< ಪೇತ್ರನು ಬರೆದ ಮೊದಲನೆಯ ಪತ್ರಿಕೆ 4 >

1 ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ ಶರೀರದಲ್ಲಿ ಬಾಧೆಪಟ್ಟವನು ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ.
અસ્માકં વિનિમયેન ખ્રીષ્ટઃ શરીરસમ્બન્ધે દણ્ડં ભુક્તવાન્ અતો હેતોઃ શરીરસમ્બન્ધે યો દણ્ડં ભુક્તવાન્ સ પાપાત્ મુક્ત
2 ಆದ್ದರಿಂದ ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವುದಕ್ಕೆ ಪ್ರಯತ್ನಮಾಡುವನು.
ઇતિભાવેન યૂયમપિ સુસજ્જીભૂય દેહવાસસ્યાવશિષ્ટં સમયં પુનર્માનવાનામ્ ઇચ્છાસાધનાર્થં નહિ કિન્ત્વીશ્વરસ્યેચ્છાસાધનાર્થં યાપયત|
3 ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ ಕಾಲಕಳೆದದ್ದು ಸಾಕು.
આયુષો યઃ સમયો વ્યતીતસ્તસ્મિન્ યુષ્માભિ ર્યદ્ દેવપૂજકાનામ્ ઇચ્છાસાધનં કામકુત્સિતાભિલાષમદ્યપાનરઙ્ગરસમત્તતાઘૃણાર્હદેવપૂજાચરણઞ્ચાકારિ તેન બાહુલ્યં|
4 ಅವರು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ.
યૂયં તૈઃ સહ તસ્મિન્ સર્વ્વનાશપઙ્કે મજ્જિતું ન ધાવથ, ઇત્યનેનાશ્ચર્ય્યં વિજ્ઞાય તે યુષ્માન્ નિન્દન્તિ|
5 ಅವರು ಬದುಕಿರುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಸಿದ್ಧವಾಗಿರುವಾತನಿಗೆ ಉತ್ತರ ಕೊಡಬೇಕು.
કિન્તુ યો જીવતાં મૃતાનાઞ્ચ વિચારં કર્ત્તુમ્ ઉદ્યતોઽસ્તિ તસ્મૈ તૈરુત્તરં દાયિષ્યતે|
6 ಸತ್ತಿರುವವರು ಮನುಷ್ಯ ಜಾತಿಗೆ ಬರುವ ಮರಣವೆಂಬ ತೀರ್ಪನ್ನು ಶರೀರಗಳಲ್ಲಿದ್ದಾಗ ಹೊಂದಿದರು. ಅವರು ಆತ್ಮ ಸಂಬಂಧವಾಗಿ ದೇವರಂತೆ ಜೀವಿಸಲೆಂದು ಅವರಿಗೂ ಸುವಾರ್ತೆಯು ತಿಳಿಸಲ್ಪಟ್ಟಿತು.
યતો હેતો ર્યે મૃતાસ્તેષાં યત્ માનવોદ્દેશ્યઃ શારીરિકવિચારઃ કિન્ત્વીશ્વરોદ્દેશ્યમ્ આત્મિકજીવનં ભવત્ તદર્થં તેષામપિ સન્નિધૌ સુસમાચારઃ પ્રકાશિતોઽભવત્|
7 ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಜಿತೇಂದ್ರಿಯರಾಗಿಯೂ ಯಾವಾಗಲೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರಿ.
સર્વ્વેષામ્ અન્તિમકાલ ઉપસ્થિતસ્તસ્માદ્ યૂયં સુબુદ્ધયઃ પ્રાર્થનાર્થં જાગ્રતશ્ચ ભવત|
8 ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ. ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.
વિશેષતઃ પરસ્પરં ગાઢં પ્રેમ કુરુત, યતઃ, પાપાનામપિ બાહુલ્યં પ્રેમ્નૈવાચ્છાદયિષ્યતે|
9 ಗುಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.
કાતરોક્તિં વિના પરસ્પરમ્ આતિથ્યં કૃરુત|
10 ೧೦ ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ.
યેન યો વરો લબ્ધસ્તેનૈવ સ પરમ્ ઉપકરોતૃ, ઇત્થં યૂયમ્ ઈશ્વરસ્ય બહુવિધપ્રસાદસ્યોત્તમા ભાણ્ડાગારાધિપા ભવત|
11 ೧೧ ಒಬ್ಬನು ಬೋಧಿಸುವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವುದು. ಯೇಸು ಕ್ರಿಸ್ತನಿಗೆ ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್. (aiōn g165)
યો વાક્યં કથયતિ સ ઈશ્વરસ્ય વાક્યમિવ કથયતુ યશ્ચ પરમ્ ઉપકરોતિ સ ઈશ્વરદત્તસામર્થ્યાદિવોપકરોતુ| સર્વ્વવિષયે યીશુખ્રીષ્ટેનેશ્વરસ્ય ગૌરવં પ્રકાશ્યતાં તસ્યૈવ ગૌરવં પરાક્રમશ્ચ સર્વ્વદા ભૂયાત્| આમેન| (aiōn g165)
12 ೧೨ ಪ್ರಿಯರೇ, ನಿಮ್ಮನ್ನು ಪರಿಶೋಧಿಸುವುದಕ್ಕಾಗಿ ಅಗ್ನಿ ಪರೀಕ್ಷೆ ಬರುವಾಗ ನೀವು ಆಶ್ಚರ್ಯಪಡಬೇಡಿರಿ. ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ.
હે પ્રિયતમાઃ, યુષ્માકં પરીક્ષાર્થં યસ્તાપો યુષ્માસુ વર્ત્તતે તમ્ અસમ્ભવઘટિતં મત્વા નાશ્ચર્ય્યં જાનીત,
13 ೧೩ ಆದರೆ ನೀವು ಎಷ್ಟರ ಮಟ್ಟಿಗೆ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷಪಡಿರಿ. ಆದ್ದರಿಂದ ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ
કિન્તુ ખ્રીષ્ટેન ક્લેશાનાં સહભાગિત્વાદ્ આનન્દત તેન તસ્ય પ્રતાપપ્રકાશેઽપ્યાનનન્દેન પ્રફુલ્લા ભવિષ્યથ|
14 ೧೪ ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.
યદિ ખ્રીષ્ટસ્ય નામહેતુના યુષ્માકં નિન્દા ભવતિ તર્હિ યૂયં ધન્યા યતો ગૌરવદાયક ઈશ્વરસ્યાત્મા યુષ્માસ્વધિતિષ્ઠતિ તેષાં મધ્યે સ નિન્દ્યતે કિન્તુ યુષ્મન્મધ્યે પ્રશંસ્યતે|
15 ೧೫ ನಿಮ್ಮಲ್ಲಿ ಯಾವನಾದರು ಕೊಲೆಗಾರನು, ಕಳ್ಳನು, ದುಷ್ಟನು, ಪರರ ಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು.
કિન્તુ યુષ્માકં કોઽપિ હન્તા વા ચૈરો વા દુષ્કર્મ્મકૃદ્ વા પરાધિકારચર્ચ્ચક ઇવ દણ્ડં ન ભુઙ્ક્તાં|
16 ೧೬ ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.
યદિ ચ ખ્રીષ્ટીયાન ઇવ દણ્ડં ભુઙ્ક્તે તર્હિ સ ન લજ્જમાનસ્તત્કારણાદ્ ઈશ્વરં પ્રશંસતુ|
17 ೧೭ ನ್ಯಾಯವಿಚಾರಣೆಯ ಸಮಯ ಬಂದಿದೆ. ಆ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗಿದೆಯಲ್ಲಾ. ಅದು ನಮ್ಮಲ್ಲಿ ಪ್ರಾರಂಭವಾಗುವುದಾದರೆ, ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಅಂತ್ಯ ಹೇಗಿರಬಹುದು?
યતો વિચારસ્યારમ્ભસમયે ઈશ્વરસ્ય મન્દિરે યુજ્યતે યદિ ચાસ્મત્સ્વારભતે તર્હીશ્વરીયસુસંવાદાગ્રાહિણાં શેષદશા કા ભવિષ્યતિ?
18 ೧೮ ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಮತ್ತು ಪಾಪಿಷ್ಠನೂ ರಕ್ಷಣೆ ಹೊಂದುವುದು ಹೇಗೆ?
ધાર્મ્મિકેનાપિ ચેત્ ત્રાણમ્ અતિકૃચ્છ્રેણ ગમ્યતે| તર્હ્યધાર્મ્મિકપાપિભ્યામ્ આશ્રયઃ કુત્ર લપ્સ્યતે|
19 ೧೯ ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೆದನ್ನು ಮಾಡುವವರಾಗಿದ್ದು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿ ಕರ್ತನಿಗೆ ಒಪ್ಪಿಸಲಿ.
અત ઈશ્વરેચ્છાતો યે દુઃખં ભુઞ્જતે તે સદાચારેણ સ્વાત્માનો વિશ્વાસ્યસ્રષ્ટુરીશ્વસ્ય કરાભ્યાં નિદધતાં|

< ಪೇತ್ರನು ಬರೆದ ಮೊದಲನೆಯ ಪತ್ರಿಕೆ 4 >