< പ്രേരിതാഃ 2 >

1 അപരഞ്ച നിസ്താരോത്സവാത് പരം പഞ്ചാശത്തമേ ദിനേ സമുപസ്ഥിതേ സതി തേ സർവ്വേ ഏകാചിത്തീഭൂയ സ്ഥാന ഏകസ്മിൻ മിലിതാ ആസൻ|
ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರೂ ಒಮ್ಮಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿಬಂದಿದ್ದರು.
2 ഏതസ്മിന്നേവ സമയേഽകസ്മാദ് ആകാശാത് പ്രചണ്ഡാത്യുഗ്രവായോഃ ശബ്ദവദ് ഏകഃ ശബ്ദ ആഗത്യ യസ്മിൻ ഗൃഹേ ത ഉപാവിശൻ തദ് ഗൃഹം സമസ്തം വ്യാപ്നോത്|
ಆಗ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕುಳಿತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು.
3 തതഃ പരം വഹ്നിശിഖാസ്വരൂപാ ജിഹ്വാഃ പ്രത്യക്ഷീഭൂയ വിഭക്താഃ സത്യഃ പ്രതിജനോർദ്ധ്വേ സ്ഥഗിതാ അഭൂവൻ|
ಉರಿಯುವ ಬೆಂಕಿಯೂ ವಿಂಗಡಿಸಿಕೊಳ್ಳುವ ನಾಲಿಗೆಗಳ ಹಾಗೆ ಅವರಿಗೆ ಕಾಣಿಸಿ ಕೊಂಡು ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕುಳಿತುಕೊಂಡವು.
4 തസ്മാത് സർവ്വേ പവിത്രേണാത്മനാ പരിപൂർണാഃ സന്ത ആത്മാ യഥാ വാചിതവാൻ തദനുസാരേണാന്യദേശീയാനാം ഭാഷാ ഉക്തവന്തഃ|
ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾದರು, ಅವರಿಗೆ ಆ ಪವಿತ್ರಾತ್ಮನು ನೀಡಿದ ಶಕ್ತಿಯ ಪ್ರಕಾರ ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವುದಕ್ಕೆ ಪ್ರಾರಂಭಿಸಿದರು.
5 തസ്മിൻ സമയേ പൃഥിവീസ്ഥസർവ്വദേശേഭ്യോ യിഹൂദീയമതാവലമ്ബിനോ ഭക്തലോകാ യിരൂശാലമി പ്രാവസൻ;
ಆಕಾಶದ ಕೆಳಗಿರುವ ಎಲ್ಲಾ ದೇಶಗಳಿಂದ ಬಂದ ಸದ್ಭಕ್ತರಾದ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸವಾಗಿದ್ದರು.
6 തസ്യാഃ കഥായാഃ കിംവദന്ത്യാ ജാതത്വാത് സർവ്വേ ലോകാ മിലിത്വാ നിജനിജഭാഷയാ ശിഷ്യാണാം കഥാകഥനം ശ്രുത്വാ സമുദ്വിഗ്നാ അഭവൻ|
ಆ ಸಪ್ಪಳವಾದಾಗ ಆ ಜನರೆಲ್ಲರೂ ಗುಂಪು ಗುಂಪಾಗಿ ಕೂಡಿಬಂದು ಪ್ರತಿಯೊಬ್ಬರೂ ತಮ್ಮತಮ್ಮ ಭಾಷೆಯಲ್ಲೇ ಇವರು ಮಾತನಾಡುವುದನ್ನು ಕೇಳಿ ದಿಗ್ಭ್ರಮೆಗೊಂಡರು.
7 സർവ്വഏവ വിസ്മയാപന്നാ ആശ്ചര്യ്യാന്വിതാശ്ച സന്തഃ പരസ്പരം ഉക്തവന്തഃ പശ്യത യേ കഥാം കഥയന്തി തേ സർവ്വേ ഗാലീലീയലോകാഃ കിം ന ഭവന്തി?
ಎಲ್ಲರೂ ವಿಸ್ಮಯದಿಂದ ಬೆರಗಾಗಿ, “ಇಗೋ, ಮಾತನಾಡುತ್ತಿರುವ ಇವರೆಲ್ಲರೂ ಗಲಿಲಾಯದವರಲ್ಲವೇ.
8 തർഹി വയം പ്രത്യേകശഃ സ്വസ്വജന്മദേശീയഭാഷാഭിഃ കഥാ ഏതേഷാം ശൃണുമഃ കിമിദം?
ಆದರೆ ನಾವು ಪ್ರತಿಯೊಬ್ಬರು ನಮ್ಮ ನಮ್ಮ ಮಾತೃಭಾಷೆಯಲ್ಲಿ ಇವರು ಮಾತನಾಡುವುದನ್ನು ಕೇಳುತ್ತಿದ್ದೇವಲ್ಲಾ, ಇದು ಹೇಗೆ?
9 പാർഥീ-മാദീ-അരാമ്നഹരയിമ്ദേശനിവാസിമനോ യിഹൂദാ-കപ്പദകിയാ-പന്ത-ആശിയാ-
ಪಾರ್ಥ್ಯರೂ, ಮೇದ್ಯರೂ, ಏಲಾಮ್ಯರೂ, ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ,
10 ഫ്രുഗിയാ-പമ്ഫുലിയാ-മിസരനിവാസിനഃ കുരീണീനികടവർത്തിലൂബീയപ്രദേശനിവാസിനോ രോമനഗരാദ് ആഗതാ യിഹൂദീയലോകാ യിഹൂദീയമതഗ്രാഹിണഃ ക്രീതീയാ അരാബീയാദയോ ലോകാശ്ച യേ വയമ്
೧೦ಫ್ರುಗ್ಯ, ಪಂಫುಲ್ಯ, ಐಗುಪ್ತ ಮತ್ತು ಕುರೇನೆಯ ಮಗ್ಗುಲಲ್ಲಿರುವ ಲಿಬ್ಯ, ಈ ಸೀಮೆಗಳಲ್ಲಿ ವಾಸವಾಗಿರುವವರೂ, ರೋಮಾಪುರದಿಂದ ಬಂದಿರುವ ಯೆಹೂದ್ಯರೂ, ಯೆಹೂದ್ಯ ಮತಾವಲಂಬಿಗಳೂ, ಕ್ರೇತ್ಯರೂ, ಅರಬ್ಬೀದೇಶದವರೂ
11 അസ്മാകം നിജനിജഭാഷാഭിരേതേഷാമ് ഈശ്വരീയമഹാകർമ്മവ്യാഖ്യാനം ശൃണുമഃ|
೧೧ಆಗಿರುವ ನಾವು ನಮ್ಮ ನಮ್ಮ ಭಾಷೆಗಳಲ್ಲಿ ಇವರು ದೇವರ ಮಹತ್ತುಗಳ ವಿಷಯವಾಗಿ ಹೇಳುವುದನ್ನು ಕೇಳುತ್ತಿದ್ದೇವಲ್ಲಾ” ಎಂದು ಅಂದುಕೊಂಡರು.
12 ഇത്ഥം തേ സർവ്വഏവ വിസ്മയാപന്നാഃ സന്ദിഗ്ധചിത്താഃ സന്തഃ പരസ്പരമൂചുഃ, അസ്യ കോ ഭാവഃ?
೧೨ಎಲ್ಲರೂ ಬೆರಗಾಗಿ ಕಳವಳಗೊಂಡು, “ಇದೇನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳುತ್ತಿದ್ದರು?”
13 അപരേ കേചിത് പരിഹസ്യ കഥിതവന്ത ഏതേ നവീനദ്രാക്ഷാരസേന മത്താ അഭവൻ|
೧೩ಆದರೆ ಬೇರೆ ಕೆಲವರು, “ಇವರು ಮದ್ಯಪಾನ ಮಾಡಿ ಮತ್ತರಾಗಿದ್ದಾರೆಂದು ಹಾಸ್ಯ” ಮಾಡಿದರು.
14 തദാ പിതര ഏകാദശഭി ർജനൈഃ സാകം തിഷ്ഠൻ താല്ലോകാൻ ഉച്ചൈഃകാരമ് അവദത്, ഹേ യിഹൂദീയാ ഹേ യിരൂശാലമ്നിവാസിനഃ സർവ്വേ, അവധാനം കൃത്വാ മദീയവാക്യം ബുധ്യധ്വം|
೧೪ಆಗ ಪೇತ್ರನು ಹನ್ನೊಂದು ಮಂದಿ ಅಪೊಸ್ತಲರ ಸಹಿತ ಎದ್ದು ನಿಂತು ಗಟ್ಟಿಯಾದ ಧ್ವನಿಯಿಂದ ಅವರಿಗೆ ಹೀಗೆ ಬೋಧನೆಮಾಡಿದನು; “ಯೆಹೂದ್ಯರೇ, ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಜಾತಿ-ಜನಾಂಗದವರೇ, ಈ ಸಂಗತಿಯು ಏನೆಂದು ನೀವು ತಿಳಿದುಕೊಳ್ಳಲು ನನ್ನ ಮಾತಿಗೆ ಕಿವಿಗೊಡಿರಿ.
15 ഇദാനീമ് ഏകയാമാദ് അധികാ വേലാ നാസ്തി തസ്മാദ് യൂയം യദ് അനുമാഥ മാനവാ ഇമേ മദ്യപാനേന മത്താസ്തന്ന|
೧೫ನೀವು ಭಾವಿಸಿದಂತೆ ಇವರು ಮದ್ಯಪಾನಮಾಡಿ ಅಮಲೇರಿದವರಲ್ಲ, ಈಗ ಬೆಳಗ್ಗೆ ಒಂಭತ್ತು ಘಂಟೆಯಾಗಿದೆಯಷ್ಟೆ.
16 കിന്തു യോയേൽഭവിഷ്യദ്വക്ത്രൈതദ്വാക്യമുക്തം യഥാ,
೧೬ಆದರೆ ಇದು ಪ್ರವಾದಿಯಾದ ಯೋವೇಲನ ಮೂಲಕವಾಗಿ ಹೇಳಿಸಿದ ಸಂಗತಿಯಾಗಿದೆ; ಅದೇನೆಂದರೆ,
17 ഈശ്വരഃ കഥയാമാസ യുഗാന്തസമയേ ത്വഹമ്| വർഷിഷ്യാമി സ്വമാത്മാനം സർവ്വപ്രാണ്യുപരി ധ്രുവമ്| ഭാവിവാക്യം വദിഷ്യന്തി കന്യാഃ പുത്രാശ്ച വസ്തുതഃ| പ്രത്യാദേശഞ്ച പ്രാപ്സ്യന്തി യുഷ്മാകം യുവമാനവാഃ| തഥാ പ്രാചീനലോകാസ്തു സ്വപ്നാൻ ദ്രക്ഷ്യന്തി നിശ്ചിതം|
೧೭“ಕಡೆ ದಿನಗಳಲ್ಲಿ ನಾನು ಎಲ್ಲಾ ಜನರ ಮೇಲೆ ನನ್ನ ಆತ್ಮವನ್ನು ಸುರಿಸುವೆನು, ಆಗ ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು;
18 വർഷിഷ്യാമി തദാത്മാനം ദാസദാസീജനോപിരി| തേനൈവ ഭാവിവാക്യം തേ വദിഷ്യന്തി ഹി സർവ്വശഃ|
೧೮ಇದಲ್ಲದೆ ಆ ದಿನಗಳಲ್ಲಿ ನನ್ನ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು, ಅವರೂ ಪ್ರವಾದಿಸುವರು.
19 ഊർദ്ധ്വസ്ഥേ ഗഗണേ ചൈവ നീചസ്ഥേ പൃഥിവീതലേ| ശോണിതാനി ബൃഹദ്ഭാനൂൻ ഘനധൂമാദികാനി ച| ചിഹ്നാനി ദർശയിഷ്യാമി മഹാശ്ചര്യ്യക്രിയാസ്തഥാ|
೧೯ಕರ್ತನ ಆಗಮನದ ಗಂಭೀರವಾದ ಮಹಾ ದಿನವು ಬರುವುದಕ್ಕೆ ಮೊದಲೇ ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನ್ನೂ ಕೆಳಗೆ ಭೂಮಿಯಲ್ಲಿ ಸೂಚಕಕಾರ್ಯಗಳನ್ನೂ ಉಂಟುಮಾಡುವೆನು. ರಕ್ತ, ಬೆಂಕಿ, ಹಬೆಯಂತೆ ಏರುವ ಹೊಗೆ ಇವು ಉಂಟಾಗುವವು. ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.
20 മഹാഭയാനകസ്യൈവ തദ്ദിനസ്യ പരേശിതുഃ| പുരാഗമാദ് രവിഃ കൃഷ്ണോ രക്തശ്ചന്ദ്രോ ഭവിഷ്യതഃ|
೨೦
21 കിന്തു യഃ പരമേശസ്യ നാമ്നി സമ്പ്രാർഥയിഷ്യതേ| സഏവ മനുജോ നൂനം പരിത്രാതോ ഭവിഷ്യതി||
೨೧ಆದರೂ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ದೇವರು ಹೇಳುತ್ತಾನೆ” ಎಂಬುದೇ.
22 അതോ ഹേ ഇസ്രായേല്വംശീയലോകാഃ സർവ്വേ കഥായാമേതസ്യാമ് മനോ നിധദ്ധ്വം നാസരതീയോ യീശുരീശ്വരസ്യ മനോനീതഃ പുമാൻ ഏതദ് ഈശ്വരസ്തത്കൃതൈരാശ്ചര്യ്യാദ്ഭുതകർമ്മഭി ർലക്ഷണൈശ്ച യുഷ്മാകം സാക്ഷാദേവ പ്രതിപാദിതവാൻ ഇതി യൂയം ജാനീഥ|
೨೨“ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಕೇಳಿರಿ; , ನಜರೇತಿನ ಯೇಸು ಇದ್ದನಲ್ಲಾ, ನಿಮಗೂ ತಿಳಿದಿರುವಂತೆ ದೇವರು ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು.
23 തസ്മിൻ യീശൗ ഈശ്വരസ്യ പൂർവ്വനിശ്ചിതമന്ത്രണാനിരൂപണാനുസാരേണ മൃത്യൗ സമർപിതേ സതി യൂയം തം ധൃത്വാ ദുഷ്ടലോകാനാം ഹസ്തൈഃ ക്രുശേ വിധിത്വാഹത|
೨೩ಆದರೂ ಆ ಯೇಸು ದೇವರ ಸ್ಥಿರಸಂಕಲ್ಪಕ್ಕೂ, ಭವಿಷ್ಯದ ಜ್ಞಾನಕ್ಕೂ ಅನುಸಾರವಾಗಿ ಒಪ್ಪಿಸಲ್ಪಟ್ಟಿರಲು ನೀವು ಅನ್ಯಜನರ ಕೈಯಿಂದ ಆತನನ್ನು ಶಿಲುಬೆಗೆ ಹಾಕಿ ಮೊಳೆ ಜಡಿದು ಕೊಂದಿರಿ.
24 കിന്ത്വീശ്വരസ്തം നിധനസ്യ ബന്ധനാന്മോചയിത്വാ ഉദസ്ഥാപയത് യതഃ സ മൃത്യുനാ ബദ്ധസ്തിഷ്ഠതീതി ന സമ്ഭവതി|
೨೪ಆತನನ್ನು ದೇವರು ಮರಣದ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು; ಏಕೆಂದರೆ ಮರಣವು ಆತನನ್ನು ಹಿಡಿದುಕೊಂಡಿರುವುದು ಅಸಾಧ್ಯವಾಗಿತ್ತು.
25 ഏതസ്തിൻ ദായൂദപി കഥിതവാൻ യഥാ, സർവ്വദാ മമ സാക്ഷാത്തം സ്ഥാപയ പരമേശ്വരം| സ്ഥിതേ മദ്ദക്ഷിണേ തസ്മിൻ സ്ഖലിഷ്യാമി ത്വഹം നഹി|
೨೫ಆತನ ವಿಷಯದಲ್ಲಿ ದಾವೀದನು; , “‘ಕರ್ತನು ಯಾವಾಗಲೂ ನನ್ನೆದುರಿನಲ್ಲಿರುವುದನ್ನು ನೋಡುತ್ತಿದ್ದೆನು; ನಾನು ಕದಲದಂತೆ ಆತನು ನನ್ನ ಬಲಗಡೆಯಲ್ಲಿಯೇ ಇದ್ದಾನೆ.
26 ആനന്ദിഷ്യതി തദ്ധേതോ ർമാമകീനം മനസ്തു വൈ| ആഹ്ലാദിഷ്യതി ജിഹ്വാപി മദീയാ തു തഥൈവ ച| പ്രത്യാശയാ ശരീരന്തു മദീയം വൈശയിഷ്യതേ|
೨೬ಆದಕಾರಣ ನನ್ನ ಹೃದಯವು ಹರ್ಷಿಸಿತು; ನನ್ನ ನಾಲಿಗೆಯು ಉಲ್ಲಾಸಧ್ವನಿಯನ್ನು ಮಾಡಿತು, ನನ್ನ ಶರೀರವೂ ನಿರೀಕ್ಷೆಯಿಂದ ನೆಲೆಯಾಗಿರುವುದು;
27 പരലോകേ യതോ ഹേതോസ്ത്വം മാം നൈവ ഹി ത്യക്ഷ്യസി| സ്വകീയം പുണ്യവന്തം ത്വം ക്ഷയിതും നൈവ ദാസ്യസി| ഏവം ജീവനമാർഗം ത്വം മാമേവ ദർശയിഷ്യസി| (Hadēs g86)
೨೭ಏಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ, ನಿನ್ನ ಪವಿತ್ರನಿಗೆ ಕೊಳೆಯಲು ಬಿಡಲಾರೆ. (Hadēs g86)
28 സ്വസമ്മുഖേ യ ആനന്ദോ ദക്ഷിണേ സ്വസ്യ യത് സുഖം| അനന്തം തേന മാം പൂർണം കരിഷ്യസി ന സംശയഃ||
೨೮ಜೀವದ ಮಾರ್ಗಗಳನ್ನು ನನಗೆ ತಿಳಿಯಪಡಿಸಿದ್ದೀ; ನಿನ್ನ ಸಮ್ಮುಖದಲ್ಲಿ ನನ್ನನ್ನು ಆನಂದಭರಿತನನ್ನಾಗಮಾಡುವಿ’ ಎಂದು ಹೇಳಿದ್ದಾನೆ.
29 ഹേ ഭ്രാതരോഽസ്മാകം തസ്യ പൂർവ്വപുരുഷസ്യ ദായൂദഃ കഥാം സ്പഷ്ടം കഥയിതും മാമ് അനുമന്യധ്വം, സ പ്രാണാൻ ത്യക്ത്വാ ശ്മശാനേ സ്ഥാപിതോഭവദ് അദ്യാപി തത് ശ്മശാനമ് അസ്മാകം സന്നിധൗ വിദ്യതേ|
೨೯“ಸಹೋದರರೇ, ಮೂಲಪಿತೃವಾದ ದಾವೀದನ ವಿಷಯದಲ್ಲಿ ನಾನು ಧೈರ್ಯದಿಂದ ನಿಮ್ಮ ಸಂಗಡ ಮಾತನಾಡಬಹುದು ಏನೆಂದರೆ, ಅವನು ಮರಣಹೊಂದಿ ಹೂಣಲ್ಪಟ್ಟನು, ಅವನ ಸಮಾಧಿ ಈ ದಿನದ ವರೆಗೂ ನಮ್ಮಲ್ಲಿ ಇದೆ.
30 ഫലതോ ലൗകികഭാവേന ദായൂദോ വംശേ ഖ്രീഷ്ടം ജന്മ ഗ്രാഹയിത്വാ തസ്യൈവ സിംഹാസനേ സമുവേഷ്ടും തമുത്ഥാപയിഷ്യതി പരമേശ്വരഃ ശപഥം കുത്വാ ദായൂദഃ സമീപ ഇമമ് അങ്ഗീകാരം കൃതവാൻ,
೩೦ಆದಕಾರಣ ಅವನು ಪ್ರವಾದಿಯಾಗಿದ್ದು, ನಿನ್ನ ಸಂತತಿಯವರೊಳಗೆ ಒಬ್ಬನನ್ನು ನಾನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು ಎಂದು ತನಗೆ ದೇವರು ಆಣೆಯಿಟ್ಟು ಹೇಳಿದ್ದನ್ನು ಬಲ್ಲವನಾಗಿದನು.
31 ഇതി ജ്ഞാത്വാ ദായൂദ് ഭവിഷ്യദ്വാദീ സൻ ഭവിഷ്യത്കാലീയജ്ഞാനേന ഖ്രീഷ്ടോത്ഥാനേ കഥാമിമാം കഥയാമാസ യഥാ തസ്യാത്മാ പരലോകേ ന ത്യക്ഷ്യതേ തസ്യ ശരീരഞ്ച ന ക്ഷേഷ്യതി; (Hadēs g86)
೩೧ಕ್ರಿಸ್ತನ ಪುನರುತ್ಥಾನವನ್ನೇ ಕುರಿತು, ಆತನು ಪಾತಾಳದಲ್ಲಿ ಬಿಡಲ್ಪಡಲಿಲ್ಲವೆಂತಲೂ, ಆತನ ಶರೀರವು ಕೊಳೆಯುವ ಅವಸ್ಥೆಯನ್ನು ಅನುಭವಿಸುವುದಿಲ್ಲವೆಂತಲೂ ಹೇಳಿದನು. (Hadēs g86)
32 അതഃ പരമേശ്വര ഏനം യീശും ശ്മശാനാദ് ഉദസ്ഥാപയത് തത്ര വയം സർവ്വേ സാക്ഷിണ ആസ്മഹേ|
೩೨ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ.
33 സ ഈശ്വരസ്യ ദക്ഷിണകരേണോന്നതിം പ്രാപ്യ പവിത്ര ആത്മിന പിതാ യമങ്ഗീകാരം കൃതവാൻ തസ്യ ഫലം പ്രാപ്യ യത് പശ്യഥ ശൃണുഥ ച തദവർഷത്|
೩೩ಆತನು ದೇವರ ಬಲಗೈಯಿಂದ ಉನ್ನತಸ್ಥಾನಕ್ಕೆ ಏರಿಸಲ್ಪಟ್ಟು, ವಾಗ್ದಾನವಾಗಿದ್ದ ಪವಿತ್ರಾತ್ಮವರವನ್ನು ತಂದೆಯಿಂದ ಹೊಂದಿ ನೀವು ನೋಡಿ ಕೇಳುವುದನ್ನು ಸುರಿಸಿದ್ದಾನೆ.
34 യതോ ദായൂദ് സ്വർഗം നാരുരോഹ കിന്തു സ്വയമ് ഇമാം കഥാമ് അകഥയദ് യഥാ, മമ പ്രഭുമിദം വാക്യമവദത് പരമേശ്വരഃ|
೩೪ದಾವೀದನು ಸ್ವರ್ಗಾರೋಹಣ ಮಾಡಲಿಲ್ಲವಲ್ಲಾ. ತಾನೇ ಹೇಳುವ ಮಾತೇನಂದರೆ, “‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದ ಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ದೇವರಾದ ಕರ್ತನು ನನ್ನ ಕರ್ತನಿಗೆ ನುಡಿದನು’ ಎಂಬುದೇ.
35 തവ ശത്രൂനഹം യാവത് പാദപീഠം കരോമി ന| താവത് കാലം മദീയേ ത്വം ദക്ഷവാർശ്വ ഉപാവിശ|
೩೫
36 അതോ യം യീശും യൂയം ക്രുശേഽഹത പരമേശ്വരസ്തം പ്രഭുത്വാഭിഷിക്തത്വപദേ ന്യയുംക്തേതി ഇസ്രായേലീയാ ലോകാ നിശ്ചിതം ജാനന്തു|
೩೬“ಆದುದರಿಂದ ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬುದು ಇಸ್ರಾಯೇಲ್ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ” ಎಂದು ಹೇಳಿದನು.
37 ഏതാദൃശീം കഥാം ശ്രുത്വാ തേഷാം ഹൃദയാനാം വിദീർണത്വാത് തേ പിതരായ തദന്യപ്രേരിതേഭ്യശ്ച കഥിതവന്തഃ, ഹേ ഭ്രാതൃഗണ വയം കിം കരിഷ്യാമഃ?
೩೭ಅವರು ಇದನ್ನು ಕೇಳಿದಾಗ ಅವರ ಹೃದಯಗಳಲ್ಲಿ ಅಲಗು ನೆಟ್ಟಂತಾಯಿತು. ಅಲ್ಲದೆ ಅವರು ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ, “ಸಹೋದರರೇ, ನಾವೇನು ಮಾಡಬೇಕು” ಎಂದು ಕೇಳಲು;
38 തതഃ പിതരഃ പ്രത്യവദദ് യൂയം സർവ്വേ സ്വം സ്വം മനഃ പരിവർത്തയധ്വം തഥാ പാപമോചനാർഥം യീശുഖ്രീഷ്ടസ്യ നാമ്നാ മജ്ജിതാശ്ച ഭവത, തസ്മാദ് ദാനരൂപം പരിത്രമ് ആത്മാനം ലപ്സ്യഥ|
೩೮ಪೇತ್ರನು ಅವರಿಗೆ, “ನಿಮ್ಮ ಪಾಪಗಳು ಕ್ಷಮಿಸಲ್ಪಡುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿಕೊಳ್ಳಲಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ.
39 യതോ യുഷ്മാകം യുഷ്മത്സന്താനാനാഞ്ച ദൂരസ്ഥസർവ്വലോകാനാഞ്ച നിമിത്തമ് അർഥാദ് അസ്മാകം പ്രഭുഃ പരമേശ്വരോ യാവതോ ലാകാൻ ആഹ്വാസ്യതി തേഷാം സർവ്വേഷാം നിമിത്തമ് അയമങ്ഗീകാര ആസ്തേ|
೩೯ಆ ವಾಗ್ದಾನವು ನಿಮಗೂ, ನಿಮ್ಮ ಮಕ್ಕಳಿಗೂ, ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವ ದೂರದಲ್ಲಿರುವ ಎಲ್ಲರಿಗೂ ಇರುವುದಾಗಿದೆ” ಎಂದು ಹೇಳಿದನು.
40 ഏതദന്യാഭി ർബഹുകഥാഭിഃ പ്രമാണം ദത്വാകഥയത് ഏതേഭ്യോ വിപഥഗാമിഭ്യോ വർത്തമാനലോകേഭ്യഃ സ്വാൻ രക്ഷത|
೪೦ಬೇರೆ ಅನೇಕ ವಿಧವಾದ ಮಾತುಗಳಿಂದ ಅವನು ಖಂಡಿತವಾಗಿ ಸಾಕ್ಷಿನುಡಿದು, “ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿರಿ” ಎಂದು ಅವರನ್ನು ಎಚ್ಚರಿಸಿದನು.
41 തതഃ പരം യേ സാനന്ദാസ്താം കഥാമ് അഗൃഹ്ലൻ തേ മജ്ജിതാ അഭവൻ| തസ്മിൻ ദിവസേ പ്രായേണ ത്രീണി സഹസ്രാണി ലോകാസ്തേഷാം സപക്ഷാഃ സന്തഃ
೪೧ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನಮಾಡಿಸಿ ಕೊಂಡರು. ಆ ದಿನ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿಕೊಂಡರು.
42 പ്രേരിതാനാമ് ഉപദേശേ സങ്ഗതൗ പൂപഭഞ്ജനേ പ്രാർഥനാസു ച മനഃസംയോഗം കൃത്വാതിഷ്ഠൻ|
೪೨ಅವರು ಅಪೊಸ್ತಲರ ಬೋಧನೆಯಲ್ಲಿಯೂ, ಸಹೋದರರೊಂದಿಗೆ ಅನ್ಯೋನ್ಯತೆಯಲ್ಲಿಯೂ, ರೊಟ್ಟಿಮುರಿಯುವುದರಲ್ಲಿಯೂ, ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು.
43 പ്രേരിതൈ ർനാനാപ്രകാരലക്ഷണേഷു മഹാശ്ചര്യ്യകർമമസു ച ദർശിതേഷു സർവ്വലോകാനാം ഭയമുപസ്ഥിതം|
೪೩ಎಲ್ಲರೂ ಭಯ ಪರವಶರಾದರು. ಇದಲ್ಲದೆ ಅನೇಕ ಅದ್ಭುತಕಾರ್ಯಗಳೂ, ಸೂಚಕಕಾರ್ಯಗಳೂ ಅಪೊಸ್ತಲರ ಮುಖಾಂತರ ನಡೆದವು.
44 വിശ്വാസകാരിണഃ സർവ്വ ച സഹ തിഷ്ഠനതഃ| സ്വേഷാം സർവ്വാഃ സമ്പത്തീഃ സാധാരണ്യേന സ്ഥാപയിത്വാഭുഞ്ജത|
೪೪ನಂಬಿದವರೆಲ್ಲರು ಒಗ್ಗಟ್ಟಾಗಿದ್ದು, ತಮ್ಮಲ್ಲಿರುವುದೆಲ್ಲವನ್ನೂ ಸಂತೋಷವಾಗಿ ಹಂಚಿಕೊಂಡು ಅನುಭೋಗಿಸುತ್ತಿದ್ದರು.
45 ഫലതോ ഗൃഹാണി ദ്രവ്യാണി ച സർവ്വാണി വിക്രീയ സർവ്വേഷാം സ്വസ്വപ്രയോജനാനുസാരേണ വിഭജ്യ സർവ്വേഭ്യോഽദദൻ|
೪೫ತಮ್ಮತಮ್ಮ ಚರಸ್ಥಿರಸೊತ್ತುಗಳನ್ನು ಮಾರಿ ಬಂದ ಹಣವನ್ನು ಎಲ್ಲರಿಗೂ ಅವರವರಿಗೆ ಅಗತ್ಯವಿದ್ದ ಹಾಗೆ ಹಂಚಿಕೊಳ್ಳುತ್ತಾ ಇದ್ದರು.
46 സർവ്വ ഏകചിത്തീഭൂയ ദിനേ ദിനേ മന്ദിരേ സന്തിഷ്ഠമാനാ ഗൃഹേ ഗൃഹേ ച പൂപാനഭഞ്ജന്ത ഈശ്വരസ്യ ധന്യവാദം കുർവ്വന്തോ ലോകൈഃ സമാദൃതാഃ പരമാനന്ദേന സരലാന്തഃകരണേന ഭോജനം പാനഞ്ചകുർവ്വൻ|
೪೬ಅವರು ಪ್ರತಿದಿನ ಏಕಮನಸ್ಸಿನಿಂದ ದೇವಾಲಯದಲ್ಲಿ ಸೇರಿಬರುತ್ತಾ, ಮನೆಮನೆಗಳಲ್ಲಿ ರೊಟ್ಟಿಮುರಿದು ಉಲ್ಲಾಸದಿಂದಲೂ, ಸರಳ ಸಹೃದಯದಿಂದಲೂ ಸಹಭೋಜನ ಮಾಡುತ್ತಾ ಇದ್ದರು.
47 പരമേശ്വരോ ദിനേ ദിനേ പരിത്രാണഭാജനൈ ർമണ്ഡലീമ് അവർദ്ധയത്|
೪೭ಅವರೆಲ್ಲರೂ ದೇವರನ್ನು ಕೊಂಡಾಡುವವರಾಗಿಯೂ, ಜನರೆಲ್ಲರ ದಯವನ್ನು ಹೊಂದುವವರಾಗಿಯೂ ಇದ್ದರು. ಕರ್ತನು ರಕ್ಷಣೆಯ ಮಾರ್ಗದಲ್ಲಿರುವವರನ್ನು ಪ್ರತಿದಿನ ಅವರೊಂದಿಗೆ ಸಭೆಗೆ ಸೇರಿಸುತ್ತಿದ್ದನು.

< പ്രേരിതാഃ 2 >