< ಅಪೊಸ್ತಲರ ಕೃತ್ಯಗಳ 26 >

1 ಆಗ ಅಗ್ರಿಪ್ಪನು, ಪೌಲನಿಗೆ; “ನೀನು ನಿನ್ನ ಪರವಾಗಿ ಮಾತನಾಡಬಹುದು” ಅನ್ನಲು, ಪೌಲನು ಕೈಯೆತ್ತಿ, ಪ್ರತಿವಾದ ಮಾಡಿದ್ದೇನಂದರೆ;
తత ఆగ్రిప్పః పౌలమ్ అవాదీత్, నిజాం కథాం కథయితుం తుభ్యమ్ అనుమతి ర్దీయతే| తస్మాత్ పౌలః కరం ప్రసార్య్య స్వస్మిన్ ఉత్తరమ్ అవాదీత్|
2 “ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ಆರೋಪಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವುದರಿಂದ, ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.
హే ఆగ్రిప్పరాజ యత్కారణాదహం యిహూదీయైరపవాదితో ఽభవం తస్య వృత్తాన్తమ్ అద్య భవతః సాక్షాన్ నివేదయితుమనుమతోహమ్ ఇదం స్వీయం పరమం భాగ్యం మన్యే;
3 ಏಕೆಂದರೆ, ಯೆಹೂದ್ಯರಲ್ಲಿರುವ ಎಲ್ಲಾ ಆಚಾರಗಳನ್ನೂ, ವಿವಾದಗಳನ್ನೂ ನೀನು ಚೆನ್ನಾಗಿ ಬಲ್ಲವನಾಗಿರುತ್ತೀ. ನನ್ನ ಮಾತುಗಳನ್ನು ಸಹನೆಯಿಂದ ಕೇಳಬೇಕೆಂದು ಬೇಡಿಕೊಳ್ಳುತ್ತೇನೆ.
యతో యిహూదీయలోకానాం మధ్యే యా యా రీతిః సూక్ష్మవిచారాశ్చ సన్తి తేషు భవాన్ విజ్ఞతమః; అతఏవ ప్రార్థయే ధైర్య్యమవలమ్బ్య మమ నివేదనం శృణోతు|
4 “ನಾನು ಚಿಕ್ಕಂದಿನಿಂದಲೂ, ಯೆರೂಸಲೇಮಿನಲ್ಲಿ ನನ್ನ ದೇಶದ ಜನರೊಳಗಿದ್ದು, ಬದುಕಿದ ರೀತಿಯು ಎಲ್ಲಾ ಯೆಹೂದ್ಯರಿಗೆ ತಿಳಿದ ವಿಷಯವಾಗಿದೆ.
అహం యిరూశాలమ్నగరే స్వదేశీయలోకానాం మధ్యే తిష్ఠన్ ఆ యౌవనకాలాద్ యద్రూపమ్ ఆచరితవాన్ తద్ యిహూదీయలోకాః సర్వ్వే విదన్తి|
5 ನಾನು, ನಮ್ಮ ಧರ್ಮದಲ್ಲಿ ಬಹು ಕಟ್ಟುನಿಟ್ಟಾಗಿ ಆಚರಿಸುವ ಫರಿಸಾಯರ ಪಂಥವನ್ನನುಸರಿಸಿ ಫರಿಸಾಯನಾಗಿ ನಡೆದುಕೊಂಡೆನೆಂಬುದನ್ನು, ಪ್ರಾರಂಭದಿಂದಲೂ ಅವರು ಬಲ್ಲರು. ಸಾಕ್ಷಿ ಹೇಳುವುದಕ್ಕೆ ಅವರಿಗೆ ಮನಸ್ಸಿದ್ದರೆ ಹೇಳಬಹುದು.
అస్మాకం సర్వ్వేభ్యః శుద్ధతమం యత్ ఫిరూశీయమతం తదవలమ్బీ భూత్వాహం కాలం యాపితవాన్ యే జనా ఆ బాల్యకాలాన్ మాం జానాన్తి తే ఏతాదృశం సాక్ష్యం యది దదాతి తర్హి దాతుం శక్నువన్తి|
6 ಈಗಲೂ ದೇವರು ನಮ್ಮ ಪೂರ್ವಿಕರಿಗೆ, ಮಾಡಿದ ವಾಗ್ದಾನವು ನೆರವೇರುವುದೆಂಬ ನಿರೀಕ್ಷೆಯ ನಿಮಿತ್ತವೇ, ನಾನು ಇಂದು ನ್ಯಾಯವಿಚಾರಣೆಗೆ ಇಲ್ಲಿ ನಿಂತಿದ್ದೇನೆ.
కిన్తు హే ఆగ్రిప్పరాజ ఈశ్వరోఽస్మాకం పూర్వ్వపురుషాణాం నికటే యద్ అఙ్గీకృతవాన్ తస్య ప్రత్యాశాహేతోరహమ్ ఇదానీం విచారస్థానే దణ్డాయమానోస్మి|
7 ನಮ್ಮ ಹನ್ನೆರಡು ಕುಲದವರು ಹಗಲಿರುಳು ಆಸಕ್ತಿಯಿಂದ ದೇವರನ್ನು ಆರಾಧಿಸುತ್ತಾ, ಆ ವಾಗ್ದಾನದ ಫಲವನ್ನು ಹೊಂದುವುದಕ್ಕಾಗಿ ನಿರೀಕ್ಷಿಸುತ್ತಾ ಇದ್ದಾರೆ. ಅರಸನೇ, ಅದೇ ನಿರೀಕ್ಷೆಯ ವಿಷಯದಲ್ಲಿಯೇ ಯೆಹೂದ್ಯರು, ನನ್ನ ವಿರುದ್ಧ ದೋಷಾರೋಪಣೆಮಾಡುತ್ತಿದ್ದಾರೆ.
తస్యాఙ్గీకారస్య ఫలం ప్రాప్తుమ్ అస్మాకం ద్వాదశవంశా దివానిశం మహాయత్నాద్ ఈశ్వరసేవనం కృత్వా యాం ప్రత్యాశాం కుర్వ్వన్తి తస్యాః ప్రత్యాశాయా హేతోరహం యిహూదీయైరపవాదితోఽభవమ్|
8 ದೇವರು ಸತ್ತವರನ್ನು ಎಬ್ಬಿಸಿದ್ದು ನಂಬಲು ಅಸಾಧ್ಯವೆಂದು ನೀವು ಏಕೆ ತೀರ್ಮಾನಿಸುತ್ತೀರಿ?
ఈశ్వరో మృతాన్ ఉత్థాపయిష్యతీతి వాక్యం యుష్మాకం నికటేఽసమ్భవం కుతో భవేత్?
9 ಒಂದು ಕಾಲದಲ್ಲಿ ನಜರೇತಿನ ಯೇಸುವಿನ ಹೆಸರಿಗೆ ವಿರುದ್ಧವಾಗಿ ಅನೇಕ ಕಾರ್ಯಗಳನ್ನು ನಡೆಸಬೇಕೆಂದು ನಾನೂ ಯೋಚಿಸಿಕೊಂಡಿದ್ದೆನು.
నాసరతీయయీశో ర్నామ్నో విరుద్ధం నానాప్రకారప్రతికూలాచరణమ్ ఉచితమ్ ఇత్యహం మనసి యథార్థం విజ్ఞాయ
10 ೧೦ ಯೆರೂಸಲೇಮಿನಲ್ಲಿ ಹಾಗೆಯೇ ಮಾಡಿದ್ದೆನು. ಮುಖ್ಯಯಾಜಕರಿಂದ, ಅಧಿಕಾರವನ್ನು ಪಡೆದು ದೇವಜನರಲ್ಲಿ ಅನೇಕರನ್ನು ಸೆರೆಮನೆಗಳಲ್ಲಿ ಇರಿಸಿ, ಅವರಿಗೆ ಮರಣದ ತೀರ್ಪಾದಾಗ, ನಾನು ಅದಕ್ಕೆ ಸಮ್ಮತಿಯನ್ನು ಸೂಚಿಸಿದೆನು.
యిరూశాలమనగరే తదకరవం ఫలతః ప్రధానయాజకస్య నికటాత్ క్షమతాం ప్రాప్య బహూన్ పవిత్రలోకాన్ కారాయాం బద్ధవాన్ విశేషతస్తేషాం హననసమయే తేషాం విరుద్ధాం నిజాం సమ్మతిం ప్రకాశితవాన్|
11 ೧೧ ಎಲ್ಲಾ ಸಭಾಮಂದಿರಗಳಲ್ಲಿಯೂ, ನಾನು ಅನೇಕ ಸಾರಿ ಅವರನ್ನು ದಂಡಿಸಿ ಅವರಿಂದ ದೇವದೂಷಣೆಯ ಮಾತುಗಳನ್ನಾಡಿಸುವುದಕ್ಕೆ ಪ್ರಯತ್ನಿಸಿದೆನು. ಇದಲ್ಲದೆ ಅವರ ಮೇಲೆ ಬಹು ಕೋಪಾವೇಶವುಳ್ಳವನಾಗಿ ಬೇರೆ ಪಟ್ಟಣಗಳವರೆಗೂ ಹೋಗಿ, ಅವರನ್ನು ಹಿಂಸೆಪಡಿಸಿದೆನು.
వారం వారం భజనభవనేషు తేభ్యో దణ్డం ప్రదత్తవాన్ బలాత్ తం ధర్మ్మం నిన్దయితవాంశ్చ పునశ్చ తాన్ ప్రతి మహాక్రోధాద్ ఉన్మత్తః సన్ విదేశీయనగరాణి యావత్ తాన్ తాడితవాన్|
12 ೧೨ ಈ ಉದ್ದೇಶದಿಂದ ನಾನು ಮುಖ್ಯಯಾಜಕರಿಂದ ಅಧಿಕಾರವನ್ನೂ, ಆದೇಶವನ್ನೂ ಹೊಂದಿ ದಮಸ್ಕಕ್ಕೆ ಹೋಗುವ ದಾರಿಯಲ್ಲಿ ರಾಜನೇ,
ఇత్థం ప్రధానయాజకస్య సమీపాత్ శక్తిమ్ ఆజ్ఞాపత్రఞ్చ లబ్ధ్వా దమ్మేషక్నగరం గతవాన్|
13 ೧೩ ಮಧ್ಯಾಹ್ನದ ಹೊತ್ತಿನಲ್ಲಿ ಪರಲೋಕದಿಂದ ಒಂದು ಬೆಳಕು ನನ್ನ ಸುತ್ತಲೂ ಮತ್ತು ನನ್ನ ಜೊತೆಯಲ್ಲಿ ಪ್ರಯಾಣಮಾಡುತ್ತಿದ್ದವರ ಸುತ್ತಲೂ ಸೂರ್ಯನ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವುದನ್ನು ನಾನು ಕಂಡೆನು.
తదాహం హే రాజన్ మార్గమధ్యే మధ్యాహ్నకాలే మమ మదీయసఙ్గినాం లోకానాఞ్చ చతసృషు దిక్షు గగణాత్ ప్రకాశమానాం భాస్కరతోపి తేజస్వతీం దీప్తిం దృష్టవాన్|
14 ೧೪ ನಾವೆಲ್ಲರು ನೆಲಕ್ಕೆ ಬೀಳಲು; ‘ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವುದರಿಂದ ನಿನಗೇ ಹಾನಿಯಲ್ಲವೇ? ಎಂದು ಇಬ್ರಿಯ ಭಾಷೆಯಿಂದ ಹೇಳುವ ವಾಣಿಯನ್ನು’ ಕೇಳಿದೆನು.
తస్మాద్ అస్మాసు సర్వ్వేషు భూమౌ పతితేషు సత్సు హే శౌల హై శౌల కుతో మాం తాడయసి? కణ్టకానాం ముఖే పాదాహననం తవ దుఃసాధ్యమ్ ఇబ్రీయభాషయా గదిత ఏతాదృశ ఏకః శబ్దో మయా శ్రుతః|
15 ೧೫ ಆಗ ನಾನು; ‘ಕರ್ತನೇ, ನೀನಾರು?’ ಅನ್ನಲು ಕರ್ತನು; ‘ನೀನು ಹಿಂಸೆಪಡಿಸುವ ಯೇಸುವೇ ನಾನು.
తదాహం పృష్టవాన్ హే ప్రభో కో భవాన్? తతః స కథితవాన్ యం యీశుం త్వం తాడయసి సోహం,
16 ೧೬ ನೀನು ಎದ್ದು, ನಿಂತುಕೋ. ನಿನ್ನನ್ನು ನನ್ನ ಸೇವಕನಾಗಿಯೂ, ಸಾಕ್ಷಿಯಾಗಿಯೂ ನೇಮಿಸುವುದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ಈಗಲೂ, ಮುಂದೆಯೂ ನಿನಗೆ ತೋರಿಸಲಿರುವ ದರ್ಶನಗಳಲ್ಲಿಯೂ, ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ನನ್ನ ಸಾಕ್ಷಿಯಾಗಿರಬೇಕು.
కిన్తు సముత్తిష్ఠ త్వం యద్ దృష్టవాన్ ఇతః పునఞ్చ యద్యత్ త్వాం దర్శయిష్యామి తేషాం సర్వ్వేషాం కార్య్యాణాం త్వాం సాక్షిణం మమ సేవకఞ్చ కర్త్తుమ్ దర్శనమ్ అదామ్|
17 ೧೭ ನಾನು ನಿನ್ನ ಸ್ವಂತ ಜನರಿಂದಲೂ, ಅನ್ಯಜನರಿಂದಲೂ ನಿನ್ನನ್ನು ರಕ್ಷಿಸುವೆನು.
విశేషతో యిహూదీయలోకేభ్యో భిన్నజాతీయేభ్యశ్చ త్వాం మనోనీతం కృత్వా తేషాం యథా పాపమోచనం భవతి
18 ೧೮ ಅವರು ಕತ್ತಲೆಯಿಂದ ಬೆಳಕಿಗೂ, ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು, ನನ್ನಲ್ಲಿ ನಂಬಿಕೆಯಿಡುವುದರಿಂದ ಪಾಪಕ್ಷಮಾಪಣೆಯನ್ನೂ, ಪರಿಶುದ್ಧರೊಂದಿಗೆ ಹಕ್ಕನ್ನೂ ಹೊಂದುವಂತೆ, ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ’ ಅಂದನು.
యథా తే మయి విశ్వస్య పవిత్రీకృతానాం మధ్యే భాగం ప్రాప్నువన్తి తదభిప్రాయేణ తేషాం జ్ఞానచక్షూంషి ప్రసన్నాని కర్త్తుం తథాన్ధకారాద్ దీప్తిం ప్రతి శైతానాధికారాచ్చ ఈశ్వరం ప్రతి మతీః పరావర్త్తయితుం తేషాం సమీపం త్వాం ప్రేష్యామి|
19 ೧೯ ಆದಕಾರಣ ಅಗ್ರಿಪ್ಪರಾಜನೇ, ಪರಲೋಕದಿಂದ ನನಗೆ ಉಂಟಾದ ಆ ದರ್ಶನಕ್ಕೆ ನಾನು ಅವಿಧೇಯನಾಗದೆ ಮೊದಲು ದಮಸ್ಕದವರಿಗೆ,
హే ఆగ్రిప్పరాజ ఏతాదృశం స్వర్గీయప్రత్యాదేశం అగ్రాహ్యమ్ అకృత్వాహం
20 ೨೦ ಆಮೇಲೆ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸೀಮೆಯಲ್ಲಿಯೂ ಇರುವವರಿಗೆ ಮತ್ತು ಅನ್ಯಜನರಿಗೆ ಸಹ; ನೀವು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ, ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳನ್ನು ಮಾಡಬೇಕೆಂತಲೂ ಸಾರಿದೆನು.
ప్రథమతో దమ్మేషక్నగరే తతో యిరూశాలమి సర్వ్వస్మిన్ యిహూదీయదేశే అన్యేషు దేశేషు చ యేన లోకా మతిం పరావర్త్త్య ఈశ్వరం ప్రతి పరావర్త్తయన్తే, మనఃపరావర్త్తనయోగ్యాని కర్మ్మాణి చ కుర్వ్వన్తి తాదృశమ్ ఉపదేశం ప్రచారితవాన్|
21 ೨೧ ಈ ಕಾರಣದಿಂದ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನು ಹಿಡಿದು ಕೊಲ್ಲುವುದಕ್ಕೆ ಪ್ರಯತ್ನಿಸಿದರು.
ఏతత్కారణాద్ యిహూదీయా మధ్యేమన్దిరం మాం ధృత్వా హన్తుమ్ ఉద్యతాః|
22 ೨೨ ಆದರೆ ನಾನು ದೇವರಿಂದ ಸಹಾಯವನ್ನು ಪಡೆದು ಈ ದಿನದವರೆಗೂ ಸುರಕ್ಷಿತವಾಗಿದ್ದು ಚಿಕ್ಕವರಿಗೂ, ದೊಡ್ಡವರಿಗೂ ಸಾಕ್ಷಿಹೇಳುವವನಾಗಿದ್ದೇನೆ. ಪ್ರವಾದಿಗಳೂ, ಮೋಶೆಯೂ ಮುಂದೆ ಆಗುವುದನ್ನು ಕುರಿತು ತಿಳಿಸಿದ ಸಂಗತಿಗಳನ್ನೇ, ಹೊರತು ನಾನು ಇನ್ನೇನೂ ಹೇಳುವವನಲ್ಲ.
తథాపి ఖ్రీష్టో దుఃఖం భుక్త్వా సర్వ్వేషాం పూర్వ్వం శ్మశానాద్ ఉత్థాయ నిజదేశీయానాం భిన్నదేశీయానాఞ్చ సమీపే దీప్తిం ప్రకాశయిష్యతి
23 ೨೩ ಆ ಸಂಗತಿಗಳು ಏನೆಂದರೆ; ಕ್ರಿಸ್ತನು ಬಾಧೆಪಟ್ಟು ಸಾಯಬೇಕಾದವನು ಮತ್ತು ಆತನು ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದು ಯೆಹೂದ್ಯರಿಗೂ, ಅನ್ಯಜನರಿಗೂ ಬೆಳಕನ್ನು ಪ್ರಸಿದ್ಧಿಪಡಿಸುವವನಾಗಿರುವನು” ಎಂಬುದೇ.
భవిష్యద్వాదిగణో మూసాశ్చ భావికార్య్యస్య యదిదం ప్రమాణమ్ అదదురేతద్ వినాన్యాం కథాం న కథయిత్వా ఈశ్వరాద్ అనుగ్రహం లబ్ధ్వా మహతాం క్షుద్రాణాఞ్చ సర్వ్వేషాం సమీపే ప్రమాణం దత్త్వాద్య యావత్ తిష్ఠామి|
24 ೨೪ ಹೀಗೆ ಪೌಲನು ಪ್ರತಿವಾದ ಮಾಡುತ್ತಿದ್ದಾಗ, ಫೆಸ್ತನು ಮಹಾಶಬ್ದದಿಂದ; “ಪೌಲನೇ, ನಿನಗೆ ಹುಚ್ಚು ಹಿಡಿದಿದೆ; ಅಧಿಕ ಪಾಂಡಿತ್ಯ ನಿನ್ನನ್ನು ಹುಚ್ಚನನ್ನಾಗಿಸಿದೆ,” ಎಂದು ಹೇಳಿದನು.
తస్యమాం కథాం నిశమ్య ఫీష్ట ఉచ్చైః స్వరేణ కథితవాన్ హే పౌల త్వమ్ ఉన్మత్తోసి బహువిద్యాభ్యాసేన త్వం హతజ్ఞానో జాతః|
25 ೨೫ ಅದಕ್ಕೆ ಪೌಲನು; “ಮಹಾ ಶ್ರೇಷ್ಠನಾದ ಫೆಸ್ತನೇ, ನಾನು ಹುಚ್ಚನಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನೇ ಹೇಳುತ್ತಿದ್ದೇನೆ.
స ఉక్తవాన్ హే మహామహిమ ఫీష్ట నాహమ్ ఉన్మత్తః కిన్తు సత్యం వివేచనీయఞ్చ వాక్యం ప్రస్తౌమి|
26 ೨೬ ಅಗ್ರಿಪ್ಪರಾಜನು ಈ ಸಂಗತಿಗಳನ್ನೆಲ್ಲಾ ತಿಳಿದವನು; ಆದುದರಿಂದ, ಅವನ ಮುಂದೆ ಧೈರ್ಯವಾಗಿ ಮಾತನಾಡುತ್ತೇನೆ. ಇವುಗಳಲ್ಲಿ ಒಂದಾದರೂ ಅವನಿಗೆ ಮುಚ್ಚುಮರೆಯಾದುದಲ್ಲವೆಂದು ನಂಬಿದ್ದೇನೆ, ಏಕೆಂದರೆ ಇದು ಒಂದು ಮೂಲೆಯಲ್ಲಿ ನಡೆದ ಕಾರ್ಯವಲ್ಲ.
యస్య సాక్షాద్ అక్షోభః సన్ కథాం కథయామి స రాజా తద్వృత్తాన్తం జానాతి తస్య సమీపే కిమపి గుప్తం నేతి మయా నిశ్చితం బుధ్యతే యతస్తద్ విజనే న కృతం|
27 ೨೭ ಅಗ್ರಿಪ್ಪರಾಜನೇ, ಪ್ರವಾದಿಗಳಲ್ಲಿ ನಿನಗೆ ನಂಬಿಕೆಯುಂಟೋ?” ಉಂಟೆಂದು ನಾನು ಬಲ್ಲೆನು ಅಂದನು.
హే ఆగ్రిప్పరాజ భవాన్ కిం భవిష్యద్వాదిగణోక్తాని వాక్యాని ప్రత్యేతి? భవాన్ ప్రత్యేతి తదహం జానామి|
28 ೨೮ ಅದಕ್ಕೆ ಅಗ್ರಿಪ್ಪನು; “ಅಲ್ಪಪ್ರಯತ್ನದಿಂದ, ನನ್ನನ್ನು ಕ್ರೈಸ್ತನಾಗುವುದಕ್ಕೆ ಒಡಂಬಡಿಸುತ್ತೀಯಾ?” ಎಂದು ಹೇಳಲು
తత ఆగ్రిప్పః పౌలమ్ అభిహితవాన్ త్వం ప్రవృత్తిం జనయిత్వా ప్రాయేణ మామపి ఖ్రీష్టీయం కరోషి|
29 ೨೯ ಪೌಲನು; “ಅಲ್ಪಪ್ರಯತ್ನದಿಂದಾಗಲಿ, ಅಧಿಕ ಪ್ರಯತ್ನದಿಂದಾಗಲಿ ನೀನು ಮಾತ್ರವಲ್ಲದೆ ಈಹೊತ್ತು ನನ್ನ ಮಾತುಗಳನ್ನು ಕೇಳುವವರೆಲ್ಲರೂ, ಈ ಬೇಡಿಗಳ ಹೊರತು, ನನ್ನಂತೆ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ” ಅಂದನು.
తతః సోఽవాదీత్ భవాన్ యే యే లోకాశ్చ మమ కథామ్ అద్య శృణ్వన్తి ప్రాయేణ ఇతి నహి కిన్త్వేతత్ శృఙ్ఖలబన్ధనం వినా సర్వ్వథా తే సర్వ్వే మాదృశా భవన్త్వితీశ్వస్య సమీపే ప్రార్థయేఽహమ్|
30 ೩೦ ಆ ಮೇಲೆ ರಾಜನೂ, ದೇಶಾಧಿಪತಿಯೂ ಮತ್ತು ಬೆರ್ನಿಕೆಯೂ ಅವರ ಸಂಗಡ ಕುಳಿತಿದ್ದವರೂ, ಎದ್ದು ಹೊರಗೆ ಹೋಗಿ;
ఏతస్యాం కథాయాం కథితాయాం స రాజా సోఽధిపతి ర్బర్ణీకీ సభాస్థా లోకాశ్చ తస్మాద్ ఉత్థాయ
31 ೩೧ “ಈ ಮನುಷ್ಯನು ಮರಣದಂಡನೆಗಾಗಲಿ, ಬೇಡಿಗಾಗಲಿ ಆಧಾರವಾದದ್ದೇನೂ ಮಾಡಿದವನಲ್ಲ” ಎಂಬುದಾಗಿ ತಮ್ಮ ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
గోపనే పరస్పరం వివిచ్య కథితవన్త ఏష జనో బన్ధనార్హం ప్రాణహననార్హం వా కిమపి కర్మ్మ నాకరోత్|
32 ೩೨ ಅಗ್ರಿಪ್ಪನು ಫೆಸ್ತನಿಗೆ; “ಈ ಮನುಷ್ಯನು ಕೈಸರನಿಗೆ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡುಗಡೆ ಮಾಡಬಹುದಿತ್ತು” ಎಂದು ಹೇಳಿದನು.
తత ఆగ్రిప్పః ఫీష్టమ్ అవదత్, యద్యేష మానుషః కైసరస్య నికటే విచారితో భవితుం న ప్రార్థయిష్యత్ తర్హి ముక్తో భవితుమ్ అశక్ష్యత్|

< ಅಪೊಸ್ತಲರ ಕೃತ್ಯಗಳ 26 >