< ಲೂಕನು 24 >

1 ಆ ಸ್ತ್ರೀಯರು ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ ಎದ್ದು, ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು.
అథ సప్తాహప్రథమదినేఽతిప్రత్యూషే తా యోషితః సమ్పాదితం సుగన్ధిద్రవ్యం గృహీత్వా తదన్యాభిః కియతీభిః స్త్రీభిః సహ శ్మశానం యయుః|
2 ಸಮಾಧಿಗೆ ಮುಚ್ಚಿದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವುದನ್ನು ಕಂಡು,
కిన్తు శ్మశానద్వారాత్ పాషాణమపసారితం దృష్ట్వా
3 ಒಳಕ್ಕೆ ಹೋಗಿ ನೋಡಿದಾಗ ಯೇಸು ಕರ್ತನ ದೇಹವು ಅಲ್ಲಿ ಕಾಣಲಿಲ್ಲ.
తాః ప్రవిశ్య ప్రభో ర్దేహమప్రాప్య
4 ಈ ವಿಷಯವಾಗಿ ಅವರಿಗೆ ಗಲಿಬಿಲಿ ಉಂಟಾದಾಗ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿಯಲ್ಲಿ ನಿಂತುಕೊಂಡರು.
వ్యాకులా భవన్తి ఏతర్హి తేజోమయవస్త్రాన్వితౌ ద్వౌ పురుషౌ తాసాం సమీపే సముపస్థితౌ
5 ಆ ಸ್ತ್ರೀಯರು ಭಯಹಿಡಿದವರಾಗಿ ತಲೆ ತಗ್ಗಿಸಿಕೊಂಡು ನಿಂತಿರುವಾಗ ಆ ಪುರುಷರು ಅವರಿಗೆ, “ಸತ್ತವರೊಳಗೆ ಬದುಕಿರುವವನನ್ನು ಹುಡುಕುವುದೇನು?
తస్మాత్తాః శఙ్కాయుక్తా భూమావధోముఖ్యస్యస్థుః| తదా తౌ తా ఊచతు ర్మృతానాం మధ్యే జీవన్తం కుతో మృగయథ?
6 ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ. ಆತನು ಇನ್ನೂ ಗಲಿಲಾಯದಲ್ಲಿದ್ದಾಗ, ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು, ಶಿಲುಬೆಗೆ ಹಾಕಲ್ಪಟ್ಟು, ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವುದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದನು.
సోత్ర నాస్తి స ఉదస్థాత్|
7
పాపినాం కరేషు సమర్పితేన క్రుశే హతేన చ మనుష్యపుత్రేణ తృతీయదివసే శ్మశానాదుత్థాతవ్యమ్ ఇతి కథాం స గలీలి తిష్ఠన్ యుష్మభ్యం కథితవాన్ తాం స్మరత|
8 ಸ್ತ್ರೀಯರು ಆತನ ಮಾತುಗಳನ್ನು ನೆನಪಿಗೆ ತಂದುಕೊಂಡು,
తదా తస్య సా కథా తాసాం మనఃసు జాతా|
9 ಸಮಾಧಿಯ ಬಳಿಯಿಂದ ಹಿಂತಿರುಗಿ ಹೋಗಿ ಆ ಸಂಗತಿಗಳನ್ನೆಲ್ಲಾ ಹನ್ನೊಂದು ಮಂದಿ ಶಿಷ್ಯರಿಗೂ ಉಳಿದವರೆಲ್ಲರಿಗೂ ತಿಳಿಸಿದರು.
అనన్తరం శ్మశానాద్ గత్వా తా ఏకాదశశిష్యాదిభ్యః సర్వ్వేభ్యస్తాం వార్త్తాం కథయామాసుః|
10 ೧೦ ಆ ಸ್ತ್ರೀಯರು ಯಾರಾರೆಂದರೆ ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಇವರೇ. ಇವರ ಜೊತೆಯಲ್ಲಿದ್ದ ಬೇರೆ ಸ್ತ್ರೀಯರು ಸಹ ಅಪೊಸ್ತಲರಿಗೆ ಆ ಸಂಗತಿಗಳನ್ನು ಹೇಳಿದರು.
మగ్దలీనీమరియమ్, యోహనా, యాకూబో మాతా మరియమ్ తదన్యాః సఙ్గిన్యో యోషితశ్చ ప్రేరితేభ్య ఏతాః సర్వ్వా వార్త్తాః కథయామాసుః
11 ೧೧ ಅವರು ನಂಬಲಿಲ್ಲ ಏಕೆಂದರೆ ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು.
కిన్తు తాసాం కథామ్ అనర్థకాఖ్యానమాత్రం బుద్ధ్వా కోపి న ప్రత్యైత్|
12 ೧೨ ಆದರೆ ಪೇತ್ರನು ಎದ್ದು ಸಮಾಧಿ ಬಳಿಗೆ ಓಡಿಹೋಗಿ, ಬೊಗ್ಗಿ ನೋಡಿ, ನಾರುಬಟ್ಟೆಗಳನ್ನು ಮಾತ್ರ ಕಂಡು, ನಡೆದ ಸಂಗತಿಗೆ ತನ್ನಲ್ಲಿ ಆಶ್ಚರ್ಯಪಡುತ್ತಾ ಹೊರಟು ಹೋದನು.
తదా పితర ఉత్థాయ శ్మశానాన్తికం దధావ, తత్ర చ ప్రహ్వో భూత్వా పార్శ్వైకస్థాపితం కేవలం వస్త్రం దదర్శ; తస్మాదాశ్చర్య్యం మన్యమానో యదఘటత తన్మనసి విచారయన్ ప్రతస్థే|
13 ೧೩ ಅದೇ ದಿನದಲ್ಲಿ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಸುಮಾರು ಏಳು ಮೈಲು ದೂರದಲ್ಲಿದ್ದ ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಾ,
తస్మిన్నేవ దినే ద్వౌ శియ్యౌ యిరూశాలమశ్చతుష్క్రోశాన్తరితమ్ ఇమ్మాయుగ్రామం గచ్ఛన్తౌ
14 ೧೪ ಸಂಭವಿಸಿದ ಈ ಎಲ್ಲಾ ಕಾರ್ಯಗಳ ವಿಷಯವಾಗಿ ಸಂಭಾಷಣೆಮಾಡುತ್ತಿದ್ದರು.
తాసాం ఘటనానాం కథామకథయతాం
15 ೧೫ ಅವರು ಸಂಭಾಷಣೆಯಲ್ಲಿ ಚರ್ಚಿಸುತ್ತಿರುವಾಗ ಯೇಸು ತಾನೇ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ಸಾಗಿದನು.
తయోరాలాపవిచారయోః కాలే యీశురాగత్య తాభ్యాం సహ జగామ
16 ೧೬ ಅವರ ಕಣ್ಣುಕಟ್ಟಿದಂತೆ ಇದುದ್ದರಿಂದ ಅವರು ಆತನ ಗುರುತನ್ನು ಹಿಡಿಯಲಿಲ್ಲ.
కిన్తు యథా తౌ తం న పరిచినుతస్తదర్థం తయో ర్దృష్టిః సంరుద్ధా|
17 ೧೭ ಯೇಸು, “ನೀವು ಮಾರ್ಗದಲ್ಲಿ ಹೋಗುತ್ತಾ ಚರ್ಚಿಸಿ ಮಾತನಾಡಿಕೊಳ್ಳುವ ಈ ಸಂಗತಿಗಳೇನು” ಎಂದು ಕೇಳಲು, ಅವರು ದುಃಖದ ಮುಖವುಳ್ಳವರಾಗಿ ನಿಂತರು.
స తౌ పృష్టవాన్ యువాం విషణ్ణౌ కిం విచారయన్తౌ గచ్ఛథః?
18 ೧೮ ಅವರಲ್ಲಿ ಕ್ಲೆಯೋಫನೆಂಬವನು ಆತನಿಗೆ, “ಯೆರೂಸಲೇಮಿಗೆ ಬಂದ ಪರಸ್ಥಳದವರೆಲ್ಲರಿಗೂ ಈ ದಿನಗಳಲ್ಲಿ ನಡೆದಿರುವ ಸಂಗತಿಗಳು ಗೊತ್ತಿರಲಾಗಿ ನಿನಗೆ ಮಾತ್ರ ಗೊತ್ತಿಲ್ಲವೋ?” ಎಂದು ಕೇಳಲು,
తతస్తయోః క్లియపానామా ప్రత్యువాచ యిరూశాలమపురేఽధునా యాన్యఘటన్త త్వం కేవలవిదేశీ కిం తద్వృత్తాన్తం న జానాసి?
19 ೧೯ ಆತನು ಅವರನ್ನು, “ಯಾವ ಸಂಗತಿಗಳು” ಎಂದು ಕೇಳಿದನು. ಅದಕ್ಕೆ ಅವರು, “ನಜರೇತಿನವನಾದ ಯೇಸುವಿನ ಸಂಗತಿಗಳೇ. ಆತನು ದೇವರ ಮುಂದೆ ಮತ್ತು ಮನುಷ್ಯರ ಮುಂದೆ ಕೃತ್ಯದಲ್ಲಿಯೂ ಮಾತಿನಲ್ಲಿಯೂ ಉನ್ನತನಾದ ಪ್ರವಾದಿಯಾಗಿದ್ದನು.
స పప్రచ్ఛ కా ఘటనాః? తదా తౌ వక్తుమారేభాతే యీశునామా యో నాసరతీయో భవిష్యద్వాదీ ఈశ్వరస్య మానుషాణాఞ్చ సాక్షాత్ వాక్యే కర్మ్మణి చ శక్తిమానాసీత్
20 ೨೦ ಆತನನ್ನು ಮುಖ್ಯಯಾಜಕರೂ ನಮ್ಮ ಅಧಿಕಾರಿಗಳೂ ಮರಣದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿಸಿದರು.
తమ్ అస్మాకం ప్రధానయాజకా విచారకాశ్చ కేనాపి ప్రకారేణ క్రుశే విద్ధ్వా తస్య ప్రాణాననాశయన్ తదీయా ఘటనాః;
21 ೨೧ ನಾವಾದರೋ ಇಸ್ರಾಯೇಲ್ ಜನರನ್ನು ಬಿಡಿಸತಕ್ಕವನು ಆತನೇ ಎಂದು ನಿರೀಕ್ಷಿಸಿಕೊಂಡಿದ್ದೆವು. ಇದು ಮಾತ್ರವಲ್ಲದೆ ಆ ಕಾರ್ಯಗಳು ನಡೆದು ಇಂದಿಗೆ ಮೂರನೆಯ ದಿನ.
కిన్తు య ఇస్రాయేలీయలోకాన్ ఉద్ధారయిష్యతి స ఏవాయమ్ ఇత్యాశాస్మాభిః కృతా| తద్యథా తథాస్తు తస్యా ఘటనాయా అద్య దినత్రయం గతం|
22 ೨೨ ಆದರೆ ನಮ್ಮಲ್ಲಿ ಕೆಲವು ಮಂದಿ ಸ್ತ್ರೀಯರು ಬೆಳಗಾಗುವಾಗ ಸಮಾಧಿಯ ಬಳಿಗೆ ಹೋಗಿ ಆತನ ದೇಹವನ್ನು ಕಾಣದೇ, ಅಲ್ಲಿಂದ ಬಂದು ತಮಗೆ ದೇವದೂತರ ದರ್ಶನವಾಯಿತೆಂತಲೂ, ಆತನು ಬದುಕಿದ್ದಾನೆಂದು ಅವರು ಹೇಳಿದರೆಂತಲೂ ತಿಳಿಸಿ ನಮಗೆ ಅತ್ಯಾಶ್ಚರ್ಯವನ್ನುಂಟುಮಾಡಿದರು.
అధికన్త్వస్మాకం సఙ్గినీనాం కియత్స్త్రీణాం ముఖేభ్యోఽసమ్భవవాక్యమిదం శ్రుతం;
23 ೨೩
తాః ప్రత్యూషే శ్మశానం గత్వా తత్ర తస్య దేహమ్ అప్రాప్య వ్యాఘుట్యేత్వా ప్రోక్తవత్యః స్వర్గీసదూతౌ దృష్టావస్మాభిస్తౌ చావాదిష్టాం స జీవితవాన్|
24 ೨೪ ನಮ್ಮ ಸಂಗಡ ಇದ್ದವರಲ್ಲಿ ಕೆಲವರು ಸಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದ ಪ್ರಕಾರವೇ ಕಂಡರು. ಆತನನ್ನು ಮಾತ್ರ ಕಾಣಲಿಲ್ಲ” ಎಂದು ಹೇಳಿದರು.
తతోస్మాకం కైశ్చిత్ శ్మశానమగమ్యత తేఽపి స్త్రీణాం వాక్యానురూపం దృష్టవన్తః కిన్తు తం నాపశ్యన్|
25 ೨೫ ಯೇಸು ಅವರಿಗೆ, “ಎಲಾ ಬುದ್ಧಿಯಿಲ್ಲದವರೇ, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬದ ಮಂದ ಹೃದಯವುಳ್ಳವರೇ,
తదా స తావువాచ, హే అబోధౌ హే భవిష్యద్వాదిభిరుక్తవాక్యం ప్రత్యేతుం విలమ్బమానౌ;
26 ೨೬ ಕ್ರಿಸ್ತನು ಇಂಥ ಶ್ರಮೆಗಳನ್ನು ಅನುಭವಿಸಿ ತನ್ನ ಮಹಿಮಾಪದವಿಗೆ ಸೇರುವುದು ಅಗತ್ಯವಾಗಿತ್ತಲ್ಲವೇ” ಎಂದು ಹೇಳಿದನು.
ఏతత్సర్వ్వదుఃఖం భుక్త్వా స్వభూతిప్రాప్తిః కిం ఖ్రీష్టస్య న న్యాయ్యా?
27 ೨೭ ಮೋಶೆಯ ಮತ್ತು ಎಲ್ಲಾ ಪ್ರವಾದಿಗಳ ಗ್ರಂಥಗಳು ಮೊದಲುಗೊಂಡು ಸಮಸ್ತ ಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳನ್ನು ಅವರಿಗೆ ವಿವರಿಸಿದನು.
తతః స మూసాగ్రన్థమారభ్య సర్వ్వభవిష్యద్వాదినాం సర్వ్వశాస్త్రే స్వస్మిన్ లిఖితాఖ్యానాభిప్రాయం బోధయామాస|
28 ೨೮ ಅವರು ಹೋಗುತ್ತಿರುವ ಹಳ್ಳಿಯ ಸಮೀಪಕ್ಕೆ ಬಂದಾಗ ಆತನು ಅವರನ್ನು ದಾಟಿ ಇನ್ನೂ ಮುಂದಕ್ಕೆ ಹೋಗುವವನಂತೆ ತೋರ್ಪಡಿಸಿಕೊಂಡನು.
అథ గమ్యగ్రామాభ్యర్ణం ప్రాప్య తేనాగ్రే గమనలక్షణే దర్శితే
29 ೨೯ ಆದರೆ ಅವರು, “ನಮ್ಮ ಸಂಗಡ ಇರು. ಸಂಜೆಯಾಯಿತು, ಹೊತ್ತು ಇಳಿಯುತ್ತಾ ಬಂದಿತು” ಎಂದು ಆತನಿಗೆ ಹೇಳಿ ಬಲವಂತ ಮಾಡಲು, ಆತನು ಅವರ ಕೂಡ ಇರುವುದಕ್ಕೆ ಹೋದನು.
తౌ సాధయిత్వావదతాం సహావాభ్యాం తిష్ఠ దినే గతే సతి రాత్రిరభూత్; తతః స తాభ్యాం సార్ద్ధం స్థాతుం గృహం యయౌ|
30 ೩೦ ಆತನು ಅವರ ಸಂಗಡ ಊಟಕ್ಕೆ ಕುಳಿತುಕೊಂಡಾಗ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ, ಮುರಿದು ಅವರಿಗೆ ಕೊಡುತ್ತಿರಲಾಗಿ,
పశ్చాద్భోజనోపవేశకాలే స పూపం గృహీత్వా ఈశ్వరగుణాన్ జగాద తఞ్చ భంక్త్వా తాభ్యాం దదౌ|
31 ೩೧ ಅವರ ಕಣ್ಣುಗಳು ತೆರೆದವು. ಆಗ ಅವರು ಆತನ ಗುರುತು ಹಿಡಿದರು. ಆತನು ಅವರ ಕಣ್ಣಿಗೆ ಕಾಣದಂತೆ ಮಾಯವಾದನು.
తదా తయో ర్దృష్టౌ ప్రసన్నాయాం తం ప్రత్యభిజ్ఞతుః కిన్తు స తయోః సాక్షాదన్తర్దధే|
32 ೩೨ ಆಗ ಅವರು ಒಬ್ಬರಿಗೊಬ್ಬರು, “ಆತನು ದಾರಿಯಲ್ಲಿ ನಮ್ಮ ಸಂಗಡ ಮಾತನಾಡಿದಾಗಲೂ, ಗ್ರಂಥಗಳ ಅರ್ಥವನ್ನು ನಮಗೆ ಬಿಡಿಸಿ ಹೇಳಿದಾಗಲೂ, ನಮ್ಮ ಹೃದಯವು ನಮ್ಮೊಳಗೆ ಕುದಿಯಿತಲ್ಲವೇ?” ಎಂದು ಹೇಳಿಕೊಂಡು,
తతస్తౌ మిథోభిధాతుమ్ ఆరబ్ధవన్తౌ గమనకాలే యదా కథామకథయత్ శాస్త్రార్థఞ్చబోధయత్ తదావయో ర్బుద్ధిః కిం న ప్రాజ్వలత్?
33 ೩೩ ಅದೇ ಗಳಿಗೆಯಲ್ಲಿ ಎದ್ದು ಯೆರೂಸಲೇಮಿಗೆ ಹಿಂತಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡ ಇದ್ದವರೂ ಒಟ್ಟಾಗಿ ಕೂಡಿಕೊಂಡಿದ್ದರು.
తౌ తత్క్షణాదుత్థాయ యిరూశాలమపురం ప్రత్యాయయతుః, తత్స్థానే శిష్యాణామ్ ఏకాదశానాం సఙ్గినాఞ్చ దర్శనం జాతం|
34 ೩೪ “ಕರ್ತನು ಎದ್ದದ್ದು ನಿಜ. ಆತನು ಸೀಮೋನನಿಗೆ ಕಾಣಿಸಿಕೊಂಡನು” ಎಂದು ಹೇಳುತ್ತಿದ್ದರು.
తే ప్రోచుః ప్రభురుదతిష్ఠద్ ఇతి సత్యం శిమోనే దర్శనమదాచ్చ|
35 ೩೫ ಆಗ ಅವರಿಬ್ಬರು ದಾರಿಯಲ್ಲಿ ನಡೆದ ಸಂಗತಿಯನ್ನೂ ರೊಟ್ಟಿ ಮುರಿಯುವುದರಲ್ಲಿ ತಾವು ಆತನ ಗುರುತು ಹಿಡಿದೆವೆಂಬುದನ್ನೂ ವಿವರಿಸಿದರು.
తతః పథః సర్వ్వఘటనాయాః పూపభఞ్జనేన తత్పరిచయస్య చ సర్వ్వవృత్తాన్తం తౌ వక్తుమారేభాతే|
36 ೩೬ ಅವರು ಈ ಸಂಗತಿಗಳನ್ನು ಕುರಿತು ಮಾತನಾಡುತ್ತಿರುವಾಗ ಯೇಸುವೇ ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದು ಅವರಿಗೆ ಹೇಳಿದನು.
ఇత్థం తే పరస్పరం వదన్తి తత్కాలే యీశుః స్వయం తేషాం మధ్య ప్రోత్థయ యుష్మాకం కల్యాణం భూయాద్ ఇత్యువాచ,
37 ೩೭ ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದನ್ನು ಭೂತವೆಂದು ಭಾವಿಸಿದರು.
కిన్తు భూతం పశ్యామ ఇత్యనుమాయ తే సముద్వివిజిరే త్రేషుశ్చ|
38 ೩೮ ಆತನು ಅವರಿಗೆ, “ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಅನುಮಾನಗಳು ಹುಟ್ಟುವುದೇಕೆ?
స ఉవాచ, కుతో దుఃఖితా భవథ? యుష్మాకం మనఃసు సన్దేహ ఉదేతి చ కుతః?
39 ೩೯ ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ. ನಾನೇ ಅಲ್ಲವೇ, ನನ್ನನ್ನು ಮುಟ್ಟಿ ನೋಡಿರಿ. ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು. ಅವು ಭೂತಕ್ಕಿಲ್ಲ” ಎಂದು ಹೇಳಿದನು.
ఏషోహం, మమ కరౌ పశ్యత వరం స్పృష్ట్వా పశ్యత, మమ యాదృశాని పశ్యథ తాదృశాని భూతస్య మాంసాస్థీని న సన్తి|
40 ೪೦ ಇದನ್ನು ಹೇಳಿದ ಮೇಲೆ ಆತನು ತನ್ನ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದನು.
ఇత్యుక్త్వా స హస్తపాదాన్ దర్శయామాస|
41 ೪೧ ಆದರೆ ಅವರು ಸಂತೋಷಭರಿತರಾಗಿ ಇನ್ನೂ ನಂಬದೇ ಆಶ್ಚರ್ಯಪಡುತ್ತಿರಲಾಗಿ ಆತನು, “ತಿನ್ನತಕ್ಕ ಪದಾರ್ಥವೇನಾದರೂ ನಿಮ್ಮಲ್ಲುಂಟೋ?” ಎಂದು ಅವರನ್ನು ಕೇಳಲು,
తేఽసమ్భవం జ్ఞాత్వా సానన్దా న ప్రత్యయన్| తతః స తాన్ పప్రచ్ఛ, అత్ర యుష్మాకం సమీపే ఖాద్యం కిఞ్చిదస్తి?
42 ೪೨ ಅವರು ಸುಟ್ಟ ಮೀನಿನ ಒಂದು ತುಂಡನ್ನು ಆತನಿಗೆ ಕೊಟ್ಟರು.
తతస్తే కియద్దగ్ధమత్స్యం మధు చ దదుః
43 ೪೩ ಆತನು ಅದನ್ನು ತೆಗೆದುಕೊಂಡು ಅವರ ಮುಂದೆ ತಿಂದನು.
స తదాదాయ తేషాం సాక్షాద్ బుభుజే
44 ೪೪ ತರುವಾಯ ಯೇಸು, “ನಾನು ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ, ಪ್ರವಾದಿಗಳ ಗ್ರಂಥಗಳಲ್ಲಿಯೂ, ಕೀರ್ತನೆಗಳಲ್ಲಿಯೂ ಬರೆದಿರುವುದೆಲ್ಲಾ ನೆರವೇರುವುದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ?” ಅಂದನು.
కథయామాస చ మూసావ్యవస్థాయాం భవిష్యద్వాదినాం గ్రన్థేషు గీతపుస్తకే చ మయి యాని సర్వ్వాణి వచనాని లిఖితాని తదనురూపాణి ఘటిష్యన్తే యుష్మాభిః సార్ద్ధం స్థిత్వాహం యదేతద్వాక్యమ్ అవదం తదిదానీం ప్రత్యక్షమభూత్|
45 ೪೫ ಆ ಮೇಲೆ ಅವರು ಶಾಸ್ತ್ರ ವಚನಗಳನ್ನು ತಿಳಿದುಕೊಳ್ಳುವಂತೆ ಆತನು ಅವರ ಮನಸ್ಸುಗಳನ್ನು ತೆರೆದನು.
అథ తేభ్యః శాస్త్రబోధాధికారం దత్వావదత్,
46 ೪೬ ಅನಂತರ, “ಮೊದಲೇ ಪ್ರಕಟವಾದ ಪ್ರಕಾರ ‘ಕ್ರಿಸ್ತನು ಕಷ್ಟ ಪಟ್ಟು, ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ,
ఖ్రీష్టేనేత్థం మృతియాతనా భోక్తవ్యా తృతీయదినే చ శ్మశానాదుత్థాతవ్యఞ్చేతి లిపిరస్తి;
47 ೪೭ ಅದಲ್ಲದೆ ಜನರು ಪಾಪಕ್ಷಮಾಪಣೆಗೋಸ್ಕರ ಪಶ್ಚಾತ್ತಾಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಈ ಸುವಾರ್ತೆಯು ಯೆರೂಸಲೇಮ್ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡಬೇಕು’ ಎಂದು ಬರೆದದೆ.
తన్నామ్నా యిరూశాలమమారభ్య సర్వ్వదేశే మనఃపరావర్త్తనస్య పాపమోచనస్య చ సుసంవాదః ప్రచారయితవ్యః,
48 ೪೮ ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ.
ఏషు సర్వ్వేషు యూయం సాక్షిణః|
49 ೪೯ ಇಗೋ ನನ್ನ ತಂದೆಯು ವಾಗ್ದಾನ ಮಾಡಿದ ಶಕ್ತಿಯನ್ನುನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಕೊಡುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರಿ” ಎಂದು ಹೇಳಿದನು.
అపరఞ్చ పశ్యత పిత్రా యత్ ప్రతిజ్ఞాతం తత్ ప్రేషయిష్యామి, అతఏవ యావత్కాలం యూయం స్వర్గీయాం శక్తిం న ప్రాప్స్యథ తావత్కాలం యిరూశాలమ్నగరే తిష్ఠత|
50 ೫೦ ಮತ್ತು ಯೇಸು ಅವರನ್ನು ಬೇಥಾನ್ಯದ ತನಕ ಕರೆದುಕೊಂಡು ಹೋಗಿ, ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು.
అథ స తాన్ బైథనీయాపర్య్యన్తం నీత్వా హస్తావుత్తోల్య ఆశిష వక్తుమారేభే
51 ೫೧ ಆಶೀರ್ವದಿಸುತ್ತಿರುವಾಗ ಆತನು ಅವರನ್ನು ಬಿಟ್ಟು ಪರಲೋಕಕ್ಕೆ ಒಯ್ಯಲ್ಪಟ್ಟನು.
ఆశిషం వదన్నేవ చ తేభ్యః పృథగ్ భూత్వా స్వర్గాయ నీతోఽభవత్|
52 ೫೨ ಅವರು ಆತನನ್ನು ಆರಾಧಿಸಿ, ಬಹು ಸಂತೋಷದಿಂದ ಯೆರೂಸಲೇಮಿಗೆ ಹಿಂತಿರುಗಿ ಹೋಗಿ,
తదా తే తం భజమానా మహానన్దేన యిరూశాలమం ప్రత్యాజగ్ముః|
53 ೫೩ ನಿರಂತರವಾಗಿ ದೇವಾಲಯದಲ್ಲಿ ದೇವರನ್ನು ಕೊಂಡಾಡುತ್ತಿದ್ದರು.
తతో నిరన్తరం మన్దిరే తిష్ఠన్త ఈశ్వరస్య ప్రశంసాం ధన్యవాదఞ్చ కర్త్తమ్ ఆరేభిరే| ఇతి||

< ಲೂಕನು 24 >