< ಅಪೊಸ್ತಲರ ಕೃತ್ಯಗಳ 26 >

1 ಆಗ ಅಗ್ರಿಪ್ಪನು, ಪೌಲನಿಗೆ; “ನೀನು ನಿನ್ನ ಪರವಾಗಿ ಮಾತನಾಡಬಹುದು” ಅನ್ನಲು, ಪೌಲನು ಕೈಯೆತ್ತಿ, ಪ್ರತಿವಾದ ಮಾಡಿದ್ದೇನಂದರೆ;
તત આગ્રિપ્પઃ પૌલમ્ અવાદીત્, નિજાં કથાં કથયિતું તુભ્યમ્ અનુમતિ ર્દીયતે| તસ્માત્ પૌલઃ કરં પ્રસાર્ય્ય સ્વસ્મિન્ ઉત્તરમ્ અવાદીત્|
2 “ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ಆರೋಪಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವುದರಿಂದ, ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.
હે આગ્રિપ્પરાજ યત્કારણાદહં યિહૂદીયૈરપવાદિતો ઽભવં તસ્ય વૃત્તાન્તમ્ અદ્ય ભવતઃ સાક્ષાન્ નિવેદયિતુમનુમતોહમ્ ઇદં સ્વીયં પરમં ભાગ્યં મન્યે;
3 ಏಕೆಂದರೆ, ಯೆಹೂದ್ಯರಲ್ಲಿರುವ ಎಲ್ಲಾ ಆಚಾರಗಳನ್ನೂ, ವಿವಾದಗಳನ್ನೂ ನೀನು ಚೆನ್ನಾಗಿ ಬಲ್ಲವನಾಗಿರುತ್ತೀ. ನನ್ನ ಮಾತುಗಳನ್ನು ಸಹನೆಯಿಂದ ಕೇಳಬೇಕೆಂದು ಬೇಡಿಕೊಳ್ಳುತ್ತೇನೆ.
યતો યિહૂદીયલોકાનાં મધ્યે યા યા રીતિઃ સૂક્ષ્મવિચારાશ્ચ સન્તિ તેષુ ભવાન્ વિજ્ઞતમઃ; અતએવ પ્રાર્થયે ધૈર્ય્યમવલમ્બ્ય મમ નિવેદનં શૃણોતુ|
4 “ನಾನು ಚಿಕ್ಕಂದಿನಿಂದಲೂ, ಯೆರೂಸಲೇಮಿನಲ್ಲಿ ನನ್ನ ದೇಶದ ಜನರೊಳಗಿದ್ದು, ಬದುಕಿದ ರೀತಿಯು ಎಲ್ಲಾ ಯೆಹೂದ್ಯರಿಗೆ ತಿಳಿದ ವಿಷಯವಾಗಿದೆ.
અહં યિરૂશાલમ્નગરે સ્વદેશીયલોકાનાં મધ્યે તિષ્ઠન્ આ યૌવનકાલાદ્ યદ્રૂપમ્ આચરિતવાન્ તદ્ યિહૂદીયલોકાઃ સર્વ્વે વિદન્તિ|
5 ನಾನು, ನಮ್ಮ ಧರ್ಮದಲ್ಲಿ ಬಹು ಕಟ್ಟುನಿಟ್ಟಾಗಿ ಆಚರಿಸುವ ಫರಿಸಾಯರ ಪಂಥವನ್ನನುಸರಿಸಿ ಫರಿಸಾಯನಾಗಿ ನಡೆದುಕೊಂಡೆನೆಂಬುದನ್ನು, ಪ್ರಾರಂಭದಿಂದಲೂ ಅವರು ಬಲ್ಲರು. ಸಾಕ್ಷಿ ಹೇಳುವುದಕ್ಕೆ ಅವರಿಗೆ ಮನಸ್ಸಿದ್ದರೆ ಹೇಳಬಹುದು.
અસ્માકં સર્વ્વેભ્યઃ શુદ્ધતમં યત્ ફિરૂશીયમતં તદવલમ્બી ભૂત્વાહં કાલં યાપિતવાન્ યે જના આ બાલ્યકાલાન્ માં જાનાન્તિ તે એતાદૃશં સાક્ષ્યં યદિ દદાતિ તર્હિ દાતું શક્નુવન્તિ|
6 ಈಗಲೂ ದೇವರು ನಮ್ಮ ಪೂರ್ವಿಕರಿಗೆ, ಮಾಡಿದ ವಾಗ್ದಾನವು ನೆರವೇರುವುದೆಂಬ ನಿರೀಕ್ಷೆಯ ನಿಮಿತ್ತವೇ, ನಾನು ಇಂದು ನ್ಯಾಯವಿಚಾರಣೆಗೆ ಇಲ್ಲಿ ನಿಂತಿದ್ದೇನೆ.
કિન્તુ હે આગ્રિપ્પરાજ ઈશ્વરોઽસ્માકં પૂર્વ્વપુરુષાણાં નિકટે યદ્ અઙ્ગીકૃતવાન્ તસ્ય પ્રત્યાશાહેતોરહમ્ ઇદાનીં વિચારસ્થાને દણ્ડાયમાનોસ્મિ|
7 ನಮ್ಮ ಹನ್ನೆರಡು ಕುಲದವರು ಹಗಲಿರುಳು ಆಸಕ್ತಿಯಿಂದ ದೇವರನ್ನು ಆರಾಧಿಸುತ್ತಾ, ಆ ವಾಗ್ದಾನದ ಫಲವನ್ನು ಹೊಂದುವುದಕ್ಕಾಗಿ ನಿರೀಕ್ಷಿಸುತ್ತಾ ಇದ್ದಾರೆ. ಅರಸನೇ, ಅದೇ ನಿರೀಕ್ಷೆಯ ವಿಷಯದಲ್ಲಿಯೇ ಯೆಹೂದ್ಯರು, ನನ್ನ ವಿರುದ್ಧ ದೋಷಾರೋಪಣೆಮಾಡುತ್ತಿದ್ದಾರೆ.
તસ્યાઙ્ગીકારસ્ય ફલં પ્રાપ્તુમ્ અસ્માકં દ્વાદશવંશા દિવાનિશં મહાયત્નાદ્ ઈશ્વરસેવનં કૃત્વા યાં પ્રત્યાશાં કુર્વ્વન્તિ તસ્યાઃ પ્રત્યાશાયા હેતોરહં યિહૂદીયૈરપવાદિતોઽભવમ્|
8 ದೇವರು ಸತ್ತವರನ್ನು ಎಬ್ಬಿಸಿದ್ದು ನಂಬಲು ಅಸಾಧ್ಯವೆಂದು ನೀವು ಏಕೆ ತೀರ್ಮಾನಿಸುತ್ತೀರಿ?
ઈશ્વરો મૃતાન્ ઉત્થાપયિષ્યતીતિ વાક્યં યુષ્માકં નિકટેઽસમ્ભવં કુતો ભવેત્?
9 ಒಂದು ಕಾಲದಲ್ಲಿ ನಜರೇತಿನ ಯೇಸುವಿನ ಹೆಸರಿಗೆ ವಿರುದ್ಧವಾಗಿ ಅನೇಕ ಕಾರ್ಯಗಳನ್ನು ನಡೆಸಬೇಕೆಂದು ನಾನೂ ಯೋಚಿಸಿಕೊಂಡಿದ್ದೆನು.
નાસરતીયયીશો ર્નામ્નો વિરુદ્ધં નાનાપ્રકારપ્રતિકૂલાચરણમ્ ઉચિતમ્ ઇત્યહં મનસિ યથાર્થં વિજ્ઞાય
10 ೧೦ ಯೆರೂಸಲೇಮಿನಲ್ಲಿ ಹಾಗೆಯೇ ಮಾಡಿದ್ದೆನು. ಮುಖ್ಯಯಾಜಕರಿಂದ, ಅಧಿಕಾರವನ್ನು ಪಡೆದು ದೇವಜನರಲ್ಲಿ ಅನೇಕರನ್ನು ಸೆರೆಮನೆಗಳಲ್ಲಿ ಇರಿಸಿ, ಅವರಿಗೆ ಮರಣದ ತೀರ್ಪಾದಾಗ, ನಾನು ಅದಕ್ಕೆ ಸಮ್ಮತಿಯನ್ನು ಸೂಚಿಸಿದೆನು.
યિરૂશાલમનગરે તદકરવં ફલતઃ પ્રધાનયાજકસ્ય નિકટાત્ ક્ષમતાં પ્રાપ્ય બહૂન્ પવિત્રલોકાન્ કારાયાં બદ્ધવાન્ વિશેષતસ્તેષાં હનનસમયે તેષાં વિરુદ્ધાં નિજાં સમ્મતિં પ્રકાશિતવાન્|
11 ೧೧ ಎಲ್ಲಾ ಸಭಾಮಂದಿರಗಳಲ್ಲಿಯೂ, ನಾನು ಅನೇಕ ಸಾರಿ ಅವರನ್ನು ದಂಡಿಸಿ ಅವರಿಂದ ದೇವದೂಷಣೆಯ ಮಾತುಗಳನ್ನಾಡಿಸುವುದಕ್ಕೆ ಪ್ರಯತ್ನಿಸಿದೆನು. ಇದಲ್ಲದೆ ಅವರ ಮೇಲೆ ಬಹು ಕೋಪಾವೇಶವುಳ್ಳವನಾಗಿ ಬೇರೆ ಪಟ್ಟಣಗಳವರೆಗೂ ಹೋಗಿ, ಅವರನ್ನು ಹಿಂಸೆಪಡಿಸಿದೆನು.
વારં વારં ભજનભવનેષુ તેભ્યો દણ્ડં પ્રદત્તવાન્ બલાત્ તં ધર્મ્મં નિન્દયિતવાંશ્ચ પુનશ્ચ તાન્ પ્રતિ મહાક્રોધાદ્ ઉન્મત્તઃ સન્ વિદેશીયનગરાણિ યાવત્ તાન્ તાડિતવાન્|
12 ೧೨ ಈ ಉದ್ದೇಶದಿಂದ ನಾನು ಮುಖ್ಯಯಾಜಕರಿಂದ ಅಧಿಕಾರವನ್ನೂ, ಆದೇಶವನ್ನೂ ಹೊಂದಿ ದಮಸ್ಕಕ್ಕೆ ಹೋಗುವ ದಾರಿಯಲ್ಲಿ ರಾಜನೇ,
ઇત્થં પ્રધાનયાજકસ્ય સમીપાત્ શક્તિમ્ આજ્ઞાપત્રઞ્ચ લબ્ધ્વા દમ્મેષક્નગરં ગતવાન્|
13 ೧೩ ಮಧ್ಯಾಹ್ನದ ಹೊತ್ತಿನಲ್ಲಿ ಪರಲೋಕದಿಂದ ಒಂದು ಬೆಳಕು ನನ್ನ ಸುತ್ತಲೂ ಮತ್ತು ನನ್ನ ಜೊತೆಯಲ್ಲಿ ಪ್ರಯಾಣಮಾಡುತ್ತಿದ್ದವರ ಸುತ್ತಲೂ ಸೂರ್ಯನ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವುದನ್ನು ನಾನು ಕಂಡೆನು.
તદાહં હે રાજન્ માર્ગમધ્યે મધ્યાહ્નકાલે મમ મદીયસઙ્ગિનાં લોકાનાઞ્ચ ચતસૃષુ દિક્ષુ ગગણાત્ પ્રકાશમાનાં ભાસ્કરતોપિ તેજસ્વતીં દીપ્તિં દૃષ્ટવાન્|
14 ೧೪ ನಾವೆಲ್ಲರು ನೆಲಕ್ಕೆ ಬೀಳಲು; ‘ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವುದರಿಂದ ನಿನಗೇ ಹಾನಿಯಲ್ಲವೇ? ಎಂದು ಇಬ್ರಿಯ ಭಾಷೆಯಿಂದ ಹೇಳುವ ವಾಣಿಯನ್ನು’ ಕೇಳಿದೆನು.
તસ્માદ્ અસ્માસુ સર્વ્વેષુ ભૂમૌ પતિતેષુ સત્સુ હે શૌલ હૈ શૌલ કુતો માં તાડયસિ? કણ્ટકાનાં મુખે પાદાહનનં તવ દુઃસાધ્યમ્ ઇબ્રીયભાષયા ગદિત એતાદૃશ એકઃ શબ્દો મયા શ્રુતઃ|
15 ೧೫ ಆಗ ನಾನು; ‘ಕರ್ತನೇ, ನೀನಾರು?’ ಅನ್ನಲು ಕರ್ತನು; ‘ನೀನು ಹಿಂಸೆಪಡಿಸುವ ಯೇಸುವೇ ನಾನು.
તદાહં પૃષ્ટવાન્ હે પ્રભો કો ભવાન્? તતઃ સ કથિતવાન્ યં યીશું ત્વં તાડયસિ સોહં,
16 ೧೬ ನೀನು ಎದ್ದು, ನಿಂತುಕೋ. ನಿನ್ನನ್ನು ನನ್ನ ಸೇವಕನಾಗಿಯೂ, ಸಾಕ್ಷಿಯಾಗಿಯೂ ನೇಮಿಸುವುದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ಈಗಲೂ, ಮುಂದೆಯೂ ನಿನಗೆ ತೋರಿಸಲಿರುವ ದರ್ಶನಗಳಲ್ಲಿಯೂ, ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ನನ್ನ ಸಾಕ್ಷಿಯಾಗಿರಬೇಕು.
કિન્તુ સમુત્તિષ્ઠ ત્વં યદ્ દૃષ્ટવાન્ ઇતઃ પુનઞ્ચ યદ્યત્ ત્વાં દર્શયિષ્યામિ તેષાં સર્વ્વેષાં કાર્ય્યાણાં ત્વાં સાક્ષિણં મમ સેવકઞ્ચ કર્ત્તુમ્ દર્શનમ્ અદામ્|
17 ೧೭ ನಾನು ನಿನ್ನ ಸ್ವಂತ ಜನರಿಂದಲೂ, ಅನ್ಯಜನರಿಂದಲೂ ನಿನ್ನನ್ನು ರಕ್ಷಿಸುವೆನು.
વિશેષતો યિહૂદીયલોકેભ્યો ભિન્નજાતીયેભ્યશ્ચ ત્વાં મનોનીતં કૃત્વા તેષાં યથા પાપમોચનં ભવતિ
18 ೧೮ ಅವರು ಕತ್ತಲೆಯಿಂದ ಬೆಳಕಿಗೂ, ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು, ನನ್ನಲ್ಲಿ ನಂಬಿಕೆಯಿಡುವುದರಿಂದ ಪಾಪಕ್ಷಮಾಪಣೆಯನ್ನೂ, ಪರಿಶುದ್ಧರೊಂದಿಗೆ ಹಕ್ಕನ್ನೂ ಹೊಂದುವಂತೆ, ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ’ ಅಂದನು.
યથા તે મયિ વિશ્વસ્ય પવિત્રીકૃતાનાં મધ્યે ભાગં પ્રાપ્નુવન્તિ તદભિપ્રાયેણ તેષાં જ્ઞાનચક્ષૂંષિ પ્રસન્નાનિ કર્ત્તું તથાન્ધકારાદ્ દીપ્તિં પ્રતિ શૈતાનાધિકારાચ્ચ ઈશ્વરં પ્રતિ મતીઃ પરાવર્ત્તયિતું તેષાં સમીપં ત્વાં પ્રેષ્યામિ|
19 ೧೯ ಆದಕಾರಣ ಅಗ್ರಿಪ್ಪರಾಜನೇ, ಪರಲೋಕದಿಂದ ನನಗೆ ಉಂಟಾದ ಆ ದರ್ಶನಕ್ಕೆ ನಾನು ಅವಿಧೇಯನಾಗದೆ ಮೊದಲು ದಮಸ್ಕದವರಿಗೆ,
હે આગ્રિપ્પરાજ એતાદૃશં સ્વર્ગીયપ્રત્યાદેશં અગ્રાહ્યમ્ અકૃત્વાહં
20 ೨೦ ಆಮೇಲೆ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸೀಮೆಯಲ್ಲಿಯೂ ಇರುವವರಿಗೆ ಮತ್ತು ಅನ್ಯಜನರಿಗೆ ಸಹ; ನೀವು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ, ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳನ್ನು ಮಾಡಬೇಕೆಂತಲೂ ಸಾರಿದೆನು.
પ્રથમતો દમ્મેષક્નગરે તતો યિરૂશાલમિ સર્વ્વસ્મિન્ યિહૂદીયદેશે અન્યેષુ દેશેષુ ચ યેન લોકા મતિં પરાવર્ત્ત્ય ઈશ્વરં પ્રતિ પરાવર્ત્તયન્તે, મનઃપરાવર્ત્તનયોગ્યાનિ કર્મ્માણિ ચ કુર્વ્વન્તિ તાદૃશમ્ ઉપદેશં પ્રચારિતવાન્|
21 ೨೧ ಈ ಕಾರಣದಿಂದ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನು ಹಿಡಿದು ಕೊಲ್ಲುವುದಕ್ಕೆ ಪ್ರಯತ್ನಿಸಿದರು.
એતત્કારણાદ્ યિહૂદીયા મધ્યેમન્દિરં માં ધૃત્વા હન્તુમ્ ઉદ્યતાઃ|
22 ೨೨ ಆದರೆ ನಾನು ದೇವರಿಂದ ಸಹಾಯವನ್ನು ಪಡೆದು ಈ ದಿನದವರೆಗೂ ಸುರಕ್ಷಿತವಾಗಿದ್ದು ಚಿಕ್ಕವರಿಗೂ, ದೊಡ್ಡವರಿಗೂ ಸಾಕ್ಷಿಹೇಳುವವನಾಗಿದ್ದೇನೆ. ಪ್ರವಾದಿಗಳೂ, ಮೋಶೆಯೂ ಮುಂದೆ ಆಗುವುದನ್ನು ಕುರಿತು ತಿಳಿಸಿದ ಸಂಗತಿಗಳನ್ನೇ, ಹೊರತು ನಾನು ಇನ್ನೇನೂ ಹೇಳುವವನಲ್ಲ.
તથાપિ ખ્રીષ્ટો દુઃખં ભુક્ત્વા સર્વ્વેષાં પૂર્વ્વં શ્મશાનાદ્ ઉત્થાય નિજદેશીયાનાં ભિન્નદેશીયાનાઞ્ચ સમીપે દીપ્તિં પ્રકાશયિષ્યતિ
23 ೨೩ ಆ ಸಂಗತಿಗಳು ಏನೆಂದರೆ; ಕ್ರಿಸ್ತನು ಬಾಧೆಪಟ್ಟು ಸಾಯಬೇಕಾದವನು ಮತ್ತು ಆತನು ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದು ಯೆಹೂದ್ಯರಿಗೂ, ಅನ್ಯಜನರಿಗೂ ಬೆಳಕನ್ನು ಪ್ರಸಿದ್ಧಿಪಡಿಸುವವನಾಗಿರುವನು” ಎಂಬುದೇ.
ભવિષ્યદ્વાદિગણો મૂસાશ્ચ ભાવિકાર્ય્યસ્ય યદિદં પ્રમાણમ્ અદદુરેતદ્ વિનાન્યાં કથાં ન કથયિત્વા ઈશ્વરાદ્ અનુગ્રહં લબ્ધ્વા મહતાં ક્ષુદ્રાણાઞ્ચ સર્વ્વેષાં સમીપે પ્રમાણં દત્ત્વાદ્ય યાવત્ તિષ્ઠામિ|
24 ೨೪ ಹೀಗೆ ಪೌಲನು ಪ್ರತಿವಾದ ಮಾಡುತ್ತಿದ್ದಾಗ, ಫೆಸ್ತನು ಮಹಾಶಬ್ದದಿಂದ; “ಪೌಲನೇ, ನಿನಗೆ ಹುಚ್ಚು ಹಿಡಿದಿದೆ; ಅಧಿಕ ಪಾಂಡಿತ್ಯ ನಿನ್ನನ್ನು ಹುಚ್ಚನನ್ನಾಗಿಸಿದೆ,” ಎಂದು ಹೇಳಿದನು.
તસ્યમાં કથાં નિશમ્ય ફીષ્ટ ઉચ્ચૈઃ સ્વરેણ કથિતવાન્ હે પૌલ ત્વમ્ ઉન્મત્તોસિ બહુવિદ્યાભ્યાસેન ત્વં હતજ્ઞાનો જાતઃ|
25 ೨೫ ಅದಕ್ಕೆ ಪೌಲನು; “ಮಹಾ ಶ್ರೇಷ್ಠನಾದ ಫೆಸ್ತನೇ, ನಾನು ಹುಚ್ಚನಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನೇ ಹೇಳುತ್ತಿದ್ದೇನೆ.
સ ઉક્તવાન્ હે મહામહિમ ફીષ્ટ નાહમ્ ઉન્મત્તઃ કિન્તુ સત્યં વિવેચનીયઞ્ચ વાક્યં પ્રસ્તૌમિ|
26 ೨೬ ಅಗ್ರಿಪ್ಪರಾಜನು ಈ ಸಂಗತಿಗಳನ್ನೆಲ್ಲಾ ತಿಳಿದವನು; ಆದುದರಿಂದ, ಅವನ ಮುಂದೆ ಧೈರ್ಯವಾಗಿ ಮಾತನಾಡುತ್ತೇನೆ. ಇವುಗಳಲ್ಲಿ ಒಂದಾದರೂ ಅವನಿಗೆ ಮುಚ್ಚುಮರೆಯಾದುದಲ್ಲವೆಂದು ನಂಬಿದ್ದೇನೆ, ಏಕೆಂದರೆ ಇದು ಒಂದು ಮೂಲೆಯಲ್ಲಿ ನಡೆದ ಕಾರ್ಯವಲ್ಲ.
યસ્ય સાક્ષાદ્ અક્ષોભઃ સન્ કથાં કથયામિ સ રાજા તદ્વૃત્તાન્તં જાનાતિ તસ્ય સમીપે કિમપિ ગુપ્તં નેતિ મયા નિશ્ચિતં બુધ્યતે યતસ્તદ્ વિજને ન કૃતં|
27 ೨೭ ಅಗ್ರಿಪ್ಪರಾಜನೇ, ಪ್ರವಾದಿಗಳಲ್ಲಿ ನಿನಗೆ ನಂಬಿಕೆಯುಂಟೋ?” ಉಂಟೆಂದು ನಾನು ಬಲ್ಲೆನು ಅಂದನು.
હે આગ્રિપ્પરાજ ભવાન્ કિં ભવિષ્યદ્વાદિગણોક્તાનિ વાક્યાનિ પ્રત્યેતિ? ભવાન્ પ્રત્યેતિ તદહં જાનામિ|
28 ೨೮ ಅದಕ್ಕೆ ಅಗ್ರಿಪ್ಪನು; “ಅಲ್ಪಪ್ರಯತ್ನದಿಂದ, ನನ್ನನ್ನು ಕ್ರೈಸ್ತನಾಗುವುದಕ್ಕೆ ಒಡಂಬಡಿಸುತ್ತೀಯಾ?” ಎಂದು ಹೇಳಲು
તત આગ્રિપ્પઃ પૌલમ્ અભિહિતવાન્ ત્વં પ્રવૃત્તિં જનયિત્વા પ્રાયેણ મામપિ ખ્રીષ્ટીયં કરોષિ|
29 ೨೯ ಪೌಲನು; “ಅಲ್ಪಪ್ರಯತ್ನದಿಂದಾಗಲಿ, ಅಧಿಕ ಪ್ರಯತ್ನದಿಂದಾಗಲಿ ನೀನು ಮಾತ್ರವಲ್ಲದೆ ಈಹೊತ್ತು ನನ್ನ ಮಾತುಗಳನ್ನು ಕೇಳುವವರೆಲ್ಲರೂ, ಈ ಬೇಡಿಗಳ ಹೊರತು, ನನ್ನಂತೆ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ” ಅಂದನು.
તતઃ સોઽવાદીત્ ભવાન્ યે યે લોકાશ્ચ મમ કથામ્ અદ્ય શૃણ્વન્તિ પ્રાયેણ ઇતિ નહિ કિન્ત્વેતત્ શૃઙ્ખલબન્ધનં વિના સર્વ્વથા તે સર્વ્વે માદૃશા ભવન્ત્વિતીશ્વસ્ય સમીપે પ્રાર્થયેઽહમ્|
30 ೩೦ ಆ ಮೇಲೆ ರಾಜನೂ, ದೇಶಾಧಿಪತಿಯೂ ಮತ್ತು ಬೆರ್ನಿಕೆಯೂ ಅವರ ಸಂಗಡ ಕುಳಿತಿದ್ದವರೂ, ಎದ್ದು ಹೊರಗೆ ಹೋಗಿ;
એતસ્યાં કથાયાં કથિતાયાં સ રાજા સોઽધિપતિ ર્બર્ણીકી સભાસ્થા લોકાશ્ચ તસ્માદ્ ઉત્થાય
31 ೩೧ “ಈ ಮನುಷ್ಯನು ಮರಣದಂಡನೆಗಾಗಲಿ, ಬೇಡಿಗಾಗಲಿ ಆಧಾರವಾದದ್ದೇನೂ ಮಾಡಿದವನಲ್ಲ” ಎಂಬುದಾಗಿ ತಮ್ಮ ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
ગોપને પરસ્પરં વિવિચ્ય કથિતવન્ત એષ જનો બન્ધનાર્હં પ્રાણહનનાર્હં વા કિમપિ કર્મ્મ નાકરોત્|
32 ೩೨ ಅಗ್ರಿಪ್ಪನು ಫೆಸ್ತನಿಗೆ; “ಈ ಮನುಷ್ಯನು ಕೈಸರನಿಗೆ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡುಗಡೆ ಮಾಡಬಹುದಿತ್ತು” ಎಂದು ಹೇಳಿದನು.
તત આગ્રિપ્પઃ ફીષ્ટમ્ અવદત્, યદ્યેષ માનુષઃ કૈસરસ્ય નિકટે વિચારિતો ભવિતું ન પ્રાર્થયિષ્યત્ તર્હિ મુક્તો ભવિતુમ્ અશક્ષ્યત્|

< ಅಪೊಸ್ತಲರ ಕೃತ್ಯಗಳ 26 >