< ಯೋಹಾನನು 11 >

1 ಮಾರ್ಥಳು ಮತ್ತು ಆಕೆಯ ಸಹೋದರಿಯಾದ, ಮರಿಯಳ ಊರಾದ, ಬೇಥಾನ್ಯದಲ್ಲಿ ಲಾಜರನೆಂಬುವನೊಬ್ಬನು ಅಸ್ವಸ್ಥನಾಗಿದ್ದನು.
അനന്തരം മരിയമ് തസ്യാ ഭഗിനീ മർഥാ ച യസ്മിൻ വൈഥനീയാഗ്രാമേ വസതസ്തസ്മിൻ ഗ്രാമേ ഇലിയാസർ നാമാ പീഡിത ഏക ആസീത്|
2 ಈ ಮರಿಯಳು ಕರ್ತನಿಗೆ ತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೆ ಕೂದಲಿನಿಂದ ಒರಸಿದವಳು. ಈಕೆಯ ಸಹೋದರನಾದ ಲಾಜರನೇ ಅಸ್ವಸ್ಥನಾಗಿದ್ದನು.
യാ മരിയമ് പ്രഭും സുഗന്ധിതേലൈന മർദ്ദയിത്വാ സ്വകേശൈസ്തസ്യ ചരണൗ സമമാർജത് തസ്യാ ഭ്രാതാ സ ഇലിയാസർ രോഗീ|
3 ಹೀಗಿರಲಾಗಿ ಅವನ ಸಹೋದರಿಯರು, “ಕರ್ತನೇ ಇಗೋ, ನೀನು ಪ್ರೀತಿಸುವವನು ಅಸ್ವಸ್ಥನಾಗಿದ್ದಾನೆ” ಎಂಬುದಾಗಿ ಯೇಸುವಿನ ಬಳಿಗೆ ಹೇಳಿ ಕಳುಹಿಸಿದರು.
അപരഞ്ച ഹേ പ്രഭോ ഭവാൻ യസ്മിൻ പ്രീയതേ സ ഏവ പീഡിതോസ്തീതി കഥാം കഥയിത്വാ തസ്യ ഭഗിന്യൗ പ്രേഷിതവത്യൗ|
4 ಯೇಸು ಇದನ್ನು ಕೇಳಿ, “ಈ ರೋಗವು ಮರಣಕ್ಕಾಗಿ ಬಂದದ್ದಲ್ಲ; ಇದರಿಂದ ದೇವಕುಮಾರನಿಗೆ ಮಹಿಮೆ ಉಂಟಾಗುವಂತೆ ದೇವರ ಮಹಿಮೆಗೋಸ್ಕರ ಬಂದದ್ದು” ಎಂದು ಹೇಳಿದನು.
തദാ യീശുരിമാം വാർത്താം ശ്രുത്വാകഥയത പീഡേയം മരണാർഥം ന കിന്ത്വീശ്വരസ്യ മഹിമാർഥമ് ഈശ്വരപുത്രസ്യ മഹിമപ്രകാശാർഥഞ്ച ജാതാ|
5 ಮಾರ್ಥಳನ್ನು ಆಕೆಯ ತಂಗಿಯನ್ನು ಮತ್ತು ಲಾಜರನನ್ನು ಯೇಸು ಪ್ರೀತಿಸುತ್ತಿದ್ದನು.
യീശു ര്യദ്യപിമർഥായാം തദ്ഭഗിന്യാമ് ഇലിയാസരി ചാപ്രീയത,
6 ಲಾಜರನು ಅಸ್ವಸ್ಥನಾಗಿದ್ದಾನೆಂದು ಆತನು ಕೇಳಿದ ಮೇಲೆಯೂ ಎರಡು ದಿನ ತಾನಿದ್ದ ಸ್ಥಳದಲ್ಲೇ ಉಳಿದುಕೊಂಡನು.
തഥാപി ഇലിയാസരഃ പീഡായാഃ കഥം ശ്രുത്വാ യത്ര ആസീത് തത്രൈവ ദിനദ്വയമതിഷ്ഠത്|
7 ಬಳಿಕ ಆತನು ತನ್ನ ಶಿಷ್ಯರಿಗೆ, “ನಾವು ಪುನಃ ಯೂದಾಯಕ್ಕೆ ಹೋಗೋಣ” ಎಂದು ಹೇಳಿದನು.
തതഃ പരമ് സ ശിഷ്യാനകഥയദ് വയം പുന ര്യിഹൂദീയപ്രദേശം യാമഃ|
8 ಆತನ ಶಿಷ್ಯರು ಆತನಿಗೆ, “ಗುರುವೇ, ಆಗಲೇ ಯೆಹೂದ್ಯರು ನಿನ್ನ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿದ್ದಾರೆ, ಪುನಃ ನೀನು ಅಲ್ಲಿಗೆ ಹೋಗಬೇಕೆಂದಿರುವಿಯಾ?” ಎಂದರು.
തതസ്തേ പ്രത്യവദൻ, ഹേ ഗുരോ സ്വൽപദിനാനി ഗതാനി യിഹൂദീയാസ്ത്വാം പാഷാണൈ ർഹന്തുമ് ഉദ്യതാസ്തഥാപി കിം പുനസ്തത്ര യാസ്യസി?
9 ಯೇಸು, “ಹಗಲಿಗೆ ಹನ್ನೆರಡು ತಾಸುಗಳು ಉಂಟಲ್ಲವೇ? ಒಬ್ಬನು ಹಗಲಿನಲ್ಲಿ ನಡೆದರೆ, ಈ ಲೋಕದ ಬೆಳಕು ಕಾಣಿಸುವುದರಿಂದ ಅವನು ಎಡವುದಿಲ್ಲ.
യീശുഃ പ്രത്യവദത്, ഏകസ്മിൻ ദിനേ കിം ദ്വാദശഘടികാ ന ഭവന്തി? കോപി ദിവാ ഗച്ഛൻ ന സ്ഖലതി യതഃ സ ഏതജ്ജഗതോ ദീപ്തിം പ്രാപ്നോതി|
10 ೧೦ ರಾತ್ರಿಯಲ್ಲಿ ನಡೆದರೆ ತನ್ನಲ್ಲಿ ಬೆಳಕಿಲ್ಲದ್ದರಿಂದ ಅವನು ಎಡವುತ್ತಾನೆ” ಎಂದು ಉತ್ತರಕೊಟ್ಟನು.
കിന്തു രാത്രൗ ഗച്ഛൻ സ്ഖലതി യതോ ഹേതോസ്തത്ര ദീപ്തി ർനാസ്തി|
11 ೧೧ ಇದನ್ನು ಹೇಳಿದ ಮೇಲೆ ಆತನು ಅವರಿಗೆ, “ನಮ್ಮ ಮಿತ್ರನಾದ ಲಾಜರನು ನಿದ್ರೆ ಮಾಡುತ್ತಿದ್ದಾನೆ, ಆದುದರಿಂದ ನಾನು ಹೋಗಿ ಅವನನ್ನು ನಿದ್ರೆಯಿಂದ ಎಬ್ಬಿಸಬೇಕಾಗಿದೆ” ಎಂದು ಹೇಳಿದನು.
ഇമാം കഥാം കഥയിത്വാ സ താനവദദ്, അസ്മാകം ബന്ധുഃ ഇലിയാസർ നിദ്രിതോഭൂദ് ഇദാനീം തം നിദ്രാതോ ജാഗരയിതും ഗച്ഛാമി|
12 ೧೨ ಅದಕ್ಕೆ ಶಿಷ್ಯರು, “ಅವನು ನಿದ್ರೆ ಮಾಡುತ್ತಿದ್ದರೆ ಸ್ವಸ್ಥನಾಗುವನು” ಎಂದರು.
യീശു ർമൃതൗ കഥാമിമാം കഥിതവാൻ കിന്തു വിശ്രാമാർഥം നിദ്രായാം കഥിതവാൻ ഇതി ജ്ഞാത്വാ ശിഷ്യാ അകഥയൻ,
13 ೧೩ ಯೇಸು ಅವನ ಮರಣವನ್ನು ಕುರಿತು ಅದನ್ನು ಹೇಳಿದ್ದನು, ಆದರೆ ಅವರು ವಿಶ್ರಾಂತಿಗಾಗಿ ಮಲಗಿದ್ದಾನೆಂಬುದಾಗಿ ಹೇಳಿದನೆಂದು ಯೋಚಿಸಿದರು.
ഹേ ഗുരോ സ യദി നിദ്രാതി തർഹി ഭദ്രമേവ|
14 ೧೪ ಆಗ ಯೇಸು ಸ್ಪಷ್ಟವಾಗಿ ಅವರಿಗೆ, “ಲಾಜರನು ಸತ್ತು ಹೋಗಿದ್ದಾನೆ.
തദാ യീശുഃ സ്പഷ്ടം താൻ വ്യാഹരത്, ഇലിയാസർ അമ്രിയത;
15 ೧೫ ನಾನು ಅಲ್ಲಿ ಇಲ್ಲದೆ ಹೋದದ್ದು ಒಳ್ಳೆಯದೇ, ನಿಮಗೆ ನನ್ನಲ್ಲಿ ನಂಬಿಕೆ ಬರುವಂತೆ ಇದೆಲ್ಲಾ ನಡೆದಿದೆ. ಬನ್ನಿ, ನಾವು ಅವನ ಬಳಿಗೆ ಹೋಗೋಣ” ಎಂದು ಹೇಳಿದನು
കിന്തു യൂയം യഥാ പ്രതീഥ തദർഥമഹം തത്ര ന സ്ഥിതവാൻ ഇത്യസ്മാദ് യുഷ്മന്നിമിത്തമ് ആഹ്ലാദിതോഹം, തഥാപി തസ്യ സമീപേ യാമ|
16 ೧೬ ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಯೇಸುವಿನೊಂದಿಗೆ ಸಾಯುವುದಕ್ಕೆ ಹೋಗೋಣ” ಎಂದು ಹೇಳಿದನು.
തദാ ഥോമാ യം ദിദുമം വദന്തി സ സങ്ഗിനഃ ശിഷ്യാൻ അവദദ് വയമപി ഗത്വാ തേന സാർദ്ധം മ്രിയാമഹൈ|
17 ೧೭ ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿನಗಳಾಯಿತೆಂದು ಆತನಿಗೆ ತಿಳಿದು ಬಂದಿತು.
യീശുസ്തത്രോപസ്ഥായ ഇലിയാസരഃ ശ്മശാനേ സ്ഥാപനാത് ചത്വാരി ദിനാനി ഗതാനീതി വാർത്താം ശ്രുതവാൻ|
18 ೧೮ ಬೇಥಾನ್ಯವು ಯೆರೂಸಲೇಮಿಗೆ ಸಮೀಪವಾಗಿತ್ತು. ಯೆರುಸಲೇಮಿನಿಂದ ಸುಮಾರು ಒಂದು ಹರಿದಾರಿಯಷ್ಟು ಅಂತರವಿತ್ತು.
വൈഥനീയാ യിരൂശാലമഃ സമീപസ്ഥാ ക്രോശൈകമാത്രാന്തരിതാ;
19 ೧೯ ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋದರನ ವಿಷಯದಲ್ಲಿ ಸಂತೈಸಬೇಕೆಂದು ಬಂದಿದ್ದರು.
തസ്മാദ് ബഹവോ യിഹൂദീയാ മർഥാം മരിയമഞ്ച ഭ്യാതൃശോകാപന്നാം സാന്ത്വയിതും തയോഃ സമീപമ് ആഗച്ഛൻ|
20 ೨೦ ಹೀಗಿರುವಲ್ಲಿ ಮಾರ್ಥಳು ಯೇಸು ಬರುತ್ತಾನೆಂದು ಕೇಳಿ ಆತನನ್ನು ಎದುರುಗೊಳ್ಳುವುದಕ್ಕೆ ಎದ್ದು ಹೋದಳು. ಆದರೆ ಮರಿಯಳು ಮನೆಯಲ್ಲೇ ಉಳಿದುಕೊಂಡಿದ್ದಳು.
മർഥാ യീശോരാഗമനവാർതാം ശ്രുത്വൈവ തം സാക്ഷാദ് അകരോത് കിന്തു മരിയമ് ഗേഹ ഉപവിശ്യ സ്ഥിതാ|
21 ೨೧ ಆಗ ಮಾರ್ಥಳು ಯೇಸುವಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ.
തദാ മർഥാ യീശുമവാദത്, ഹേ പ്രഭോ യദി ഭവാൻ അത്രാസ്ഥാസ്യത് തർഹി മമ ഭ്രാതാ നാമരിഷ്യത്|
22 ೨೨ ಈಗಲಾದರೂ ನೀನು ದೇವರನ್ನು ಏನು ಕೇಳಿಕೊಂಡರೂ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ನಾನು ಬಲ್ಲೆನು” ಎಂದು ಹೇಳಿದಳು.
കിന്ത്വിദാനീമപി യദ് ഈശ്വരേ പ്രാർഥയിഷ്യതേ ഈശ്വരസ്തദ് ദാസ്യതീതി ജാനേഽഹം|
23 ೨೩ ಯೇಸು ಆಕೆಗೆ, “ನಿನ್ನ ತಮ್ಮನು ಪುನಃ ಎದ್ದು ಬರುವನು” ಎಂದು ಹೇಳಿದನು.
യീശുരവാദീത് തവ ഭ്രാതാ സമുത്ഥാസ്യതി|
24 ೨೪ ಮಾರ್ಥಳು ಆತನಿಗೆ, “ಸತ್ತವರಿಗೆ ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದು ಬರುವನೆಂದು ನಾನು ಬಲ್ಲೆನು” ಅಂದಳು.
മർഥാ വ്യാഹരത് ശേഷദിവസേ സ ഉത്ഥാനസമയേ പ്രോത്ഥാസ്യതീതി ജാനേഽഹം|
25 ೨೫ ಯೇಸು ಆಕೆಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು,
തദാ യീശുഃ കഥിതവാൻ അഹമേവ ഉത്ഥാപയിതാ ജീവയിതാ ച യഃ കശ്ചന മയി വിശ്വസിതി സ മൃത്വാപി ജീവിഷ്യതി;
26 ೨೬ ಮತ್ತು ಜೀವಿಸುವ ಪ್ರತಿಯೊಬ್ಬನು ನನ್ನಲ್ಲಿ ನಂಬಿಕೆಯಿಟ್ಟರೆ, ಅವನು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯೋ?” ಎಂದು ಕೇಳಿದಕ್ಕೆ, (aiōn g165)
യഃ കശ്ചന ച ജീവൻ മയി വിശ്വസിതി സ കദാപി ന മരിഷ്യതി, അസ്യാം കഥായാം കിം വിശ്വസിഷി? (aiōn g165)
27 ೨೭ ಆಕೆಯು ಆತನಿಗೆ, “ಹೌದು ಕರ್ತನೇ, ಲೋಕಕ್ಕೆ ಬರಬೇಕಾದ ದೇವಕುಮಾರನಾದ ಕ್ರಿಸ್ತನು ನೀನೇ ಎಂದು ನಾನು ನಂಬಿದ್ದೇನೆ” ಅಂದಳು.
സാവദത് പ്രഭോ യസ്യാവതരണാപേക്ഷാസ്തി ഭവാൻ സഏവാഭിഷിക്ത്ത ഈശ്വരപുത്ര ഇതി വിശ്വസിമി|
28 ೨೮ ಇದನ್ನು ಹೇಳಿ ಆಕೆ ಹೋಗಿ ತನ್ನ ತಂಗಿಯಾದ ಮರಿಯಳನ್ನು ಗುಪ್ತವಾಗಿ ಕರೆದು, “ಗುರುವು ಬಂದಿದ್ದಾರೆ, ನಿನ್ನನ್ನು ಕರೆಯುತ್ತಿದ್ದಾರೆ” ಎಂದಳು.
ഇതി കഥാം കഥയിത്വാ സാ ഗത്വാ സ്വാം ഭഗിനീം മരിയമം ഗുപ്തമാഹൂയ വ്യാഹരത് ഗുരുരുപതിഷ്ഠതി ത്വാമാഹൂയതി ച|
29 ೨೯ ಮರಿಯಳು ಇದನ್ನು ಕೇಳಿದಾಗ ತಟ್ಟನೆ ಎದ್ದು ಆತನ ಬಳಿಗೆ ಹೋದಳು.
കഥാമിമാം ശ്രുത്വാ സാ തൂർണമ് ഉത്ഥായ തസ്യ സമീപമ് അഗച്ഛത്|
30 ೩೦ ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ. ಮಾರ್ಥಳು ಆತನನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದನು.
യീശു ർഗ്രാമമധ്യം ന പ്രവിശ്യ യത്ര മർഥാ തം സാക്ഷാദ് അകരോത് തത്ര സ്ഥിതവാൻ|
31 ೩೧ ಮರಿಯಳೊಂದಿಗೆ ಮನೆಯಲ್ಲಿ ಇದ್ದುಕೊಂಡು ಆಕೆಯನ್ನು ಸಂತೈಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುವುದನ್ನು ಕಂಡು, ಆಕೆಯು ಅಳುವುದಕ್ಕಾಗಿ ಸಮಾಧಿಗೆ ಹೋಗುತ್ತಿದ್ದಾಳೆಂದು ಭಾವಿಸಿ ಆಕೆಯ ಹಿಂದೆ ಹೋದರು.
യേ യിഹൂദീയാ മരിയമാ സാകം ഗൃഹേ തിഷ്ഠന്തസ്താമ് അസാന്ത്വയന തേ താം ക്ഷിപ്രമ് ഉത്ഥായ ഗച്ഛന്തിം വിലോക്യ വ്യാഹരൻ, സ ശ്മശാനേ രോദിതും യാതി, ഇത്യുക്ത്വാ തേ തസ്യാഃ പശ്ചാദ് അഗച്ഛൻ|
32 ೩೨ ಮರಿಯಳು ಯೇಸು ಇದ್ದಲ್ಲಿಗೆ ಬಂದು ಆತನನ್ನು ಕಂಡು ಆತನ ಪಾದಗಳಿಗೆ ಅಡ್ಡಬಿದ್ದು ಆತನಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದಳು.
യത്ര യീശുരതിഷ്ഠത് തത്ര മരിയമ് ഉപസ്ഥായ തം ദൃഷ്ട്വാ തസ്യ ചരണയോഃ പതിത്വാ വ്യാഹരത് ഹേ പ്രഭോ യദി ഭവാൻ അത്രാസ്ഥാസ്യത് തർഹി മമ ഭ്രാതാ നാമരിഷ്യത്|
33 ೩೩ ಆಕೆಯು ಅಳುವುದನ್ನು ಮತ್ತು ಆಕೆಯೊಂದಿಗೆ ಬಂದಿದ್ದ ಯೆಹೂದ್ಯರು ಅಳುವುದನ್ನು ಯೇಸು ನೋಡಿದಾಗ ಯೇಸುವು ಆತ್ಮದಲ್ಲಿ ವ್ಯಸನಪಟ್ಟು ನೊಂದುಕೊಂಡು,
യീശുസ്താം തസ്യാഃ സങ്ഗിനോ യിഹൂദീയാംശ്ച രുദതോ വിലോക്യ ശോകാർത്തഃ സൻ ദീർഘം നിശ്വസ്യ കഥിതവാൻ തം കുത്രാസ്ഥാപയത?
34 ೩೪ “ಅವನನ್ನು ಎಲ್ಲಿ ಇಟ್ಟಿದ್ದೀರಿ?” ಎಂದನು. ಅವರು ಆತನಿಗೆ, “ಕರ್ತನೇ, ಬಂದು ನೋಡು” ಎಂದರು.
തേ വ്യാഹരൻ, ഹേ പ്രഭോ ഭവാൻ ആഗത്യ പശ്യതു|
35 ೩೫ ಯೇಸು ಕಣ್ಣೀರಿಟ್ಟನು.
യീശുനാ ക്രന്ദിതം|
36 ೩೬ ಅದಕ್ಕೆ ಯೆಹೂದ್ಯರು, “ಆಹಾ! ಈತನು ಅವನ ಮೇಲೆ ಎಷ್ಟೋ ಮಮತೆ ಇಟ್ಟಿದ್ದಾನೆ” ಎಂದರು.
അതഏവ യിഹൂദീയാ അവദൻ, പശ്യതായം തസ്മിൻ കിദൃഗ് അപ്രിയത|
37 ೩೭ ಅವರಲ್ಲಿ ಕೆಲವರು, “ಈತನು ಆ ಕುರುಡನಿಗೆ ಕಣ್ಣು ಕೊಟ್ಟನಲ್ಲಾ, ಈ ಮನುಷ್ಯನನ್ನು ಸಾಯದ ಹಾಗೆ ಮಾಡಬಹುದಿತ್ತಲ್ಲಾ?” ಎಂದರು.
തേഷാം കേചിദ് അവദൻ യോന്ധായ ചക്ഷുഷീ ദത്തവാൻ സ കിമ് അസ്യ മൃത്യും നിവാരയിതും നാശക്നോത്?
38 ೩೮ ಯೇಸು ತಿರುಗಿ ತನ್ನ ಮನದಲ್ಲಿ ನೊಂದುಕೊಳ್ಳುತ್ತಾ ಸಮಾಧಿಯ ಬಳಿಗೆ ಬಂದನು. ಅದು ಒಂದು ಗವಿಯಾಗಿತ್ತು, ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಿಡಲಾಗಿತ್ತು.
തതോ യീശുഃ പുനരന്തർദീർഘം നിശ്വസ്യ ശ്മശാനാന്തികമ് അഗച്ഛത്| തത് ശ്മശാനമ് ഏകം ഗഹ്വരം തന്മുഖേ പാഷാണ ഏക ആസീത്|
39 ೩೯ ಯೇಸು, “ಆ ಕಲ್ಲನ್ನು ತೆಗೆದು ಹಾಕಿರಿ” ಎನ್ನಲು, ತೀರಿಹೋದವನ ಸಹೋದರಿಯಾದ ಮಾರ್ಥಳು ಆತನಿಗೆ, “ಕರ್ತನೇ, ಅವನು ಸತ್ತು ನಾಲ್ಕು ದಿನಗಳಾದವು, ಈಗ ದುರ್ವಾಸನೆ ಬಂದಿರಬಹುದು” ಎಂದಳು.
തദാ യീശുരവദദ് ഏനം പാഷാണമ് അപസാരയത, തതഃ പ്രമീതസ്യ ഭഗിനീ മർഥാവദത് പ്രഭോ, അധുനാ തത്ര ദുർഗന്ധോ ജാതഃ, യതോദ്യ ചത്വാരി ദിനാനി ശ്മശാനേ സ തിഷ്ഠതി|
40 ೪೦ ಯೇಸು ಆಕೆಗೆ, “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ?” ಎಂದು ಉತ್ತರ ಕೊಟ್ಟನು
തദാ യീശുരവാദീത്, യദി വിശ്വസിഷി തർഹീശ്വരസ്യ മഹിമപ്രകാശം ദ്രക്ഷ്യസി കഥാമിമാം കിം തുഭ്യം നാകഥയം?
41 ೪೧ ಆಗ ಅವರು ಕಲ್ಲನ್ನು ತೆಗೆದು ಹಾಕಿದರು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ತಂದೆಯೇ ನೀನು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
തദാ മൃതസ്യ ശ്മശാനാത് പാഷാണോഽപസാരിതേ യീശുരൂർദ്വ്വം പശ്യൻ അകഥയത്, ഹേ പിത ർമമ നേവേസനമ് അശൃണോഃ കാരണാദസ്മാത് ത്വാം ധന്യം വദാമി|
42 ೪೨ ನೀನು ನನಗೆ ಯಾವಾಗಲೂ ಕಿವಿಗೊಡುತ್ತೀ ಎಂದು ನನಗೆ ತಿಳಿದೇ ಇದೆ. ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿರುವಿ ಎಂದು ಸುತ್ತಲೂ ನಿಂತಿರುವ ಈ ಜನರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದ್ದೇನೆ” ಎಂದು ಹೇಳಿದನು.
ത്വം സതതം ശൃണോഷി തദപ്യഹം ജാനാമി, കിന്തു ത്വം മാം യത് പ്രൈരയസ്തദ് യഥാസ്മിൻ സ്ഥാനേ സ്ഥിതാ ലോകാ വിശ്വസന്തി തദർഥമ് ഇദം വാക്യം വദാമി|
43 ೪೩ ಆತನು ಹೀಗೆ ಹೇಳಿದ ಮೇಲೆ, “ಲಾಜರನೇ, ಹೊರಗೆ ಬಾ!” ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು.
ഇമാം കഥാം കഥയിത്വാ സ പ്രോച്ചൈരാഹ്വയത്, ഹേ ഇലിയാസർ ബഹിരാഗച്ഛ|
44 ೪೪ ಸತ್ತಿದ್ದವನು ಹೊರಗೆ ಬಂದನು. ಅವನ ಕೈಕಾಲುಗಳು ಶವ ವಸ್ತ್ರಗಳಿಂದ ಸುತ್ತಿದ್ದವು. ಅವನ ಮುಖಕ್ಕೆ ವಸ್ತ್ರ ಸುತ್ತಲಾಗಿತ್ತು. ಯೇಸು ಅವರಿಗೆ, “ಅವನನ್ನು ಬಿಡಿಸಿರಿ, ಅವನು ಹೋಗಲಿ” ಎಂದು ಹೇಳಿದನು.
തതഃ സ പ്രമീതഃ ശ്മശാനവസ്ത്രൈ ർബദ്ധഹസ്തപാദോ ഗാത്രമാർജനവാസസാ ബദ്ധമുഖശ്ച ബഹിരാഗച്ഛത്| യീശുരുദിതവാൻ ബന്ധനാനി മോചയിത്വാ ത്യജതൈനം|
45 ೪೫ ಆದುದರಿಂದ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಾರ್ಯವನ್ನು ನೋಡಿ ಆತನಲ್ಲಿ ನಂಬಿಕೆಯಿಟ್ಟರು.
മരിയമഃ സമീപമ് ആഗതാ യേ യിഹൂദീയലോകാസ്തദാ യീശോരേതത് കർമ്മാപശ്യൻ തേഷാം ബഹവോ വ്യശ്വസൻ,
46 ೪೬ ಆದರೆ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ ಕಾರ್ಯಗಳನ್ನು ಅವರಿಗೆ ಹೇಳಿದರು.
കിന്തു കേചിദന്യേ ഫിരൂശിനാം സമീപം ഗത്വാ യീശോരേതസ്യ കർമ്മണോ വാർത്താമ് അവദൻ|
47 ೪೭ ಆಗ ಮುಖ್ಯಯಾಜಕರೂ ಫರಿಸಾಯರೂ ಹಿರೀಸಭೆಯನ್ನು ಕೂಡಿಸಿ, “ನಾವು ಈಗ ಏನುಮಾಡಬೇಕು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ.
തതഃ പരം പ്രധാനയാജകാഃ ഫിരൂശിനാശ്ച സഭാം കൃത്വാ വ്യാഹരൻ വയം കിം കുർമ്മഃ? ഏഷ മാനവോ ബഹൂന്യാശ്ചര്യ്യകർമ്മാണി കരോതി|
48 ೪೮ ನಾವು ಅವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಆತನ್ನನ್ನೇ ನಂಬುವರು. ರೋಮನ್ನರು ಬಂದು ನಮ್ಮ ಸ್ಥಳವನ್ನೂ ಮತ್ತು ರಾಷ್ಟ್ರವನ್ನೂ ವಶ ಮಾಡಿಕೊಂಡಾರು” ಎಂದರು.
യദീദൃശം കർമ്മ കർത്തും ന വാരയാമസ്തർഹി സർവ്വേ ലോകാസ്തസ്മിൻ വിശ്വസിഷ്യന്തി രോമിലോകാശ്ചാഗത്യാസ്മാകമ് അനയാ രാജധാന്യാ സാർദ്ധം രാജ്യമ് ആഛേത്സ്യന്തി|
49 ೪೯ ಆಗ ಅವರಲ್ಲಿ ಆ ವರ್ಷಕ್ಕೆ ಮಹಾಯಾಜಕನಾಗಿದ್ದ ಕಾಯಫನೆಂಬುವನು ಅವರಿಗೆ, “ನಿಮಗೇನೂ ತಿಳಿಯುತ್ತಿಲ್ಲ.
തദാ തേഷാം കിയഫാനാമാ യസ്തസ്മിൻ വത്സരേ മഹായാജകപദേ ന്യയുജ്യത സ പ്രത്യവദദ് യൂയം കിമപി ന ജാനീഥ;
50 ೫೦ ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಆಲೋಚಿಸುವುದೂ ಇಲ್ಲ” ಎಂಬುದಾಗಿ ಹೇಳಿದನು.
സമഗ്രദേശസ്യ വിനാശതോപി സർവ്വലോകാർഥമ് ഏകസ്യ ജനസ്യ മരണമ് അസ്മാകം മങ്ഗലഹേതുകമ് ഏതസ്യ വിവേചനാമപി ന കുരുഥ|
51 ೫೧ ಇದನ್ನು ಅವನು ತನ್ನಷ್ಟಕ್ಕೆ ತಾನೇ ಹೇಳಲಿಲ್ಲ, ಆದರೆ ತಾನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದುದರಿಂದ, ಯೇಸು ಆ ಜನರಿಗೋಸ್ಕರ ಹಾಗೂ
ഏതാം കഥാം സ നിജബുദ്ധ്യാ വ്യാഹരദ് ഇതി ന,
52 ೫೨ ಆ ಜನತೆಗಾಗಿ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಸಹ ಒಟ್ಟುಗೂಡಿಸುವುದಕ್ಕಾಗಿಯೂ ಸಾಯುವುದಕ್ಕಿದ್ದನು, ಎಂಬುದಾಗಿ ಪ್ರವಾದಿಸಿದನು
കിന്തു യീശൂസ്തദ്ദേശീയാനാം കാരണാത് പ്രാണാൻ ത്യക്ഷ്യതി, ദിശി ദിശി വികീർണാൻ ഈശ്വരസ്യ സന്താനാൻ സംഗൃഹ്യൈകജാതിം കരിഷ്യതി ച, തസ്മിൻ വത്സരേ കിയഫാ മഹായാജകത്വപദേ നിയുക്തഃ സൻ ഇദം ഭവിഷ്യദ്വാക്യം കഥിതവാൻ|
53 ೫೩ ಅವರು ಆ ದಿನದಿಂದ ಆತನನ್ನು ಕೊಲ್ಲುವುದಕ್ಕೆ ಆಲೋಚಿಸುತ್ತಿದ್ದರು.
തദ്ദിനമാരഭ്യ തേ കഥം തം ഹന്തും ശക്നുവന്തീതി മന്ത്രണാം കർത്തും പ്രാരേഭിരേ|
54 ೫೪ ಹೀಗಿರಲಾಗಿ ಯೇಸು ಇನ್ನೂ ಯೆಹೂದ್ಯರೊಳಗೆ ಬಹಿರಂಗವಾಗಿ ತಿರುಗಾಡದೆ, ಅಲ್ಲಿಂದ ಅಡವಿಯ ಹತ್ತಿರದ ಪ್ರದೇಶಕ್ಕೆ ಹೋಗಿ, ಎಫ್ರಾಯೀಮ್ ಎಂಬ ಊರಲ್ಲಿ ತನ್ನ ಶಿಷ್ಯರ ಜೊತೆ ಇದ್ದನು.
അതഏവ യിഹൂദീയാനാം മധ്യേ യീശുഃ സപ്രകാശം ഗമനാഗമനേ അകൃത്വാ തസ്മാദ് ഗത്വാ പ്രാന്തരസ്യ സമീപസ്ഥായിപ്രദേശസ്യേഫ്രായിമ് നാമ്നി നഗരേ ശിഷ്യൈഃ സാകം കാലം യാപയിതും പ്രാരേഭേ|
55 ೫೫ ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಾಗಿರಲಾಗಿ, ಬಹು ಜನರು ತಮ್ಮನ್ನು ಶುದ್ಧ ಮಾಡಿಕೊಳ್ಳುವುದಕ್ಕಾಗಿ ಹಬ್ಬಕ್ಕಿಂತ ಮೊದಲೇ ಹಳ್ಳಿಗಳಿಂದ ಯೆರೂಸಲೇಮಿಗೆ ಬಂದರು.
അനന്തരം യിഹൂദീയാനാം നിസ്താരോത്സവേ നികടവർത്തിനി സതി തദുത്സവാത് പൂർവ്വം സ്വാൻ ശുചീൻ കർത്തും ബഹവോ ജനാ ഗ്രാമേഭ്യോ യിരൂശാലമ് നഗരമ് ആഗച്ഛൻ,
56 ೫೬ ಅವರು ಯೇಸುವನ್ನು ಹುಡುಕುತ್ತಾ ದೇವಾಲಯದಲ್ಲಿ ನಿಂತುಕೊಂಡು, “ಅವನು ಹಬ್ಬಕ್ಕೆ ಬಾರದೇ ಇದ್ದಾನೋ? ನಿಮಗೆ ಹೇಗೆ ತೋರುತ್ತದೆ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಾ ಇದ್ದರು.
യീശോരന്വേഷണം കൃത്വാ മന്ദിരേ ദണ്ഡായമാനാഃ സന്തഃ പരസ്പരം വ്യാഹരൻ, യുഷ്മാകം കീദൃശോ ബോധോ ജായതേ? സ കിമ് ഉത്സവേഽസ്മിൻ അത്രാഗമിഷ്യതി?
57 ೫೭ ಆಗ ಮುಖ್ಯಯಾಜಕರೂ ಮತ್ತು ಫರಿಸಾಯರೂ ಆತನನ್ನು ಹಿಡಿಯಬೇಕೆಂಬುದಾಗಿ ಯೋಚಿಸಿ, ಅವನಿರುವ ಸ್ಥಳವು ಯಾರಿಗಾದರೂ ಗೊತ್ತಾದರೆ ಅದನ್ನು ತಮಗೆ ತಿಳಿಸಬೇಕೆಂದು ಅಪ್ಪಣೆ ಕೊಟ್ಟಿದ್ದರು.
സ ച കുത്രാസ്തി യദ്യേതത് കശ്ചിദ് വേത്തി തർഹി ദർശയതു പ്രധാനയാജകാഃ ഫിരൂശിനശ്ച തം ധർത്തും പൂർവ്വമ് ഇമാമ് ആജ്ഞാം പ്രാചാരയൻ|

< ಯೋಹಾನನು 11 >