్యాహరన్, యుష్మాకం కీదృశో బోధో జాయతే? స కిమ్ ఉత్సవేఽస్మిన్ అత్రాగమిష్యతి?
57 ೫೭ ಆಗ ಮುಖ್ಯಯಾಜಕರೂ ಮತ್ತು ಫರಿಸಾಯರೂ ಆತನನ್ನು ಹಿಡಿಯಬೇಕೆಂಬುದಾಗಿ ಯೋಚಿಸಿ, ಅವನಿರುವ ಸ್ಥಳವು ಯಾರಿಗಾದರೂ ಗೊತ್ತಾದರೆ ಅದನ್ನು ತಮಗೆ ತಿಳಿಸಬೇಕೆಂದು ಅಪ್ಪಣೆ ಕೊಟ್ಟಿದ್ದರು.
స చ కుత్రాస్తి యద్యేతత్ కశ్చిద్ వేత్తి తర్హి దర్శయతు ప్రధానయాజకాః ఫిరూశినశ్చ తం ధర్త్తుం పూర్వ్వమ్ ఇమామ్ ఆజ్ఞాం ప్రాచారయన్|

< ಯೋಹಾನನು 11 >