< ಅರಸುಗಳು - ದ್ವಿತೀಯ ಭಾಗ 6 >

1 ಒಂದು ದಿನ ಪ್ರವಾದಿಮಂಡಳಿಯವರು ಎಲೀಷನಿಗೆ, “ನಾವು ನಿನ್ನ ಜೊತೆಯಲ್ಲಿ ವಾಸಿಸುತ್ತಿರುವ ಈ ಸ್ಥಳವು ಬಹಳ ಇಕ್ಕಟ್ಟಾಗಿದೆ.
ပရောဖက် အမျိုးသား တို့က၊ ကိုယ်တော် နှင့်အတူ ယခု နေ သောအရပ် သည် ကျဉ်းမြောင်း ပါ၏
2 ಆದುದರಿಂದ ನಾವು ಯೊರ್ದನಿಗೆ ಹೋಗಿ, ಅಲ್ಲಿ ಪ್ರತಿಯೊಬ್ಬನೂ ಒಂದೊಂದು ತೊಲೆಯನ್ನು ಕಡಿದುಕೊಂಡು ಬಂದು, ನಮ್ಮ ವಾಸಕ್ಕಾಗಿ ಒಂದು ಮನೆಯನ್ನು ಮಾಡಿಕೊಳ್ಳೋಣ” ಎಂದರು. ಎಲೀಷನು ಅವರಿಗೆ, “ಹೋಗಿಬನ್ನಿರಿ” ಎಂದು ಹೇಳಿದನು.
အကျွန်ုပ် တို့သည် ယော်ဒန် မြစ်နား သို့ သွား ပါ ရစေ။ ထို အရပ်၌ ဝိုင်း၍ သစ်သားကိုခုတ်ပြီးလျှင်၊ ကိုယ်နေ စရာဘို့ လုပ် ပါရစေဟု ဧလိရှဲ ထံ ၌ အခွင့်တောင်း လျှင်၊ သွား ကြလော့ဟု အခွင့် ပေး၏
3 ಅವರಲ್ಲೊಬ್ಬನು, “ದಯವಿಟ್ಟು ನೀನೂ, ನಿನ್ನ ಸೇವಕರು ನಮ್ಮ ಜೊತೆಯಲ್ಲಿ ಬರಬೇಕು” ಎಂದು ಬೇಡಿಕೊಂಡನು. ಅದಕ್ಕೆ ಎಲೀಷನು, “ಬರುತ್ತೇನೆ” ಎಂದು ಹೇಳಿ ಅವರೊಡನೆ ಹೊರಟನು.
အချို့ကလည်း မ ငြင်းပါနှင့်။ ကိုယ်တော် ကျွန် တို့နှင့် ကြွ တော်မူပါဟု တောင်းပန် လျှင် ၊ ငါ သွား မည်ဟု ဝန်ခံ သည်အတိုင်း၊ “
4 ಅವರು ಯೊರ್ದನಿಗೆ ಹೋಗಿ ಮರಗಳನ್ನು ಕಡಿಯುತ್ತಿರುವಾಗ,
သူ တို့နှင့်အတူ လိုက် လေ၏။ ယော်ဒန် မြစ်နား သို့ ရောက် သောအခါ သစ်သား ကိုခုတ် ကြ၏
5 ಒಬ್ಬನ ಕೊಡಲಿಯು ಕೈಜಾರಿ ನೀರೊಳಗೆ ಬಿದ್ದಿತು. ಆಗ ಅವನು, “ಅಯ್ಯೋ, ಸ್ವಾಮಿ ನಾನು ಅದನ್ನು ಸಾಲವಾಗಿ ತಂದಿದ್ದೆನು” ಎಂದು ಕೂಗಿದನು.
တယောက် သောသူသည် ခုတ် စဉ်တွင် ၊ ရေ ထဲသို့ ပုဆိန် ကျ ၏။ ခုတ်သောသူကလည်း၊ ခက်လှပြီသခင်။ ထို” ပုဆိန်သည် ငှါး ခဲ့သောဥစ္စာ ဖြစ်ပါ၏ဟု အော်ဟစ် လျှင်၊ “
6 ದೇವರ ಮನುಷ್ಯನು ಅವನಿಗೆ, “ಅದು ಎಲ್ಲಿ ಬಿದ್ದಿತು?” ಎಂದು ಕೇಳಲು, ಅದು ಬಿದ್ದ ಸ್ಥಳವನ್ನು ಅವನು ತೋರಿಸಿದನು. ಆಗ ದೇವರ ಮನುಷ್ಯನು ಮರದಿಂದ ಒಂದು ತುಂಡು ಕಟ್ಟಿಗೆಯನ್ನು ಮುರಿದು ಅಲ್ಲಿ ಹಾಕಿದನು, ಕೂಡಲೆ ಕೊಡಲಿಯು ಮೇಲಕ್ಕೆ ಬಂದು ತೇಲಾಡಿತು.
ဘုရားသခင် ၏လူ က၊ အဘယ် မှာကျ သနည်းဟုမေး သော် ၊ ကျရာအရပ် ကိုပြ ပြီးမှ၊ ဒုတ် ကိုခုတ် ၍ ထို အရပ်၌ ချ သဖြင့် ပုဆိန် သည် ပေါ လောနေ၏
7 ಎಲೀಷನು “ಅದನ್ನು ತೆಗೆದುಕೋ” ಎಂದು ಆಜ್ಞಾಪಿಸಲು ಆ ಮನುಷ್ಯನು ಕೈಚಾಚಿ ಅದನ್ನು ತೆಗೆದುಕೊಂಡನು.
ဆယ်ယူ လော့ဟု ဧလိရှဲဆို သည်အတိုင်း ၊ တပည့် သည် လက် ကို ဆန့် ၍ ဆယ်ယူ ၏
8 ಅರಾಮ್ಯರ ಅರಸನು ಇಸ್ರಾಯೇಲರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನು. ಅವನು ತನ್ನ ಸೇನಾಧಿಪತಿಗಳಿಗೆ, “ಯುದ್ಧದಲ್ಲಿ ಹೊಂಚುಹಾಕತಕ್ಕ ಸ್ಥಳವನ್ನು ಗೊತ್ತುಮಾಡಬೇಕು” ಎಂದನು.
တဖန် ရှုရိ ရှင် ဘုရင်သည် ဣသရေလ ပြည်ကို စစ် တိုက်၍ ၊ ဤ မည်သောအရပ် ၌ ငါ တို့သည် တပ်ချ ကြ ကုန်အံ့ဟု ကျွန် တို့နှင့် တိုင်ပင် သောအခါ၊””
9 ದೇವರ ಮನುಷ್ಯನು ಇಸ್ರಾಯೇಲರ ಅರಸನಿಗೆ, “ಜಾಗರೂಕತೆಯಿಂದಿರಿ, ನೀವು ಇಂಥಿಂಥ ಸ್ಥಳದಲ್ಲಿ ಹೋಗಬಾರದು. ಅಲ್ಲಿ ಅರಾಮ್ಯರು ಅಡಗಿಕೊಂಡಿದ್ದಾರೆ” ಎಂದು ತಿಳಿಸುತ್ತಿದ್ದನು.
ဘုရားသခင် ၏လူ သည် ဣသရေလ ရှင်ဘုရင် ထံသို့ လူကိုစေလွှတ် ၍ ၊ ဤ မည်သောအရပ် ကို သတိ ပြုပါ။ ထို အရပ်သို့ ရှုရိ လူတို့သည် လာ ကြပြီဟု၊”
10 ೧೦ ದೇವರ ಮನುಷ್ಯನು ಸೂಚಿಸುವ ಎಲ್ಲಾ ಸ್ಥಳಗಳಿಗೂ ಇಸ್ರಾಯೇಲರ ಅರಸನು ಹೇಳಿ ಕಳುಹಿಸುತ್ತಿದ್ದನು. ಹೀಗೆ ಅವನು ಹಲವು ಸಾರಿ ಅರಾಮ್ಯರ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡನು.
၁၀သတိ ပေးသောအရပ် သို့ ဣသရေလ ရှင် ဘုရင် သည် လူ ကိုစေလွှတ် ၍ တကြိမ် နှစ်ကြိမ် မက ရန်သူတို့ကို ရှောင် လေ၏
11 ೧೧ ಇದರ ದೆಸೆಯಿಂದ ಅರಾಮ್ಯರ ಅರಸನು ಕಳವಳಗೊಂಡು ತನ್ನ ಸೇನಾಧಿಪತಿಗಳನ್ನು ಕರೆದು ಅವರನ್ನು, “ನಮ್ಮವರಲ್ಲಿ ಇಸ್ರಾಯೇಲರ ಅರಸನ ಪಕ್ಷದವರು ಯಾರು? ನನಗೆ ತಿಳಿಸುವುದಿಲ್ಲವೋ” ಎಂದು ಕೇಳಿದನು.
၁၁ထို အကြောင်း ကြောင့် ရှုရိ ရှင် ဘုရင်သည် စိတ် ပူပန် ၍ ကျွန် တို့ကို ခေါ် ပြီးလျှင် ၊ ငါ တို့တွင် အဘယ်သူ သည် ဣသရေလ ရှင်ဘုရင် ဘက်၌ နေသည်ကို ငါ့ အား မ ပြ ဘဲနေကြသနည်း ဟုမေး သော်၊
12 ೧೨ ಆಗ ಅವರಲ್ಲೊಬ್ಬನು ಅವನಿಗೆ, “ನನ್ನ ಒಡೆಯನಾದ ಅರಸನೇ, ಹಾಗಲ್ಲ, ಇಸ್ರಾಯೇಲರಲ್ಲಿ ಎಲೀಷನೆಂಬ ಒಬ್ಬ ಪ್ರವಾದಿಯಿರುತ್ತಾನೆ. ನೀನು ನಿನ್ನ ಮಲಗುವ ಕೋಣೆಯಲ್ಲಿ ಆಡುವ ಮಾತುಗಳನ್ನು ಸಹ ಅವನು ಅರಿತುಕೊಂಡು ಎಲ್ಲವನ್ನೂ ಇಸ್ರಾಯೇಲರ ಅರಸನಿಗೆ ತಿಳಿಸುತ್ತಾನೆ” ಎಂದನು.
၁၂ကျွန် တယောက် က ၊ ထိုသို့မ ဟုတ်ပါ အရှင် မင်းကြီး ၊ ကိုယ်တော် စက် တော်မူခန်း ထဲ ၌မိန့် တော်မူသော စကား ကိုပင်၊ ဣသရေလ ပြည်၌ ရှိသောပရောဖက် ဧလိရှဲ သည်၊ ဣသရေလ ရှင်ဘုရင် အား ပြန် ပြောတတ်ပါသည် ဟု လျှောက် လေ၏
13 ೧೩ ಅರಸನು ಇದನ್ನು ಕೇಳಿ, “ಎಲೀಷನು ಎಲ್ಲಿರುತ್ತಾನೆ ಎಂದು ವಿಚಾರಿಸಿರಿ. ನಾನು ಅವನನ್ನು ಹಿಡಿಸುತ್ತೇನೆ” ಎಂದು ಹೇಳಿದನು. “ಪ್ರವಾದಿಯು ದೋತಾನಿನಲ್ಲಿ ಇರುತ್ತಾನೆ” ಎಂದು ಅರಸನು ತಿಳಿದುಕೊಂಡನು.
၁၃ရှင် ဘုရင်ကလည်း ၊ သူ သည်အဘယ် အရပ်၌ ရှိသည်ကို သွား ၍ ချောင်းကြည့် လော့။ သူ့ ကို ဘမ်းဆီး စေခြင်းငှါ ငါစေလွှတ် မည်ဟု မိန့် တော်မူပြီးမှ ၊ ဒေါသန် မြို့ ၌ ရှိပါသည်ဟု လျှောက် လေ၏
14 ೧೪ ಆಗ ಅರಸನು ರಥರಥಾಶ್ವ ಸಹಿತವಾದ ಮಹಾಸೈನ್ಯವನ್ನು ದೋತಾನಿಗೆ ಕಳುಹಿಸಿದನು. ಸೈನ್ಯದವರು ರಾತ್ರಿಯಲ್ಲಿ ಆ ಪಟ್ಟಣವನ್ನು ಸಮೀಪಿಸಿ ಅದಕ್ಕೆ ಮುತ್ತಿಗೆ ಹಾಕಿದರು.
၁၄ထို မြို့သို့ မြင်း စီးသူရဲ၊ ရထား စီးသူရဲ၊ ဗိုလ်ခြေ များ ကို စေလွှတ် သဖြင့် ၊ ညဉ့် အခါရောက် ၍ မြို့ ကို ဝိုင်း ကြ၏
15 ೧೫ ದೇವರ ಮನುಷ್ಯನ ಸೇವಕನು ಬೆಳಿಗ್ಗೆ ಎದ್ದು ಹೊರಗೆ ಬಂದು ನೋಡಿದಾಗ ರಥರಥಾಶ್ವಸಹಿತವಾದ ಮಹಾಸೈನ್ಯವು ಬಂದು ಪಟ್ಟಣದ ಸುತ್ತಲೂ ನಿಂತಿರುವುದನ್ನು ಕಂಡು ತನ್ನ ಯಜಮಾನನಿಗೆ, “ಅಯ್ಯೋ, ಸ್ವಾಮಿ ನಾವು ಏನು ಮಾಡೋಣ?” ಎಂದನು.
၁၅နံနက်စောစောဘုရား သခင့်လူ ၏ ကျွန် သည် ထ ၍ ပြင်သို့ ထွက် သောအခါ ၊ မြင်း စီးသူရဲ၊ ရထား စီးသူရဲ၊ ဗိုလ်ခြေ တို့သည် မြို့ ကို ဝိုင်း လျက် ရှိကြသည်ဖြစ်၍၊ အိုသခင် ၊ အဘယ်သို့ ပြု ရပါမည်နည်းဟု မိမိ သခင် အား ဆို ၏
16 ೧೬ ಆಗ ಎಲೀಷನು ಅವನಿಗೆ, “ಹೆದರಬೇಡ, ಅವರ ಕಡೆಯಲ್ಲಿರುವವರಿಗಿಂತಲೂ, ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ” ಎಂದು ಹೇಳಿ,
၁၆ဧလိရှဲကမ စိုးရိမ် နှင့်။ ငါ တို့ဘက် ၌ နေသောသူတို့ သည် ရန်သူ တို့ဘက် ၌ နေသော သူတို့ထက်သာ၍ များ ကြသည်ဟု ဆို လျက်၊ “
17 ೧೭ “ಯೆಹೋವನೇ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ” ಎಂದು ಪ್ರಾರ್ಥಿಸಲು ಯೆಹೋವನು ಅವನ ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥಾರಥಾಶ್ವಗಳು ಆ ಸೇವಕನಿಗೆ ಕಂಡವು.
၁၇အိုထာဝရဘုရား ၊ ဤသူသည် မြင် နိုင်မည် အကြောင်း သူ ၏မျက်စိ ကို ဖွင့် တော်မူပါဟု ဆုတောင်း သည်အတိုင်း ၊ ထာဝရဘုရား သည် ထိုလုလင် ၏ မျက်စိ ကို ဖွင့် တော်မူသဖြင့် ၊ ဧလိရှဲ ပတ်လည် ၌ တတောင် လုံး သည်မီး မြင်း ၊ မီးရထား နှင့် ပြည့် သည်ကို မြင် လေ၏
18 ೧೮ ಶತ್ರುಗಳಾದ ಅರಾಮ್ಯರು ಸಮೀಪಕ್ಕೆ ಬಂದಾಗ ಎಲೀಷನು, “ಸ್ವಾಮಿ, ಈ ಜನರನ್ನು ಕುರುಡರನ್ನಾಗಿ ಮಾಡು” ಎಂದು ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ಅವನ ಮೊರೆಯನ್ನು ಲಾಲಿಸಿ ಅವರನ್ನು ಕುರುಡರನ್ನಾಗಿ ಮಾಡಿದನು.
၁၈ရှုရိလူ တို့သည် ရောက် လာသောအခါ ၊ ဧလိရှဲ က၊ အိုထာဝရ ဘုရား ၊ ဤ သူ တို့၏ မျက်စိ မမြင်စေခြင်းငှါ ၊ ဒဏ်ခတ် တော်မူပါဟု ဆုတောင်း သည်အတိုင်း ၊ ဒဏ်ခတ် တော်မူ၏
19 ೧೯ ಆಗ ಎಲೀಷನು ಅವರಿಗೆ, “ನೀವು ಹೋಗಬೇಕೆಂದಿದ್ದ ಪಟ್ಟಣವೂ, ದಾರಿಯೂ ಇದಲ್ಲ, ನನ್ನ ಜೊತೆಯಲ್ಲಿ ಬನ್ನಿರಿ, ನೀವು ಹುಡುಕುತ್ತಿರುವ ಮನುಷ್ಯನ ಬಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ ಅವರನ್ನು ಸಮಾರ್ಯಕ್ಕೆ ಕರೆದುಕೊಂಡು ಹೋದನು.
၁၉ဧလိရှဲ ကလည်း ၊ ဤ လမ်း မ ဟုတ်။ ဤ မြို့ လည်း မ ဟုတ်။ ငါ့ နောက် သို့လိုက် ကြ။ သင်တို့ရှာ သောသူ ရှိရာသို့ ငါပို့ မည်ဟု ဆို လျက် ရှမာရိ မြို့သို့ ပို့ လေ၏
20 ೨೦ ಅವರು ಸಮಾರ್ಯದೊಳಗೆ ಬಂದಾಗ ಎಲೀಷನು, “ಇವರು ನೋಡುವಂತೆ ಇವರ ಕಣ್ಣುಗಳನ್ನು ತೆರೆ” ಎಂದು ಯೆಹೋವನನ್ನು ಬೇಡಿಕೊಂಡದ್ದರಿಂದ ಆತನು ಅವರ ಕಣ್ಣುಗಳನ್ನು ತೆರೆದನು. ಆಗ ಅವರಿಗೆ ತಾವು ಸಮಾರ್ಯದಲ್ಲಿದ್ದೇವೆಂದು ತಿಳಿದುಬಂತು.
၂၀မြို့ထဲသို့ ရောက် ပြီးမှ ဧလိရှဲ က၊ အိုထာဝရဘုရား ၊ ဤသူတို့သည် မြင် နိုင်မည်အကြောင်း သူ တို့၏ မျက်စိ ကို ဖွင့် တော်မူပါဟု ဆုတောင်းသည်အတိုင်း၊ သူ တို့၏မျက်စိ ကို ဖွင့် တော်မူသဖြင့် ၊ သူတို့သည် မြင် ၍ ရှမာရိ မြို့ထဲမှာ ရှိ သည်ဟု သိကြ၏
21 ೨೧ ಇಸ್ರಾಯೇಲರ ಅರಸನು ಅವರನ್ನು ಕಂಡು ಎಲೀಷನಿಗೆ, “ಅಪ್ಪಾ, ನಾನು ಇವರನ್ನು ಸಂಹರಿಸಿ ಬಿಡಲೋ? ಸಂಹರಿಸಲೇ?” ಎಂದು ಕೇಳಿದನು.
၂၁ဣသရေလ ရှင်ဘုရင် ကလည်း ၊ အဘ ၊ ထိုသူ တို့ကိုထားနှင့် သတ် ရပါမည်လော ဟု ဧလိရှဲ အား မေး လျှင်၊
22 ೨೨ ಅದಕ್ಕೆ ಅವನು, “ಇವರನ್ನು ನೀನು ಸಂಹರಿಸಬೇಡ, ಕತ್ತಿಬಿಲ್ಲುಗಳಿಂದ ಸ್ವಾಧೀನಪಡಿಸಿಕೊಂಡು ಸೆರೆಯಾಗಿ ತಂದವರನ್ನು ನೀನು ಸಂಹರಿಸುವೆಯೋ? ಇವರಿಗೆ ಅನ್ನಪಾನಗಳನ್ನು ಕೊಡು, ಉಂಡು ಕುಡಿದು ತಮ್ಮ ಯಜಮಾನನ ಬಳಿಗೆ ಹಿಂದಿರುಗಿ ಹೋಗಲಿ” ಎಂದು ಉತ್ತರಕೊಟ್ಟನು.
၂၂မ သတ် ပါနှင့်။ ထား နှင့် ခုတ် လျက် ၊ လေး နှင့် ပစ်လျက်စစ်တိုက်၍ ဘမ်းမိသောသူတို့ကိုသတ် ရမည် လော။ သူတို့ရှေ့မှာ မုန့် နှင့် ရေ ကိုထည့် ၍သူတို့သည် စား သောက် ပြီးမှ ၊ မိမိ တို့သခင် ထံသို့ သွား ပါစေဟု ဆို လျှင်၊
23 ೨೩ ಆಗ ಅರಸನು ಅವರಿಗಾಗಿ ಒಂದು ದೊಡ್ಡ ಔತಣವನ್ನು ಮಾಡಿಸಿ ಅವರು ಅನ್ನ ಪಾನಗಳನ್ನು ತೆಗೆದುಕೊಂಡಾದ ಮೇಲೆ ಅವರನ್ನು ಅವರ ಯಜಮಾನನ ಬಳಿಗೆ ಕಳುಹಿಸಿದನು. ಅಂದಿನಿಂದ ಸುಲಿಗೆ ಮಾಡುವ ಅರಾಮ್ಯರ ಗುಂಪುಗಳು ಇಸ್ರಾಯೇಲರ ಪ್ರಾಂತ್ಯದೊಳಗೆ ಮತ್ತೆ ಬರಲೇ ಇಲ್ಲ.
၂၃များ စွာသော စားစရာ ကို ပြင်ဆင် ၍ စား သောက် စေပြီးမှ လွှတ် လိုက်သဖြင့် ၊ သူတို့သည် မိမိ တို့ သခင် ထံသို့ ပြန် သွားကြ၏။ ထိုနောက်မှရှုရိ လူ တို့သည် အလို အလျောက်တပ်ဖွဲ့၍ ဣသရေလ ပြည် သို့ မ လာ ကြ
24 ೨೪ ಆ ನಂತರ ಅರಾಮ್ಯರ ಅರಸನಾದ ಬೆನ್ಹದದನು ತನ್ನ ಎಲ್ಲಾ ಸೈನ್ಯವನ್ನು ಕೂಡಿಸಿಕೊಂಡು ಬಂದು ಸಮಾರ್ಯಕ್ಕೆ ಮುತ್ತಿಗೆ ಹಾಕಿದನು.
၂၄နောက် တဖန်ရှုရိ ရှင်ဘုရင် ဗင်္ဟာဒဒ် သည် ဗိုလ်ခြေ အပေါင်း ကို စုဝေး စေသဖြင့် စစ်ချီ ၍ ရှမာရိ မြို့ကို ဝိုင်း ထား၏
25 ೨೫ ಆಗ ಸಮಾರ್ಯ ಪಟ್ಟಣದಲ್ಲಿ ಘೋರವಾದ ಬರವಿದ್ದಿತು. ಮುತ್ತಿಗೆಯ ದೆಸೆಯಿಂದ ಅದು ಮತ್ತಷ್ಟು ಘೋರವಾಗಿದ್ದುದರಿಂದ ಒಂದು ಕತ್ತೆಯ ತಲೆಗೆ ಎಂಭತ್ತು ರೂಪಾಯಿಗಳೂ, ಅರ್ಧ ಸೇರು ಪಾರಿವಾಳದ ಮಲವು ಐದು ರೂಪಾಯಿಗಳಿಗೂ ಮಾರಲ್ಪಟ್ಟವು.
၂၅ကြာမြင့်စွာဝိုင်း ထားသောကြောင့် ၊ ရှမာရိ မြို့၌ အလွန် အစာခေါင်းပါး ၍ ၊ မြည်း ခေါင်း တလုံးကို ငွေ ရှစ် ဆယ်နှင့် ၎င်း၊ ပဲကြမ်း တ ပြည်ကို ငွေ ငါး ကျပ်နှင့် ၎င်း ရောင်းရ ၏
26 ೨೬ ಒಂದು ದಿನ ಇಸ್ರಾಯೇಲರ ಅರಸನು ಪೌಳಿಗೋಡೆಯ ಮೇಲೆ ಹಾದುಹೋಗುತ್ತಿರುವಾಗ, ಒಬ್ಬ ಸ್ತ್ರೀಯು, “ಅರಸನೇ, ನನ್ನ ಒಡೆಯನೇ, ನನ್ನನ್ನು ರಕ್ಷಿಸು” ಎಂದು ಮೊರೆಯಿಟ್ಟಳು.
၂၆ဣသရေလ ရှင် ဘုရင်သည် မြို့ရိုး ပေါ် မှာ ရှောက်သွား စဉ်၊ မိန်းမ တယောက်ကအရှင် မင်းကြီး ၊ ကယ်မ တော်မူပါဟု အော်ဟစ် ၏
27 ೨೭ ಅರಸನು ಆಕೆಗೆ, “ಯೆಹೋವನು ನಿನ್ನನ್ನು ರಕ್ಷಿಸದಿದ್ದರೆ ನಾನು ಹೇಗೆ ರಕ್ಷಿಸಬಹುದು? ಕಣದಲ್ಲಾಗಲಿ, ದ್ರಾಕ್ಷಿ ಆಲೆಯಲ್ಲಾಗಲಿ ಏನಾದರೂ ಉಂಟೋ” ಎಂದು ಕೇಳಿ,
၂၇ရှင်ဘုရင်က၊ ထာဝရဘုရား ကယ်မ တော်မ မူလျှင် ၊ ငါသည် အဘယ်သို့ ကယ်မ နိုင်မည်နည်း။ စပါး နယ်ရာတလင်း၊ စပျစ်သီး နယ်ရာ ကျင်းထဲက ကယ်မရမည်လော ဟူ၍၎င်း၊”
28 ೨೮ “ನಿನಗಿರುವ ದುಃಖ ಯಾವುದು” ಎಂದು ಅರಸನು ಕೇಳಿದನು. ಆಗ ಆಕೆಯು, “ಈ ಸ್ತ್ರೀಯು ನನಗೆ, ನಿನ್ನ ಮಗನನ್ನು ತೆಗೆದುಕೊಂಡು ಬಾ, ನಾವು ಈ ಹೊತ್ತು ಅವನನ್ನು ತಿಂದುಬಿಡೋಣ, ನಾಳೆ ನನ್ನ ಮಗನನ್ನು ತಿನ್ನೋಣ” ಎಂದು ಹೇಳಿದ್ದರಿಂದ,
၂၈သင် ၌ အဘယ် သို့ဖြစ်သနည်းဟူ၍၎င်း မေး လျှင်၊ မိန်းမက၊ ဤ မိန်းမ သည်ကျွန်မ ဆီ သို့လာ၍၊ သင့် သား ကို ယနေ့ ငါတို့စား ဘို့အပ် ပါ။ နက်ဖြန် နေ့၌ ငါ့ သား ကို စား ရမည်ဟုဆို သည်အတိုင်း၊”
29 ೨೯ ನಾವಿಬ್ಬರೂ ನನ್ನ ಮಗನನ್ನು ಕೊಂದು ಬೇಯಿಸಿ ತಿಂದು ಬಿಟ್ಟೆವು. ಮರುದಿನ ನಾನು ಆಕೆಗೆ, “ಈ ಹೊತ್ತು ನಿನ್ನ ಮಗನನ್ನು ತೆಗೆದುಕೊಂಡು ಬಾ, ಅವನನ್ನು ಕೊಂದು ತಿನ್ನೋಣ ಅಂದಾಗ ಆಕೆಯು ಅವನನ್ನು ಎಲ್ಲಿಯೋ ಅಡಗಿಸಿಟ್ಟಳು” ಎಂದು ಹೇಳಿದಳು.
၂၉ကျွန်မ ၏သား ကို ပြုတ် ၍ စား ကြပါ၏။ နက်ဖြန် နေ့၌ ကျွန်မ က ၊ သင် ၏သား ကို ငါတို့စား ဘို့ အပ် ပါဟု တောင်းသော်၊” သူသည် မိမိ” သား ကို ဝှက် ထားပါသည်ဟု လျှောက် လေ၏
30 ೩೦ ಗೋಡೆಯ ಮೇಲೆ ಹೋಗುತ್ತಿದ್ದ ಅರಸನು ಆ ಸ್ತ್ರೀಯ ಮಾತನ್ನು ಕೇಳಿದೊಡನೆ ತನ್ನ ಬಟ್ಟೆಗಳನ್ನು ಹರಿದುಕೊಂಡನು. ಆಗ ಅವನ ಮೈ ಮೇಲೆ ಗೋಣಿತಟ್ಟು ಇರುವುದು ಜನರಿಗೆ ಕಂಡಿತು.
၃၀ရှင် ဘုရင်သည် ထိုမိန်းမ ၏စကား ကို ကြား လျှင် ၊ မိမိ အဝတ် ကို ဆုတ် လေ၏။ မြို့ရိုး ပေါ် မှာ ရှောက်သွား စဉ် လူ တို့သည်ကြည့် ၍ ၊ အတွင်း ၌ လျှော်တေ အဝတ်ဖြင့် ဝတ်တော်မူကြောင်းကိုသိမြင် ရကြ၏
31 ೩೧ ಇದಲ್ಲದೆ ಅವನು, “ನಾನು ಈ ಹೊತ್ತು ಶಾಫಾಟನ ಮಗನಾದ ಎಲೀಷನ ತಲೆಯನ್ನು ಅವನ ದೇಹದಿಂದ ಬೇರ್ಪಡಿಸದೆ ಹೋದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಆಣೆಯಿಟ್ಟುಕೊಂಡನು.
၃၁ရှင်ဘုရင်ကလည်း၊ ရှာဖတ် သား ဧလိရှဲ ၏ ဦးခေါင်း သည် ယနေ့ သူ့ ကိုယ်နှင့် မ ကွာဘဲနေလျှင် ၊ ထာဝရဘုရား သည် ထိုမျှမက ၊ ငါ ၌ ပြု တော်မူပါစေသော ဟု ဆို ၏
32 ೩೨ ಎಲೀಷನು ಊರಿನ ಹಿರಿಯರೊಡನೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಅರಸನು ತನ್ನ ಹತ್ತಿರವಿದ್ದ ಒಬ್ಬ ಆಳನ್ನು ಕಳುಹಿಸಿದನು. ಅವನು ಇನ್ನೂ ದೂರದಲ್ಲಿರುವಾಗಲೇ ಎಲೀಷನು ಹಿರಿಯರಿಗೆ, “ನೋಡಿರಿ, ಆ ಕೊಲೆಗಾರನ ಮಗನು ನನ್ನ ತಲೆಯನ್ನು ಹಾರಿಸುವುದಕ್ಕೆ ಆಳನ್ನು ಕಳುಹಿಸಿದ್ದಾನೆ. ಆಳು ಇಲ್ಲಿಗೆ ಬಂದ ಕೂಡಲೆ ನೀವು ಬಾಗಿಲನ್ನು ಮುಚ್ಚಿ ಅವನು ಒಳಗೆ ಬಾರದಂತೆ ಅದನ್ನು ಒತ್ತಿ ಹಿಡಿಯಿರಿ. ಅವನ ಹಿಂದೆಯೇ ಬರುತ್ತಿರುವ ಅವನ ಒಡೆಯನ ಕಾಲಿನ ಸಪ್ಪಳವು ಕೇಳಿಸುತ್ತಿದೆಯಲ್ಲಾ” ಎಂದು ಹೇಳಿದನು.
၃၂ဧလိရှဲ သည် မိမိ အိမ် ၌ ထိုင် ၍ အသက် ကြီးသူတို့ သည် သူ နှင့်အတူ ထိုင် ကြစဉ်၊ ရှင်ဘုရင်သည် မိမိ ရှေ့ မှာ လူ တယောက်ကို စေလွှတ် ၏။ ထိုတမန် မ ရောက် မှီ ဧလိရှဲက၊ လူသတ် ၏သား သည် ငါ့ လည်ပင်း ကို ဖြတ် စေခြင်းငှါ ၊ စေလွှတ် သည်ကို သိမြင် ကြသလော။ ထိုတမန်” ရောက် သောအခါ ၊ တံခါး ကိုပိတ် ၍ ၊ တံခါး နား မှာသူ့ ကို ဆီးတား ကြလော့။ သူ့ နောက် မှာသူ့ သခင် ခြေ သံ မ မြည် သလော ဟု၊”
33 ೩೩ ಅವನು ಅವರೊಡನೆ ಮಾತನಾಡುತ್ತಿರುವಾಗಲೇ, ಸೇವಕನು ಅರಸನೊಂದಿಗೆ ಬಂದನು. ಅರಸನು ಎಲೀಷನಿಗೆ, “ನೋಡು, ಈ ಆಪತ್ತು ಯೆಹೋವನಿಂದಲೇ ಬಂದದ್ದು, ಇನ್ನು ಮುಂದೆ ನಾನೇಕೆ ಆತನನ್ನು ನಿರೀಕ್ಷಿಸಿಕೊಂಡಿರಬೇಕು” ಎಂದನು.
၃၃အသက်ကြီး သူတို့အား ပြော စဉ်တွင်၊” ထိုတမန်” သည် ရောက် လာ၏။ ရှင်ဘုရင်ကိုယ်တိုင်ရောက်လျှင်၊ ဤ အမှုသည် ထာဝရဘုရား စီရင်သော အမှုဖြစ်၏။ ထာဝရဘုရား ကျေးဇူးကို အဘယ် ကြောင့်မြော်လင့် ရသေးသနည်းဟုဆို သော်၊ “

< ಅರಸುಗಳು - ದ್ವಿತೀಯ ಭಾಗ 6 >