< लूका 13 >

1 तैस मौके किछ लोक तैड़ी आए, तैना यीशु सेइं तैन गलील इलाकेरे लोकां केरे बारे मां ज़ोने लगे, ज़ैन केरो खून, रोमेरे गवर्नर पिलातुसे मन्दरे मां जानवरां केरे बलिदाने सेइं साथी मलेवरो थियो।
ಅದೇ ಸಮಯದಲ್ಲಿ ಕೆಲವರು ಯೇಸುವಿನ ಹತ್ತಿರದಲ್ಲಿದ್ದು, ಪಿಲಾತನು ಗಲಿಲಾಯದವರ ರಕ್ತವನ್ನು ಅವರು ಕೊಟ್ಟ ಬಲಿಗಳ ಸಂಗಡ ಬೆರಸಿದನೆಂದು ಆತನಿಗೆ ತಿಳಿಸಿದರು.
2 यीशुए तैन जुवाब दित्तो, “कुन तुस एन समझ़तथ कि तैन गलीलेरे लोकां केरो एत्रो बुरो हाल एल्हेरेलेइ भोवं, कि तैना बाकी गलीलेरे लोकन करां जादे पापी थिये?
ಅದಕ್ಕೆ ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಯನ್ನು ಅನುಭವಿಸಿದ್ದರಿಂದ ಅವರನ್ನು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ಭಾವಿಸುತ್ತೀರೋ?
3 अवं तुसन सेइं ज़ोताईं कि, अगर तुस भी पापन करां मन न फिराले त सब एन्च़रे नाश भोनेथ।
ಹಾಗೆ ಭಾವಿಸಕೂಡದೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ.
4 या कुन तैना अठारे ज़न्हे ज़ैन उन्ढो शीलोहेरो गुम्मट बिछ़ड़ोरो थियो, ते तैना सब तैस हैठ मेरि जे, ते तैना यरूशलेम नगरेरे होरि लोकन करां पापी थिये?
ಇಲ್ಲವೆ ಸಿಲೊವಾಮಿನಲ್ಲಿ ಗೋಪುರ ಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಕೆಟ್ಟವರೆಂದು ನೀವು ಭಾವಿಸುತ್ತೀರೋ?
5 अवं तुसन सेइं सच़ ज़ोताईं, कि नईं बल्के अगर तुस भी पापन करां मन न फिराले त तुस सब एन्च़रे नाश भोइ गानेथ।”
ಹಾಗಲ್ಲವೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ” ಎಂದು ಹೇಳಿದನು.
6 तैसरां बाद यीशुए तैन अक मिसाल देइतां ज़ोवं, “केन्चे मैने अपनि बागी मां अक फ़ेगेरो बुट लोरो थियो, ते तैस बुट्टे पुड़ हर साल फल तोपने अव पन तैस फल न मैल्लो।
ಆ ಮೇಲೆ ಯೇಸು ಒಂದು ಸಾಮ್ಯವನ್ನು ಹೇಳಿದನು. ಅದೇನೆಂದರೆ, “ಒಬ್ಬನು ತನ್ನ ದ್ರಾಕ್ಷಿಯ ತೋಟದಲ್ಲಿ ಒಂದು ಅಂಜೂರದ ಗಿಡವನ್ನು ನೆಡಿಸಿದನು. ಸ್ವಲ್ಪಕಾಲದ ನಂತರ ಅವನು ಆ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದನು. ಸಿಕ್ಕಲಿಲ್ಲ.
7 तैखन तैनी बागबने सेइं ज़ोवं, ‘हेर अवं ट्लाई सालां केरो देंतो इस फ़ेगेरे बुट्टे पुड़ फल लोरोईं तोपने, पन अज़ तगर एस पुड़ फल न मैल्लो एस केट्टी छ़ड एनी किजो रोड़ी ठार च़िकतां रखोरीए?’
ಬಳಿಕ ಅವನು ತೋಟಗಾರನಿಗೆ, ‘ನೋಡು, ನಾನು ಮೂರು ವರ್ಷದಿಂದಲೂ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ; ಆದರೂ ನನಗೆ ಸಿಕ್ಕಲಿಲ್ಲ. ಇದನ್ನು ಕಡಿದು ಹಾಕು. ಇದರಿಂದ ಭೂಮಿಯು ಯಾಕೆ ವ್ಯರ್ಥವಾಗಬೇಕು’ ಎಂದು ಹೇಳಿದನು.
8 पन तैनी तैस जुवाब देइतां ज़ोवं, मीं निदतां एसेरे च़ेव्रे पासन खाद छडनियें।
ಅದಕ್ಕೆ ಆ ತೋಟಗಾರನು, ‘ಯಜಮಾನನೇ ಈ ವರ್ಷವೂ ಇದನ್ನು ಬಿಡು, ಅಷ್ಟರಲ್ಲಿ ನಾನು ಇದರ ಸುತ್ತಲು ಅಗೆದು ಗೊಬ್ಬರ ಹಾಕುತ್ತೇನೆ.
9 अगर फिरी भी फल न लगो त फिरी केट्टी देनोए।”
ಮುಂದೆ ಅದರಲ್ಲಿ ಹಣ್ಣು ಬಿಟ್ಟರೆ ಸರಿ, ಇಲ್ಲದಿದ್ದರೆ ಇದನ್ನು ಕಡಿದುಹಾಕಬಹುದು’” ಎಂದು ಉತ್ತರ ಕೊಟ್ಟನು.
10 एक्की आरामेरे दिहाड़े यीशु प्रार्थना घरे मां शिक्षा देने लोरो थियो।
೧೦ಒಂದು ಸಬ್ಬತ್ ದಿನದಲ್ಲಿ ಯೇಸು ಒಂದು ಸಭಾಮಂದಿರದೊಳಗೆ ಉಪದೇಶಮಾಡುತ್ತಾ ಇದ್ದನು.
11 हेरा, तैड़ी अक कुआन्श थी ज़ैस अठारे सालां केरि देंती भूतेरे सैइयेरे वजाई सेइं कुबड़ी भोरी थी। तै सिधी न थी भोइ बटती।
೧೧ಅಲ್ಲಿ ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ಬಾಧಿತಳಾಗಿ ಬೆನ್ನು ಬಗ್ಗಿ ಹೋಗಿ ಗೂನಿಯಾಗಿದ್ದು ಸ್ವಲ್ಪವಾದರೂ ಮೈಯನ್ನು ಮೇಲಕ್ಕೆ ಎತ್ತಲಾರದೆ ಇದ್ದ ಒಬ್ಬ ಹೆಂಗಸು ಇದ್ದಳು.
12 यीशुए तै कुबड़ी कुआन्श लाई त एप्पू कां कुजाई ते ज़ोवं, “हे कुआन्श, तू अपनि तकलीफी करां छुटी जेई।”
೧೨ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು ಆಕೆಗೆ, “ನಿನ್ನ ರೋಗವು ಬಿಡುಗಡೆಯಾಯಿತು” ಎಂದು ಹೇಳಿ
13 ते यीशुए तैस कुआन्शी पुड़ हथ रखे ते तै लूशी बेज़्झ़ोइं ते परमेशरेरी तारीफ़ केरने लगी।
೧೩ಆಕೆಯ ಮೇಲೆ ತನ್ನ ಕೈಗಳನ್ನಿಟ್ಟನು. ಇಟ್ಟಕೂಡಲೆ ಆಕೆ ನೆಟ್ಟಗಾದಳು, ದೇವರನ್ನು ಕೊಂಡಾಡಿದಳು.
14 पन प्रार्थना घरेरो प्रधान यीशु पुड़ नराज़ भोव कि, एनी ए कुआन्श, आरामेरे दिहाड़े किजो बज्झ़ाई ते ज़ोने लगो, “हफते मां शा दिहाड़े कम काज़ केरनेरे लेइ आन, ते तैन्ने मां कोई बज्झ़ावरो भी लोड़चे, ते आरामेरी दिहैड़ी न।”
೧೪ಆದರೆ ಆ ಸಭಾಮಂದಿರದ ಅಧಿಕಾರಿಯು ನಡೆದ ಸಂಗತಿಯನ್ನು ನೋಡಿ, ಸಬ್ಬತ್ ದಿನದಲ್ಲಿ ಯೇಸು ಸ್ವಸ್ಥ ಮಾಡಿದನಲ್ಲಾ ಎಂದು ಸಿಟ್ಟುಗೊಂಡು ಜನರಿಗೆ, “ಕೆಲಸ ಮಾಡುವುದಕ್ಕೆ ಆರು ದಿನಗಳು ಅವೆಯಷ್ಟೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ, ಸಬ್ಬತ್ ದಿನದಲ್ಲಿ ಮಾತ್ರ ಬೇಡ” ಎಂದು ಹೇಳಿದನು.
15 प्रभु यीशुए तैस जुवाब दित्तो, “ए पाखंडी लोकव कुन तुस आरामेरी दिहाड़ी अपने दांत या गधे खोलतां तैन पानी पियाने न नेथ?
೧೫ಆ ಮಾತನ್ನು ಕೇಳಿ ಕರ್ತನು ಅವನಿಗೆ, “ಕಪಟಿಗಳೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ ಕತ್ತೆಯನ್ನಾಗಲಿ ಗೋದಲಿಯಿಂದ ಬಿಚ್ಚಿ ನೀರು ಕುಡಿಸುವುದಕ್ಕಾಗಿ ಹಿಡಿದುಕೊಂಡು ಹೋಗುತ್ತಾನಲ್ಲವೇ.
16 त कुन एन रोड़ू न भोवं कि ज़ै कुआन्श बेज़्झ़ोइ तै अब्राहमेरे खानदाने मरां ए, ज़ै अठारे सालां केरि देंती शैताने गुलैमी मां रखोरि थी त आरामेरे दिहाड़े ए कुआन्श छुटानी न थी?”
೧೬ಹಾಗಾದರೆ ಹದಿನೆಂಟು ವರ್ಷಗಳ ತನಕ ಸೈತಾನನು ಕಟ್ಟಿ ಹಾಕಿದ್ದವಳೂ ಅಬ್ರಹಾಮನ ವಂಶದವಳೂ ಆಗಿರುವ ಈಕೆಯನ್ನು ಸಬ್ಬತ್ ದಿನದಲ್ಲಿ ಈ ಬಂಧನದಿಂದ ಬಿಡಿಸಬಾರದೋ?” ಎಂದು ಕೇಳಿದನು.
17 ज़ैखन यीशुए एना गल्लां ज़ोई त तैसेरे खलाफ ज़ोने बाले सेब्भी केरि बेइज़ती भोइ, ते सारे लोक यीशुए ज़ैना महिमारां कम्मां अपने हथेइं कियोरां थियां खुशी मनाने लगे।
೧೭ಈ ಮಾತುಗಳನ್ನು ಆತನು ಹೇಳುತ್ತಿರಲಾಗಿ ಆತನ ವಿರೋಧಿಗಳೆಲ್ಲರೂ ಅವಮಾನಿತರಾದರು. ಗುಂಪು ಕೂಡಿದ್ದ ಜನರೆಲ್ಲರೂ ಆತನಿಂದಾಗುತ್ತಿದ್ದ ಎಲ್ಲಾ ಮಹತ್ತಾದ ಕಾರ್ಯಗಳಿಗೆ ಸಂತೋಷಪಟ್ಟರು.
18 तैखन यीशु तैन सेइं ज़ोने लगो, “परमेशरेरू राज़ कौस चीज़री ज़ेरूए अवं केस सेइं ज़ोईं?
೧೮ತರುವಾಯ ಯೇಸು ಕೇಳಿದ್ದೇನಂದರೆ, “ದೇವರ ರಾಜ್ಯವು ಏನನ್ನು ಹೋಲುತ್ತದೆ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ?
19 तन शेरीएरे बीज़ेरू ज़ेरू आए, ज़ैन एक्की मैने एन्तां अपनि बागी मां बेवं, पन ज़ैखन तैन बीज़ बेव गाते, तै उगतां सारे निक्के-निक्के बुट्टन केरां बड्डो भोते। ते अम्बरेरां च़ुड़ोल्लू भी तैस पुड़ बिशने लगां।”
೧೯ಅದು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಹಾಕಿದನು. ಅದು ಬೆಳೆದು ಮರವಾಯಿತು. ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿದವು” ಅಂದನು.
20 यीशुए फिरी ज़ोवं, “अवं परमेशरेरे राज़्ज़ेरी मसाल केस सेइं देईं?
೨೦ಆತನು ಇನ್ನೂ ಹೇಳಿದ್ದೇನಂದರೆ, “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ?
21 तैन खमीरेरू ज़ेरूए, ज़ैन केन्ची कुआन्शां आनू, ते हछे अट्टे मां मलाव ते सारू अट्टू खमीर बेनि ज़ोवं।”
೨೧ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಹೆಂಗಸು ತೆಗೆದು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು” ಅಂದನು.
22 यीशु अपने चेलन सेइं साथी यरूशलेम नगरे मांमेइं गांते बार नगरन मां ते ड्लोंव्वन मां शिक्षा देंतो च़लोरो थियो।
೨೨ಯೇಸು ಊರೂರಿಗೂ ಗ್ರಾಮ ಗ್ರಾಮಕ್ಕೂ ಹೋಗಿ ಉಪದೇಶ ಮಾಡುತ್ತಾ ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿದ್ದನು.
23 केन्चे यीशु पुच़्छ़ू, “हे प्रभु कुन थोड़े ज़ेरे लोक हमेशारी सज़ाई करां बच़ेले?” यीशु तैन सेइं ज़ोवं।
೨೩ಆಗ ಒಬ್ಬನು, “ಕರ್ತನೇ, ರಕ್ಷಣೆ ಹೊಂದುವವರು ಸ್ವಲ್ಪ ಜನರೋ?” ಎಂದು ಕೇಳಲು,
24 “परमेशरेरे राज़्ज़े मां सुन्कड़े दारेरां बत्तां गानेरी कोशिश केरा, किजोकि अवं तुसन सेइं ज़ोताईं कि बड़े लोक अन्तर गानेरी कोशिश केरेले पन न गेइ सकेले।
೨೪ಆತನು ಅವರಿಗೆ, “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಹೋಗುವುದಕ್ಕೆ ಪ್ರಯಾಸಪಡಿರಿ. ಏಕೆಂದರೆ ಬಹು ಜನರು ಒಳಗೆ ಹೋಗುವುದಕ್ಕೆ ನೋಡುವರು. ಆದರೆ ಅವರಿಂದಾಗುವುದಿಲ್ಲ ಎಂದು ನಿಮಗೆ ಹೇಳುತ್ತೇನೆ.
25 ज़ैखन घरेरो मालिक एक्की बार दार बंद केरि छ़डते, त तुस बेइर खड़ खड़े दार गुड़काते, ते बिनती केरते राथ कि, ‘हे प्रभु इश्शे लेइ दार खोल्ल,’ ते तै तुसन जुवाब देते कि अवं तुसन न ज़ैनी तुस कौन आथ ते कोट्ठां ओरेथ?
೨೫ಮನೆ ಯಜಮಾನನು ಎದ್ದು ಬಾಗಿಲು ಮುಚ್ಚಿದ ಮೇಲೆ ನೀವು ಹೊರಗೆ ನಿಂತುಕೊಂಡು ಬಾಗಿಲು ತಟ್ಟಿ, ‘ಕರ್ತನೇ ನಮಗೆ ಬಾಗಿಲು ತೆರೆಯಿರಿ’ ಎಂದು ಬಾಗಿಲು ಬಡಿಯುವುದಕ್ಕೆ ತೊಡಗುವಾಗ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ’ ಅಂದಾನು
26 तैखन तुस ज़ोले कि, ‘असेईं तीं सेइं साथी खोरी पियोरी नईं, ते तीं इश्शे अंगने मां असन शिक्षा नईं दित्तोरी।’
೨೬ಅದಕ್ಕೆ ನೀವು, ‘ನಿನ್ನ ಸಂಗಡ ನಾವು ಊಟ ಮಾಡಿದೆವು, ಕುಡಿದೆವು, ನಮ್ಮ ಬೀದಿಗಳಲ್ಲಿ ನೀನು ಉಪದೇಶ ಮಾಡಿದ್ದಿ’ ಎಂದು ಹೇಳುವುದಕ್ಕೆ ತೊಡಗುವಿರಿ.
27 पन तै तुसन सेइं ज़ोलो, ‘अवं तुसन न ज़ैनी तुस कौन आथ, ते कोट्ठां ओरेथ हे बेइमानव मीं करां दूर भोथ।’
೨೭ಆದರೆ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ. ಅಧರ್ಮಮಾಡುವ ನೀವೆಲ್ಲರೂ ನನ್ನ ಕಡೆಯಿಂದ ಹೊರಟು ಹೋಗಿರಿ’ ಎಂದು ನಿಮಗೆ ಹೇಳುತ್ತೇನೆ ಅನ್ನುವನು.
28 ज़ैखन तुस अब्राहम, इसहाक ते याकूब ते सब नेबन परमेशरेरे राज़्ज़े मां सामने लाएले ते अपनो आप बेइरोवं कढते लाएले, त लेरां देते ते दंत च़ापते राले।
೨೮ಅಬ್ರಹಾಮ, ಇಸಾಕ, ಯಾಕೋಬರು ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವುದನ್ನೂ ನೀವು ನೋಡುವಿರಿ. ಆದರೆ ನಿಮ್ಮನ್ನು ಮಾತ್ರ ಹೊರಗೆ ಹಾಕಲಾಗುವುದು ಅಲ್ಲಿ ನಿಮಗೆ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಉಂಟಾಗುವವು.
29 लोक पूर्बेरां ते पछमेरां ते उत्तर ते दक्षिणेरे देंते यानी दुनियारे सारे लोकन मरां लोक परमेशरेरे राज़्ज़ेरी धामी मां एइते लाएले।
೨೯ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದಲೂ ಜನರು ಬಂದು ದೇವರ ರಾಜ್ಯದಲ್ಲಿ ಔತಣಕ್ಕೆ ಕುಳಿತುಕೊಳ್ಳುವರು.
30 ते हेरा किछ एरेन कि ज़ैना पेइले आन, तैना पत्रोवं भोनेन ते ज़ैना पत्रोवं आन, तैना पेइले भोनेन।”
೩೦ಇಗೋ ಕಡೆಯವರಾಗಿರುವ ಕೆಲವರು ಮೊದಲಿನವರಾಗುವರು. ಮೊದಲಿನವರಾಗಿರುವ ಕೆಲವರು ಕಡೆಯವರಾಗುವರು” ಅಂದನು.
31 तैखने किछ फरीसी लोक यीशु कां आए ते ज़ोने लगे, “इट्ठां निस ते च़लो गा, किजोकि हेरोदेस तीं मारने चाते।”
೩೧ಅದೇ ಗಳಿಗೆಯಲ್ಲಿ ಕೆಲವು ಮಂದಿ ಫರಿಸಾಯರು ಹತ್ತಿರ ಬಂದು ಯೇಸುವಿಗೆ, “ನೀನು ಇಲ್ಲಿಂದ ಹೊರಟು ಹೋಗು, ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ” ಎಂದು ಹೇಳಲು,
32 पन यीशुए तैन ज़ोवं, तैस मैन्हु सेइं ज़ै लोई अरो ज़ेरो आए, गेइतां तैस सेइं ज़ोथ कि, “अवं अज़ ते कालां भूतां केरो सैयो कढने ते बिमारन बज़्झ़ांनेरू कम केरने लोरोईं ते एन कम ट्लेइ दिहाड़न मां मीं पूरू केरनूए।
೩೨ಆತನು ಅವರಿಗೆ, “ನೀವು ಹೋಗಿ ‘ಇಗೋ, ನಾನು ಈಹೊತ್ತು ನಾಳೆ ದೆವ್ವಗಳನ್ನು ಬಿಡಿಸುತ್ತಾ ರೋಗಿಗಳನ್ನು ವಾಸಿಮಾಡುತ್ತಾ ಇದ್ದು, ಮೂರನೆಯ ದಿನದಲ್ಲಿ ಸಿದ್ಧಿಗೆ ಬರುತ್ತೇನೆ’ ಎಂದು ಆ ನರಿಗೆ ಹೇಳಿರಿ.
33 बस्सा मीं अज़ ते कालां ते ट्लेईदी मीं सफर केरनूए, किजोकि नबी सिर्फ यरूशलेम नगरे मां मारे गाले।
೩೩ಹೇಗೂ ನಾನು ಈ ಹೊತ್ತು ನಾಳೆ ನಾಡಿದ್ದು ಸಂಚಾರ ಮಾಡಬೇಕು. ಪ್ರವಾದಿಯಾದವನು ಯೆರೂಸಲೇಮಿನಲ್ಲಿಯೇ ಹೊರತು ಬೇರೆ ಪಟ್ಟಣದಲ್ಲಿ ಕೊಲ್ಲಲ್ಪಡಕೂಡದಷ್ಟೆ.
34 “हे यरूशलेमे नगरेरे लोकव, हे यरूशलेमे नगरेरे लोकव, तुसेईं केत्रे नबी कत्ल किये, ज़ैना बड़े पेइले तुसन कां आए, ते ज़ैना तुसन कां भेज़े तैन घोड़ेईं बेई, मीं केही फेरेईं सोचू कि तेरे बच्चन अकोट्ठे केरि ज़ेन्च़रे कुकड़ी अपने बच्चन अपने फंगन हैठ रखचे, पन तुस राज़ी न भोए।
೩೪ಯೆರೂಸಲೇಮೇ, ಯೆರೂಸಲೇಮೇ ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿ ಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಸೇರಿಸಿಕೊಳ್ಳುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು!
35 हेरा तुश्शू घर तुश्शे लेइ छ़ड्डू गाते, ते अवं तुसन सेइं ज़ोताईं कि तुस मीं केन्ची तरीके भी न लेई सकेले, ज़ांतगर तुसन एन ज़ोनेरो मौको न एज्जेलो, धने तै ज़ै प्रभुएरे नंव्वे सेइं एइते।”
೩೫ನೋಡಿರಿ, ನಿಮ್ಮ ಮನೆಯು ಪಾಳುಬೀಳುವುದು. ‘ಕರ್ತನ ಹೆಸರಿನಲ್ಲಿ ಬರುವವನು ಧನ್ಯನು’ ಎಂದು ನೀವು ಹೇಳುವ ವರೆಗೂ ನೀವು ನನ್ನನ್ನು ನೋಡುವುದೇ ಇಲ್ಲ” ಎಂದು ನಿಮಗೆ ಹೇಳುತ್ತೇನೆ.

< लूका 13 >